TOP NEWS
Neha case accused bail plea rejected

Neha Case: ನೇಹಾ ಹತ್ಯೆ ಪ್ರಕರಣ: ಆರೋಪಿ ಫಯಾಜ್‌ಗೆ ಮತ್ತಷ್ಟು ಬಿಗಿಬಿದ್ದ ಕಾನೂನು ಉರುಳು

ಹುಬ್ಬಳ್ಳಿ ಮೂಲದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Case) ಅವರ ಬರ್ಬರ ಕೊಲೆ ಪ್ರಕರಣದ ಮುಖ್ಯ ಆರೋಪಿ ಫಯಾಜ್‌ಗೆ ಕಾನೂನಿನ ಸಂಕೋಲೆ ಮತ್ತಷ್ಟು ಬಿಗಿಯಾಗಿದೆ. ಹಂತಕನಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಮೃತಳ ತಂದೆ ನಿರಂತರವಾಗಿ ಆಗ್ರಹಿಸುತ್ತಿದ್ದಾರೆ. ಈ ನಡುವೆ, ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠವು ಮೂರನೇ ಬಾರಿಗೆ ತಿರಸ್ಕರಿಸಿದೆ. ಕೆಳ ನ್ಯಾಯಾಲಯಗಳೂ ಸೇರಿದಂತೆ ಒಟ್ಟಾರೆಯಾಗಿ ಇದು ಐದನೇ ಬಾರಿಗೆ ಆತನಿಗೆ ಜಾಮೀನು ನಿರಾಕರಿಸಲ್ಪಟ್ಟಂತಾಗಿದೆ. ಹೈಕೋರ್ಟ್‌ನಿಂದಲೂ ಹಿನ್ನಡೆ ಅನುಭವಿಸಿರುವ ಫಯಾಜ್‌ಗೆ ಸದ್ಯ ಜೈಲಿನಿಂದ…

Read More
Haveri lokayukta raid SDA who asked for taking bribe

Lokayukta: ಹಾವೇರಿ ಲೋಕಾಯುಕ್ತ ಟ್ರ್ಯಾಪ್: ಗುಂಪು ವಿಮೆ ಮೊತ್ತ ಬಿಡುಗಡೆಗೆ 3 ಸಾವಿರ ರೂ. ಲಂಚ ಪೀಕುತ್ತಿದ್ದ ಮಹಿಳಾ ಎಸ್‌ಡಿಎ ಅರೆಸ್ಟ್!

ಹಾವೇರಿ: ನಿವೃತ್ತ ಉದ್ಯೋಗಿಯೊಬ್ಬರ ಕಾನೂನುಬದ್ಧ ಹಣವನ್ನು ಮಂಜೂರು ಮಾಡಲು ಲಂಚದ ಆಮಿಷ ಒಡ್ಡಿದ್ದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಿಬ್ಬಂದಿಯೊಬ್ಬರು ಈಗ ಸಲಾಕೆಗಳ ಹಿಂದೆ (Lokayukta) ಕೌಂಟ್‌ಡೌನ್ ಆರಂಭಿಸಿದ್ದಾರೆ. ಹಾವೇರಿಯ ದೇವಗಿರಿ ಬಳಿ ಇರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ (SDA) ಅಕ್ಕಮ್ಮ ಬಿದರೇರ್ ಅವರು ಮೂರು ಸಾವಿರ ರೂಪಾಯಿ ಲಂಚದ ಹಣದೊಂದಿಗೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ನಿವೃತ್ತ ನೌಕರನಿಗೆ ಸತಾಯಿಸಿದ್ದ ಅಕ್ಕಮ್ಮ ಇತ್ತೀಚೆಗಷ್ಟೇ ವಯೋನಿವೃತ್ತಿ ಹೊಂದಿದ್ದ ಮಹದೇವ ಜೇಕಿನಕಟ್ಟಿ ಎಂಬುವರು ತಮ್ಮ…

Read More
Bjp leader smriti irani name missing from panchayat voter final list

Smriti Irani: ಪಂಚಾಯತ್‌ ಚುನಾವಣೆ ಅಂತಿಮ ಮತದಾರರ ಪಟ್ಟಿಯಿಂದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರೇ ಗಾಯಬ್!

ಅಮೇಠಿ: ಉತ್ತರ ಪ್ರದೇಶದಲ್ಲಿ ತ್ರಿಸ್ಟರ ಪಂಚಾಯತ್ ಚುನಾವಣೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮಾಜಿ ಕೇಂದ್ರ ಸಚಿವೆ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಸ್ಮೃತಿ ಇರಾನಿ (Smriti Irani) ಅವರ ಹೆಸರೇ ನಾಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಅಮೇಠಿಯ ಮಾಜಿ ಸಂಸದೆಯೂ ಆಗಿರುವ ಸ್ಮೃತಿ ಇರಾನಿ ಅವರ ಹೆಸರು ವೋಟರ್ ಲಿಸ್ಟ್‌ನಿಂದ ಕೈಬಿಟ್ಟು ಹೋಗಿರುವುದು ತಿಳಿಯುತ್ತಿದ್ದಂತೆಯೇ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಹಠಾತ್ ಗೊಂದಲ ಹಾಗೂ ಆತಂಕ ನಿರ್ಮಾಣವಾಗಿದೆ. ಈ ಗಂಭೀರ ಲೋಪದ…

Read More
Cm dk shivakumar statement about SIR

DK Shivakumar: ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು; ಡಿಕೆಶಿ

ಬೆಂಗಳೂರು: “ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ…

Read More
Dk shivakumar took oath as 25th cm of Karnataka 13 minister also joined

DK Shivakumar: ಡಿಸಿಎಂ ಅಲ್ಲ ಸಿಎಂ, ಪ್ರಮಾಣ ವಚನ ಸ್ವೀಕರಿಸಿದ ಡಿಕೆಶಿ

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಮೊದಲ ಹಂತವಾಗಿ 13 ಜನ ಹಿರಿಯ ಹಾಗೂ ಪ್ರಭಾವಿ ಶಾಸಕರು ಸಚಿವರಾಗಿ ಭರ್ಜರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಲಾಖಾ ನಿರ್ವಹಣೆಯ ಅನುಭವ, ಜಾತಿ ಸಮೀಕರಣ ಹಾಗೂ ಪ್ರಾದೇಶಿಕ ಸಮತೋಲನವನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ಈ ತಂಡವನ್ನು ರಚಿಸಲಾಗಿದೆ. ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆ 13 ಪ್ರಮುಖ ನಾಯಕರ ರಾಜಕೀಯ ಹಿನ್ನೆಲೆ ಹೀಗಿದೆ: 1. ಡಾ. ಜಿ. ಪರಮೇಶ್ವರ್…

Read More
kangana ranut shares important message to women regarding safety

Kangana Ranaut: ವರದಕ್ಷಿಣೆ ಕಿರುಕುಳದ ದುರಂತಗಳ ಬೆನ್ನಲ್ಲೇ ಹೆಣ್ಣುಮಕ್ಕಳಿಗೆ ಕಂಗನಾ ಮಹತ್ವದ ಕಿವಿಮಾತು: ಮೊದಲು ಆರ್ಥಿಕ ಸ್ವಾವಲಂಬನೆ, ಆಮೇಲೆ ಮದುವೆ!

ಮುಂಬೈ: ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಭೋಪಾಲ್ ಹಾಗೂ ನೋಯ್ಡಾದ ವರದಕ್ಷಿಣೆ ದೌರ್ಜನ್ಯ ಮತ್ತು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳ ಬೆನ್ನಲ್ಲೇ, ಖ್ಯಾತ ನಟಿ ಹಾಗೂ ಸಂಸದೆ ಕಂಗನಾ ರನೌತ್ (Kangana Ranaut) ಅವರು ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಸಂದೇಶವೊಂದನ್ನು ನೀಡಿದ್ದಾರೆ. ಮಹಿಳೆಯರು ಮದುವೆಗಿಂತ ಮುಂಚಿತವಾಗಿ ಆರ್ಥಿಕವಾಗಿ ತಮ್ಮ ಕಾಲಿನ ಮೇಲೆ ನಿಲ್ಲುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿರುವ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ….

Read More
Gold falls over Rs 3 000 silver down Rs 19 000 check the price

Gold Price: ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ!

ಒಡವೆ ಖರೀದಿಸುವ ಪ್ಲಾನ್‌ನಲ್ಲಿರುವ ಜನರಿಗೆ ಇಂದು ಸಂತಸದ ದಿನ. ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಇಂದು ಭಾರತದಲ್ಲಿ ಚಿನ್ನ ಮತ್ತು (Gold Price) ಬೆಳ್ಳಿಯ ದರ ಗಣನೀಯವಾಗಿ ಇಳಿಕೆ ಕಂಡಿದೆ. ಅಮೆರಿಕದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವುದು ಅಲ್ಲಿನ ಹಣದುಬ್ಬರದ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ಚಿನ್ನದ ಮೇಲೆ ಆಸಕ್ತಿ ಕಡಿಮೆ ಮಾಡುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ ಇಂದು ಶುಕ್ರವಾರ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕಳೆದ ಒಂದು ವಾರದ ಕನಿಷ್ಠ ಮಟ್ಟಕ್ಕೆ ತಲುಪಿದೆ. ಹೇಗಿದೆ ಚಿನ್ನ-ಬೆಳ್ಳಿ ದರ?…

Read More