BMTC: ಬಿಎಂಟಿಸಿ ಇ-ಬಸ್ ಸರಣಿ ಅಪಘಾತ: ಹೈಟೆಕ್ ವಾಹನಗಳಿಗೆ ಬೇಕಿಲ್ಲವೇ ದಕ್ಷ ಚಾಲಕರು? ಬಯಲಾಯ್ತು ಅಸಲಿ ರಹಸ್ಯ!
ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆಯಲು ರಸ್ತೆಗಿಳಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪರಿಸರಸ್ನೇಹಿ ಎಲೆಕ್ಟ್ರಿಕ್…
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬಯಸಿದ ಯಶಸ್ಸನ್ನು ಪಡೆಯಬಹುದು ಅಥವಾ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ದಿನದ ಮಧ್ಯ ಭಾಗವು…
ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆಯಲು ರಸ್ತೆಗಿಳಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್ಗಳು (E-Buses), ಸದ್ಯ ಸಾರ್ವಜನಿಕರ ಪಾಲಿಗೆ ಆತಂಕದ ನೆರಳಾಗಿ ಮಾರ್ಪಟ್ಟಿವೆ. ನಗರದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಸಾಲು ಸಾಲು ಇ-ಬಸ್ ದುರಂತಗಳು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ತಂತ್ರಜ್ಞಾನದಲ್ಲಿ ಅತ್ಯಾಧುನಿಕವಾಗಿರುವ ಈ ವಾಹನಗಳು ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವುದರ ಹಿನ್ನೆಲೆಯನ್ನು ಕೆದಕಿದಾಗ ನಿಗಮದ ಆಡಳಿತಾತ್ಮಕ ಲೋಪಗಳು ಎದ್ದು ಕಾಣುತ್ತಿವೆ. ಗಮ್ಯ ತಲುಪಿಸುವ ಬಸ್ಗಳಲ್ಲಿ ಸುರಕ್ಷತೆಯೇ ಶೂನ್ಯ? ರಾಜಧಾನಿಯ ಸಾರಿಗೆ ವ್ಯವಸ್ಥೆಯನ್ನು…
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲೋಪದೋಷಗಳಾಗಿವೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, (Priyank Kharge) ಈ ಗೊಂದಲಗಳಿಗೆ ರಾಜ್ಯ ಸರ್ಕಾರ ಕಾರಣವಲ್ಲ, ಬದಲಿಗೆ ಚುನಾವಣಾ ಆಯೋಗವೇ ನೇರ ಹೊಣೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಆಯೋಗದ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. “ಚುನಾವಣಾ ಆಯೋಗ ಕತ್ತೆ ಕಾಯ್ತಾ ಇದೆಯಾ? ಜವಾಬ್ದಾರಿ ಅವರದ್ದೇ ತಾನೆ?” ಎಂದು ಆಕ್ರೋಶ…
ಬೆಂಗಳೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಬೋಧಕೇತರ ಸಿಬ್ಬಂದಿಗಳ ಸಾರ್ವತ್ರಿಕ ವರ್ಗಾವಣೆಗೆ ಸಂಬಂಧಿಸಿದಂತೆ ಮಹತ್ವದ ವೇಳಾಪಟ್ಟಿಯೊಂದನ್ನು (Staff Transfer) ಬಿಡುಗಡೆ ಮಾಡಿದೆ. ನಿಯಮಾವಳಿಗಳ ಪ್ರಕಾರ ಈಗಾಗಲೇ ಶೇಕಡಾ 4 ರಷ್ಟು ಕೋರಿಕೆ ವರ್ಗಾವಣೆ ಪ್ರಕ್ರಿಯೆಗಳನ್ನು ಮುಗಿಸಲಾಗಿದ್ದು, ಸದ್ಯ ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳಿಗೆ ಶೇಕಡಾ 20 ರ ಮಿತಿಯೊಳಗೆ ಕೌನ್ಸಿಲಿಂಗ್ ಮೂಲಕ ಸ್ಥಳ ಬದಲಾವಣೆ ಮಾಡಲು ಇಲಾಖೆ ತೀರ್ಮಾನಿಸಿದೆ. ವರ್ಗಾವಣೆ ಪ್ರಕ್ರಿಯೆಯ ಟೈಮ್ಲೈನ್ ಇಲ್ಲಿದೆ: ಬೋಧಕೇತರ ನೌಕರರು ಗಮನಿಸಬೇಕಾದ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:…
ಕೊಪ್ಪಳ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ತಮ್ಮ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿರುವುದಕ್ಕೆ ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ (Basavaraj Rayareddy) ಆಡಳಿತಾತ್ಮಕ ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. “ಮುಖ್ಯಮಂತ್ರಿಗಳು ನನ್ನನ್ನು ಹುದ್ದೆಯಿಂದ ವಜಾಗೊಳಿಸಿಲ್ಲ, ರಾಜ್ಯದಲ್ಲಿ ಸಿಎಂ ಬದಲಾದ ಮೇಲೆ ಹೊಸ ನೇಮಕಾತಿ ಮಾಡುವುದು ಅತ್ಯಂತ ಸಹಜ ಪ್ರಕ್ರಿಯೆ” ಎಂದು ಹೇಳುವ ಮೂಲಕ ಸರ್ಕಾರದ ನಿರ್ಧಾರವನ್ನು ಅವರು ಮುಕ್ತವಾಗಿ ಸಮರ್ಥಿಸಿಕೊಂಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ…
ಚಿಕ್ಕೋಡಿ: ಕಳೆದ ಎರಡು ತಿಂಗಳಿನಿಂದ ಹನಿ ನೀರಿಲ್ಲದೆ ಸಂಪೂರ್ಣ ಕಂಗಾಲಾಗಿದ್ದ ಕೃಷ್ಣಾ ನದಿಗೆ (Krishna River) ಕೊನೆಗೂ ಹೊಸ ಕಳೆ ಬಂದಿದೆ. ನೆರೆರಾಜ್ಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ವರುಣದೇವನ ಆರ್ಭಟ ಜೋರಾಗಿರುವುದರಿಂದ ಕೃಷ್ಣಾ ನದಿಗೆ ಸದ್ಯ 15 ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ನದಿ ಪಾತ್ರದ ಜನರಲ್ಲಿ ಹಾಗೂ ರೈತಾಪಿ ವಲಯದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಜಲಕ್ಷಾಮಕ್ಕೆ ಬ್ರೇಕ್; ರೈತರಲ್ಲಿ ಚಿಗುರಿದ ಆಸೆ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳ ಆಧಾರಸ್ತಂಭವಾಗಿರುವ ಕೃಷ್ಣಾ ನದಿಯು ಒಣಗಿಹೋಗಿದ್ದರಿಂದ ಇತ್ತೀಚಿನ ದಿನಗಳಲ್ಲಿ…
ಕೊಪ್ಪಳ: ಸಾಲದ ಬಾಧೆ ಮತ್ತು ತೀವ್ರ ಆರ್ಥಿಕ ನಷ್ಟವನ್ನು ತಾಳಲಾರದೆ ಒಂದೇ ಕುಟುಂಬದ ಮೂವರು ಜೀವಾಹುತಿ ಮಾಡಿಕೊಂಡಿರುವ ಕರುಣಾಜನಕ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ಶನಿವಾರ ಬೆಳಕಿಗೆ (Crime) ಬಂದಿದೆ. ಈ ಭೀಕರ ದುರಂತವು ಇಡೀ ಸ್ಥಳೀಯ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಮೃತರ ಹಿನ್ನೆಲೆ ಗಂಗಾವತಿಯ ಪ್ರಶಾಂತ್ ನಗರದ ನಿವಾಸಿಗಳಾಗಿದ್ದ ಚಿನ್ನದ ವರ್ತಕ ಪ್ರಕಾಶ್ ರಾಯ್ಕರ್ (54), ಅವರ ಪತ್ನಿ ಪ್ರಭಾ ರಾಯ್ಕರ್ (46) ಮತ್ತು ಬಿಎಸ್ಸಿ ಪದವಿ ಓದುತ್ತಿದ್ದ ಮಗ ಶಶಾಂಕ್ ರಾಯ್ಕರ್ (21) ಸಾವನ್ನಪ್ಪಿದ ದುರ್ದೈವಿಗಳು….
ಬೆಂಗಳೂರು: ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ನಷ್ಟದ ಸುಳಿಯಿಂದ ಹೊರಬರಲು ಇದೀಗ ವಿನೂತನ ಆದಾಯ ಮೂಲದ ಮೊರೆ ಹೋಗಿದೆ. ಬಸ್ಗಳ ಬಾಡಿ ಹಾಗೂ ಟಿಕೆಟ್ಗಳ ಹಿಂಭಾಗವನ್ನು ಕಮರ್ಷಿಯಲ್ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಿರುವ ನಿಗಮ, ಈಗ ಬಸ್ಸುಗಳ ಒಳಗಿರುವ ಸ್ಪೀಕರ್ಗಳ ಮೂಲಕ ಧ್ವನಿ (ಆಡಿಯೋ) ಜಾಹೀರಾತುಗಳನ್ನು ಬಿತ್ತರಿಸಲು ಯೋಜನೆ ರೂಪಿಸಿದೆ. ದೇಶದಲ್ಲೇ ಮೊದಲ ಎನ್ನಲಾದ ಈ ಪ್ರಯೋಗಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೋಟಿ ಕೋಟಿ ಕಮಾಯಿ ಮಾಡಲು ಸಾರಿಗೆ ಇಲಾಖೆ ಕಸರತ್ತು…