Saif Ali Khan praise on Dhurandhar says the films changed the landscape of Indian cinema

Saif Ali Khan: ‘ಧುರಂಧರ್’ ಚಿತ್ರರಂಗದ ಚಹರೆಯನ್ನೇ ಬದಲಾಯಿಸಿದೆ: ನಟ ಸೈಫ್ ಅಲಿ ಖಾನ್ ಪ್ರಶಂಸೆ!

ಮುಂಬೈ: ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್’ ಸಿನಿಮಾ ಸರಣಿಯು ಭಾರತೀಯ ಚಿತ್ರರಂಗದಲ್ಲಿ ಸಂಗೀತವನ್ನು ಬಳಸುವ ವಿಧಾನವನ್ನೇ ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಶ್ಲಾಘಿಸಿದ್ದಾರೆ. ಈ ಸಿನಿಮಾ ಸರಣಿಯು ಚಿತ್ರನಿರ್ಮಾಣದ ಶೈಲಿಯಲ್ಲಿ ದೊಡ್ಡ ಬದಲಾವಣೆ ತಂದಿದ್ದು, ಇದರ ಹಾಡುಗಳು ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ಹೊಸತನದಿಂದ ಕೂಡಿವೆ ಎಂದು ಅವರು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ರಣವೀರ್‌ ಸಿಂಗ್‌ ಸಿನಿಮಾ ಹಾಡಿ ಹೊಗಳಿದ ನಟ ‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಸಂದರ್ಶನದಲ್ಲಿ…

Read More
Ramayana theatrical rights row Distributors back out of Ranbir Yash starrer citing Adipurush failure

Ramayana: ₹4,000 ಕೋಟಿಯ ‘ರಾಮಾಯಣ’ಕ್ಕೆ ಮುಳುವಾಯಿತೇ ‘ಆದಿಪುರುಷ್‌’ ನೆರಳು? ಹಕ್ಕು ಖರೀದಿಸಲು ವಿತರಕರ ಹಿಂದೇಟು!

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೈಭವೋಪೇತ ಹಾಗೂ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಣ್​​ಬೀರ್ ಕಪೂರ್, ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅವರಂತಹ ಘಟಾನುಘಟಿ ತಾರೆಯರ ದಂಡೇ ಇರುವ ಈ ಚಿತ್ರದ ಮೊದಲ ಭಾಗವನ್ನು ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 6 ರಂದು ತೆರೆಗೆ ತರಲು ಚಿತ್ರತಂಡ ಯೋಜಿಸಿದೆ. ಆದರೆ, ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಚಿತ್ರದ ನಿರ್ಮಾಪಕರಿಗೆ ವಿತರಣೆಯ ದೊಡ್ಡ…

Read More
Tollywood tabu and Nagarjuna to reunite after 28 years Tollywood tabu and Nagarjuna to reunite after 28 years

Tollywood: 28 ವರ್ಷಗಳ ಬಳಿಕ ನಾಗಾರ್ಜುನ್-ಟಬು ಕಂಬ್ಯಾಕ್

ಹೈದರಾಬಾದ್‌: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ತೆರೆಯ ಮೇಲಿನ ಜೋಡಿಗಳಲ್ಲೊಂದಾದ ನಾಗಾರ್ಜುನ್ ಮತ್ತು ಟಬು ಜೋಡಿ ದಶಕಗಳ (Tollywood) ಬಳಿಕ ಮತ್ತೆ ಒಂದಾಗುತ್ತಿದೆ. ಟಾಲಿವುಡ್ ಮನ್ಮಥ ನಾಗಾರ್ಜುನ್ ಅವರ ವೃತ್ತಿಜೀವನದ ಮೈಲಿಗಲ್ಲಿನ 100ನೇ ಚಿತ್ರದಲ್ಲಿ ಈ ಸ್ಟಾರ್ ಜೋಡಿ ಒಟ್ಟಿಗೆ ನಟಿಸುತ್ತಿದ್ದು, ಸದ್ಯಕ್ಕೆ ಈ ಚಿತ್ರಕ್ಕೆ ‘ಕಿಂಗ್100’ ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ವಿಶೇಷವೆಂದರೆ, ನಾಗಾರ್ಜುನ್ ಮತ್ತು ಟಬು ಬರೋಬ್ಬರಿ 28 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಬೆಳ್ಳಿಪರದೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದ ಈ…

Read More
Huma Qureshi On Yash's Toxic People Have Seen Nothing Like This Before Applauds Director Geetu Mohandas

Huma Qureshi: ‘ಟಾಕ್ಸಿಕ್’ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದು ಗ್ಯಾರಂಟಿ: ನಿರ್ದೇಶಕಿ ಗೀತು ಮೋಹನ್ ದಾಸ್ ಕಾರ್ಯವೈಖರಿ ಕೊಂಡಾಡಿದ ಹುಮಾ ಖುರೇಷಿ!

ಮುಂಬೈ: ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಈ ಗ್ಯಾಂಗ್‌ಸ್ಟರ್ ಆಕ್ಷನ್ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಈ ಚಿತ್ರದಲ್ಲಿ ಎಲಿಜಬೆತ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ ಹುಮಾ ಖುರೇಷಿ, (Huma Qureshi) ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಈ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದು ಗ್ಯಾರಂಟಿ ಎಂದಿದ್ದಾರೆ. ಸಿನಿಮಾ ತಂಡವನ್ನ ಹೊಗಳಿದ…

Read More
yash toxic flm to host global event in Bengaluru

Toxic: ಜಾಗತಿಕ ಮಾಧ್ಯಮಗಳಿಗೆ ಬೆಂಗಳೂರೇ ವೇದಿಕೆ: ‘ಟಾಕ್ಸಿಕ್’ ಪ್ರಚಾರಕ್ಕೆ ಯಶ್ ಬಿಗ್ ಪ್ಲಾನ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಸ್ಯಾಂಡಲ್‌ವುಡ್‌ನ ಅತ್ಯಂತ ದುಬಾರಿ ಸಿನಿಮಾ ‘ಟಾಕ್ಸಿಕ್’ (Toxic) ಸದ್ಯ ಇಡೀ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್-ವರ್ಲ್ಡ್ ಸಿನಿಮಾದ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ, ಚಿತ್ರತಂಡವು ಸಿನಿಮಾದ ಪ್ರಚಾರಕ್ಕಾಗಿ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದ್ದು, ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದಂದು ಸಿಲಿಕಾನ್ ಸಿಟಿಯಲ್ಲಿ ಹೈ-ಪ್ರೊಫೈಲ್ ಈವೆಂಟ್ ಒಂದನ್ನು ನಡೆಸಲು ತೀರ್ಮಾನಿಸಿದೆ. ಅಂತರರಾಷ್ಟ್ರೀಯ ಪತ್ರಕರ್ತರನ್ನು ಬರಮಾಡಿಕೊಳ್ಳಲಿದೆ ಸಿಲಿಕಾನ್ ಸಿಟಿ…

Read More
Vijay Jana Nayagan leak case 1 2 crore allegedly viewed pirated copy

Jana Nayagan: ‘ಜನ ನಾಯಗನ್’ ಲೀಕ್ ಪ್ರಕರಣ: 1.2 ಕೋಟಿ ಜನರಿಂದ ಪೈರೇಟೆಡ್ ಸಿನಿಮಾ ವೀಕ್ಷಣೆ

ಚೆನ್ನೈ: ತಮಿಳುನಾಡಿನ ಪ್ರಖ್ಯಾತ ನಟ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೂ ಮುನ್ನವೇ ಇಂಟರ್ನೆಟ್‌ನಲ್ಲಿ ಲೀಕ್ ಆಗಿದ್ದು, ಬರೋಬ್ಬರಿ 1.2 ಕೋಟಿಗೂ ಅಧಿಕ ಜನ ಇದನ್ನು ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ (CBFC) ಇನ್ನೂ ಪ್ರಮಾಣಪತ್ರ ಸಿಗುವ ಮುನ್ನವೇ ಏಪ್ರಿಲ್ 9 ರಂದು ಈ ಚಿತ್ರದ ದೃಶ್ಯಗಳು ಸೋರಿಕೆಯಾಗಿದ್ದವು. ಈ ಚಿತ್ರದ ದೃಶ್ಯ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ…

Read More
daali dhananjay write sprayer song for his new film mother promise

Daali Dhananjay: ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಹವಾ: ‘ಮದರ್ ಪ್ರಾಮಿಸ್’ ಚಿತ್ರದ ವಿಶೇಷ ಪ್ರಾರ್ಥನಾ ಗೀತೆ ಬಿಡುಗಡೆ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ ಡಾಲಿ ಧನಂಜಯ (Daali Dhananjay) ಅಭಿನಯದ ನೂತನ ಚಿತ್ರ ‘ಮದರ್ ಪ್ರಾಮಿಸ್’ ಮುಂಬರುವ ಜುಲೈ 10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಿದ್ಧತೆ ನಡೆಸಿದೆ. ತನ್ನ ಅನನ್ಯ ಕಂಟೆಂಟ್ ಹಾಗೂ ಪ್ರಚಾರದ ವೈವಿಧ್ಯತೆಯಿಂದ ಈಗಾಗಲೇ ಸಿನಿರಸಿಕರಲ್ಲಿ ಭಾರಿ ಕ್ರೇಜ್ ಸೃಷ್ಟಿಸಿರುವ ಚಿತ್ರತಂಡ, ಈಗ ಮಕ್ಕಳಿಗಾಗಿಯೇ ಸಿದ್ಧಪಡಿಸಲಾದ ಭಾವುಕ ಪ್ರಾರ್ಥನಾ ಗೀತೆಯೊಂದನ್ನು ಮಾರುಕಟ್ಟೆಗೆ ಬಿಟ್ಟು ಗಮನ ಸೆಳೆದಿದೆ. ಓ ಬೆಳಕೆ ಬಾ ಮನಕೆ ಇದುವರೆಗೆ ಕಮರ್ಷಿಯಲ್ ಹಾಗೂ ಪ್ರೇಮಗೀತೆಗಳನ್ನು ಬರೆಯುತ್ತಿದ್ದ ನಟ ಧನಂಜಯ, ಈ…

Read More