TOP NEWS
Who is Eligible for a Karnataka Domicile Certificate Check Out the Revenue Departments New Guidelines

Domicile: ಕರ್ನಾಟಕ ಡೊಮಿಸೈಲ್ ಪ್ರಮಾಣಪತ್ರ ಪಡೆಯಲು ಕಂದಾಯ ಇಲಾಖೆ ಹೊಸ ಗೈಡ್‌ಲೈನ್ಸ್: ಯಾರೆಲ್ಲಾ ಅರ್ಹರು? ಇಲ್ಲಿದೆ ಮಾಹಿತಿ

ಧಾರವಾಡ: ಕರ್ನಾಟಕದಲ್ಲಿ ಶಾಶ್ವತ ನಿವಾಸ (Domicile) ಪ್ರಮಾಣಪತ್ರವನ್ನು ಪಡೆಯಬಯಸುವ ನಾಗರಿಕರಿಗೆ ಕಂದಾಯ ಇಲಾಖೆಯು ಅತ್ಯಂತ ಪ್ರಮುಖ ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ಶೈಕ್ಷಣಿಕ ದಾಖಲಾತಿ, ಸ್ಕಾಲರ್‌ಶಿಪ್, ಸರ್ಕಾರಿ ಉದ್ಯೋಗಗಳು ಹಾಗೂ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಕಡ್ಡಾಯವಾಗಿರುವ ಈ ಪ್ರಮಾಣಪತ್ರವನ್ನು ಹೊಂದಲು ಇರಬೇಕಾದ ನಿರ್ದಿಷ್ಟ ಅರ್ಹತೆಗಳ ಬಗ್ಗೆ ಧಾರವಾಡ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ವಿವರಣೆ ನೀಡಿದ್ದಾರೆ. ಡೊಮಿಸೈಲ್ ಅಂದರೆ ಏನು? ಇದರ ಬಳಕೆಯೆಲ್ಲಿದೆ? ಡೊಮಿಸೈಲ್ ಅಥವಾ ಶಾಶ್ವತ ನಿವಾಸ ಪ್ರಮಾಣಪತ್ರ ಎನ್ನುವುದು ಒಬ್ಬ ವ್ಯಕ್ತಿಯು ಕಾನೂನಾತ್ಮಕವಾಗಿ ಕರ್ನಾಟಕ…

Read More
Cauvery We Are Not Interested in a Karnataka Bandh Says Leader Narayana Gowda

Cauvery: CWRC ಆದೇಶ ಕರ್ನಾಟಕದ ಪಾಲಿಗೆ ಮರಣಶಾಸನ

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಶಿಫಾರಸು ಹಾಗೂ ಕಾವೇರಿ (Cauvery) ನೀರು ನಿರ್ವಹಣಾ ಪ್ರಾಧಿಕಾರ (CWMA) ಹೊರಡಿಸಿರುವ ಆದೇಶಗಳು ಕರ್ನಾಟಕದ ಪಾಲಿಗೆ ಮರಣಶಾಸನವಾಗಿದೆ. ಕರ್ನಾಟಕದ ವಾಸ್ತವ ಪರಿಸ್ಥಿತಿ, ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಬರದ ಸನ್ನಿವೇಶ ಮತ್ತು ರಾಜ್ಯದ ಜನರ ಕುಡಿಯುವ ನೀರಿನ ಅಗತ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಹೊರಡಿಸಿರುವ ಈ ಆದೇಶವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರವೂ ಈ ಅವೈಜ್ಞಾನಿಕ ಆದೇಶಕ್ಕೆ ಮಣಿಯಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ…

Read More
High Court Verdict BJP MK Pranesh Suffers Blow Congress Gayathri Shantegowda Declared Winner in MLC Poll Row

High Court: ಚಿಕ್ಕಮಗಳೂರು ವಿಧಾನ ಪರಿಷತ್ ಚುನಾವಣಾ ವಿವಾದ: ಗಾಯತ್ರಿ ಶಾಂತೇಗೌಡಗೆ ಗೆಲುವು

ಚಿಕ್ಕಮಗಳೂರು: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿಧಾನ ಪರಿಷತ್ ಸದಸ್ಯ (ಎಮ್‌ಎಲ್‌ಸಿ) ಎಂ.ಕೆ. ಪ್ರಾಣೇಶ್ ಹಾಗೂ ಕಳೆದ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಕಂಡಿದ್ದ ಕಾಂಗ್ರೆಸ್ ನಾಯಕಿ ಎ.ವಿ. ಗಾಯತ್ರಿ ಶಾಂತೇಗೌಡ ಅವರ ರಾಜಕೀಯ ಭವಿಷ್ಯ ನಿರ್ಣಯವಾಗಿದೆ. ಈ ಹೈವೋಲ್ಟೇಜ್ ಚುನಾವಣಾ ತಕರಾರು ಅರ್ಜಿಯ ಅಂತಿಮ ವಿಚಾರಣೆ ಇಂದು ಉಚ್ಚ ನ್ಯಾಯಾಲಯದಲ್ಲಿ (High Court) ನಡೆದಿದ್ದು, ಗಾಯತ್ರಿ ಶಾಂತೇಗೌಡಗೆ ಗೆಲುವು ಸಿಕ್ಕಿದೆ. ಏನಿದು ಪ್ರಕರಣ? ಕಳೆದ 2021ರ ಡಿಸೆಂಬರ್‌ನಲ್ಲಿ ನಡೆದಿದ್ದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಮೇಲ್ಮನೆ…

Read More
DK Shivakumar CM Assures Next Step on Cauvery Issue Only After Legal and Opposition Input

DK Shivakumar: ಪರಿಸ್ಥಿತಿ ತಿಳಿಯಾದ ಬಳಿಕ ತಮಿಳುನಾಡು ಸಿಎಂ ವಿಜಯ್ ಜೊತೆ ಸಭೆ: ಡಿಕೆಶಿ

ಬೆಂಗಳೂರು: “ಕಾವೇರಿ ನೀರಿನ ವಿಚಾರವಾಗಿ ಕಾನೂನು ತಜ್ಞರ ಸಲಹೆ ಹಾಗೂ ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ಪಡೆದ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ತಿಳಿಸಿದರು. ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಶಿವಕುಮಾರ್ ಅವರು ಮಾತನಾಡಿದರು. “ಕಾವೇರಿ ನೀರಿನ ವಿಚಾರದಲ್ಲಿ ನಿತ್ಯ 3500 ಕ್ಯೂಸೆಕ್ ನೀರುನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿದೆ. ಈ ಹಿಂದೆ ಇಂತಹ ಸಂಕಷ್ಟ ಕಾಲದಲ್ಲಿ…

Read More
Former CM Siddaramaiah in Shopping Mood Crowd Throng for Selfies as He Buys Clothes at Mantri Mall

Siddaramaiah: ಶಾಪಿಂಗ್ ಮೂಡ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ: ಮಂತ್ರಿ ಮಾಲ್‌ನಲ್ಲಿ ಬಟ್ಟೆ ಖರೀದಿಸಿದ ಸಿದ್ದು ಜೊತೆ ಸೆಲ್ಫಿ ತಗೆದುಕೊಂಡ ಜನ!

ಬೆಂಗಳೂರು: ರಾಜಕೀಯ ಜಂಜಾಟಗಳಿಂದ ಕೊಂಚ ಬ್ರೇಕ್ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಬೆಳಗ್ಗೆ ಪಕ್ಕಾ ಶಾಪಿಂಗ್ ಮೂಡ್‌ನಲ್ಲಿ ಕಾಣಿಸಿಕೊಂಡರು. ದೆಹಲಿ ಪ್ರವಾಸ ಮುಗಿಸಿ ನಿನ್ನೆ ತಡರಾತ್ರಿಯಷ್ಟೇ ಬೆಂಗಳೂರಿಗೆ ಹಿಂತಿರುಗಿದ ಅವರು, ಇಂದು ಮುಂಜಾನೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಪ್ರಸಿದ್ಧ ಮಂತ್ರಿ ಮಾಲ್‌ಗೆ ದಿಢೀರ್ ಭೇಟಿ ನೀಡಿದರು. ಬೆಳಗಿನ ಜಾವದ ವಾಯು ವಿಹಾರಕ್ಕೆ (ಮಾರ್ನಿಂಗ್ ವಾಕ್) ಬೇಕಾದ ಟ್ರ್ಯಾಕ್ ಸೂಟ್ ಸೇರಿದಂತೆ ಕೆಲವು ಉಡುಪುಗಳನ್ನು ಖರೀದಿಸಲು ಅವರು ಮಾಲ್‌ಗೆ ಆಗಮಿಸಿದ್ದರು. ಸೆಲ್ಫಿಗೆ ಪೋಸ್‌ ನೀಡಿದ…

Read More
Maharashtra rain Dams Full Heavy Inflow Into Krishna River Sparks Flood Threat on Belagavi Border

Rain: ಮಹಾರಾಷ್ಟ್ರದ ಜಲಾಶಯಗಳು ಭರ್ತಿ: ಕೃಷ್ಣಾ ನದಿಗೆ ಹರಿದುಬಂತು ಭಾರಿ ನೀರು, ಬೆಳಗಾವಿ ಗಡಿಯಲ್ಲಿ ಪ್ರವಾಹದ ಭೀತಿ!

ಚಿಕ್ಕೋಡಿ (ಬೆಳಗಾವಿ): ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅಲ್ಲಿನ ಪ್ರಮುಖ ಜಲಾಶಯಗಳು ಸಂಪೂರ್ಣ (Rain) ಭರ್ತಿಯಾಗಿವೆ. ಕೊಯ್ನಾ ಮತ್ತು ರಾಧಾನಗರಿ ಡ್ಯಾಂಗಳಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ಇದರ ಪರಿಣಾಮವಾಗಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೃಷ್ಣಾ ಹಾಗೂ ದೂಧಗಂಗಾ ನದಿಗಳು ಭೋರ್ಗರೆದು ಹರಿಯುತ್ತಿವೆ. ಸದ್ಯ ನದಿಗಳ ನೀರಿನ ಮಟ್ಟ ಅಪಾಯದ ಗೆರೆಯನ್ನು ತಲುಪಿದ್ದು, ನದೀತೀರದ ಜನರಲ್ಲಿ ಆತಂಕ ಮನೆಮಾಡಿದೆ. ಲೋ ಲೆವೆಲ್ ಬ್ಯಾರೇಜ್‌ ಮುಳುಗಡೆಯಾಗುವ ಭೀತಿ ಮಹಾರಾಷ್ಟ್ರದ ಸಾತಾರ…

Read More
DK Shivakumar Makes Humblest Appeal to Protesters Cites 100 Year Low Water Release Urges to Scrap Karnataka Bandh

DK Shivakumar: ಬಂದ್‌ನಿಂದ ಸಮಸ್ಯೆಗೆ ಪರಿಹಾರ ಸಿಗಲ್ಲ: ಭಾನುವಾರದ ಸರ್ವಪಕ್ಷ ಸಭೆಯವರೆಗೂ ತಮಿಳುನಾಡಿಗೆ ನೀರು ಬಿಡಲ್ಲ ಎಂದ ಡಿಕೆ ಶಿವಕುಮಾರ್

ಬೆಂಗಳೂರು: ಕಾವೇರಿ ಜಲವಿವಾದದ ಹಿನ್ನೆಲೆಯಲ್ಲಿ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳು ನೀಡಿರುವ ‘ಕರ್ನಾಟಕ ಬಂದ್’ ಕರೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಸರ್ಕಾರದ ಪರವಾಗಿ ಅತ್ಯಂತ ನಮ್ರತೆಯಿಂದ ಮಹತ್ವದ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಂದ್ ಆಚರಿಸುವ ನಿರ್ಧಾರವನ್ನು ವಾಪಸ್ ಪಡೆಯುವಂತೆ ಹೋರಾಟಗಾರರನ್ನು ಕೋರಿದ್ದಾರೆ. ಬಂದ್‌ನಿಂದ ಪರಿಹಾರ ಸಿಗಲ್ಲ, ಜನರಿಗೆ ತೊಂದರೆ “ನೆಲ-ಜಲದ ರಕ್ಷಣೆಗಾಗಿ ಕನ್ನಡಪರ ಮತ್ತು ರೈತ ಸಂಘಟನೆಗಳು ಧ್ವನಿ ಎತ್ತುತ್ತಿರುವುದು ತಪ್ಪಲ್ಲ. ಆದರೆ ಸದ್ಯದ…

Read More