niveditha gowda and kishan apologised for using peacock feather in reels

Sandalwood: ನವಿಲು ಗರಿ ರೀಲ್ಸ್ ವಿವಾದ: ಕ್ಷಮೆ ಕೇಳಿದ ನಿವೇದಿತಾ ಗೌಡ – ಕಿಶನ್!

ಬೆಂಗಳೂರು: ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಬಳಸಿ ಇನ್‌ಸ್ಟಾಗ್ರಾಮ್‌ನಲ್ಲಿ ‘ಹೇ ನವಿಲೇ’ ಎಂಬ ರೀಲ್ಸ್ ಮಾಡಿ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದ (Sandalwood) ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ನಿವೇದಿತಾ ಗೌಡ ಹಾಗೂ ಕಿಶನ್ ಬಿಳಗಲಿ ಕೊನೆಗೂ ಸಾರ್ವಜನಿಕವಾಗಿ ತಲೆಬಾಗಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಡಿ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿ, ನೋಟಿಸ್ ಜಾರಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಈ ಸೆಲೆಬ್ರಿಟಿ ಜೋಡಿ, ಸೋಷಿಯಲ್ ಮೀಡಿಯಾದಿಂದ ವಿವಾದಿತ ವಿಡಿಯೋವನ್ನು ಡಿಲೀಟ್ ಮಾಡಿದೆ. ಅಲ್ಲದೆ, ಪ್ರತ್ಯೇಕ ವಿಡಿಯೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಸಾರ್ವಜನಿಕರ ಕ್ಷಮೆಯಾಚಿಸಿದೆ….

Read More
Kollywood rajinikanth 173 film titled announced Kamal Haasan Backs him

Rajinikanth: ರಜನೀಕಾಂತ್ 173ನೇ ಸಿನಿಮಾದ ಫಸ್ಟ್ ಲುಕ್ ರಿಲೀಸ್: ‘ಧರ್ಮನ್’ ಆಗಿ ಬಂದ ತಲೈವಾ

ನವದೆಹಲಿ: ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನೀಕಾಂತ್ ತೆರೆಯ ಮೇಲೆ ಬರಲಿದ್ದಾರೆ ಎಂದರೆ ಅಲ್ಲಿ ಬೇರೆ ಯಾವುದೇ ಅಬ್ಬರದ ಪ್ರಚಾರದ ಅಗತ್ಯವಿರುವುದಿಲ್ಲ. ಅವರ ಒಂದು ನೆರಳು, ಸಹಿ ಶೈಲಿ ಹಾಗೂ ಹೆಸರು ಕೇಳಿದರೆ ಸಾಕು ಅಭಿಮಾನಿಗಳು ಹಬ್ಬದ ಮೂಡ್‌ಗೆ ಜಾರುತ್ತಾರೆ. ಇದೀಗ ರಜನೀಕಾಂತ್ (Rajinikanth) ಅವರ 173ನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಲೋಕನಾಯಕ ಕಮಲ್ ಹಾಸನ್ ಅವರ ಒಡೆತನದ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಸಂಸ್ಥೆಯು ಈ ಬಹುನಿರೀಕ್ಷಿತ…

Read More
Actor ram Charan trolled for his statement about Dhurandhar

Ram Charan: ಬುಮ್ರಾ ಫುಟ್ಬಾಲರ್ ಅಂದಿದ್ದ ರಾಮ್ ಚರಣ್, ಈಗ ‘ಧುರಂಧರ್’ ಹೇಳಿಕೆಯಿಂದ ಮತ್ತೆ ಟ್ರೋಲ್

ಬೆಂಗಳೂರು: ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೂರು ವಾರಗಳ ಹಿಂದೆ ತೆರೆಕಂಡ ಈ ಚಿತ್ರ ಕೇವಲ 18 ದಿನಗಳಲ್ಲಿ ಬರೋಬ್ಬರಿ 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಸೂಪರ್ ಹಿಟ್ ಲಿಸ್ಟ್ ಸೇರಿದೆ. ‘ಆರ್‌ಆರ್‌ಆರ್’ ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ರಾಮ್ ಚರಣ್‌ಗೆ ‘ಪೆದ್ದಿ’ ಸಿನಿಮಾ ದೊಡ್ಡ ಮರುಜೀವ ನೀಡಿದೆ. ಆದರೆ, ಈ ಭರ್ಜರಿ ಗೆಲುವಿನ…

Read More
sandalwood case against actor kishan and niveditha gowda

Sandalwood: ಫ್ಯಾಷನ್ ರೀಲ್ಸ್ ಚಾಳಿ, ಸೆಲೆಬ್ರಿಟಿಗಳಿಗೆ ಸಂಕಷ್ಟ: ನವಿಲು ಗರಿ ಉಡುಪು ಧರಿಸಿದ ಕಿಶನ್, ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ (Sandalwood) ಸದಾ ಸಕ್ರಿಯರಾಗಿ ವಿಭಿನ್ನ ರೀಲ್ಸ್‌ಗಳ ಮೂಲಕ ಗಮನ ಸೆಳೆಯುವ ಸ್ಯಾಂಡಲ್‌ವುಡ್ ನಟ ಕಿಶನ್ ಹಾಗೂ ಕಿರುತೆರೆಯ ಖ್ಯಾತ ನಟಿ ನಿವೇದಿತಾ ಗೌಡ ಅವರು ಈಗ ಕಾನೂನಿನ ಬೇಲಿ ಮುರಿದ ಆರೋಪ ಎದುರಿಸುತ್ತಿದ್ದಾರೆ. ಭಾರತದ ಹೆಮ್ಮೆಯ ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಬಳಸಿ ತಯಾರಿಸಲಾದ ವಸ್ತ್ರಗಳನ್ನು ತೊಟ್ಟು ವಿಡಿಯೋ ಮಾಡಿ ಹಂಚಿಕೊಂಡಿರುವುದು ಈ ಇಬ್ಬರು ತಾರೆಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕೃತ್ಯದ ವಿರುದ್ಧ ಪರಿಸರ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ವನ್ಯಜೀವಿ ಸಂರಕ್ಷಣಾ…

Read More
sandalwood actor chikkanna second film first song released by 8 actresses

Sandalwood: ಚಿಕ್ಕಣ್ಣ ಹೊಸ ಸಿನಿಮಾದ ‘ಇನ್ಮೇಲೆ’ ಮೆಲೋಡಿ ಸಾಂಗ್ ರಿಲೀಸ್ ಮಾಡಿದ ಸ್ಯಾಂಡಲ್‌ವುಡ್ ತಾರೆಯರು!

ಬೆಂಗಳೂರು: ಹಾಸ್ಯ ನಟನಾಗಿ ಪ್ರೇಕ್ಷಕರನ್ನು ನಗಿಸಿ, ಈಗ ಹೀರೋ ಆಗಿ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಬ್ಯುಸಿಯಾಗಿರುವ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಅಭಿನಯದ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದ್ದು, ಸಿನಿಮಾದ ಮೊದಲ ಪ್ರೇಮಗೀತೆ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನ ಎಎಂಬಿ ಕಪಾಲಿ ಥಿಯೇಟರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭದಲ್ಲಿ ಚಿತ್ರರಂಗದ ಎಂಟು ಜನ ಖ್ಯಾತ ನಟಿಯರು ಒಟ್ಟಾಗಿ ಸೇರಿ ‘ಇನ್ಮೇಲೆ’ ಎಂಬ ರೋಮ್ಯಾಂಟಿಕ್…

Read More
acyress shreeleela humiliated by amruta Fadnavis in yoga function Bollywood

Bollywood: ನಟಿ ಶ್ರೀಲೀಲಾಗೆ ಅವಮಾನ ಮಾಡಿದ್ರಾ ಅಮೃತಾ ಫಡ್ನವಿಸ್? ವೈರಲ್‌ ಆಯ್ತು ವಿಡಿಯೋ

ಮುಂಬೈ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಭಾರತದ ಸ್ಟಾರ್ ನಟಿ ಶ್ರೀಲೀಲಾ (Bollywood) ಅವರ ಎರಡು ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ವಿಶೇಷ ಕಾರ್ಯಕ್ರಮದಲ್ಲಿ ಶ್ರೀಲೀಲಾ ಅವರ ಜೊತೆಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಕೂಡ ಭಾಗವಹಿಸಿದ್ದರು. ಯೋಗಾಸನಗಳನ್ನು ಮಾಡುವಾಗ ಶ್ರೀಲೀಲಾ ಅವರ ಹಾವಭಾವಗಳ ಒಂದು ವಿಡಿಯೋ ಟ್ರೋಲ್ ಆಗುತ್ತಿದ್ದರೆ,…

Read More
Kajal Aggarwal praises actor yash acting and shares Ramayana shooting information

Ramayana: ಯಶ್ ನಟನೆಗೆ ಕಾಜಲ್ ಅಗರ್ವಾಲ್ ಜೈಕಾರ, ಮಂಡೋದರಿ ಪಾತ್ರದ ಶೂಟಿಂಗ್ ಅಪ್‌ಡೇಟ್!

ಬೆಂಗಳೂರು: ಭಾರತೀಯ ಸಿನಿರಂಗದ ಇತಿಹಾಸದಲ್ಲೇ ಅತ್ಯಂತ ಅದ್ದೂರಿಯಾಗಿ ಮೂಡಿಬರುತ್ತಿರುವ ಪೌರಾಣಿಕ ಮಹಾಕಾವ್ಯ ‘ರಾಮಾಯಣ’ದ ಬಗ್ಗೆ ಸೌತ್ ಸ್ಟಾರ್ ನಟಿ ಕಾಜಲ್ ಅಗರ್ವಾಲ್ (‌Ramayana) ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಲಂಕಾಧಿಪತಿ ರಾವಣನಾಗಿ ಕಾಣಿಸಿಕೊಳ್ಳಲಿರುವ ರಾಕಿಂಗ್ ಸ್ಟಾರ್ ಯಶ್ ಅವರ ಅಪ್ರತಿಮ ಅಭಿನಯಕ್ಕೆ ಕಾಜಲ್ ಮನಸಾರೆ ಫಿದಾ ಆಗಿದ್ದಾರೆ. ಯಶ್ ಅವರನ್ನು ಓರ್ವ ಅದ್ಭುತ ಪ್ರತಿಭಾವಂತ ನಟ ಎಂದು ಬಣ್ಣಿಸಿರುವ ಅವರು, ಕೆಜಿಎಫ್ ನಾಯಕನೊಂದಿಗೆ ಕ್ಯಾಮೆರಾ ಎದುರಿಸಿದ ಅನುಭವವನ್ನು ಕೊಂಡಾಡಿದ್ದಾರೆ. ಶೀಘ್ರದಲ್ಲಿ ಎರಡನೇ ಪಾರ್ಟ್‌ ಶೂಟಿಂಗ್ ನಿರ್ದೇಶಕ…

Read More