TOP NEWS
Education Portfolio Row Siddaramaiah targets Pralhad Joshi over Bilkis Bano case remarks

Siddaramaiah: ಜೋಶಿ ನೇಮಕದಿಂದ ಕನ್ನಡಿಗರು ತಲೆತಗ್ಗಿಸುವಂತಾಗಿದೆ!; ಧರ್ಮೇಂದ್ರ ಪ್ರಧಾನ್-ಪ್ರಲ್ಹಾದ್ ಜೋಶಿ ಇಬ್ಬರೂ ಆರ್‌ಎಸ್‌ಎಸ್ ಅವಳಿ ಜವಳಿ ಎಂದ ಸಿದ್ದರಾಮಯ್ಯ!

ಬೆಂಗಳೂರು: ದೇಶದ ಶಿಕ್ಷಣ ಸಚಿವರಾಗಿ ಕರ್ನಾಟಕದ ಸಂಸದರೊಬ್ಬರು ಅಧಿಕಾರ ಸ್ವೀಕರಿಸಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡಬೇಕಿತ್ತು, ಆದರೆ ಮಹಿಳಾ ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡಿದ್ದ ಪ್ರಲ್ಹಾದ್ ಜೋಶಿ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿರುವುದು ಇಡೀ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದೆ ಎಂದು ಸಿದ್ದರಾಮಯ್ಯ (Siddaramaiah) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪ್ರಲ್ಹಾದ್ ಜೋಶಿ ಅವರ ವಿರುದ್ಧ ನೇರ ವಾಗ್ದಾಳಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ನೂತನ ಶಿಕ್ಷಣ…

Read More
Come and see the ground reality in Karnataka DK Shivakumar extends open invitation to Tamil Nadu CM Vijay

DK Shivakumar: ಕರ್ನಾಟಕದ ವಾಸ್ತವ ಸ್ಥಿತಿ ಬಂದು ನೋಡಿ!; ತಮಿಳುನಾಡು ಸಿಎಂ ವಿಜಯ್‌ಗೆ ಮುಕ್ತ ಆಹ್ವಾನ ನೀಡಿದ ಡಿ.ಕೆ. ಶಿವಕುಮಾರ್!

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಇತ್ತೀಚಿನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮೆಟ್ಟಿಲೇರಲು ಕರ್ನಾಟಕ ಸರ್ಕಾರ ಗಂಭೀರ ಸಿದ್ಧತೆ ನಡೆಸಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಜುಲೈ 30ರ ಬುಧವಾರ ಬೆಳಗ್ಗೆಯಿಂದ ಅನ್ವಯವಾಗುವಂತೆ ಸಮಿತಿಯು ಹೊರಡಿಸಿರುವ ಆದೇಶಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ….

Read More
Commonwealth Javelin Throw A thrilling three pronged contest on the cards

Commonwealth: ಜಾವೆಲಿನ್ ಥ್ರೋ ರೋಚಕ ತ್ರಿಕೋನ ಸ್ಪರ್ಧೆ

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ (Commonwealth) ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಈ ಬಾರಿ ಕೇವಲ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ನಡುವೆ ಮಾತ್ರ ಪೈಪೋಟಿ ನಡೆಯಲಿದೆ ಎಂದು ಕೊಂಡವರಿಗೆ ಬಿಗ್ ಶಾಕ್ ಕಾದಿದೆ. ರೋಚಕ ತ್ರಿಕೋನ ಸ್ಪರ್ಧೆ ಈಗ ಈ ಇಬ್ಬರು ದೈತ್ಯರ ನಡುವಿನ ಚಿನ್ನದ ಪದಕದ ಕದನಕ್ಕೆ ಶ್ರೀಲಂಕಾದ ಯುವ ತಾರೆ ರುಮೇಶ್ ತರಂಗ ಪಾತಿರಾಗೆ ರೂಪದಲ್ಲಿ ಮೂರನೇ ಆಟಗಾರನ ಪ್ರವೇಶವಾಗಿದೆ. ಇದರೊಂದಿಗೆ ಗ್ಲ್ಯಾಸ್ಗೋದಲ್ಲಿ ನಡೆಯಲಿರುವ ಈ ಬಾರಿಯ ಜಾವೆಲಿನ್ ಕದನವು…

Read More
BPSC TRE 3 Scam Seal tampering expert former doctor arrested

BPSC: ಹೋಟೆಲ್‌ನಲ್ಲಿ ಅಭ್ಯರ್ಥಿಗಳನ್ನು ಕೂಡಿಹಾಕಿ ಉತ್ತರ ಬಾಯಿಪಾಠ ಮಾಡಿಸಿದ್ದ ವೈದ್ಯ!; ಬಿಪಿಎಸ್‌ಸಿ ಪರೀಕ್ಷಾ ದಂಧೆಯ ರೋಚಕ ಕಥೆ ಬಿಚ್ಚಿಟ್ಟ ಪೊಲೀಸರು!

ಪಾಟ್ನಾ: ಬಿಹಾರ ಶಿಕ್ಷಕರ ನೇಮಕಾತಿ ಪರೀಕ್ಷೆಯ (BPSC TRE-3) ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧಗಳ ಘಟಕ (EOU) ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪ್ರಮುಖ ಆರೋಪಿಯಾಗಿದ್ದ ಸರ್ಕಾರಿ ಮಾಜಿ ವೈದ್ಯನನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು ಡಾ. ಮನೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಪರೀಕ್ಷೆಗೂ ಮುನ್ನವೇ ಸುಮಾರು 30 ಅಭ್ಯರ್ಥಿಗಳಿಗೆ ಸೋರಿಕೆಯಾದ ಪ್ರಶ್ನೆಪತ್ರಿಕೆಗಳನ್ನು ನೀಡಿ, ಅವರಿಂದ ಬರೋಬ್ಬರಿ 1.2 ಕೋಟಿ ರೂಪಾಯಿ ವಸೂಲಿ ಮಾಡಿದ್ದಾಗಿ ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಪ್ರಶ್ನೆಪತ್ರಿಕೆಗಳು ಇರುವ ಸೀಲ್ ಮಾಡಿದ ಬಾಕ್ಸ್‌ಗಳನ್ನು ಯಾವುದೇ…

Read More
Boost your gut health Nutritionist reveals two best cooking oil for a healthy digestive system

Cooking Oil: ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಕಾರಿ ಈ ಎರಡು ಅಡುಗೆ ಎಣ್ಣೆಗಳು: ಪೌಷ್ಟಿಕತಜ್ಞರ ಸಲಹೆ

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯದ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್‌ಗಳನ್ನು ಸೇರಿಸಿಕೊಳ್ಳಲು ಪ್ರತಿಯೊಬ್ಬರೂ ಗಮನ ಹರಿಸುತ್ತಾರೆ. ಆದರೆ, ನಿತ್ಯ ಅಡುಗೆಗೆ ಬಳಸುವ ಎಣ್ಣೆಯು (Cooking Oil) ಜೀರ್ಣಾಂಗ ವ್ಯವಸ್ಥೆಯ (ಗಟ್ ಹೆಲ್ತ್) ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆ ಎಂಬುದನ್ನು ಹಲವರು ಮರೆತುಬಿಡುತ್ತಾರೆ. ನಾವು ಬಳಸುವ ಅಡುಗೆ ಎಣ್ಣೆಯು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ, ಹೊಟ್ಟೆಯ ಆರೋಗ್ಯವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ತುಪ್ಪ ಪ್ರಸಿದ್ಧ ಪೌಷ್ಟಿಕತಜ್ಞೆ ದೀಪ್‌ಶಿಖಾ ಜೈನ್ ಅವರ ಪ್ರಕಾರ, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಮತ್ತು…

Read More
Tempestuous scenes in Lok Sabha Rahul Gandhis controversial word usage over exam leak law triggers chaos

Rahul Gandhi: ದೇಶದ ಶಿಕ್ಷಣ ವ್ಯವಸ್ಥೆ ಆರ್‌ಎಸ್‌ಎಸ್ ಹಿಡಿತದಲ್ಲಿದೆ!; ಕಿಡಿಕಾರಿದ ರಾಹುಲ್ ಗಾಂಧಿ!

ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯು ಬುಧವಾರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರ ಮತ್ತು ಭಾರಿ ಗದ್ದಲಕ್ಕೆ ಸಾಕ್ಷಿಯಾಯಿತು. ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಕಾಯ್ದೆಯ ಮೇಲಿನ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬಳಸಿದ “ಅಸಂಸದೀಯ” ಪದವು ಸದನದಲ್ಲಿ ತೀವ್ರ ಹಂಗಾಮೆ ಸೃಷ್ಟಿಸಿತು. ದೇಶದಲ್ಲಿ ಇತ್ತೀಚೆಗೆ ನಡೆದ ಯುವ ಸಮೂಹದ ಆಕ್ರೋಶದ ಕುರಿತು ಮಾತನಾಡಿದ ಅವರು, 18 ವರ್ಷದ ಯುವತಿಯೊಬ್ಬಳೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿ “ನಿಜವಾದ ವಿದ್ಯಾರ್ಥಿ” ಹಾಗೂ…

Read More
Russian Oil Purchases America Senate approves bill to impose 100% tax on India and China

America: ರಷ್ಯಾದಿಂದ ಇಂಧನ ಖರೀದಿ: ಭಾರತ, ಚೀನಾಗೆ ಶೇ. 100ರಷ್ಟು ತೆರಿಗೆ ವಿಧಿಸುವ ಮಸೂದೆಗೆ ಅಮೆರಿಕ ಸೆನೆಟ್ ಅಂಕಿತ

ಅಮೆರಿಕ: ರಷ್ಯಾದಿಂದ ಅಪಾರ ಪ್ರಮಾಣದಲ್ಲಿ ತೈಲ ಮತ್ತು ಅನಿಲ ಖರೀದಿಸುತ್ತಿರುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇಕಡಾ 100ರಷ್ಟು ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (America) ಅವರಿಗೆ ಅಧಿಕಾರ ನೀಡುವ ಮಸೂದೆಯೊಂದನ್ನು ಅಮೆರಿಕ ಸೆನೆಟ್ ಮುನ್ನಡೆಸಿದೆ. ದಿವಂಗತ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಕನಸಿನ ಯೋಜನೆಯಾಗಿದ್ದ ಈ ದ್ವಿಪಕ್ಷೀಯ ಮಸೂದೆಗೆ ಸೆನೆಟ್‌ನಲ್ಲಿ 86-12 ಮತಗಳ ಬೃಹತ್ ಬೆಂಬಲ ದೊರೆತಿದೆ. ಹಡಗುಗಳ ಮೇಲೆಯೂ ನಿರ್ಬಂಧಗಳನ್ನು ಹೇರಲಿದೆ ರಷ್ಯಾದ ಇಂಧನ ಆದಾಯದ ಮೂಲವನ್ನು…

Read More