Sandalwood: ನಟ ಚೇತನ್ ಗಡಿಪಾರಿಗೆ ಹೆಚ್ಚಿದ ಒತ್ತಡ; ಸಾ.ರಾ. ಗೋವಿಂದು ತೀವ್ರ ವಾಗ್ದಾಳಿ!
ಬೆಂಗಳೂರು: ಕನ್ನಡದ ಆಸ್ಮಿತೆ ಡಾ. ರಾಜ್ಕುಮಾರ್ ಅವರ ಸ್ಮಾರಕದ ಕುರಿತು ನಟ ಚೇತನ್ (Sandalwood) ಅಹಿಂಸಾ ನೀಡಿದ್ದ ಹೇಳಿಕೆ ರಾಜ್ಯಾದ್ಯಂತ ಕಿಚ್ಚು ಹಚ್ಚಿದೆ. ಚೇತನ್ ಈಗಾಗಲೇ ಈ ಬಗ್ಗೆ ಕ್ಷಮೆಯಾಚಿಸಿದ್ದರೂ ಸಹ, ಕನ್ನಡಪರ ಸಂಘಟನೆಗಳ ಆಕ್ರೋಶ ಮಾತ್ರ ಕಮ್ಮಿಯಾಗಿಲ್ಲ. ಚೇತನ್ ಅವರನ್ನು ತಕ್ಷಣವೇ ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ. ಚೇತನ್ ವಿರುದ್ಧ ಕದಂಬ ಸೈನ್ಯದ ಆಕ್ರೋಶ: ದೇವನಹಳ್ಳಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕದಂಬ ಸೈನ್ಯ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಚೇತನ್…
