Congress: ಮೇ ಮಧ್ಯಭಾಗದಲ್ಲಿ ರಾಜ್ಯ ಕಾಂಗ್ರೆಸ್ ‘ಪವರ್ ಫೈಟ್’ಗೆ ಸುಖಾಂತ್ಯ? ಹೈಕಮಾಂಡ್ ಸಭೆಗೆ ಕ್ಷಣಗಣನೆ!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಹಗ್ಗಜಗ್ಗಾಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ (Congress) ನಿರ್ಧರಿಸಿದೆ. ರಾಜ್ಯ ರಾಜಕೀಯದ ಈ ಪ್ರಮುಖ ಗೊಂದಲಗಳನ್ನು ಬಗೆಹರಿಸಲು ಮೇ 15ರ ಒಳಗಾಗಿ ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ ನಡೆಸಲು ಮುಹೂರ್ತ ನಿಗದಿಯಾಗಿದೆ ಎಂದು ತಿಳಿದುಬಂದಿದೆ. ಕೇರಳದ ಬಳಿಕ ಕರ್ನಾಟಕಕ್ಕೆ ಹೈಕಮಾಂಡ್ ಆದ್ಯತೆ: ಪ್ರಸ್ತುತ ಕೇರಳದ ನೂತನ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯಲ್ಲಿ ತೊಡಗಿರುವ ದೆಹಲಿ ನಾಯಕರು, ಮೇ 10ರ ಒಳಗಾಗಿ ಅಲ್ಲಿನ ಜವಾಬ್ದಾರಿಯನ್ನು ಪೂರ್ಣಗೊಳಿಸಲಿದ್ದಾರೆ. ಆ ಪ್ರಕ್ರಿಯೆ…
