TOP NEWS
Daily Numerology prediction December 9

Daily Numerology: ಸಂಖ್ಯೆ 1ರ ವಿದ್ಯಾರ್ಥಿಗಳಿಗೆ ಯಶಸ್ಸು, ಇಲ್ಲಿದೆ ಭವಿಷ್ಯ

ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬಯಸಿದ ಯಶಸ್ಸನ್ನು ಪಡೆಯಬಹುದು ಅಥವಾ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ದಿನದ ಮಧ್ಯ ಭಾಗವು…

Read More
Neha case accused bail plea rejected

Neha Case: ನೇಹಾ ಹತ್ಯೆ ಪ್ರಕರಣ: ಆರೋಪಿ ಫಯಾಜ್‌ಗೆ ಮತ್ತಷ್ಟು ಬಿಗಿಬಿದ್ದ ಕಾನೂನು ಉರುಳು

ಹುಬ್ಬಳ್ಳಿ ಮೂಲದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Case) ಅವರ ಬರ್ಬರ ಕೊಲೆ ಪ್ರಕರಣದ ಮುಖ್ಯ ಆರೋಪಿ ಫಯಾಜ್‌ಗೆ ಕಾನೂನಿನ ಸಂಕೋಲೆ ಮತ್ತಷ್ಟು ಬಿಗಿಯಾಗಿದೆ. ಹಂತಕನಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಮೃತಳ ತಂದೆ ನಿರಂತರವಾಗಿ ಆಗ್ರಹಿಸುತ್ತಿದ್ದಾರೆ. ಈ ನಡುವೆ, ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠವು ಮೂರನೇ ಬಾರಿಗೆ ತಿರಸ್ಕರಿಸಿದೆ. ಕೆಳ ನ್ಯಾಯಾಲಯಗಳೂ ಸೇರಿದಂತೆ ಒಟ್ಟಾರೆಯಾಗಿ ಇದು ಐದನೇ ಬಾರಿಗೆ ಆತನಿಗೆ ಜಾಮೀನು ನಿರಾಕರಿಸಲ್ಪಟ್ಟಂತಾಗಿದೆ. ಹೈಕೋರ್ಟ್‌ನಿಂದಲೂ ಹಿನ್ನಡೆ ಅನುಭವಿಸಿರುವ ಫಯಾಜ್‌ಗೆ ಸದ್ಯ ಜೈಲಿನಿಂದ…

Read More
cm dk shivakumar gave green signal to start safari

DK Shivakumar: ಬಂಡಿಪುರ, ನಾಗರಹೊಳೆ ಸಫಾರಿ ಪುನರಾರಂಭಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಚಾಲನೆ ನೀಡುವ ಜೊತೆಗೆ ವನ್ಯಜೀವಿಗಳ ಸಂರಕ್ಷಣೆ ಮತ್ತು ನಾಗರಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ‘ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ’ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬಂಡಿಪುರ-ನಾಗರಹೊಳೆ ಸಫಾರಿ ಪುನರಾರಂಭಕ್ಕೆ ಸೂಚನೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಬಂಡಿಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳಲ್ಲಿ…

Read More
PM-Kisan sms of 1 paise shocked Maharashtra farmer

PM-Kisan: ತಾಂತ್ರಿಕ ದೋಷ ತಂದಿಟ್ಟ ತಲೆನೋವು: ಮಹಾರಾಷ್ಟ್ರದ ರೈತ ಮಹಿಳೆಗೆ ‘1 ಪೈಸೆ’ ಪಿಎಂ-ಕಿಸಾನ್ ಕಂತಿನ ಮೆಸೇಜ್

ಮುಂಬೈ: ಮಹಾರಾಷ್ಟ್ರದ ರೈತರೊಬ್ಬರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಕಂತಿನ ಹಣ ಜಮೆಯಾದ ಕುರಿತು ಬಂದ ಒಂದು ಎಸ್‌ಎಮ್‌ಎಸ್ (SMS) ಇಡೀ ಕುಟುಂಬವನ್ನು ತೀವ್ರ ಗೊಂದಲಕ್ಕೆ ತಳ್ಳಿದ ಅಪರೂಪದ ಘಟನೆಯೊಂದು ವರದಿಯಾಗಿದೆ. ಯೋಜನೆಯಡಿ ಬರಬೇಕಿದ್ದ 2,000 ರೂಪಾಯಿ ಬದಲಿಗೆ ಕೇವಲ ‘1 ಪೈಸೆ’ ಮಾತ್ರ ಖಾತೆಗೆ ಜಮೆಯಾಗಿದೆ ಎಂಬ ಸಂದೇಶ ಮೊಬೈಲ್‌ಗೆ ಬಂದಿದ್ದೇ ಈ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಈ ರೀತಿ ತಪ್ಪು ಸಂದೇಶ ರವಾನೆಯಾಗಿದೆಯೇ ವಿನಃ ರೈತರ ಖಾತೆಗೆ ಪೂರ್ಣ…

Read More
Yogesh gowda case vinay Kulkarni bail plea investigation

High Court: ಯೋಗೇಶ್ ಗೌಡ ಹತ್ಯೆ ಕೇಸ್: ಸಿಸ್ಟಮ್ ಹೈಜಾಕ್ ಮಾಡಿದ್ದ ವಿನಯ್ ಕುಲಕರ್ಣಿಗೆ ಬೇಲ್ ಬೇಡ; ಹೈಕೋರ್ಟ್‌ನಲ್ಲಿ ಸಿಬಿಐ ಖಡಕ್ ವಾದ!

ಧಾರವಾಡ: ಬಿಜೆಪಿ ಲೀಡರ್ ಯೋಗೇಶ್ ಗೌಡ ಹತ್ಯೆ ಕೇಸ್‌ನ ಹೈಕೋರ್ಟ್ ವಿಚಾರಣೆ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಪ್ರಕರಣದ ಮೇನ್ ಅಕ್ಯೂಸ್ಡ್, ಮಾಜಿ ಶಾಸಕ ವಿನಯ್ ಕುಲಕರ್ಣಿಗೆ ಕೆಳ ನ್ಯಾಯಾಲಯ ನೀಡಿರುವ ಜೀವಾವಧಿ ಶಿಕ್ಷೆಯನ್ನು ಯಾವುದೇ ಕಾರಣಕ್ಕೂ ಸಸ್ಪೆಂಡ್ ಮಾಡಬಾರದು ಮತ್ತು ಅವರಿಗೆ ಬೇಲ್ ಕೊಡಬಾರದು ಎಂದು ಸಿಬಿಐ (CBI) ಪರ ವಕೀಲರು ಹೈಕೋರ್ಟ್‌ನಲ್ಲಿ (High Court) ಖಡಕ್ ವಾದ ಮಂಡಿಸಿದ್ದಾರೆ. ಇದು ಕೇವಲ ಒಂದು ಮರ್ಡರ್ ಕೇಸ್ ಅಲ್ಲ, ಇದೊಂದು ದೊಡ್ಡ ರಾಜಕೀಯ ಪಿತೂರಿಯಾಗಿದ್ದು,…

Read More
crime yadgiri bank scam president takes life by writing death note

Crime: ಯಾದಗಿರಿ ಸಹಕಾರಿ ಬ್ಯಾಂಕ್ ಹಗರಣಕ್ಕೆ ದುರಂತ ಅಂತ್ಯ: ಅಧ್ಯಕ್ಷ ಬಸನಗೌಡ ಆತ್ಮಹತ್ಯೆ!

ಯಾದಗಿರಿ: ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದ ಕೋಟ್ಯಂತರ ರೂಪಾಯಿ ಆರ್ಥಿಕ ಹಗರಣವು ಇದೀಗ ದುರಂತ ಅಂತ್ಯ (Crime) ಕಂಡಿದೆ. ಶಹಾಪುರ ನಗರದ ಮಾತೋಶ್ರೀ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಬಸನಗೌಡ ವೆಂಕಟರೆಡ್ಡಿ ಮಾಲಿ ಪಾಟೀಲ (64) ಅವರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಸಾಲದ ಅಕ್ರಮ ಹಾಗೂ ಗ್ರಾಹಕರ ಆಕ್ರೋಶವೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಜಿಲ್ಲಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಏನಿದು ಪ್ರಕರಣ? ಮಾತೋಶ್ರೀ ಹೇಮರಡ್ಡಿ…

Read More
Pooja hegde to be part of pawan kalyan OF sequel

Pawan Kalyan: ಪವರ್ ಸ್ಟಾರ್ ‘ಒಜಿ’ ಸಿನಿಮಾಗೆ ಪೂಜಾ ಹೆಗ್ಡೆ ಎಂಟ್ರಿ?: ಸಖತ್ ಹೈಪ್ ಸೃಷ್ಟಿಸಿದ ‘ಒಜಿ ಯುನಿವರ್ಸ್’

ಹೈದರಾಬಾದ್:‌ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ (‌Pawan Kalyan) ನಟನೆಯ ಬಹುನಿರೀಕ್ಷಿತ ‘ಒಜಿ’ (OG) ಸಿನಿಮಾ ಮತ್ತು ಅದರ ಫ್ರಾಂಚೈಸಿ ಕುರಿತು ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿವೆ. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಗಾಸಿಪ್‌ಗಳ ಪ್ರಕಾರ, ಈ ಆ್ಯಕ್ಷನ್ ಡ್ರಾಮಾ ಸಿನಿಮಾದ ಎರಡನೇ ಭಾಗದಲ್ಲಿ ನಾಯಕಿಯಾಗಿ ನಟಿಸಲು ಸ್ಟಾರ್ ನಟಿ ಪೂಜಾ ಹೆಗ್ಡೆ ಅವರ ಹೆಸರನ್ನು ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ. ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬೀಳದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರಿ…

Read More
Congress angry about modi silence on ram mandir issue

Ram Mandir: ರಾಮ ಮಂದಿರ ದೇಣಿಗೆ ಹಗರಣಕ್ಕೆ ರಾಜಕೀಯ ಟ್ವಿಸ್ಟ್: ಪ್ರಧಾನಿ ಮೋದಿ ಮೌನಕ್ಕೆ ಕಾಂಗ್ರೆಸ್ ಕಿಡಿ

ನವದೆಹಲಿ: ಅಯೋಧ್ಯೆಯ ರಾಮ ಮಂದಿರದ (Ram Mandir) ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಅವ್ಯವಹಾರ ಮತ್ತು ಹಣ ದುರುಪಯೋಗದ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಈ ಹಗರಣದ ಕುರಿತು ಪ್ರಧಾನಿಯವರು ಮೌನ ವಹಿಸಿರುವುದು ದೇಶದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಮಾಡಿದ ನೇರ ದ್ರೋಹ ಎಂದು ಕಾಂಗ್ರೆಸ್ ಆರೋಪಿಸಿದೆ. ಇದೇ ವೇಳೆ, ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಯೋಜಿಸಿದ್ದ ಕಾಂಗ್ರೆಸ್ ನಿಯೋಗದ ನೇತೃತ್ವ…

Read More