TOP NEWS
sandalwood actor darshan kalasipalya re release

Actor Darshan: ಥಿಯೇಟರ್‌ಗಳಲ್ಲಿ ಮತ್ತೆ ‘ಡಿ ಬಾಸ್’ ಹವಾ: 20 ವರ್ಷಗಳ ಹಳೆಯ ‘ಕಲಾಸಿಪಾಳ್ಯ’ ರೀ-ರಿಲೀಸ್‌ಗೆ ಪ್ರಸನ್ನ ಚಿತ್ರಮಂದಿರ ಹೌಸ್‌ಫುಲ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (‌Actor Darshan) ಅಭಿನಯದ ಸ್ಯಾಂಡಲ್‌ವುಡ್‌ನ ಗರಂ ಆ್ಯಕ್ಷನ್ ಸಿನಿಮಾ ‘ಕಲಾಸಿಪಾಳ್ಯ’ ಜೂನ್ 19ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಮತ್ತೆ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸನ್ನ ಥಿಯೇಟರ್‌ನಲ್ಲಿ ದರ್ಶನ್ ಅಭಿಮಾನಿಗಳು ಈ ಚಿತ್ರದ ಮರು-ಬಿಡುಗಡೆಯನ್ನು ದೊಡ್ಡ ಹಬ್ಬದಂತೆ ಆಚರಿಸಿದ್ದಾರೆ. ನೆಚ್ಚಿನ ನಟನ ಬೃಹತ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ಗಜಮಾಲೆ ಹಾಕಿ, ಪಟಾಕಿಗಳ ಸರವನ್ನೇ ಸಿಡಿಸಿ ಚಿತ್ರಪ್ರೇಮಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಬೆಳ್ಳಿ ತೆರೆಯ ಮೇಲೆ ದರ್ಶನ್…

Read More
bollywood director rajkumar hirani shares story line of 3 idiots film

Bollywood: ‘3 ಈಡಿಯಟ್ಸ್’ ಸೀಕ್ವೆಲ್ ಕಥೆ ಕೇಳಿ ಫಿದಾ ಆದ ಅಮೀರ್ ಖಾನ್: ಕಥೆ ಬಿಚ್ಚಿಟ್ಟ ರಾಜ್‌ಕುಮಾರ್ ಹಿರಾನಿ!

ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರೀತಿ ಹಾಗೂ ಜನಪ್ರಿಯತೆ ಗಳಿಸಿದ ‘3 ಈಡಿಯಟ್ಸ್’ ಸಿನಿಮಾ ಬಿಡುಗಡೆಯಾಗಿ ಹದಿನೈದು ವರ್ಷಗಳೇ (Bollywood) ಕಳೆದಿದ್ದರೂ, ಅದರ ಎರಡನೇ ಭಾಗದ (ಸೀಕ್ವೆಲ್) ಮೇಲಿನ ನಿರೀಕ್ಷೆ ಮಾತ್ರ ಕಮ್ಮಿಯಾಗಿಲ್ಲ. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ನೇಹ, ಸಂಕಟ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲಿನ ಹಾಸ್ಯಭರಿತ ಚಾಟಿ ಏಟಿನ ಕಥೆ ಹೊಂದಿದ್ದ ಈ ಚಿತ್ರ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಚಿತ್ರದ ಅಭಿಮಾನಿಗಳಿಗೆ ಖುಷಿ ಕೊಡುವಂತಹ ಪ್ರಮುಖ ಅಪ್‌ಡೇಟ್…

Read More
allu arjun summoned by court regarding pushpa 2 case

Allu Arjun: ‘ಪುಷ್ಪ 2’ ದುರಂತಕ್ಕೆ ಬಿಗ್ ಟ್ವಿಸ್ಟ್: ನಟ ಅಲ್ಲು ಅರ್ಜುನ್‌ಗೆ ಹೈದರಾಬಾದ್ ಕೋರ್ಟ್ ತುರ್ತು ಸಮನ್ಸ್

ಹೈದರಾಬಾದ್: ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ̈ (Allu Arjun) ಅವರಿಗೆ ಹೈದರಾಬಾದ್‌ನ ನ್ಯಾಯಾಲಯವು ಬಿಗ್ ಶಾಕ್ ನೀಡಿದ್ದು, ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 22ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಜೂನ್ 19ರ ಶುಕ್ರವಾರದಂದು ಅಧಿಕೃತ ಸಮನ್ಸ್ ಜಾರಿ ಮಾಡಿದೆ. ಹೈದರಾಬಾದ್‌ನ ನಾಂಪಲ್ಲಿ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಅಲ್ಲು ಅರ್ಜುನ್ ಸೇರಿದಂತೆ ಪ್ರಕರಣದ ಇತರ 19 ಆರೋಪಿಗಳಿಗೂ ನೋಟಿಸ್ ನೀಡಿದೆ. ಕಳೆದ 2024 ರ ಡಿಸೆಂಬರ್ 4 ರಂದು ಅಲ್ಲು ಅರ್ಜುನ್…

Read More
Tollywood director k raghavendra trolled for his behavior with actress

Tollywood: ಕೀರ್ತಿ ಸುರೇಶ್, ಕೃತಿ ಶೆಟ್ಟಿ ಕೈ ಹಿಡಿದು ಎಳೆದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್: ವಿಡಿಯೋ ವೈರಲ್, ನೆಟ್ಟಿಗರಿಂದ ತೀವ್ರ ಆಕ್ರೋಶ!

ಹೈದರಾಬಾದ್:‌ ತೆಲುಗು ಚಿತ್ರರಂಗದ ದೃಶ್ಯಕಾವ್ಯಗಳ ದಂತಕಥೆ ಎಂದೇ ಹೆಸರಾಗಿರುವ 84 ವರ್ಷದ ಹಿರಿಯ ನಿರ್ದೇಶಕ ಕೆ. ರಾಘವೇಂದ್ರ ರಾವ್ ಅವರ ವರ್ತನೆ ಈಗ (Tollywood) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ಟೀಕೆಗೆ ಈಡಾಗಿದೆ. ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ಅವರ ಮುಂಬರುವ ಹೊಸ ಸಿನಿಮಾದ ಮುಹೂರ್ತ ಸಮಾರಂಭದ ವಿಡಿಯೋವೊಂದು ಗುರುವಾರ ‘ಎಕ್ಸ್’ (ಟ್ವಿಟರ್) ವೇದಿಕೆಯಲ್ಲಿ ವೈರಲ್ ಆಗಿದ್ದು, ಅದರಲ್ಲಿ ರಾಘವೇಂದ್ರ ರಾವ್ ಅವರು ನಟಿಯರಾದ ಕೀರ್ತಿ ಸುರೇಶ್ ಮತ್ತು ಕೃತಿ ಶೆಟ್ಟಿ ಅವರ ಕೈಗಳನ್ನು ಹಿಡಿದು…

Read More
Boss film controversy Vijayalakshmi darshan petition to high court

Boss Film: ಚಿತ್ರಮಂದಿರಕ್ಕೆ ಬರುವ ಮುನ್ನವೇ ಹೈಕೋರ್ಟ್ ಮೆಟ್ಟಿಲೇರಿದ ‘ಬಾಸ್’ ವಿವಾದ: ಸಿನಿಮಾ ಪ್ರದರ್ಶನ ನಿಲ್ಲಿಸಲು ದರ್ಶನ್ ಪತ್ನಿ ಸಜ್ಜು

ಬೆಂಗಳೂರು: ಶೂಟಿಂಗ್ ಹಂತದಿಂದಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕಿದ್ದ ವಿ. ಲವ ನಿರ್ದೇಶನದ ‘ಬಾಸ್’ (Boss Film) ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಇದೇ ಜೂನ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದ ಈ ಚಿತ್ರಕ್ಕೆ ತಡೆ ನೀಡುವಂತೆ ಆಗ್ರಹಿಸಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಈಗ ಹೈಕೋರ್ಟ್ ಕದ ತಟ್ಟಿದ್ದಾರೆ. ಕೊನೆ ಕ್ಷಣದ ಈ ಬೆಳವಣಿಗೆಯಿಂದಾಗಿ ಇಡೀ ಚಿತ್ರತಂಡ ಈಗ ಇಕ್ಕಟ್ಟಿಗೆ ಸಿಲುಕಿದೆ….

Read More
megastar chiranjeevi praises shivarajkumar acting in peddi film

Sandalwood: ಶಿವಣ್ಣ ಚಿತ್ರದಲ್ಲಿದ್ದದ್ದೇ ನಮಗೆ ಪ್ಲಸ್ ಪಾಯಿಂಟ್: ಪೆದ್ದಿ ಸಿನಿಮಾದ ಹ್ಯಾಟ್ರಿಕ್ ಹೀರೊ ನಟನೆಯನ್ನು ಕೊಂಡಾಡಿದ ಚಿರಂಜೀವಿ!

ಬೆಂಗಳೂರು: ಕನ್ನಡ ಚಿತ್ರರಂಗದ ದೊಡ್ಮನೆಯ ಹೆಮ್ಮೆಯ ನಟ ಹ್ಯಾಟ್ರಿಕ್ ಹೀರೊ ಡಾ. ಶಿವರಾಜ್ ಕುಮಾರ್ (Sandalwood) ಅವರಿಗೆ ಸ್ಯಾಂಡಲ್‌ವುಡ್ ದಾಟಿ ಇಡೀ ಸೌತ್ ಸಿನಿಮಾರಂಗದಲ್ಲೂ ಭಾರಿ ಕ್ರೇಜ್ ಸೃಷ್ಟಿಯಾಗಿದೆ. ಕೇವಲ ನಟನೆಯಷ್ಟೇ ಅಲ್ಲದೆ, ತಮ್ಮ ಮೇರು ವ್ಯಕ್ತಿತ್ವದಿಂದಲೇ ಪರಭಾಷೆಯ ಚಿತ್ರರಂಗಗಳ ಪ್ರೀತಿ ಸಂಪಾದಿಸಿರುವ ಶಿವಣ್ಣ ಅವರಿಗೆ ತೆಲುಗು ಹಾಗೂ ತಮಿಳಿನಿಂದ ಸಾಲು ಸಾಲು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ ರಾಮ್ ಚರಣ್ ಪ್ರಮುಖ ಭೂಮಿಕೆಯಲ್ಲಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಪೆದ್ದಿ’ ಸಿನಿಮಾದಲ್ಲಿ…

Read More
Actor tamil nadu CM vijay and sangeetha divorce case adjourned

CM Vijay: ವಿಜಯ್-ಸಂಗೀತಾ ಡಿವೋರ್ಸ್‌ ಪ್ರಕರಣ, ವಿಚಾರಣೆ ಮುಂದೂಡಿದ ಕೋರ್ಟ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ (CM Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ಹೈಪ್ರೊಫೈಲ್ ವಿಚ್ಛೇದನ ಅರ್ಜಿ ವಿಚಾರಣೆಯು ಸೋಮವಾರ (ಜೂನ್ 15) ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳಿಲ್ಲದೆ ಮುಕ್ತಾಯಗೊಂಡಿದೆ. ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಸಿಎಂ ವಿಜಯ್ ಹಾಗೂ ಸಂಗೀತಾ ಇಬ್ಬರೂ ಬೆಳಿಗ್ಗೆ 10:30ಕ್ಕೆ ಆರಂಭವಾದ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದರು. ಇಬ್ಬರ ಉಪಸ್ಥಿತಿಯ ನಡುವೆಯೂ ಉಭಯ ಪಕ್ಷಗಳ ನಡುವೆ ಯಾವುದೇ ಒಪ್ಪಂದ ಅಥವಾ ಪ್ರಮುಖ ಬೆಳವಣಿಗೆಗಳು…

Read More