TOP NEWS
cyber crime to INOX Group manager lost 10 crore

Cyber Crime: ಐನಾಕ್ಸ್ ಕಂಪನಿಗೆ ‘ಬಾಸ್’ ಹೆಸರಲ್ಲಿ 10.4 ಕೋಟಿ ರೂ. ಸೈಬರ್ ವಂಚನೆ

ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು (Cyber Crime) ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು ಈಗ ಕಾರ್ಪೊರೇಟ್ ವಲಯಕ್ಕೆ ದೊಡ್ಡ ಕನ್ನ ಹಾಕುತ್ತಿದ್ದಾರೆ. ಇದೀಗ ಪ್ರಖ್ಯಾತ ಚಲನಚಿತ್ರ ಮಂದಿರಗಳ ಸಂಸ್ಥೆ ‘ಐನಾಕ್ಸ್ ಗ್ರೂಪ್’ ಇಂತಹದ್ದೇ ಒಂದು ಭೀಕರ ವಂಚನೆಗೆ ಒಳಗಾಗಿದೆ. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರ (ED) ಹೆಸರಿನಲ್ಲಿ ಬಂದ ನಕಲಿ ವಾಟ್ಸಾಪ್ ಸಂದೇಶವನ್ನು ನೈಜ ಎಂದು ನಂಬಿದ ಅಕೌಂಟ್ಸ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ (DGM), ಬರೋಬ್ಬರಿ 10,40,71,924 ರೂಪಾಯಿಗಳನ್ನು (10.4 ಕೋಟಿ ರೂ.) ಹಂತ-ಹಂತವಾಗಿ ವಂಚಕರ ಖಾತೆಗಳಿಗೆ ವರ್ಗಾಯಿಸಿ ಕೈಸುಟ್ಟುಕೊಂಡಿದ್ದಾರೆ….

Read More
teacher who assault students parents hit them in Belagavi

Assault: ಚಿಕ್ಕೋಡಿಯಲ್ಲಿ ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಪೋಷಕರಿಂದ ಕಾಮುಕನಿಗೆ ಸಾರ್ವಜನಿಕವಾಗಿ ಧರ್ಮದೇಟು!

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ತಲ್ಲಣ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಹತ್ತನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕವಾಗಿ (Assault) ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನಿಗೆ ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಹಿಡಿದು ಶಾಲಾ ಆವರಣದಲ್ಲೇ ಚೆನ್ನಾಗಿ ಥಳಿಸಿ ಸಾರ್ವಜನಿಕವಾಗಿ ಧರ್ಮದೇಟು ನೀಡಿರುವ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಶ್ರೀಶೈಲ್ ಕುಂಬಾರ ಎಂಬಾತನೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಕಿರಾತಕ. ಪಾಸ್ ಮಾಡುವ ಆಮಿಷ…

Read More
fake Bomb threat email to bengaluru RTO office

Bomb Threat: ಬೆಂಗಳೂರಿನ ಆರ್‌ಟಿಒ ಕಚೇರಿಗಳಿಗೆ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರು: ರಾಜಧಾನಿಯ ಜನನಿಬಿಡ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಮತ್ತೊಮ್ಮೆ ಬಾಂಬ್ ಆತಂಕ ಸೃಷ್ಟಿಸಿದ್ದಾರೆ. ನಗರದ ಹಲವು ಪ್ರಮುಖ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಇ-ಮೇಲ್ ಮೂಲಕ ಸ್ಫೋಟದ (Bomb Threat) ಬೆದರಿಕೆ ಸಂದೇಶಗಳನ್ನು ಕಳುಹಿಸಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಗದ್ದಲ ಮೂಡಿಸಿದೆ. ಜ್ಞಾನಭಾರತಿ, ಕಸ್ತೂರಿನಗರ, ಎಚ್.ಎಸ್.ಆರ್ ಲೇಔಟ್ ಹಾಗೂ ತಲಘಟ್ಟಪುರದ ಆರ್‌ಟಿಒ ಕಚೇರಿಗಳಿಗೆ ಜೂನ್ 16ರ ಮಧ್ಯಾಹ್ನ 1:30ರ ಸುಮಾರಿಗೆ ಏಕಕಾಲದಲ್ಲಿ ಈ ವಿಧ್ವಂಸಕ ಇ-ಮೇಲ್‌ಗಳು ಬಂದಿವೆ. ಕಚೇರಿ ಕಟ್ಟಡಗಳನ್ನು ಸಂಪೂರ್ಣವಾಗಿ ಧ್ವಂಸ ಮಾಡುವುದಾಗಿ ಸಂದೇಶದಲ್ಲಿ…

Read More
crime Kumkum Bhagya actor Sanchita Ugale takes her life

Crime: ಕಿರುತೆರೆ ನಟಿ ಸಂಚಿತಾ ಉಗಾಳೆ ಸಾವು; ಕೊನೆಯ ರೀಲ್ಸ್‌ನಲ್ಲಿ ನಟಿಸಿದ್ದ ನಟಿ ಇನ್ನು ನೆನಪು ಮಾತ್ರ

ಮುಂಬೈ: ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಕುಂಕುಮ್ ಭಾಗ್ಯ’ ಮತ್ತು ‘ವಾಗ್ಲೆ ಕಿ ದುನಿಯಾ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ (22) ಅವರು ಭಾನುವಾರ (ಜೂನ್ 14) ಸಂಜೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ. ಈ ಘಟನೆ ಇಡೀ ಟಿವಿ ಉದ್ಯಮ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.́ ನೇಣು ಬಿಗಿದುಕೊಂಡು ಆತ್ಮಹತ್ಯೆ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ನಲಸೋಪಾರಾ ಈಸ್ಟ್‌ನ ಆಚೋಲೆ ಗ್ರಾಮದ ಸಾಯಿ ಸಂತೋಷಿ ಬಿಲ್ಡಿಂಗ್‌ನಲ್ಲಿರುವ ತಮ್ಮ ಮನೆಯಲ್ಲಿ ಈ ಘಟನೆ…

Read More
Crime big twist in ex army man death case wife killed for insurance amount

Crime: ಬೆಳಗಾವಿ ಕ್ರೈಂ ಟ್ವಿಸ್ಟ್: ಆಸ್ಪತ್ರೆಯಲ್ಲೇ ನಿವೃತ್ತ ಯೋಧನಿಗೆ ಸ್ಲೋ ಪಾಯ್ಸನ್?

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದಲ್ಲಿ ನಡೆದಿದ್ದ ಮಾಜಿ ಸೈನಿಕ ಸಂದೀಪ ಮಾಂಜರಿ ಅವರ ನಿಗೂಢ ಸಾವಿನ ಪ್ರಕರಣವು ಇಡೀ ರಾಜ್ಯವೇ ಬೆಚ್ಚಿಬೀಳುವಂತಹ (Crime) ತಿರುವು ಪಡೆದುಕೊಂಡಿದೆ. ಕೇವಲ ಎರಡು ಕೋಟಿ ರೂಪಾಯಿ ಭಾರಿ ಮೊತ್ತದ ಇನ್ಶೂರೆನ್ಸ್ ಹಣವನ್ನು ಲೂಟಿ ಮಾಡಲು ಮತ್ತು ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ತಾವೇ ಸ್ಕೆಚ್ ಹಾಕಿ ಕೊಂದಿದ್ದಾರೆ ಎಂಬ ಗಂಭೀರ ಆರೋಪ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೇಳಿಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಮಣ್ಣು ಮಾಡಲಾಗಿದ್ದ…

Read More
cyber crime bagalkot government employ gave 83 lakhs by scared of digital arrest

Cyber Crime: ಡಿಜಿಟಲ್ ಅರೆಸ್ಟ್ ನೆಪದಲ್ಲಿ ಲಕ್ಷ ಲಕ್ಷ ದೋಚಿದ ವಂಚಕರು

ಬಾಗಲಕೋಟೆ: ಅಮಾಯಕರನ್ನು ಹೆದರಿಸಿ ಆನ್‌ಲೈನ್ ಮೂಲಕವೇ ಕೋಟ್ಯಾಂತರ ರೂಪಾಯಿ ಲೂಟಿ ಮಾಡುವ ಅಂತರರಾಜ್ಯ ಸೈಬರ್ ವಂಚಕರ (Cyber Crime) ಜಾಲಕ್ಕೆ ಬಾಗಲಕೋಟೆಯ ಹಿರಿಯ ಸರ್ಕಾರಿ ನೌಕರರೊಬ್ಬರು ಬಲಿಯಾಗಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ದಿನಗಟ್ಟಲೆ ‘ಡಿಜಿಟಲ್ ಅರೆಸ್ಟ್‌’ ಭೀತಿಯಲ್ಲಿಟ್ಟು, ಅವರ ಜೀವಮಾನದ ದುಡಿಮೆಯಾದ ಬರೋಬ್ಬರಿ 83.82 ಲಕ್ಷ ರೂಪಾಯಿಯನ್ನು ದೋಚಲಾಗಿದೆ. ಇಲ್ಲಿನ ಯುಕೆಪಿ (UKP) ಪುನರ್ವಸತಿ ವಿಭಾಗದ ಕಚೇರಿಯಲ್ಲಿ ಹಿರಿಯ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿರುವ 59 ವರ್ಷದ ಎಚ್.ವಿ. ಸುರೇಶ್ ರಾವ್ ಎಂಬುವವರೇ ಈ ಭೀಕರ ವಂಚನೆಗೆ…

Read More
raichur woman hit man who tried to assault her public

Raichur: ರಾಯಚೂರು ಬಸ್ ನಿಲ್ದಾಣದಲ್ಲಿ ಚುಡಾಯಿಸಿದವನಿಗೆ ಸಾರ್ವಜನಿಕರ ಮುಂದೆಯೇ ಚಳಿ ಬಿಡಿಸಿದ ವೀರನಾರಿ!

ರಾಯಚೂರು: ಒಂಟಿ ಮಹಿಳೆಯರನ್ನು ಕಂಡು ವಿಕೃತ ಆನಂದ ಪಡುವ ರೋಮಿಯೋಗಳಿಗೆ ರಾಯಚೂರು (Raichur) ನಗರದ ನಡುಬೀದಿಯಲ್ಲೇ ಮಹಿಳೆಯೊಬ್ಬರು ಚಾಮುಂಡೇಶ್ವರಿಯಂತೆ ಧಾವಿಸಿ ತಕ್ಕ ಪಾಠ ಕಲಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ತನ್ನ ಮುಜುಗರಕ್ಕೆ ಕಾರಣವಾದ ಪೋಕರಿಯ ಕಣ್ಣುಗಳಿಗೆ ಕ್ಷಣಮಾತ್ರದಲ್ಲಿ ಮೆಣಸಿನಕಾಯಿ ಪುಡಿ ಚೆಲ್ಲಿ, ಆತ ಚೀರಾಡುವಾಗಲೇ ಮರದ ದಂಡೆಯಿಂದ ಮನಬಂದಂತೆ ಥಳಿಸಿ ಇಡೀ ಸಾರ್ವಜನಿಕ ವಲಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಖಾರದ ಪುಡಿ ಎರಚಿದ ಮಹಿಳೆ ನಗರದ ಪ್ರಮುಖ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ರಾಜು ಬೊಮ್ಮನಾಳ ಎಂಬ ವ್ಯಕ್ತಿ ಅಲ್ಲಿ ನಿಂತಿದ್ದ…

Read More