TOP NEWS
War on Cyber Fraud CBI Conducts Synchronized Raids in 20 States Under Operation Chakra VI digital arrest

Digital Arrest: ‘ಆಪರೇಷನ್ ಚಕ್ರ-VI’: ಡಿಜಿಟಲ್ ಅರೆಸ್ಟ್ ಜಾಲದ ವಿರುದ್ಧ ಸಿಬಿಐ ಸಮರ, ದೇಶದ 89 ಕಡೆ ಭಾರಿ ದಾಳಿ!

ಬೆಂಗಳೂರು: ದೇಶಾದ್ಯಂತ ನಿರಂತರವಾಗಿ ಹೆಚ್ಚಾಗುತ್ತಿರುವ ‘ಡಿಜಿಟಲ್ ಅರೆಸ್ಟ್’ (Digital Arrest) ರೂಪದ ಸೈಬರ್ ಅಪರಾಧಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (CBI) ತನ್ನ ಸಮರವನ್ನು ತೀವ್ರಗೊಳಿಸಿದೆ. ‘ಆಪರೇಷನ್ ಚಕ್ರ-VI’ ಭಾಗವಾಗಿ ದೇಶಾದ್ಯಂತ ವ್ಯಾಪಿಸಿರುವ ಬೃಹತ್ ಸೈಬರ್ ವಂಚನೆ ಜಾಲಗಳ ಮೇಲೆ ಸಿಬಿಐ ಅಧಿಕಾರಿಗಳು ಭಾರಿ ಪ್ರಮಾಣದ ದಾಳಿ ನಡೆಸಿದ್ದಾರೆ. ದೇಶದ ನಾಗರಿಕರಿಗೆ ಗಂಭೀರ ಬೆದರಿಕೆಯಾಗಿ ಪರಿಣಮಿಸಿರುವ ಈ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಗೌರವಾನ್ವಿತ ಸುಪ್ರೀಂ ಕೋರ್ಟ್, ಈ ಜಾಲದ ಸೂತ್ರಧಾರರು ಹಾಗೂ ಅವರಿಗೆ…

Read More
Tragedy in Hassan Bank Cash Van Crashes with KSRTC Bus Near Maranahalli One Killed Four Hospitalized

Road Mishap: ಎಟಿಎಂ ಕ್ಯಾಶ್ ವಾಹನ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ರಸ್ತೆ ಅಪಘಾತ, ನಾಲ್ವರಿಗೆ ಗಂಭೀರ ಗಾಯ

ಹಾಸನ: ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Mishap) ಬೊಲೆರೋ ಪಿಕಪ್‌ನಲ್ಲಿದ್ದ ದಿನೇಶ್ (38) ಎಂಬುವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಾಹನದಲ್ಲಿದ್ದ ಸುಬ್ರಮಣ್ಯ, ವೆಂಕಟರಮಣ, ಜಿತೇಂದ್ರ ಮತ್ತು ದುರ್ಗಾಪ್ರಸಾದ್ ಎಂಬ ನಾಲ್ವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಘಟನೆಯ ವಿವರ: ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನಿಂದ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಎಟಿಎಂಗಳಿಗೆ ಹಣ ತಲುಪಿಸಲು…

Read More
Horrific Road mishap in Gadag Tipper Truck Mows Down Bike Two Dead on the Spot

Road Mishap: ಲಾರಿ-ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಇಬ್ಬರು ಸವಾರರ ದುರ್ಮ*ರಣ!

ಗದಗ: ಮಣ್ಣು ತುಂಬಿಕೊಂಡು ವೇಗವಾಗಿ ಬಂದ ಟಿಪ್ಪರ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಇಟಗಿ (Road Mishap) ಕ್ರಾಸ್ ಸಮೀಪ ಮಂಗಳವಾರ ನಡೆದಿದೆ. ಏನಿದು ಪ್ರಕರಣ? ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಗಳಾದ ಶರಣಪ್ಪ ಜಾಲಿಹಾಳ (65) ಹಾಗೂ ಸುರೇಶ ತಳವಾರ (59) ಮೃತಪಟ್ಟ ದುರ್ದೈವಿಗಳು. ಇಬ್ಬರೂ ಇಟಗಿಯಿಂದ ತಮ್ಮ ಸ್ವಗ್ರಾಮ ಹೊಸಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ರೋಣ ಭಾಗದಿಂದ…

Read More
Punished for Not Bringing Book 10 Year Old Girl lost life After Being Made to Stand in Sun at Delhi School

Crime: ಪುಸ್ತಕ ತಂದಿಲ್ಲವೆಂದು ಕ್ರೂರ ಶಿಕ್ಷೆ: ದೆಹಲಿಯಲ್ಲಿ ಸುಡುವ ಬಿಸಿಲಿಗೆ ನಿಂತು 10 ವರ್ಷದ ಬಾಲಕಿ ಸಾ*ವು!

ನವದೆಹಲಿ: ಶಾಲಾ ಶಿಕ್ಷಕರು ನೀಡಿದ ಕಠಿಣ ಶಿಕ್ಷೆಯೊಂದು ಹತ್ತರ ಹರೆಯದ ಪುಟ್ಟ ಬಾಲಕಿಯ ಪ್ರಾಣವನ್ನೇ ಬಲಿ ಪಡೆದಿರುವ ಅತ್ಯಂತ ಆಘಾತಕಾರಿ ಘಟನೆ ದೇಶದ ರಾಜಧಾನಿ ದೆಹಲಿಯಲ್ಲಿ (Crime) ನಡೆದಿದೆ. ತರಗತಿಗೆ ಪಠ್ಯಪುಸ್ತಕ ತರಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಸುಡುವ ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದ್ದರಿಂದ, ಆಕೆ ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆಗಸ್ಟ್‌ 27 ರಂದು ನಡೆದಿದ್ದ ಘಟನೆ ಪೂರ್ವ ದೆಹಲಿಯ ವಿನೋದ್ ನಗರದಲ್ಲಿರುವ ಸರ್ವೋದಯ ಕನ್ಯಾ ವಿದ್ಯಾಲಯದಲ್ಲಿ ಈ ದಾರುಣ ಘಟನೆ ಸಂಭವಿಸಿದೆ….

Read More
Crime Blackmail Push to the Brink Woman Jumps into Agara Lake in Bengaluru

Crime: ಬ್ಲಾಕ್‌ಮೇಲ್ ಕಿರುಕುಳಕ್ಕೆ ಬೆಚ್ಚಿದ ಯುವತಿ: ಬೆಂಗಳೂರಿನ ಅಗ್ರಹಾರ ಕೆರೆಗೆ ಹಾರಿ ಆತ್ಮಹತ್ಯೆ

ಬೆಂಗಳೂರು: ನಗರದಲ್ಲಿ ಪ್ರೀತಿಯ ನೆಪದಲ್ಲಿ ಯುವತಿಯೊಬ್ಬಳಿಗೆ ಹಳೆಯ ನೆನಪುಗಳನ್ನಿಟ್ಟುಕೊಂಡು ನಿರಂತರ ಬ್ಲಾಕ್‌ಮೇಲ್ ಮಾಡಿ, ಮಾನಸಿಕ ಕಿರುಕುಳ ನೀಡುತ್ತಿದ್ದ ಸಹಪಾಠಿಯ ವಿಕೃತ ವರ್ತನೆಗೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ ದಾರುಣ (Crime) ಘಟನೆ ಬೆಳಕಿಗೆ ಬಂದಿದೆ. ಪ್ರೀತಿ, ಸ್ನೇಹದ ಹೆಸರಿನಲ್ಲಿ ವಂಚಿಸಿ ಕೊನೆಗೆ ಪ್ರಾಣಕ್ಕೇ ಕಂಟಕ ತಂದೊಡ್ಡಿದ ಈ ಘಟನೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತರ ಕುಟುಂಬಸ್ಥರ ಕಣ್ಣೀರ ಕೋಡಿ ಹರಿಯುವಂತೆ ಮಾಡಿದೆ. ನೆಮ್ಮದಿಯನ್ನೇ ಕಸಿದುಕೊಂಡಿದ್ದ ಹಳೆಯ ಸಹಪಾಠಿ ಆತ್ಮಹತ್ಯೆಗೆ ಶರಣಾದ ದುರ್ದೈವಿ…

Read More
Tragedy at IIT Delhi 31 Year Old MSc Student lost life by self harming on Campus

Shocking: ರಾಷ್ಟ್ರ ರಾಜಧಾನಿಯಲ್ಲಿ ಒಂದೇ ದಿನ ಇಬ್ಬರು ವಿದ್ಯಾರ್ಥಿಗಳ ದಾರುಣ ಸಾ*ವು

ನವದೆಹಲಿ: ದೇಶದ ರಾಜಧಾನಿಯಲ್ಲಿ ಶನಿವಾರ ವಿದ್ಯಾರ್ಥಿಗಳ ಆತ್ಮಹತ್ಯೆಯ ಎರಡು ಪ್ರತ್ಯೇಕ ಶೋಚನೀಯ ಘಟನೆಗಳು ವರದಿಯಾಗಿದ್ದು, ಶಿಕ್ಷಣ ಕ್ಷೇತ್ರವನ್ನು (Shocking) ಆಘಾತಕ್ಕೀಡುಮಾಡಿವೆ. ದೆಹಲಿಯ ಪ್ರತಿಷ್ಠಿತ ಐಐಟಿ (IIT) ಆವರಣದಲ್ಲಿ ಎಂ.ಎಸ್ಸಿ ಭೌತಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ 31 ವರ್ಷದ ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದರೆ, ಮತ್ತೊಂದೆಡೆ ಬಿ.ಎಸ್ಸಿ ನರ್ಸಿಂಗ್ ಓದುತ್ತಿದ್ದ 19 ವರ್ಷದ ಯುವತಿ ವಸತಿ ನಿಲಯದಲ್ಲಿ ನೇಣಿಗೆ ಶರಣಾಗಿದ್ದಾಳೆ. ಏನಿದು ಪ್ರಕರಣ? ಐಐಟಿ ದೆಹಲಿ ಆವರಣದಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆ ಸುಮಾರು 8:33ರ ಸುಮಾರಿಗೆ ಪೊಲೀಸರಿಗೆ…

Read More
Kittur Jewelry Heist Solved 5 Interstate Gang Members Arrested With 7 kg Silver and i20 Car crime

Crime: ಕಿತ್ತೂರು ಜ್ಯುವೆಲ್ಲರಿ ಅಂಗಡಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; 5 ಅಂತರರಾಜ್ಯ ಖದೀಮರ ಬಂಧನ, ₹17 ಲಕ್ಷದ ಬೆಳ್ಳಿ ಜಪ್ತಿ!

ಬೆಳಗಾವಿ: ಕಿತ್ತೂರಿನ ಪ್ರಸಿದ್ಧ ಜ್ಯುವೆಲ್ಲರಿ ಅಂಗಡಿಯಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣವನ್ನು ಅತ್ಯಂತ ಕ್ಷಿಪ್ರವಾಗಿ ಭೇದಿಸಿರುವ ಕಿತ್ತೂರು ಠಾಣೆ ಪೊಲೀಸರು, ಐವರು ಅಂತರರಾಜ್ಯ ಖದೀಮರ (Crime) ಜಾಲವನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿ ಬಂಧಿತ ಆರೋಪಿಗಳಲ್ಲಿ ನಾಲ್ವರು ರಾಜಸ್ಥಾನ ಮೂಲದವರಾಗಿದ್ದು, ಮತ್ತೊಬ್ಬ ಮಧ್ಯಪ್ರದೇಶ ಮೂಲದವನೆಂದು ಗುರುತಿಸಲಾಗಿದೆ. ಆಗಸ್ಟ್ 12ರ ತಡರಾತ್ರಿ ಕಿತ್ತೂರು ಪಟ್ಟಣದಲ್ಲಿರುವ ‘ಮಾನಜ್ಜ ಜ್ಯುವೆಲ್ಲರಿ’ ಅಂಗಡಿಯನ್ನು…

Read More