TOP NEWS
Real estate gimmick over Tirupati Darshan sparks row TTD files criminal case against developer

TTD: ದೇವ ದರ್ಶನದ ಹೆಸರಲ್ಲಿ ಗ್ರಾಹಕರಿಗೆ ಆಮಿಷ!; ಎಸ್‌ಸಿಪಿ ಡೆವಲಪರ್ಸ್ ವಿರುದ್ಧ ಕಾನೂನು ಸಮರ ಸಾರಿದ ಟಿಟಿಡಿ

ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯವನ್ನು ವ್ಯಾಪಾರೀಕರಣಗೊಳಿಸಲು ಯತ್ನಿಸಿದ ರಿಯಲ್ ಎಸ್ಟೇಟ್ ಸಂಸ್ಥೆಯೊಂದರ ನಡೆ ಈಗ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ. ತಿರುಪತಿ ಹೆದ್ದಾರಿಯ ಬಳಿ ಇರುವ ತಮ್ಮ ಲೇಔಟ್‌ನಲ್ಲಿ ಸೈಟ್ ಖರೀದಿಸುವ ಗ್ರಾಹಕರಿಗೆ ಆಜೀವ ಪರ್ಯಂತ ‘ಶ್ರೀವಾರಿ ವಿಐಪಿ ಬ್ರೇಕ್ ದರ್ಶನ’ ಕೊಡಿಸುವುದಾಗಿ ಎಸ್‌ಸಿಪಿ ಡೆವಲಪರ್ಸ್ (SCP Developers) ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ದೇವರ ದರ್ಶನವನ್ನೇ ಆಮಿಷವನ್ನಾಗಿ ಬಳಸಿಕೊಂಡ ಈ ವಂಚನೆಯ ಜಾಹೀರಾತು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆಯೇ ತಿರುಮಲ ತಿರುಪತಿ…

Read More
POK Protest Horror Pakistan s Khawaja Asif sparks outrage by labeling killed protesters as enemies like India

POK: ಅವರೂ ನಮಗೆ ಭಾರತದಂತೆಯೇ ಶತ್ರುಗಳು’: ಪಾಕ್ ಆಕ್ರಮಿತ ಕಾಶ್ಮೀರದ 32 ಪ್ರತಿಭಟನಾಕಾರರ ಹತ್ಯೆಯನ್ನು ಸಮರ್ಥಿಸಿಕೊಂಡ ಖವಾಜಾ ಆಸಿಫ್

ಪಾಕಿಸ್ತಾನ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (POK) ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಪಾಕಿಸ್ತಾನಿ ರಕ್ಷಣಾ ಪಡೆಗಳು ನಡೆಸಿದ ಭೀಕರ ಗುಂಡಿನ ದಾಳಿಯನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸಮರ್ಥಿಸಿಕೊಂಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದ್ದಾರೆ. ಪಿಒಕೆಯ ಪ್ರತಿಭಟನಾಕಾರರನ್ನು ತಾವು “ಭಾರತದಂತೆಯೇ ದೇಶದ ಶತ್ರುಗಳು” ಎಂದು ಪರಿಗಣಿಸುವುದಾಗಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. 32 ಕಾಶ್ಮೀರಿ ಪ್ರತಿಭಟನಾಕಾರರು ಸಾವುಪಿಒಕೆಯ ರಾವಲಾಕೋಟ್ ಮತ್ತು ಮೀರ್‌ಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಸರಣಿ…

Read More
Rocking Star Yash integrity wins hearts producer Jayanna recalls how the star kept his word during Jaanu

Yash: ಕೊಟ್ಟ ಮಾತಿಗೆ ತಪ್ಪದ ‘ರಾಕಿ ಭಾಯ್’!; ಯಶ್ ಅಂದು ತೋರಿದ ಸಿನಿಮಾ ನೈತಿಕತೆಯನ್ನು ನೆನಪಿಸಿಕೊಂಡ ನಿರ್ಮಾಪಕ ಜಯಣ್ಣ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಹಾಗೂ ಸ್ಯಾಂಡಲ್‌ವುಡ್‌ನ (Sandalwood) ಪ್ರಸಿದ್ಧ ನಿರ್ಮಾಪಕ ಜಯಣ್ಣ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಜೋಡಿ ಎಂದೇ ಗುರುತಿಸಿಕೊಂಡಿದೆ. ಜಯಣ್ಣ-ಭೋಗೇಂದ್ರ ಬ್ಯಾನರ್ ಅಡಿಯಲ್ಲಿ ಮೂಡಿಬಂದ ಯಶ್ ನಟನೆಯ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡಿವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಿರ್ಮಾಪಕ ಜಯಣ್ಣ, ಯಶ್ ಅವರ ಆರಂಭಿಕ ದಿನಗಳ ಯಶಸ್ವಿ ಚಿತ್ರ ‘ಜಾನು’ ಸೆಟ್ಟೇರಿದ ಹಿಂದಿನ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಜಾನು ಸಿನಿಮಾ ಸೆಟ್ಟೇರಿದ ಕತೆ ಇದು ನಿರ್ದೇಶಕ…

Read More
Delhi police sent notice to x accounts for using abusive word for Narendra modi

Narendra Modi: ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪೋಸ್ಟ್: ಎಕ್ಸ್ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್

ನವದೆಹಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಮತ್ತು ‘ಸಂಸತ್ ಚಲೋ’ ರ್ಯಾಲಿಯ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಹಾಗೂ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕಿದವರ ವಿರುದ್ಧ ದೆಹಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಈ ರೀತಿಯ ಆಕ್ಷೇಪಾರ್ಹ ಹಾಗೂ ಅಸಭ್ಯ ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಹಲವಾರು ‘ಎಕ್ಸ್’ (ಟ್ವಿಟರ್) ಖಾತೆಗಳು ಮತ್ತು ಕೆಲವು ಪ್ರಮುಖ ಸುದ್ದಿ ಪೋರ್ಟಲ್‌ಗಳಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಸೈಬರ್‌ ತಂಡದಿಂದ…

Read More
Allahabad High Court Second wife entitled to maintenance if unaware of husbands first marriage

High Court: ಪತಿಯ ಮೊದಲ ಮದುವೆಯ ವಿಚಾರ ತಿಳಿಯದೆ ಮದುವೆ ಆಗಿದ್ದರೆ ಜೀವನಾಂಶದ ಹಕ್ಕಿದೆ: ಅಲಹಾಬಾದ್ ಹೈಕೋರ್ಟ್

ಗುಜರಾತ್:‌ ಪತಿಯ ಮೊದಲ ಮದುವೆಯ ವಿಚಾರ ತಿಳಿಯದೆ ಎರಡನೇ ಮದುವೆಯಾದ ಮಹಿಳೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 125 ರ ಅಡಿಯಲ್ಲಿ ಜೀವನಾಂಶ ಪಡೆಯುವ ಅರ್ಹತೆಯಿದೆ ಎಂದು ಅಲಹಾಬಾದ್ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ. ಮೊದಲ ಮದುವೆಯನ್ನು ಮರೆಮಾಚಿ ವಂಚನೆಯಿಂದ ಮದುವೆಯಾಗಿದ್ದರೂ, ಕಾನೂನಿನ ಕಣ್ಣಿನಲ್ಲಿ ಆ ಮದುವೆ ರದ್ದಾಗಿದ್ದರೂ ಸಹ ಪತಿಯು ಜೀವನಾಂಶ ನೀಡುವಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಾನೇ ಮಾಡಿದ ತಪ್ಪಿನ ಲಾಭವನ್ನು ಪಡೆದುಕೊಂಡು ಮಹಿಳೆಗೆ ಜೀವನಾಂಶ ನಿರಾಕರಿಸಲು ಪತಿಗೆ ಅವಕಾಶ ನೀಡಲಾಗುವುದಿಲ್ಲ…

Read More
July ends with dry KRS Kabini reservoirs amid pressure to release Cauvery water to TN dam level

Dam Level: ಕಾವೇರಿ ಕೊಳ್ಳದಲ್ಲಿ ಮತ್ತೆ ಜಲಕ್ಷಾಮದ ಕಿಡಿ, ಹೀಗಿದೆ ಜಲಾಶಯಗಳ ಮಟ್ಟ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿ ಭೀಕರ ಬರಗಾಲದ ನೆರಳು ಆವರಿಸುತ್ತಿರುವ ಬೆನ್ನಲ್ಲೇ, ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಹೊಸ ಆದೇಶ ನೀಡಿದೆ. ಆದರೆ, ರಾಜ್ಯದ ಪ್ರಮುಖ ಜಲಾಶಯಗಳೇ ತಳ ಹಿಡಿಯುತ್ತಿರುವಾಗ (Dam Level) ತಮಿಳುನಾಡಿಗೆ ನೀರು ಬಿಡುವುದು ಹೇಗೆ ಎಂಬ ಯಕ್ಷಪ್ರಶ್ನೆ ಈಗ ಎದುರಾಗಿದೆ. ಒಣಗುತ್ತಿದೆ ಕಾವೇರಿ ಕೊಳ್ಳ:…

Read More
Kashmir Road Mishap 39 people injured in a major accident

Road Mishap: ಕಾಶ್ಮೀರದಲ್ಲಿ ರಸ್ತೆ ಅಪಘಾತ, 39 ಮಂದಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದೇರ್‌ಬಲ್ ಜಿಲ್ಲೆಯ ಕಾಂಗನ್ ಪ್ರದೇಶದಲ್ಲಿ ಮಂಗಳವಾರ ತೀವ್ರ ರಸ್ತೆ (Road Mishap) ಅಪಘಾತ ಸಂಭವಿಸಿದ್ದು, ಅಮರನಾಥ ಯಾತ್ರೆಯಿಂದ ಹಿಂತಿರುಗುತ್ತಿದ್ದ ಕನಿಷ್ಠ 39 ಯಾತ್ರಿಕರು ಗಾಯಗೊಂಡಿದ್ದಾರೆ. ರಸ್ತೆಯ ಮಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅತಿವೇಗದ ಬಸ್ಸು, ರಸ್ತೆಯಿಂದ ಪಕ್ಕಕ್ಕೆ ಜಾರಿ ಹರಿಗಾನ್ವಾನ್ ಪ್ರದೇಶದಲ್ಲಿದ್ದ ಮನೆಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮನೆ ಸಂಪೂರ್ಣ ಜಖಂಗೊಂಡಿದೆಯಾದರೂ, ಬಸ್ಸು ಪಕ್ಕದಲ್ಲೇ ಹರಿಯುತ್ತಿದ್ದ ಸಿಂಧ್ ನದಿಗೆ ಉರುಳಿ ಬೀಳುವುದನ್ನು ಈ ಮನೆ ತಡೆದಿದೆ. ಅಪಘಾತದ ಸಮಯದಲ್ಲಿ…

Read More