TOP NEWS
Badrinath Temple Donation Scam CM Dhami Orders High Level Probe Senior Official Suspended

Badrinath: ಬದರಿನಾಥ ಧಾಮದ ಕಾಣಿಕೆ ಎಣಿಕೆಯಲ್ಲಿ ಭಾರಿ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ, ಹಿರಿಯ ಅಧಿಕಾರಿ ಸಸ್ಪೆಂಡ್!

ಉತ್ತರಾಖಂಡ: ಇಲ್ಲಿನ ಪ್ರಸಿದ್ಧ ಬದರಿನಾಥ (Badrinath) ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆ ಮತ್ತು ಕಾಣಿಕೆಗಳ ಎಣಿಕೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಉತ್ತರಾಖಂಡ ಸರ್ಕಾರವು ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬಿಯಾಲ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಗರ್ವಾಲ್ ಕಮಿಷನರ್ ಆನಂದ್ ಸ್ವರೂಪ್ ನೇತೃತ್ವದ ಈ ಸಮಿತಿಯು…

Read More
I am not ready to accept excuses when it comes to development says CM DK Shivakumar

DK Shivakumar: ಅಭಿವೃದ್ಧಿ ವಿಚಾರದಲ್ಲಿ ನೆಪ ಕೇಳಲು ನಾನು ಸಿದ್ಧನಿಲ್ಲ: ಸಿಎಂ ಡಿಕೆ ಶಿವಕುಮಾರ್

ಕಲಬುರಗಿ: ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಎಚ್ಚರಿಕೆ ನೀಡಿದ್ದಾರೆ. ಕಲ್ಬುರ್ಗಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಗಳವಾರ ಪ್ರಸ್ತಾವಿಕ ಭಾಷಣ ಮಾಡಿದ ಸಿಎಂ , ಜನಪರ ಕೆಲಸ ಮಾಡದ ಅಧಿಕಾರಿಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದರು. ಉತ್ತರ ಕರ್ನಾಟಕದ ಮೊದಲ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಕಲಬುರಗಿಯಲ್ಲಿ ಆಯೋಜಿಸಲಾಗಿತ್ತು. ಸಿಎಂ ಹೇಳಿದ್ದೇನು? ಸರ್ವರನ್ನೂ ಒಳಗೊಂಡ…

Read More
Ramayana theatrical rights row Distributors back out of Ranbir Yash starrer citing Adipurush failure

Ramayana: ₹4,000 ಕೋಟಿಯ ‘ರಾಮಾಯಣ’ಕ್ಕೆ ಮುಳುವಾಯಿತೇ ‘ಆದಿಪುರುಷ್‌’ ನೆರಳು? ಹಕ್ಕು ಖರೀದಿಸಲು ವಿತರಕರ ಹಿಂದೇಟು!

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೈಭವೋಪೇತ ಹಾಗೂ ಭಾರಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ರಣ್​​ಬೀರ್ ಕಪೂರ್, ಸ್ಯಾಂಡಲ್‌ವುಡ್ ಸ್ಟಾರ್ ಯಶ್ ಮತ್ತು ಸಾಯಿ ಪಲ್ಲವಿ ಅವರಂತಹ ಘಟಾನುಘಟಿ ತಾರೆಯರ ದಂಡೇ ಇರುವ ಈ ಚಿತ್ರದ ಮೊದಲ ಭಾಗವನ್ನು ಈ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 6 ರಂದು ತೆರೆಗೆ ತರಲು ಚಿತ್ರತಂಡ ಯೋಜಿಸಿದೆ. ಆದರೆ, ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಚಿತ್ರದ ನಿರ್ಮಾಪಕರಿಗೆ ವಿತರಣೆಯ ದೊಡ್ಡ…

Read More
Row over Kambala at Mysuru Dasara MP Yaduveer opposes move

Mysuru Dasara: ಮೈಸೂರು ದಸರಾದಲ್ಲಿ ‘ಕಂಬಳ’ ಜಿದ್ದಾಜಿದ್ದಿ: ಸಂಸದ ಯದುವೀರ್ ವಿರೋಧ, ಮನವೊಲಿಕೆಗೆ ಶಾಸಕ ಅಶೋಕ್ ರೈ ಕಸರತ್ತು!

ಮೈಸೂರು: ಕರಾವಳಿಯ ಸಾಂಪ್ರದಾಯಿಕ ಕೆಸರುಗದ್ದೆ ಕ್ರೀಡೆಯಾದ ‘ಕಂಬಳ’ ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ ಆಯೋಜನೆಗೊಳ್ಳುವ ಮುನ್ನವೇ ಭಾರಿ ವಿವಾದಕ್ಕೆ ಕಾರಣವಾಗಿದೆ. ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ತುಳುನಾಡಿನ ಈ ವೈಭವವನ್ನು, ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪರಿಚಯಿಸಲು ವೇದಿಕೆ ಸಿದ್ಧವಾಗುತ್ತಿತ್ತು. ಆದರೆ, ಇದಕ್ಕೆ ಮೈಸೂರು ರಾಜಮನೆತನ ಹಾಗೂ ಸ್ಥಳೀಯ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿರುವುದು ಈಗ ಹೊಸ ಸಂಚಲನ ಮೂಡಿಸಿದೆ. ದಸರಾ ಪ್ರಯುಕ್ತ ಎರಡು ದಿನಗಳ…

Read More
Lack of transparency in koppal Anjanadri Betta hundi counting Officials release details after 4 day delay

Koppal: ಅಂಜನಾದ್ರಿ ಬೆಟ್ಟದ ಹುಂಡಿ ಎಣಿಕೆಯಲ್ಲಿ ಪಾರದರ್ಶಕತೆ ಕೊರತೆ? 4 ದಿನ ತಡವಾಗಿ ಮಾಹಿತಿ ನೀಡಿದ ಅಧಿಕಾರಿಗಳು!

ಕೊಪ್ಪಳ: ಅಯೋಧ್ಯೆಯ ರಾಮಮಂದಿರದ ಹುಂಡಿ ಹಣದ ಎಣಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿವಾದ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇತ್ತ ಹನುಮನ ಜನ್ಮಸ್ಥಳ ಎಂದೇ ಖ್ಯಾತಿಯಾಗಿರುವ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲೂ (Koppal) ಹುಂಡಿ ಎಣಿಕೆ ಪ್ರಕ್ರಿಯೆ ಭಕ್ತರಲ್ಲಿ ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಹುಂಡಿ ಎಣಿಕೆ ಮುಗಿದು ನಾಲ್ಕು ದಿನಗಳವರೆಗೆ ಯಾವುದೇ ಮಾಹಿತಿ ನೀಡದ ತಾಲೂಕು ಆಡಳಿತದ ನಿಗೂಢ ನಡೆ ಸದ್ಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹುಂಡಿ ಹಣದ…

Read More
Tollywood tabu and Nagarjuna to reunite after 28 years Tollywood tabu and Nagarjuna to reunite after 28 years

Tollywood: 28 ವರ್ಷಗಳ ಬಳಿಕ ನಾಗಾರ್ಜುನ್-ಟಬು ಕಂಬ್ಯಾಕ್

ಹೈದರಾಬಾದ್‌: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ತೆರೆಯ ಮೇಲಿನ ಜೋಡಿಗಳಲ್ಲೊಂದಾದ ನಾಗಾರ್ಜುನ್ ಮತ್ತು ಟಬು ಜೋಡಿ ದಶಕಗಳ (Tollywood) ಬಳಿಕ ಮತ್ತೆ ಒಂದಾಗುತ್ತಿದೆ. ಟಾಲಿವುಡ್ ಮನ್ಮಥ ನಾಗಾರ್ಜುನ್ ಅವರ ವೃತ್ತಿಜೀವನದ ಮೈಲಿಗಲ್ಲಿನ 100ನೇ ಚಿತ್ರದಲ್ಲಿ ಈ ಸ್ಟಾರ್ ಜೋಡಿ ಒಟ್ಟಿಗೆ ನಟಿಸುತ್ತಿದ್ದು, ಸದ್ಯಕ್ಕೆ ಈ ಚಿತ್ರಕ್ಕೆ ‘ಕಿಂಗ್100’ ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ವಿಶೇಷವೆಂದರೆ, ನಾಗಾರ್ಜುನ್ ಮತ್ತು ಟಬು ಬರೋಬ್ಬರಿ 28 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಬೆಳ್ಳಿಪರದೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದ ಈ…

Read More
Two parallel voter list revision surveys in Bengaluru spark confusion residents move High Court against State Election Commission over SIR

SIR: ಬೆಂಗಳೂರಿನಲ್ಲಿ ಎರಡು ಎಸ್‌ಐಆರ್ ಗೊಂದಲ: ರಾಜ್ಯ ಚುನಾವಣಾ ಆಯೋಗದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಿವಾಸಿಗಳು

ಬೆಂಗಳೂರು: ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗದ ಆದೇಶವೊಂದು ಈಗ ಹೈಕೋರ್ಟ್‌ ಅಂಗಳ ತಲುಪಿದೆ. ಕೇಂದ್ರ ಚುನಾವಣಾ ಆಯೋಗದ ಬೃಹತ್ ಅಭಿಯಾನದ ನಡುವೆಯೇ, ಗ್ರೇಟರ್ ಬೆಂಗಳೂರಿನ ಕೆಲವು ವಾರ್ಡ್‌ಗಳಿಗೆ ಪ್ರತ್ಯೇಕವಾಗಿ ಮತ್ತೊಂದು ಸಮಾನಾಂತರ ಪರಿಷ್ಕರಣೆ ನಡೆಸಲು ರಾಜ್ಯ ಆಯೋಗ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಪರ್ಯಾಯ SIR ಆದೇಶ ರದ್ದು ಮಾಡಿ ಬೆಂಗಳೂರಿನ ನಿವಾಸಿಗಳಾದ ವಿವೇಕ್ ಹಾಗೂ ಇತರರು…

Read More