TOP NEWS
Congress Complains to Police After BJP MLC Ravikumar Performs RSS Pranam During Independence Day Flag Hoisting

Congress: ಆರ್‌ಎಸ್‌ಎಸ್ ಪ್ರಣಾಮ: ಬಿಜೆಪಿ ಎಂಎಲ್‌ಸಿ ರವಿಕುಮಾರ್ ವಿರುದ್ಧ ದೂರು

ಬೆಂಗಳೂರು: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲುಮುಟ್ಟಿರುವ ಬೆನ್ನಲ್ಲೇ, ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ವಿವಾದವೊಂದು ಎದ್ದಿದೆ. ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಗೆ ಆರ್‌ಎಸ್‌ಎಸ್ (RSS) ಮಾದರಿಯಲ್ಲಿ ‘ಧ್ವಜ ಪ್ರಣಾಮ’ ಸಲ್ಲಿಸಿದ್ದಾರೆ ಎಂಬ ಆರೋಪದ ಮೇಲೆ ಬಿಜೆಪಿ ವಿಧಾನ ಪರಿಷತ್ ಸದಸ್ಯ (ಎನ್‌ಆರ್‌) ಎನ್. ರವಿಕುಮಾರ್ (MLC Ravikumar) ವಿರುದ್ಧ ಕಾಂಗ್ರೆಸ್ (Congress) ನಾಯಕರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಏನಿದು ಆರ್‌ಎಸ್‌ಎಸ್‌‌ ಪ್ರಣಾಮ್? ಸ್ವಾತಂತ್ರ್ಯ ದಿನಾಚರಣೆಯ…

Read More
Congress MLA Pradeep Eshwar Hits Out at BL Santhosh Over Remarks Against Kharge

Pradeep Eshwar: ಎಐಸಿಸಿ ಅಧ್ಯಕ್ಷ ಖರ್ಗೆಗೆ ಏಕವಚನ ಬಳಕೆ: ಬಿ.ಎಲ್. ಸಂತೋಷ್ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಕಿಡಿ

ಬೆಂಗಳೂರು,: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಬಳಸಿರುವ ಪದಬಳಕೆ ಹಾಗೂ ಏಕವಚನದ ಮಾತುಗಳನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ತೀವ್ರವಾಗಿ ಖಂಡಿಸಿದ್ದಾರೆ. ಹಿರಿಯ ರಾಜಕಾರಣಿಗೆ ನೀಡಬೇಕಾದ ಕನಿಷ್ಠ ಗೌರವ ನೀಡದಿರುವುದು ಅವರ ನಡವಳಿಕೆಯನ್ನು ತೋರಿಸುತ್ತದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭ್ಯತೆ ಹಾಗೂ ಸಂಸ್ಕಾರದ ಕನಿಷ್ಠ ಸಾಮಾನ್ಯ ಜ್ಞಾನ ಇಲ್ಲ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರದೀಪ್…

Read More
Prajwal Revanna Row Second Mobile Phone Found in Parappana Agrahara Jail Barrack

Prajwal Revanna: ಜೈಲಿನಲ್ಲೇ ದೇವರ ಫೋಟೋ ಹಿಂದೆ ಮೊಬೈಲ್ ಸೀಕ್ರೆಟ್! ಪ್ರಜ್ವಲ್ ರೇವಣ್ಣ ಬಳಿ ಎರಡನೇ ಫೋನ್ ಪತ್ತೆ

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬಳಿ ಮತ್ತೊಮ್ಮೆ ಮೊಬೈಲ್ ಫೋನ್ ಸಿಕ್ಕಿಬಿದ್ದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರ ತನಿಖೆ ವೇಳೆ ಫೋನ್ ಸಿಕ್ಕಿ ಪ್ರಕರಣ ದಾಖಲಾಗಿದ್ದರೂ, ಮತ್ತೆ ಎರಡನೇ ಬಾರಿ ಮೊಬೈಲ್ ಪತ್ತೆಯಾಗಿರುವುದು ಜೈಲಿನ ಭದ್ರತಾ ಲೋಪವನ್ನು ಜಗಜ್ಜಾಹೀರುಗೊಳಿಸಿದೆ. ದೇವರ ಫೋಟೋದ ಹಿಂಭಾಗ ಪತ್ತೆಯಾದ ಫೋನ್‌ ಕಾರಾಗೃಹದ ‘ಸಿ’ ಬ್ಯಾರಕ್‌ನ 2ನೇ ಕೊಠಡಿಯಲ್ಲಿ ಜೈಲು ಸಿಬ್ಬಂದಿ ಹಾಗೂ…

Read More
CEA Advises Ethanol 10 Petrol for Older Vehicles Proposal for Separate Fuel Option Raised

Ethanol: ಹಳೆಯ ವಾಹನಗಳಿಗೆ ಇ10 ಪೆಟ್ರೋಲ್ ನೀಡಲು ಸಿಇಎ ಸಲಹೆ: ಪ್ರತ್ಯೇಕ ಇಂಧನ ಲಭ್ಯತೆಗೆ ಬಿಡುಗಡೆಯಾಯ್ತು ಹೊಸ ಪ್ರತಿಪಾದನೆ

ನವದೆಹಲಿ: ದೇಶಾದ್ಯಂತ ಶೇಕಡಾ 20 ರಷ್ಟು ಎಥನಾಲ್ ಮಿಶ್ರಿತ ‘ಇ20’ ಪೆಟ್ರೋಲ್ ವಿತರಣೆ ಜಾರಿಯಲ್ಲಿದ್ದರೂ, ಹಳೆಯ ವಾಹನಗಳ ಹಿತದೃಷ್ಟಿಯಿಂದ ‘ಇ10’ ಪೆಟ್ರೋಲ್ (Ethanol) ಅನ್ನು ಮತ್ತೆ ಮಾರುಕಟ್ಟೆಗೆ ತರಬೇಕು ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ವಿ. ಅನಂತ ನಾಗೇಶ್ವರನ್ ಪ್ರತಿಪಾದಿಸಿದ್ದಾರೆ. ಸಾರ್ವಜನಿಕರ ಆತಂಕವೂ ಕಡಿಮೆಯಾಗಲಿದೆ ದೈತ್ಯ ಎಥನಾಲ್ ಯೋಜನೆಯನ್ನು ಮುಂದುವರಿಸುತ್ತಲೇ, ಹಳೆಯ ವಾಹನ ಮಾಲೀಕರಿಗೆ ಇ10 ಅಥವಾ ಇ20 ಪೆಟ್ರೋಲ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಅವರು ಹಾಗೂ ಆಕಾಶ್ ಪೂಜಾರಿ…

Read More
Memorandum Submitted to Former Minister Haratalu Halappa to Resolve KPC Cultivators Issues

Haratalu Halappa: ಕೆಪಿಸಿ ಸಾಗುವಳಿದಾರರ ಸಮಸ್ಯೆ, ಹರತಾಳು ಹಾಲಪ್ಪಗೆ ಮನವಿ

ಸಾಗರ: ಕರ್ನಾಟಕ ವಿದ್ಯುತ್ ನಿಗಮದ (KPC) ವ್ಯಾಪ್ತಿಯಲ್ಲಿ ಬರುವ ಸಾಗುವಳಿದಾರರು ಎದುರಿಸುತ್ತಿರುವ ವಿವಿಧ ಜಟಿಲ ಸಮಸ್ಯೆಗಳ ಕುರಿತು ಮಾಜಿ ಸಚಿವರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ (Haratalu Halappa) ಅವರ ಗಮನಕ್ಕೆ ತರಲಾಗಿದೆ. ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಇಂದು ಹರತಾಳು ಹಾಲಪ್ಪ ಅವರನ್ನು ಭೇಟಿಯಾದ ನಿಯೋಗವು, ಕೆಪಿಸಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಎದುರಿಸುತ್ತಿರುವ ತೊಡಕುಗಳು ಹಾಗೂ ಕಾನೂನಾತ್ಮಕ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಿ, ಶೀಘ್ರ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿತು. ರೈತರ…

Read More
Could Have Shot In The Legs HD Kumaraswamy Targets Karnataka Govt Over Hanur Forest Encounter

HD Kumaraswamy: ಹನೂರು ಎನ್‌ಕೌಂಟರ್ ಖಂಡನೀಯ, ಅವರೇನು ವೀರಪ್ಪನ್ ಮಟ್ಟದವರೇ?: ಹೆಚ್.ಡಿ. ಕುಮಾರಸ್ವಾಮಿ ಚಾಟಿ

ಬಾಗಲಕೋಟೆ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಸಾರ್ವಜನಿಕರು ಬಲಿಯಾಗಿರುವ ಭೀಕರ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, (HD Kumaraswamy) ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗುಳೇದಗುಡ್ಡ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಎನ್‌ಕೌಂಟರ್ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರದ ನಡೆ ಹಾಗೂ ತನಿಖೆಯ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ. “ಕಾಲಿಗೆ ಗುಂಡು ಹಾರಿಸಿ ಬಂಧಿಸಬಹುದಿತ್ತು”: ಹನೂರು ಶೂಟೌಟ್ ಘಟನೆಯ ಬಗ್ಗೆ ತೀವ್ರ…

Read More
Did Cops Fake Consent For Autopsy Hanur Shootout Victims Relatives Level Serious Allegations

Hanur Shootout: ಹನೂರು ಫೈರಿಂಗ್ ದುರಂತ: ಮೃತರ ಕುಟುಂಬಸ್ಥರ ಒಪ್ಪಿಗೆಯಿಲ್ಲದೆ ಪೋಸ್ಟ್‌ಮಾರ್ಟಮ್?

ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು (Hanur Shootout) ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಆಂಥೋನಿ, ಪೀಟರ್ ಹಾಗೂ ಕುಮಾರ್ ಬಲಿಯಾದ ಭೀಕರ ಘಟನೆ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಕುಟುಂಬಸ್ಥರ ತೀವ್ರ ವಿರೋಧದ ನಡುವೆಯೂ ಪೊಲೀಸರು ಹಾಗೂ ಜಿಲ್ಲಾಡಳಿತ ಮೋಸದಿಂದ ಮರಣೋತ್ತರ ಪರೀಕ್ಷೆ (Post-Mortem) ಪೂರ್ಣಗೊಳಿಸಿವೆ ಎಂದು ಮೃತ ಪೀಟರ್ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರ ಮೇಲೆ ಗಂಭೀರ ಆರೋಪ ಉನ್ನತ ಅಧಿಕಾರಿಗಳು…

Read More