Daily Numerology prediction December 9

Daily Numerology: ಸಂಖ್ಯೆ 1ರ ವಿದ್ಯಾರ್ಥಿಗಳಿಗೆ ಯಶಸ್ಸು, ಇಲ್ಲಿದೆ ಭವಿಷ್ಯ

ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಪರೀಕ್ಷೆಗಳು ಮತ್ತು ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬಯಸಿದ ಯಶಸ್ಸನ್ನು ಪಡೆಯಬಹುದು ಅಥವಾ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದ ಜನರಿಗೆ ದಿನದ ಮಧ್ಯ ಭಾಗವು…

Read More
davangere and bagalkote by election voting percentage information

By Election: ದಾವಣಗೆರೆ-ಬಾಗಲಕೋಟೆ ಉಪಚುನಾವಣೆ, ಮತದಾರರಿಂದ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (By Election) ಮತದಾನ ಪ್ರಕ್ರಿಯೆ ಅತ್ಯಂತ ಬಿರುಸಿನಿಂದ ಸಾಗುತ್ತಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಬಾಗಲಕೋಟೆಯಲ್ಲಿ ಶೇ. 54.82 ಹಾಗೂ ದಾವಣಗೆರೆಯಲ್ಲಿ ಶೇ. 49.66 ರಷ್ಟು ದಾಖಲೆ ಪ್ರಮಾಣದ ಮತದಾನವಾಗಿದೆ. ಆರಂಭದಲ್ಲಿ ಮಂದಗತಿಯಲ್ಲಿದ್ದ ಪ್ರಕ್ರಿಯೆಯು ಮಧ್ಯಾಹ್ನವಾಗುತ್ತಿದ್ದಂತೆ ವೇಗ ಪಡೆದುಕೊಂಡಿದ್ದು, ಮತದಾರರು ಬಿಸಿಲನ್ನೂ ಲೆಕ್ಕಿಸದೆ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ….

Read More
iran Alternate Shipping Routes

Iran: ಹಾರ್ಮುಜ್ ಬದಲು ಪರ್ಯಾಯ ಮಾರ್ಗ ನೀಡಿದ ಇರಾನ್

ಇರಾನ್: ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ (Iran) ಗುರುವಾರ ಹೊಸ ಸಂಚಾರ ನಿಯಮಗಳನ್ನು ಪ್ರಕಟಿಸಿದೆ. ಗಮನ ಸೆಳೆದ ಇರಾನ್‌ ನಿರ್ಧಾರ ಜಲಸಂಧಿಯ ಮುಖ್ಯ ಭಾಗದಲ್ಲಿ ಕಡಲ ಮೈನ್‌ಗಳು ಇರುವ ಭೀತಿ ಇರುವುದರಿಂದ, ಸುರಕ್ಷತೆಯ ದೃಷ್ಟಿಯಿಂದ ಹಡಗುಗಳು ಪರ್ಯಾಯ ಮಾರ್ಗಗಳನ್ನು ಬಳಸಬೇಕು ಎಂದು ಇರಾನ್ ಸೂಚಿಸಿದೆ. ಜಾಗತಿಕ ತೈಲ ಪೂರೈಕೆಯ ಸುಮಾರು ಶೇಕಡಾ 20 ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ ಇರಾನ್‌ನ ಈ ನಿರ್ಧಾರ ಅಂತರಾಷ್ಟ್ರೀಯ…

Read More
Second puc result announced

PUC Result: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಹೀಗೆ ಚೆಕ್‌ ಮಾಡಿ

ಬೆಂಗಳೂರು: 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ (PUC Result) ಇಂದು ಹೊರಬಿದ್ದಿದ್ದು, ಪರೀಕ್ಷೆ ಬರೆದಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯವಾಗಿದೆ. ಆನ್‌ಲೈನ್‌ನಲ್ಲಿ ಈಗಾಗಲೇ ಫಲಿತಾಂಶ ಲಭ್ಯವಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಸಂಜೆ 6ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ವಿವರಗಳನ್ನು ನೀಡಲಿದ್ದಾರೆ. ರಿಸಲ್ಟ್‌ ನೋಡೋದು ಹೇಗೆ? ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ karresults.nic.in ಮೂಲಕ ತಮ್ಮ ಫಲಿತಾಂಶವನ್ನು ಸುಲಭವಾಗಿ…

Read More
West Bengal NIA registers 12 FIR regarding judicial officers attack

West Bengal: ನ್ಯಾಯಾಂಗ ಅಧಿಕಾರಿಗಳ ಹಲ್ಲೆ ಪ್ರಕರಣ, ತನಿಖೆ ಚುರುಕುಗೊಳಿಸಿದ NIA

ಪಶ್ಚಿಮ ಬಂಗಾಳ: ಮಾಲ್ಡಾ ಜಿಲ್ಲೆಯಲ್ಲಿ ನ್ಯಾಯಾಂಗ (West Bengal) ಅಧಿಕಾರಿಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಭೀಕರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಚುರುಕುಗೊಳಿಸಿದೆ. ಸುಪ್ರೀಂ ಕೋರ್ಟ್ ನೀಡಿದ ಖಡಕ್ ಸೂಚನೆಯ ಮೇರೆಗೆ ಎನ್‌ಐಎ ಈಗಾಗಲೇ 12 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು, ಸತ್ಯಾಸತ್ಯತೆ ಪತ್ತೆ ಹಚ್ಚಲು ತನಿಖಾಧಿಕಾರಿಗಳ ತಂಡ ಮಾಲ್ಡಾಕ್ಕೆ ತಲುಪಿದೆ. ಒಂಬತ್ತು ಗಂಟೆಗಳ ಕಾಲ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಜನರು ಚುನಾವಣಾ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿದ್ದ ಏಳು ಮಂದಿ ನ್ಯಾಯಾಂಗ ಅಧಿಕಾರಿಗಳನ್ನು ಗುಂಪೊಂದು ಅಡ್ಡಗಟ್ಟಿ, ಸುಮಾರು ಒಂಬತ್ತು ಗಂಟೆಗಳ ಕಾಲ…

Read More
Duniya Vijay request youths not to take zombie drug

Duniya Vijay: ಜಾಂಬಿ ಡ್ರಗ್ ಬಗ್ಗೆ ಆತಂಕ ವ್ಯಕ್ತಪಡಿಸಿದ ನಟ ದುನಿಯಾ ವಿಜಯ್

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹರಿದಾಡುತ್ತಿರುವ ಕೆಲವು ವಿಡಿಯೋಗಳು ಜನರಲ್ಲಿ ಆತಂಕ ಮೂಡಿಸಿವೆ. ಆ ವಿಡಿಯೋಗಳಲ್ಲಿ ಯುವಕರು ಪ್ರಜ್ಞೆ ಇಲ್ಲದವರಂತೆ ನಿಂತಲ್ಲೇ ವಾಲಾಡುತ್ತಾ, ಸಿನಿಮಾಗಳಲ್ಲಿ ಕಾಣುವ ‘ಜಾಂಬಿ’ಗಳಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದಕ್ಕೆ ‘ಜಾಂಬಿ ಡ್ರಗ್’ ಎಂಬ ಭೀಕರ ಮಾದಕ ವಸ್ತುವೇ ಕಾರಣ ಎನ್ನಲಾಗುತ್ತಿದ್ದು, ಈ ಪಿಡುಗು ಬೆಂಗಳೂರಿಗೂ ಕಾಲಿಟ್ಟಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಗಂಭೀರ ಬೆಳವಣಿಗೆಯ ಬಗ್ಗೆ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ (Duniya Vijay) ಈಗ ಕಳವಳ ವ್ಯಕ್ತಪಡಿಸಿದ್ದಾರೆ. ಯುವಕರಿಗೆ ದೂರ ಇರುವಂತೆ…

Read More
Daali Dhanajaya new experiment in web series

Daali Dhanajaya: ವೆಬ್‌ ಸೀರೀಸ್‌ನತ್ತ ಡಾಲಿ ಚಿತ್ತ, ಓಟಿಟಿಗೆ ಬಂದ ಧನಂಜಯ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ (Daali Dhanajaya) ಈಗ ನಟನೆಯ ಜೊತೆಗೆ ನಿರ್ಮಾಣದಲ್ಲೂ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಇಷ್ಟು ದಿನ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದ ಅವರು, ಇದೀಗ ‘ಜೆರಾಕ್ಸ್’ ಎಂಬ ವೆಬ್ ಸರಣಿಯ ಮೂಲಕ ಅಧಿಕೃತವಾಗಿ ಒಟಿಟಿ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪ್ರತಿಭಾವಂತ ನಿರ್ದೇಶಕನ ಜೊತೆ ಸೀರೀಸ್‌ ಇತ್ತೀಚೆಗೆ ‘ಬ್ಲಿಂಕ್’ ಸಿನಿಮಾದ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದ ಪ್ರತಿಭಾವಂತ ನಿರ್ದೇಶಕ ಶ್ರೀನಿಧಿ ಬೆಂಗಳೂರು ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಬಹಳ ದಿನಗಳಿಂದ ಒಂದು ವಿಭಿನ್ನವಾದ ವೆಬ್…

Read More
Narendra modi government raises fertilizer subsidy

Narendra Modi: ಮೋದಿ ಸರ್ಕಾರದಿಂದ ರೈತರಿಗೆ ಸಿಹಿಸುದ್ದಿ, ರಸಗೊಬ್ಬರ ಸಬ್ಸಿಡಿ ಹೆಚ್ಚಳ

ನವದೆಹಲಿ: ಖಾರಿಫ್ ಹಂಗಾಮಿನ ಕೃಷಿ ಕೆಲಸಗಳಲ್ಲಿ ತೊಡಗಿರುವ ದೇಶದ ರೈತರಿಗೆ ಕೇಂದ್ರ ಸರ್ಕಾರ ದೊಡ್ಡ ಸಮಾಧಾನದ ಸುದ್ದಿ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಜಾಗತಿಕವಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗುವ ಭೀತಿ ಇತ್ತು. ಆದರೆ, ರೈತರ ಮೇಲೆ ಈ ಬೆಲೆ ಏರಿಕೆಯ ಹೊರೆ ಬೀಳದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸಚಿವ ಸಂಪುಟವು ಸಬ್ಸಿಡಿ ಮೊತ್ತವನ್ನು ಶೇ. 12ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. ಬೆಲೆ ಹೆಚ್ಚಾದ್ರು ಚಿಂತೆ ಮಾಡಬೇಕಿಲ್ಲ ಈ ಮಹತ್ವದ…

Read More