Uttar Kannada: ಉತ್ತರ ಕನ್ನಡದಲ್ಲಿ ಇಸ್ರೇಲ್ ಪ್ರಜೆ ವಶಕ್ಕೆ: ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ ಮಾರ್ಚಾವಿ ಅಸ್ಸಾಪ್
ಕಾರವಾರ: ಉತ್ತರ ಕನ್ನಡ (Uttar Kannada) ಜಿಲ್ಲೆಯಲ್ಲಿ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಯಾವುದೇ ಸಕ್ರಮ ದಾಖಲೆಗಳಿಲ್ಲದೆ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಸ್ರೇಲ್ ದೇಶದ ಪ್ರಜೆಯೊಬ್ಬನನ್ನು ಹೊನ್ನಾವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಿದೇಶಿ ಪ್ರಜೆಗಳ ಸಂಚಾರ ಮತ್ತು ವಾಸ್ತವ್ಯದ ಮೇಲೆ ನಿರಂತರ ನಿಗಾವಹಿಸಿದ್ದ ಪೊಲೀಸರ ಜಾಗರೂಕತೆಯಿಂದಾಗಿ ಈ ಅಕ್ರಮ ಪ್ರವಾಸ ಬಯಲಿಗೆ ಬಂದಿದ್ದು, ಬಂಧಿತ ವ್ಯಕ್ತಿಯನ್ನು ಮುಂದಿನ ಸೂಕ್ತ ಕಾನೂನು ತನಿಖೆ ಹಾಗೂ ಪ್ರಕ್ರಿಯೆಗಳಿಗಾಗಿ ಬೆಂಗಳೂರಿನ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ (FRRO) ಹಸ್ತಾಂತರಿಸಲಾಗಿದೆ. ಬಂಧಿತ ಇಸ್ರೇಲಿ ಪ್ರಜೆಯ…
