Big News: ಪ್ಲಾಸ್ಟಿಕ್ ಇಡ್ಲಿ, ಎಕ್ಸ್ಪೈರ್ಡ್ ಹಾಲು, ಬೂಷ್ಟು ಬಿದ್ದ ತರಕಾರಿ!: ರಾಜ್ಯದ 36 ರೈಲು ನಿಲ್ದಾಣಗಳ ಹೋಟೆಲ್ಗಳ ಮೇಲೆ ಬೃಹತ್ ರೇಡ್!
ಬೆಂಗಳೂರು: ಕರ್ನಾಟಕದಾದ್ಯಂತ ವಿವಿಧ ರೈಲ್ವೆ ನಿಲ್ದಾಣಗಳು, ಕ್ಯಾಂಟೀನ್ಗಳು ಹಾಗೂ ಪ್ರಮುಖ ರೈಲುಗಳಲ್ಲಿ ಪೂರೈಸಲಾಗುವ ಆಹಾರದ ನೈರ್ಮಲ್ಯ (Big News) ಮತ್ತು ಗುಣಮಟ್ಟವನ್ನು ಪರಿಶೀಲಿಸುವ ಉದ್ದೇಶದಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಅಧಿಕಾರಿಗಳ ತಂಡವು ಆಗಸ್ಟ್ 20, 2026 ರಂದು ರಾಜ್ಯಾದ್ಯಂತ ಬೃಹತ್ ರೇಡ್ ನಡೆಸಿ ತಪಾಸಣೆ ನಡೆಸಿದೆ. 112ಕ್ಕೂ ಹೆಚ್ಚು ಆಹಾರ ಸಂಸ್ಥೆಗಳ ಮೇಲೆ ದಾಳಿ ಆಹಾರ ಪದಾರ್ಥಗಳ ಸಂರಕ್ಷಣೆ, ಲೇಬಲಿಂಗ್ ನಿಯಮಗಳು ಹಾಗೂ ಅಡುಗೆಮನೆಗಳ ನೈರ್ಮಲ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಈ ವಿಶೇಷ ತಪಾಸಣಾ ಅಭಿಯಾನವನ್ನು…
