TOP NEWS
another money scam in Belagavi AC raid on company

Belagavi: ಶಿವಂ ಅಸೋಸಿಯೇಟ್ಸ್ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಜಬರ್ದಸ್ತ್ ವಂಚನೆ

ಬೆಳಗಾವಿ: ಕೋಟ್ಯಾಂತರ ರೂಪಾಯಿಗಳ ‘ಶಿವಂ ಅಸೋಸಿಯೇಟ್ಸ್’ ಹಗರಣದ ಬಿಸಿ ಆರುವ ಮುನ್ನವೇ ಬೆಳಗಾವಿ (Belagavi) ಜಿಲ್ಲೆಯಲ್ಲಿ ಮತ್ತೊಂದು ಭಾರೀ ಪ್ರಮಾಣದ ಆನ್‌ಲೈನ್ ಹೂಡಿಕೆ ವಂಚನೆ ಜಾಲ ಪತ್ತೆಯಾಗಿದೆ. ನಗರದ ಭಾಗ್ಯ ನಗರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ‘ಆದಿತ್ಯರಾಜ ಕ್ಯಾಪಿಟಲ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಕಚೇರಿಯ ಮೇಲೆ ಸಹಾಯಕ ಕಮಿಷನರ್ (ಎಸಿ) ತಂಡವು ಹಠಾತ್ ದಾಳಿ ಸಂಘಟಿಸಿದೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಕಂಪನಿಯ ವ್ಯವಸ್ಥಾಪಕರು ಅಧಿಕಾರಿಗಳ ಕೈಗೆ ಯಾವುದೇ ಡಿಜಿಟಲ್ ಸಾಕ್ಷ್ಯ ಸಿಗದಂತೆ ತಡೆಯಲು ಜಾಲತಾಣದ ಲಿಂಕ್‌ಗಳನ್ನು ಬ್ಲಾಕ್…

Read More
Belagavi cyber police strict warning to social media group admins

Cyber Police: ಸೋಷಿಯಲ್ ಮೀಡಿಯಾ ದುರ್ಬಳಕೆದಾರರಿಗೆ ಬೆಳಗಾವಿ ಪೊಲೀಸರ ಖೆಡ್ಡಾ: ಉಲ್ಲಂಘಿಸಿದರೆ ಅಕೌಂಟ್ ಕ್ಲೋಸ್!

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಜಾಲತಾಣಗಳಲ್ಲಿ ದ್ವೇಷ ಬಿತ್ತುವ ಹಾಗೂ ಸಮಾಜದ ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ (Cyber Police) ಸಮರ ಸಾರಿದೆ. ಸಾರ್ವಜನಿಕ ಸೌಹಾರ್ದತೆಗೆ ಹಾನಿ ಉಂಟುಮಾಡುವ ಯಾವುದೇ ವಿಡಿಯೋ, ಬರಹ ಅಥವಾ ಚಿತ್ರಗಳ ಮೇಲೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ಈಗ ತೀವ್ರ ನಿಗಾ ವಹಿಸುತ್ತಿದ್ದಾರೆ. ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಭಾಷಾ ವಿವಾದಗಳು, ಗಡಿ ಕದನಗಳು ಹಾಗೂ ಧಾರ್ಮಿಕ ಹಬ್ಬ ಹರಿದಿನಗಳ ಸಂದರ್ಭವನ್ನು ಬಳಸಿಕೊಂಡು ಉದ್ವಿಗ್ನತೆ ಹರಡಲು ಕೆಲವರು ಸಾಮಾಜಿಕ ಮಾಧ್ಯಮಗಳನ್ನು…

Read More
Cyber crime Matrimony Scam belagavi lady lost lakhs

Cyber Crime: ಬೆಳಗಾವಿ ಮ್ಯಾಟ್ರಿಮೋನಿ ವಂಚನೆ: ವಿದೇಶಿ ‘ಡೆಂಟಿಸ್ಟ್’ ನಾಟಕವಾಡಿ ಯುವತಿಗೆ ₹3.38 ಲಕ್ಷ ನಾಮ ಹಾಕಿದ ಗಿರಾಕಿ!

ಬೆಳಗಾವಿ: ಮ್ಯಾಟ್ರಿಮೋನಿ ಆ್ಯಪ್‌ಗಳ (Cyber Crime) ಮೂಲಕ ಮದುವೆಗಾಗಿ ವರನ ಹುಡುಕಾಟ ನಡೆಸುವ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಅಂತರರಾಜ್ಯ ಜಾಲವೊಂದು ಬೆಳಗಾವಿಯಲ್ಲಿ ಪತ್ತೆಯಾಗಿದೆ. ವಿದೇಶದಲ್ಲಿ ದಂತ ವೈದ್ಯ (ಡೆಂಟಿಸ್ಟ್) ಎಂದು ನಂಬಿಸಿ ಇಲ್ಲಿನ ಯುವತಿಯೊಬ್ಬಳಿಗೆ ಬರೋಬ್ಬರಿ 3,38,800 ರೂಪಾಯಿ ವಂಚಿಸಿರುವ ಆಘಾತಕಾರಿ ದೂರು ದಾಖಲಾಗಿದೆ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಬೆಳಗಾವಿ ನಗರದ ಸಿಇಎನ್ (CEN) ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಮಂಗಳವಾರ…

Read More
belagavi shivam associates owner link with film industry

Belagavi: ವಂಚಕನ ಸಿನಿಮಾದಲ್ಲಿ ಕುಣಿದಿದ್ದ ಸನ್ನಿ ಲಿಯೋನ್: ಹುಬ್ಬಳ್ಳಿಯ ಶಿವಾನಂದ್ ನೀಲಣ್ಣನವರ್ ಅಸಲಿ ಮುಖ ಬಯಲು

ಹುಬ್ಬಳ್ಳಿ: ಕರ್ನಾಟಕವನ್ನೇ ಬೆಚ್ಚಿಬೀಳಿಸಿರುವ ಸುಮಾರು 4500 ಕೋಟಿ ರೂಪಾಯಿಗಳ ದೋಖಾ ಹಗರಣದ ಮುಖ್ಯ ಸೂತ್ರಧಾರಿ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ್ ನೀಲಣ್ಣನವರ್‌ಗೆ (Belagavi) ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನ ಗ್ಲಾಮರ್ ಲೋಕದ ಜೊತೆಗಿದ್ದ ನಂಟು ಈಗ ಬಯಲಾಗಿದೆ. ತಲಾ ಲೋಕದ ಹೂಡಿಕೆದಾರರಿಂದ ಹಿಡಿದು ಸಾಮಾನ್ಯ ಜನರವರೆಗೂ ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಗೆ ನಾಮ ಇಟ್ಟು ಜೈಲು ಪಾಲಾಗಿರುವ ಈ ವಂಚಕ, ಲೂಟಿ ಮಾಡಿದ ದುಡ್ಡಿನಲ್ಲಿ ಐಷಾರಾಮಿ ಜೀವನದ ಜೊತೆಗೆ ಸಿನಿಮಾ ರಂಗದಲ್ಲೂ ಕೈಯಿಟ್ಟಿದ್ದ ಎಂಬ ಇಂಟ್ರೆಸ್ಟಿಂಗ್ ಮಾಹಿತಿ…

Read More
Belagavi traffic police uses solar cap

Solar Cap: ಬೆಳಗಾವಿ ಬಿಸಿಲಿಗೆ ಪೊಲೀಸ್ ಹೈಟೆಕ್ ಮೊರೆ: ಸೋಲಾರ್ ಟೋಪಿ ಧರಿಸಿ ಟ್ರಾಫಿಕ್ ಸಿಬ್ಬಂದಿ ಕರ್ತವ್ಯ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ. ಕಳೆದ 15 ದಿನಗಳಿಂದ ಇಲ್ಲಿನ ತಾಪಮಾನ 36 ರಿಂದ 39 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇಂತಹ ಸುಡುವ ಬಿಸಿಲಿನಲ್ಲಿ ರಸ್ತೆಯ ಮಧ್ಯೆ ನಿಂತು ದಣಿವರಿಯದೆ ಕೆಲಸ ಮಾಡುವ ಸಂಚಾರಿ ಪೊಲೀಸರ ಕಷ್ಟ ಹೇಳತೀರದು. ಆದರೆ, ಬೆಳಗಾವಿಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಈ ಬಿಸಿಲಿನಿಂದ ಪಾರಾಗಲು ಕಂಡುಕೊಂಡಿರುವ ‘ಸೋಲಾರ್ ಕ್ಯಾಪ್’ (Solar Cap) ಉಪಾಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಟೋಪಿ ಮೇಲೆ ಸೋಲಾರ್‌…

Read More
Crime man tries to kill wife by putting fire

Crime: ಹೆಂಡತಿ ನೈಟಿ ಧರಿಸಿದ್ದ ಬೆಂಕಿ ಹಚ್ಚಿದ ಗಂಡ, ಸೀಮೆಎಣ್ಣೆ ಸುರಿದು ಹತ್ಯೆಗೆ ಯತ್ನ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಪತ್ನಿ ನೈಟಿ ಧರಿಸಿದ್ದಕ್ಕೆ ಸಿಟ್ಟಿಗೆದ್ದ ಪತಿಯೊಬ್ಬ ಆಕೆಗೆ ಬೆಂಕಿ ಹಚ್ಚಿ ಹಲ್ಲೆ ನಡೆಸಿರುವ ದಾರುಣ (Crime) ಘಟನೆ ನಡೆದಿದೆ. ಸೀರೆ ಧರಿಸುವಂತೆ ಒತ್ತಾಯ ಕೃಷ್ಣ ಪಾಟೀಲ್ (34) ಎಂಬಾತ ತನ್ನ ಪತ್ನಿ ಮಂಜುಳಾ ಪಾಟೀಲ್ (32) ಮೇಲೆ ಸೀರೆ ಧರಿಸುವಂತೆ ಪದೇ ಪದೇ ಒತ್ತಾಯಿಸುತ್ತಿದ್ದನು, ಈ ವಿಚಾರದಲ್ಲಿ ದಂಪತಿಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ…

Read More
Good News new train may start between Bengaluru belgavi and mumbai

Good News: ಬೆಳಗಾವಿ ಜನರಿಗೆ ಬಂಪರ್‌ ನ್ಯೂಸ್‌, ಹೊಸ ರೈಲು ಸೇವೆ ಸದ್ಯದಲ್ಲಿ ಆರಂಭ?

ಬೆಳಗಾವಿ: ಕೊನೆಗೂ ಬೆಳಗಾವಿ ಜಿಲ್ಲೆಯ ಜನರ ಕನಸೊಂದು (Good News) ನನಸಾಗುವತ್ತ ಬಂದಿದ್ದು, ಬೆಂಗಳೂರು ಬೆಳಗಾವಿ-ಮುಂಬೈ ಹೈ-ಸ್ಪೀಡ್ ರೈಲು ಸದ್ಯದಲ್ಲಿ ಆರಂಭ ಆಗುವ ಸಾಧ್ಯತೆ ಇದೆ. ಕೇಂದ್ರ ಸಚಿವರ ಜೊತೆ ಜಗದೀಶ್ ಶೆಟ್ಟರ್ ಚರ್ಚೆ ಈ ವಿಚಾರವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ನವದೆಹಲಿಯ ಸಂಸತ್ ಭವನದಲ್ಲಿರುವ ಕೇಂದ್ರ ಸಚಿವರ ಕಚೇರಿಯಲ್ಲಿ ಈ ಚರ್ಚೆ ನಡೆದಿದ್ದು, ಹೊಸ ರೈಲು ಮಾರ್ಗಗಳು…

Read More