TOP NEWS

sandhya m

ಶಿವಮೊಗ್ಗದ ಸಾಗರದವರಾದ ಸಂಧ್ಯಾ.ಎಂ ಪತ್ರಿಕೋದ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಆಂಗ್ಲ ಸಾಹಿತ್ಯ ವಿಷಯದಲ್ಲಿ ಪದವಿ ಹಾಗೂ ಮೈಸೂರಿನ ಅಮೃತಾ ಸ್ಕೂಲ್‌ ಆಫ್ ಆರ್ಟ್ಸ್‌ನಲ್ಲಿ ಫಿಲ್ಮ್‌ ಮೇಕಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯೂಸ್‌18 ಕನ್ನಡ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಈಗ ನವಸಮಾಜ.ಕಾಂನಲ್ಲಿ ಕಂಟೆಂಟ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಲಿತ ರಾಜಕೀಯ ಸುದ್ದಿ, ಸಿನಿಮಾ ಹಾಗೂ ಪ್ರವಾಸ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಪತ್ತೆದಾರಿ ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸವಾಗಿದ್ದು,ರವಿ ಬೆಳಗೆರೆ ಬರಹ ಇವರಿಗೆ ಅಚ್ಚುಮೆಚ್ಚು.

mysuru women suicide

Mysuru: ಗಂಡನ ಮನೆಯವರ ಕಿರುಕುಳ, ನೇಣಿಗೆ ಶರಣಾದ ಯುವತಿ: ಆರೋಪಿಗಳ ರಕ್ಷಣೆಗೆ ಮುಂದಾಯ್ತ ಖಾಕಿ?

ಮೈಸೂರು: ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಪ್ರಕರಣದಲ್ಲಿ ಪೊಲೀಸರೇ ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಏನಿದು ಘಟನೆ?ಮೈಸೂರಿನ ದಟ್ಟಗಳ್ಳಿ ನಿವಾಸಿಯಾದ ಸಹದೇವ್‌ ಅವರ ಮಗಳು 28 ವರ್ಷದ ಸಂಪ್ರೀತ ಆತ್ಮಹತ್ಯೆ ಮಾಡಿಕೊಂಡ ಯುವತಿ ಆಗಿದ್ದು, ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ. ಮಾಹಿತಿಗಳ ಪ್ರಕಾರ, ಮೈಸೂರು ಮೂಲದ ಯುವತಿ…

Read More
rajinikanths jailer 2 film some scenes leaked

Rajinikanth: ಜೈಲರ್ 2 ಸೆಟ್‌ನಿಂದ ದೃಶ್ಯ ಸೋರಿಕೆ: ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಸನ್ ಪಿಕ್ಚರ್ಸ್ ಗರಂ

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ (‌Rajinikanth) ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಚಿತ್ರೀಕರಣದ ಹಂತದಲ್ಲೇ ಪೈರಸಿ ಕಾಟಕ್ಕೆ ಸಿಲುಕಿದೆ. ಚಿತ್ರದ ಪ್ರಮುಖ ದೃಶ್ಯಗಳಿರುವ ವಿಡಿಯೋ ತುಣುಕೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಭದ್ರತಾ ಲೋಪ ಭಾರಿ ನಿರಾಸೆ ಮೂಡಿಸಿದೆ. ವಾರ್ನಿಂಗ್‌ ಕೊಟ್ಟ ಸನ್‌ ಪಿಕ್ಚರ್ಸ್‌ ಸಿನಿಮಾವನ್ನು ನಿರ್ಮಿಸುತ್ತಿರುವ ಪ್ರತಿಷ್ಠಿತ ‘ಸನ್ ಪಿಕ್ಚರ್ಸ್’ ಸಂಸ್ಥೆಯು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿಡಿಯೋ ಸೋರಿಕೆ ಮಾಡಿರುವ ಕಿಡಿಗೇಡಿಗಳ…

Read More
High court says Incomplete charge sheet does not revive right to claim statutory bail

High Court:ಚಾರ್ಜ್‌ಶೀಟ್ ಅಪೂರ್ಣವಾಗಿದ್ದರೂ ಆರೋಪಿಗೆ ಸಿಗಲ್ಲ ‘ಡೀಫಾಲ್ಟ್ ಜಾಮೀನು’ – ಹೈಕೋರ್ಟ್ ಖಡಕ್ ಆದೇಶ

ಬೆಂಗಳೂರು: ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಗಂಭೀರ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಯು ನಿಗದಿತ ಅವಧಿಯೊಳಗೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದರೆ, ಅದರಲ್ಲಿ ಕೆಲವು ತಾಂತ್ರಿಕ ವರದಿಗಳು ಬಾಕಿ ಇವೆ ಎಂಬ ಕಾರಣಕ್ಕೆ ಆರೋಪಿಗೆ ಶಾಸನಬದ್ಧ ಜಾಮೀನು (Default Bail) ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ. ಏನಿದು ಘಟನೆ? ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿದ್ದ ಗೋವಿಂದ್ ಎಂಬಾತ, ತನ್ನ ಸಹೋದ್ಯೋಗಿಯಾಗಿದ್ದ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ದುರದೃಷ್ಟವಶಾತ್…

Read More
Kangana Ranaut shares how Bollywood titled her as witch

Kangana Ranaut: ನನ್ನನ್ನ ಮಾಟಗಾತಿ ಎಂದೆಲ್ಲಾ ಬಿಂಬಿಸಿದ್ರು, ಹಳೆಯ ಘಟನೆ ಹಂಚಿಕೊಂಡ ಕಂಗನಾ

ಮುಂಬೈ: ಬಾಲಿವುಡ್‌ನ ‘ಫೈರ್ ಬ್ರಾಂಡ್’ ಎಂದೇ ಕರೆಯಲ್ಪಡುವ ಕಂಗನಾ ರಣಾವತ್ (Kangana Ranaut), ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸದಾ ವಿವಾದಗಳ ಕೇಂದ್ರಬಿಂದು. ಇದೀಗ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಿಸಿದ್ದ ಅತ್ಯಂತ ಕೆಟ್ಟ ಆರೋಪ ಮತ್ತು ಅವಮಾನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರರಂಗದ ಕೆಲವರು ತನ್ನನ್ನು ಹೇಗೆ ‘ಮಾಟಗಾತಿ’ (Witch) ಎಂದು ಕರೆದು ವ್ಯಕ್ತಿತ್ವ ಹರಣ ಮಾಡಿದ್ದರು ಎಂಬ ಸ್ಫೋಟಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. ಪ್ರಿಯಕರನಿಂದಲೇ ಮಾಟ-ಮಂತ್ರದ ಆರೋಪ: ಸುಮಾರು ಹತ್ತು ವರ್ಷಗಳ ಹಿಂದೆ…

Read More
Am I a criminal? Pawan Khera asks as SC

Pawan Khera: ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿರುವ ಎಫ್‌ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮಗೆ ನೀಡಲಾಗಿದ್ದ ಸಾರಿಗೆ ನಿಬಂಧಿತ ಜಾಮೀನು (Transit Bail) ಅವಧಿಯನ್ನು ಮಂಗಳವಾರದವರೆಗೆ ವಿಸ್ತರಿಸಬೇಕು ಎಂದು ಖೇರಾ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರ ಪೀಠವು ಈ ಆದೇಶ ನೀಡಿದ್ದು, ಅಸ್ಸಾಂನ…

Read More
Inside Vijay Rashmika mandanna Coorg Honeymoon

Rashmika Mandanna: ಕೊಡಗಿನಲ್ಲಿ ರಶ್ಮಿಕಾ-ವಿಜಯ್‌ ಹನಿಮೂನ್‌

ಮಡಿಕೇರಿ: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ತವರು ಜಿಲ್ಲೆ ಕೊಡಗಿನಲ್ಲಿ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹವಾದ ನಂತರ ರಶ್ಮಿಕಾ ಅವರು ಕೊಡಗಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮದುವೆಯ ನಂತರ ಕೊಡವ ಸಂಪ್ರದಾಯದಂತೆ ಹಮ್ಮಿಕೊಂಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ಸಾಂಪ್ರದಾಯಿಕ ಕೊಡವ ಸೀರೆಯನ್ನು ಉಟ್ಟು ಮಿಂಚುವ ಮೂಲಕ ತಮ್ಮ ಮೂಲ…

Read More
Sadhgurus sleeping cycle sparks health warnings from experts

Sadhguru: ಸದ್ಗುರು ಅಲ್ಪ ನಿದ್ರೆಯ ಗುಟ್ಟು, ಆರೋಗ್ಯದ ಬಗ್ಗೆ ಹೆಚ್ಚಿದ ಕಾಳಜಿ

ನವದೆಹಲಿ: ಆಧ್ಯಾತ್ಮಿಕ ಗುರು ಸದ್ಗುರು (Sadhguru) ಇತ್ತೀಚೆಗೆ ನಟಿ ಆಲಿಯಾ ಭಟ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ತಮ್ಮ ನಿದ್ರೆಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಳೆದ 27 ರಿಂದ 28 ವರ್ಷಗಳ ಕಾಲ ತಾವು ದಿನಕ್ಕೆ ಕೇವಲ ಎರಡೂವರೆ ಇಂದ ಮೂರು ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಿದ್ದಾಗಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಯ ವೇಳೆ ನೀಡಲಾದ ಅರಿವಳಿಕೆಯ ಪ್ರಭಾವದಿಂದಾಗಿ ಈಗ ತಮ್ಮ ನಿದ್ರೆಯ ಅವಧಿ ನಾಲ್ಕರಿಂದ ಐದು ಗಂಟೆಗಳಿಗೆ ಏರಿಕೆಯಾಗಿದೆ ಎಂದು…

Read More