CWRC: “ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡಲ್ಲ, ನಮ್ಮಲ್ಲಿ ಹೆಚ್ಚುವರಿ ನೀರೇ ಇಲ್ಲ!”: CWRC ಆದೇಶದ ಬೆನ್ನಲ್ಲೇ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಬೆಂಗಳೂರು: ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಇತ್ತೀಚಿನ ಸಭೆಯು ಕೇವಲ ಕುಡಿಯುವ ನೀರಿನ ಬಳಕೆಗೆ ಮಾತ್ರ ಜಲಾಶಯಗಳ ನೀರನ್ನು ಸೀಮಿತಗೊಳಿಸುವಂತೆ ಸೂಚಿಸಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯ ಉದ್ದಕ್ಕೂ ತಮಿಳುನಾಡು ತನಗೆ ಬರಬೇಕಾದ ಹೆಚ್ಚಿನ ಪಾಲಿನ ನೀರನ್ನು ತಕ್ಷಣವೇ ಹರಿಸಬೇಕೆಂದು ಬಲವಾದ ಹಠ ಹಿಡಿದಿತ್ತು. ಆದರೆ ವೀಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕದ ತಾಂತ್ರಿಕ ಹಾಗೂ ಕಾನೂನು ಸಲಹೆಗಾರರು, ರಾಜ್ಯದ…
