TOP NEWS
kangana ranut shares important message to women regarding safety

Kangana Ranaut: ವರದಕ್ಷಿಣೆ ಕಿರುಕುಳದ ದುರಂತಗಳ ಬೆನ್ನಲ್ಲೇ ಹೆಣ್ಣುಮಕ್ಕಳಿಗೆ ಕಂಗನಾ ಮಹತ್ವದ ಕಿವಿಮಾತು: ಮೊದಲು ಆರ್ಥಿಕ ಸ್ವಾವಲಂಬನೆ, ಆಮೇಲೆ ಮದುವೆ!

ಮುಂಬೈ: ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಭೋಪಾಲ್ ಹಾಗೂ ನೋಯ್ಡಾದ ವರದಕ್ಷಿಣೆ ದೌರ್ಜನ್ಯ ಮತ್ತು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳ ಬೆನ್ನಲ್ಲೇ, ಖ್ಯಾತ ನಟಿ ಹಾಗೂ ಸಂಸದೆ ಕಂಗನಾ ರನೌತ್ (Kangana Ranaut) ಅವರು ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಸಂದೇಶವೊಂದನ್ನು ನೀಡಿದ್ದಾರೆ. ಮಹಿಳೆಯರು ಮದುವೆಗಿಂತ ಮುಂಚಿತವಾಗಿ ಆರ್ಥಿಕವಾಗಿ ತಮ್ಮ ಕಾಲಿನ ಮೇಲೆ ನಿಲ್ಲುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿರುವ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ….

Read More
Gold falls over Rs 3 000 silver down Rs 19 000 check the price

Gold Price: ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ!

ಒಡವೆ ಖರೀದಿಸುವ ಪ್ಲಾನ್‌ನಲ್ಲಿರುವ ಜನರಿಗೆ ಇಂದು ಸಂತಸದ ದಿನ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಇಂದು ಭಾರತದಲ್ಲಿ ಚಿನ್ನ ಮತ್ತು (Gold Price) ಬೆಳ್ಳಿಯ ದರ ಗಣನೀಯವಾಗಿ ಇಳಿಕೆ ಕಂಡಿದೆ. ಅಮೆರಿಕದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವುದು ಅಲ್ಲಿನ ಹಣದುಬ್ಬರದ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ಕಡಿಮೆ ಮಾಡುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ ಇಂದು ಶುಕ್ರವಾರ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕಳೆದ ಒಂದು ವಾರದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಹೇಗಿದೆ ಚಿನ್ನ-ಬೆಳ್ಳಿ ದರ?…

Read More
BJP ex minister jc Madhu swamy important statement

BJP: ಚುನಾವಣಾ ರಾಜಕೀಯಕ್ಕೆ ಜೆ.ಸಿ. ಮಾಧುಸ್ವಾಮಿ ರೀ-ಎಂಟ್ರಿ; ಚಿಕ್ಕನಾಯಕನಹಳ್ಳಿಯಿಂದಲೇ ಸ್ಪರ್ಧೆ ಖಚಿತ

ತುಮಕೂರು: ತುಮಕೂರು ಜಿಲ್ಲೆಯ ರಾಜಕೀಯದ ದೃಢ ನಿರ್ಧಾರಗಳಿಗೆ ಹೆಸರಾದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ (BJP) ಅವರು ತಮ್ಮ ಮುಂದಿನ ನಡೆಯ ಬಗ್ಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯುವುದು ನಿಶ್ಚಿತ ಎಂದು ಅವರು ಗುಡುಗಿದ್ದಾರೆ. “ನಾನು ಸ್ಪರ್ಧಿಸುವುದು ಗ್ಯಾರಂಟಿ, ಇದರಲ್ಲಿ ಯಾರಿಗೂ ಅನುಮಾನ ಬೇಡ” ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಯಾವ ಪಕ್ಷದ ಹಂಗು ಬೇಕಿಲ್ಲ…

Read More
BK Hariprasad slams narendra modi over his limit usage statement

BK Hariprasad: ಉಳಿತಾಯದ ಬಗ್ಗೆ ಮೋದಿ ಮಾತು, ಬಿಕೆ ಹರಿಪ್ರಸಾದ್‌ ಗರಂ

ನವದೆಹಲಿ: ಕೇಂದ್ರ ಸರ್ಕಾರದ ಇಂಧನ ನೀತಿ ಹಾಗೂ ಇತ್ತೀಚಿನ ಪರೀಕ್ಷಾ ಅಕ್ರಮಗಳ ಕುರಿತು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಜನರಿಗೆ ಮಿತವ್ಯಯದ ಪಾಠ ಮಾಡುವ ಪ್ರಧಾನಿಯವರು ಮೊದಲು ಅದನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಲಿ ಎಂದು ಅವರು ಚಾಟಿ ಬೀಸಿದ್ದಾರೆ. ಮೋದಿ ವಿರುದ್ಧ ವ್ಯಂಗ್ಯದ ವಾಗ್ದಾಳಿ ದೆಹಲಿಯಲ್ಲಿ ಮಾತನಾಡಿದ ಹರಿಪ್ರಸಾದ್, ಇಂಧನ ಉಳಿತಾಯದ ಹೆಸರಿನಲ್ಲಿ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿರುವ ಪ್ರಧಾನಿಯವರ ನಡೆಯನ್ನು ಟೀಕಿಸಿದರು….

Read More
Theft gang arrested in belgavi

Theft: ಸರಣಿಗಳ್ಳತನ ಮಾಡಿದ್ದ ಆರೋಪಿಗಳು ಅಂದರ್‌, ಗೋವಾದಲ್ಲಿ ಎಂಜಾಯ್‌ ಮಾಡುತ್ತಿದ್ದವರು ಪೊಲೀಸರ ಬಲೆಗೆ

ಬೆಳಗಾವಿ: ಜಿಲ್ಲೆಯಲ್ಲಿ ಮನೆಗಳ್ಳತನ ಎಸಗಿ ಪೊಲೀಸ್ ಪಡೆಯ ನಿದ್ದೆಗೆಡಿಸಿದ್ದ ಅಂತರರಾಜ್ಯ ಖದೀಮರ ಎರಡು ತಂಡಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಗಲು ಹೊತ್ತಿನಲ್ಲಿ ತರಕಾರಿ ಮಾರುವವರಂತೆ ನಟಿಸಿ ಮನೆಗಳ ಸಂಚು (Theft) ರೂಪಿಸುತ್ತಿದ್ದ ಈ ಕಿಲಾಡಿಗಳು, ದೋಚಿದ ಹಣದಲ್ಲಿ ಗೋವಾದ ಕ್ಯಾಸಿನೋಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಬೀಗ ಹಾಕಿದ್ದ ಮನೆ ಮೇಲೆ ಕಣ್ಣು ಬಂಧಿತ ಆರೋಪಿಗಳು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದವರಾಗಿದ್ದು, ಬಡಾವಣೆಗಳಲ್ಲಿ ಸಂಚರಿಸುವಾಗ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಈ ಖದೀಮರ…

Read More
high court orders to pay 27 stf staff

High Court: ವೀರಪ್ಪನ್ ಹತ್ಯೆ ಮಾಡಿದ ಸಿಬ್ಬಂದಿಗೆ 22 ವರ್ಷಗಳ ಬಳಿಕ ನ್ಯಾಯ: ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ, 3 ತಿಂಗಳಲ್ಲಿ ಹಣ ನೀಡಲು ಆದೇಶ!

ಬೆಂಗಳೂರು: ದಶಕಗಳ ಕಾಲ ಕಾಡುಗಳ್ಳ ವೀರಪ್ಪನ್ ಪತ್ತೆಗಾಗಿ ಪ್ರಾಣದ ಹಂಗು ತೊರೆದು ಕಾಡಿನಲ್ಲಿ ಹೋರಾಡಿದ ಎಸ್‌ಟಿಎಫ್ (STF) ಸಿಬ್ಬಂದಿಗೆ (High Court) ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ವೀರಪ್ಪನ್ ಹತ್ಯೆಯಾಗಿ ಎರಡು ದಶಕಗಳೇ ಕಳೆದಿದ್ದರೂ, ಘೋಷಿತ ಬಹುಮಾನದಿಂದ ವಂಚಿತರಾಗಿದ್ದ 72 ಮಂದಿ ಸಿಬ್ಬಂದಿಗೆ ಮೂರು ತಿಂಗಳೊಳಗೆ ಬಾಕಿ ಮೊತ್ತ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ. ಸರ್ಕಾರದ ನಡೆಗೆ ನ್ಯಾಯಾಲಯದ (High Court) ಅಸಮಾಧಾನ 2004ರಲ್ಲಿ ನಡೆದ ‘ಆಪರೇಷನ್ ಕೊಕೂನ್’ ಕಾರ್ಯಾಚರಣೆಯಲ್ಲಿ ವೀರಪ್ಪನ್…

Read More
CBSE exam result announced

CBSE: ಸಿಬಿಎಸ್‌ಸಿ SSLC ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) 2026ನೇ ಸಾಲಿನ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈಗ ಡಿಜಿಲಾಕರ್ (DigiLocker) ವೇದಿಕೆಯ ಮೂಲಕ ತಮ್ಮ ಅಂಕಪಟ್ಟಿಗಳನ್ನು ಸುಲಭವಾಗಿ ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹೀಗೆ ರಿಸಲ್ಟ್‌ ನೋಡಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಬಿಎಸ್‌ಇ ಈ ಬಾರಿ ಡಿಜಿಲಾಕರ್‌ನಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ. ಈಗಾಗಲೇ ಸಿಬಿಎಸ್‌ಇ ಜೊತೆಗೆ ತಮ್ಮ ಅಪಾರ್ ಐಡಿ (APAAR ID) ಲಿಂಕ್ ಮಾಡಿರುವ ವಿದ್ಯಾರ್ಥಿಗಳ ಡಿಜಿಟಲ್ ಅಂಕಪಟ್ಟಿಗಳು ನೇರವಾಗಿ…

Read More