TOP NEWS
karnataka high xloses ranveer singh kantara case

Ranveer Singh: ಕಾಂತಾರ ದೈವದ ಕುರಿತು ಅವಹೇಳನಕಾರಿ ಹೇಳಿಕೆ, ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆ ಕೋರಿದ ನಟ ರಣವೀರ್ ಸಿಂಗ್

ಬೆಂಗೂಳೂರು: ಕಳೆದ ವರ್ಷ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವೊಂದರಲ್ಲಿ ‘ಕಾಂತಾರ: ಚಾಪ್ಟರ್-1’ ಚಿತ್ರದ ದೈವಪಾತ್ರವನ್ನು ಅಣಕಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರು ಕರ್ನಾಟಕ ಹೈಕೋರ್ಟ್‌ಗೆ ನೂತನ ಪ್ರಮಾಣಪತ್ರವನ್ನು ಸಲ್ಲಿಸಿ ಬೇಷರತ್ ಕ್ಷಮೆ ಕೋರಿದ್ದಾರೆ. ಶನಿವಾರ ನಡೆದ ವಿಚಾರಣೆ ವೇಳೆ, ನಟನ ಪರ ವಕೀಲರು ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅದರಲ್ಲಿ ರಣವೀರ್ ಸಿಂಗ್ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ಭರವಸೆ ನೀಡಿರುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ ನ್ಯಾಯಮೂರ್ತಿ…

Read More
bollywood actor annu kapoor clarification on his statement about Tamannaah

Annu Kapoor: ನಟಿ ತಮನ್ನಾ ಭಾಟಿಯಾ ಕುರಿತ ವಿವಾದಾತ್ಮಕ ಹೇಳಿಕೆ: ಟೀಕೆಗಳಿಗೆ ಅನ್ನು ಕಪೂರ್ ಉತ್ತರ

ಮುಂಬೈ: ನಟಿ ತಮನ್ನಾ ಭಾಟಿಯಾ ಅವರ ಸೌಂದರ್ಯವನ್ನು (Bollywood) ಹೊಗಳಿ ತೀವ್ರ ವಿವಾದಕ್ಕೀಡಾಗಿದ್ದ ನಟ ಅನ್ನು ಕಪೂರ್, (Annu Kapoor) ಇದೀಗ ಆ ಘಟನೆಗೆ ಸಂಬಂಧಿಸಿದಂತೆ ತಮ್ಮ ಮೌನ ಮುರಿದಿದ್ದಾರೆ. ಕಳೆದ ವರ್ಷ ಪಾಡ್‌ಕಾಸ್ಟ್ ಒಂದರಲ್ಲಿ ತಮನ್ನಾ ಅವರ ‘ಆಜ್ ಕಿ ರಾತ್’ ಹಾಡಿನ ಕುರಿತು ಮಾತನಾಡುತ್ತಾ, ಅನ್ನು ಕಪೂರ್ ಬಳಸಿದ್ದ “ದುಧಿಯಾ ಬದನ್” (ಹಾಲು ಬಣ್ಣದ ದೇಹ) ಎಂಬ ಪದಪ್ರಯೋಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಹೇಳಿಕೆಯನ್ನು ಅಸಭ್ಯ ಎಂದು ಟ್ರೋಲ್ ಮಾಡಿದ್ದವರ…

Read More
Deepika Padukone Getting Replaced In Allu Arjun Raaka here is truth

Deepika Padukone: ರಾಕಾ ಸಿನಿಮಾದಲ್ಲಿ ಹೊರಬರಲಿದ್ದಾರಾ ದೀಪಿಕಾ? ಇಲ್ಲಿದೆ ಸತ್ಯ

ಮುಂಬೈ: ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸಿಹಿ ಸುದ್ದಿಯ ಬೆನ್ನಲ್ಲೇ, ಅವರು ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ‘ರಾಕಾ’ ಚಿತ್ರದಿಂದ ಹೊರಬರಲಿದ್ದಾರೆ ಅಥವಾ ಅವರ ಪಾತ್ರವನ್ನು ಬದಲಾಯಿಸಲಾಗುವುದು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡಿದ್ದವು. ಆದರೆ, ಈ ಎಲ್ಲಾ ವದಂತಿಗಳನ್ನು ಚಿತ್ರತಂಡ ಇದೀಗ ಸ್ಪಷ್ಟವಾಗಿ ತಳ್ಳಿಹಾಕಿದೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ನಿಖರವಾಗಿಲ್ಲ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ. ಶೂಟಿಂಗ್‌ ಚೆನ್ನಾಗಿ ನಡೆಯುತ್ತಿದೆ ಈ ಕುರಿತು…

Read More
rajinikanths jailer 2 film some scenes leaked

Rajinikanth: ಜೈಲರ್ 2 ಸೆಟ್‌ನಿಂದ ದೃಶ್ಯ ಸೋರಿಕೆ: ವಿಡಿಯೋ ಹಂಚಿಕೊಳ್ಳುವವರ ವಿರುದ್ಧ ಸನ್ ಪಿಕ್ಚರ್ಸ್ ಗರಂ

ಚೆನ್ನೈ: ಸೂಪರ್‌ಸ್ಟಾರ್ ರಜನಿಕಾಂತ್ (‌Rajinikanth) ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಚಿತ್ರೀಕರಣದ ಹಂತದಲ್ಲೇ ಪೈರಸಿ ಕಾಟಕ್ಕೆ ಸಿಲುಕಿದೆ. ಚಿತ್ರದ ಪ್ರಮುಖ ದೃಶ್ಯಗಳಿರುವ ವಿಡಿಯೋ ತುಣುಕೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡುತ್ತಿದೆ. ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಭದ್ರತಾ ಲೋಪ ಭಾರಿ ನಿರಾಸೆ ಮೂಡಿಸಿದೆ. ವಾರ್ನಿಂಗ್‌ ಕೊಟ್ಟ ಸನ್‌ ಪಿಕ್ಚರ್ಸ್‌ ಸಿನಿಮಾವನ್ನು ನಿರ್ಮಿಸುತ್ತಿರುವ ಪ್ರತಿಷ್ಠಿತ ‘ಸನ್ ಪಿಕ್ಚರ್ಸ್’ ಸಂಸ್ಥೆಯು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ವಿಡಿಯೋ ಸೋರಿಕೆ ಮಾಡಿರುವ ಕಿಡಿಗೇಡಿಗಳ…

Read More
Kangana Ranaut shares how Bollywood titled her as witch

Kangana Ranaut: ನನ್ನನ್ನ ಮಾಟಗಾತಿ ಎಂದೆಲ್ಲಾ ಬಿಂಬಿಸಿದ್ರು, ಹಳೆಯ ಘಟನೆ ಹಂಚಿಕೊಂಡ ಕಂಗನಾ

ಮುಂಬೈ: ಬಾಲಿವುಡ್‌ನ ‘ಫೈರ್ ಬ್ರಾಂಡ್’ ಎಂದೇ ಕರೆಯಲ್ಪಡುವ ಕಂಗನಾ ರಣಾವತ್ (Kangana Ranaut), ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸದಾ ವಿವಾದಗಳ ಕೇಂದ್ರಬಿಂದು. ಇದೀಗ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಿಸಿದ್ದ ಅತ್ಯಂತ ಕೆಟ್ಟ ಆರೋಪ ಮತ್ತು ಅವಮಾನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಚಿತ್ರರಂಗದ ಕೆಲವರು ತನ್ನನ್ನು ಹೇಗೆ ‘ಮಾಟಗಾತಿ’ (Witch) ಎಂದು ಕರೆದು ವ್ಯಕ್ತಿತ್ವ ಹರಣ ಮಾಡಿದ್ದರು ಎಂಬ ಸ್ಫೋಟಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ. ಪ್ರಿಯಕರನಿಂದಲೇ ಮಾಟ-ಮಂತ್ರದ ಆರೋಪ: ಸುಮಾರು ಹತ್ತು ವರ್ಷಗಳ ಹಿಂದೆ…

Read More
Inside Vijay Rashmika mandanna Coorg Honeymoon

Rashmika Mandanna: ಕೊಡಗಿನಲ್ಲಿ ರಶ್ಮಿಕಾ-ವಿಜಯ್‌ ಹನಿಮೂನ್‌

ಮಡಿಕೇರಿ: ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನ ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ 30ನೇ ವರ್ಷದ ಹುಟ್ಟುಹಬ್ಬವನ್ನು ತವರು ಜಿಲ್ಲೆ ಕೊಡಗಿನಲ್ಲಿ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಕಳೆದ ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹವಾದ ನಂತರ ರಶ್ಮಿಕಾ ಅವರು ಕೊಡಗಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮದುವೆಯ ನಂತರ ಕೊಡವ ಸಂಪ್ರದಾಯದಂತೆ ಹಮ್ಮಿಕೊಂಡಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ಸಾಂಪ್ರದಾಯಿಕ ಕೊಡವ ಸೀರೆಯನ್ನು ಉಟ್ಟು ಮಿಂಚುವ ಮೂಲಕ ತಮ್ಮ ಮೂಲ…

Read More
Rocking star yash talks about Ramayana film

Ramayana; ಮೊದಲ ಭಾಗದಲ್ಲಿ ಮುಖಾಮುಖಿ ಆಗಲ್ವಂತೆ ರಾಮ-ರಾವಣ, ರಾಮಾಯಣ ಸಿನಿಮಾದ ಹೊಸ ವಿಚಾರ ಬಯಲು

ಬೆಂಗಳೂರು: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ‘ರಾಮಾಯಣ’ (Ramayana) ಸಿನಿಮಾದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಒಂದು ಕುತೂಹಲಕಾರಿ ವಿಷಯವನ್ನು ಬಿಚ್ಚಿಟ್ಟಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್ ಮತ್ತು ಲಂಕಾಧಿಪತಿ ರಾವಣನಾಗಿ ಯಶ್ ನಟಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಹವಾ ಎಬ್ಬಿಸಿದೆ. ಆದರೆ, ಚಿತ್ರದ ಮೊದಲ ಭಾಗದಲ್ಲಿ ಇಬ್ಬರೂ ದಿಗ್ಗಜ ನಟರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ಯಶ್ ಅಚ್ಚರಿ ಮೂಡಿಸಿದ್ದಾರೆ. ಮುಖಾಮುಖಿ ಆಗಲ್ವಂತೆ ರಾಮ-ರಾವಣ ಸದ್ಯ ಅಂತರಾಷ್ಟ್ರೀಯ ಮಟ್ಟದ…

Read More