TOP NEWS
You Are Being Sacrificed for Politics Protect Your Own Livelihood CM DK Shivakumar Appeal to Farmers

DK Shivakumar: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆನೆ ದಾನ: ಕೇರಳಕ್ಕೆ ಕರ್ನಾಟಕದ ಪ್ರಸ್ತಾವನೆ

ಬೆಂಗಳೂರು: ಉಡುಪಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಿಗಾಗಿ ಹೆಣ್ಣು ಆನೆಯೊಂದನ್ನು ದಾನವಾಗಿ ನೀಡುವಂತೆ ಕರ್ನಾಟಕ ಸರ್ಕಾರವು ಕೇರಳ ಸರ್ಕಾರಕ್ಕೆ ಅಧಿಕೃತ ವಿನಂತಿ ಮಾಡಿದೆ. ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಪತ್ರ ಬರೆದಿದ್ದಾರೆ. ಆದರೆ, ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ವನ್ಯಜೀವಿ ನಿಯಮಗಳು ದೊಡ್ಡ ಸವಾಲಾಗಿ ಪರಿಣಮಿಸಿವೆ. ರಾಜತಾಂತ್ರಿಕ ವಿನಂತಿ ಮತ್ತು ಕೇರಳದ ನಿಲುವು…

Read More
Good news Big medical boost Central Govt caps prices of 39 critical drugs strict action warned against overchargin

Good News: ಸಾಮಾನ್ಯ ಜನರಿಗೆ ಭಾರಿ ನಿರಾಳ: ಮಧುಮೇಹ, ಹೃದಯರೋಗ ಸೇರಿದಂತೆ 39 ಅಗತ್ಯ ಔಷಧಿಗಳ ಗರಿಷ್ಠ ಬೆಲೆ ನಿಗದಿಪಡಿಸಿ ಕೇಂದ್ರ ಸರ್ಕಾರ ಆದೇಶ!

ಬೆಂಗಳೂರು: ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧ (Good News) ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಇತ್ತೀಚೆಗೆ ಹೊರಡಿಸಲಾದ ಹೊಸ ಅಧಿಕೃತ ನಿಯಮಾವಳಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಒಟ್ಟು 39 ಅತ್ಯಗತ್ಯ ಹೊಸ ಔಷಧ ಸೂತ್ರೀಕರಣಗಳ (Formulations) ಗರಿಷ್ಠ ಚಿಲ್ಲರೆ ಬೆಲೆಯನ್ನು ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಕಟ್ಟುನಿಟ್ಟಾಗಿ ನಿಗದಿಪಡಿಸಲಾಗಿದೆ. ಸಾರ್ವಜನಿಕರು ನಿರಂತರವಾಗಿ ಬಳಸುವ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ…

Read More
Shocking happy news Himalayan Flowers Rediscovered in Arunachal Pradesh After 158 Years

Flowers: 158 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಪ್ರತ್ಯಕ್ಷವಾಯಿತು ಅಪರೂಪದ ಹಿಮಾಲಯನ್ ಹೂವು: ಅರುಣಾಚಲ ಪ್ರದೇಶದಲ್ಲಿ ವಿಜ್ಞಾನಿಗಳ ಅದ್ಭುತ ಆವಿಷ್ಕಾರ!

ಇಟಾನಗರ: ಸಸ್ಯಶಾಸ್ತ್ರ ಲೋಕದಲ್ಲಿ ಅತ್ಯಂತ ಅಪರೂಪದ ಹಾಗೂ ರೋಮಾಂಚನಕಾರಿ ಬೆಳವಣಿಗೆಯೊಂದು ನಡೆದಿದೆ. ಬರೋಬ್ಬರಿ 158 ವರ್ಷಗಳ ಕಾಲ ಭಾರತದ ದಾಖಲೆಗಳಿಂದಲೇ ನಾಪತ್ತೆಯಾಗಿದ್ದ ಹಿಮಾಲಯದ ಅಪರೂಪದ ಹೂಬಿಡುವ ಸಸ್ಯ ‘ಸಯನಾಂತಸ್ ಹುಕೇರಿ’ (Cyananthus hookeri) ಯನ್ನು ವಿಜ್ಞಾನಿಗಳು ಅರುಣಾಚಲ (Flowers) ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಮರುಶೋಧಿಸಿದ್ದಾರೆ. ಗಂಟೆಹೂವಿನ (ಕ್ಯಾಂಪಾನುಲೇಸಿ) ಕುಟುಂಬಕ್ಕೆ ಸೇರಿದ ಈ ಪುಟ್ಟ ನೇರಳೆ-ನೀಲಿ ಬಣ್ಣದ ಹೂವನ್ನು ಭಾರತದಲ್ಲಿ ಕೊನೆಯದಾಗಿ 1867 ರಲ್ಲಿ ಬ್ರಿಟಿಷ್ ಸಸ್ಯವಿಜ್ಞಾನಿ ಸರ್ ಜೋಸೆಫ್ ಡಾಲ್ಟನ್ ಹುಕರ್ ಅವರು ಸಿಕ್ಕಿಂನಲ್ಲಿ ಪತ್ತೆಹಚ್ಚಿದ್ದರು. ಆ…

Read More
Encroachments on 435 km stretch of footpaths cleared reports DK Shivakumar

DK Shivakumar: ಬೀದಿ ಬದಿ ವ್ಯಾಪಾರಿಗಳು ನಮ್ಮವರೇ ಎಂದ ಸಿಎಂ

ಬೆಂಗಳೂರು: “ಜುಲೈ 1 ರಿಂದ ಇಲ್ಲಿಯವರೆಗು ಒಟ್ಟು 435 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿ ಒಟ್ಟು 9,878 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಯಲಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಹೇಳಿದರು. ನಗರದ ವಿವಿಧ ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಕೃಷ್ಣ…

Read More
Kill me or jail me I will return Ousted Bangladesh Sheikh Hasina announces December homecoming

Sheikh Hasina: ಮರಣದಂಡನೆ ತೀರ್ಪಿನ ಬೆನ್ನಲ್ಲೇ ಶೇಖ್ ಹಸೀನಾ ದಿಟ್ಟ ಘೋಷಣೆ: ಜೈಲಿಗೆ ಹಾಕಿದರೂ, ಕೊಂದರೂ ಡಿಸೆಂಬರ್‌ನಲ್ಲಿ ಬಾಂಗ್ಲಾಕ್ಕೆ ಮರಳುವುದಾಗಿ ಭರವಸೆ!

ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಭೀಕರ ವಿದ್ಯಾರ್ಥಿ ದಂಗೆಯ ನಂತರ ಭಾರತದಲ್ಲಿ ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುಂಬರುವ ಡಿಸೆಂಬರ್ ತಿಂಗಳ ಆಸುಪಾಸಿನಲ್ಲಿ ತಾವು ಮತ್ತು ದೇಶ ತೊರೆದಿರುವ ಅವಾಮಿ ಲೀಗ್ ಪಕ್ಷದ ಪ್ರಮುಖ ನಾಯಕರು ಸ್ವದೇಶಕ್ಕೆ ವಾಪಸ್ ಆಗಲಿದ್ದೇವೆ ಎಂದು ಪ್ರಕಟಿಸಿದ್ದಾರೆ. “ನಾನು ಬಾಂಗ್ಲಾ ಮಣ್ಣಿಗೆ ಕಾಲಿಡುತ್ತಿದ್ದಂತೆಯೇ ನನ್ನನ್ನು ಜೈಲಿಗಟ್ಟಬಹುದು ಅಥವಾ ಹತ್ಯೆ ಮಾಡಬಹುದು ಎಂಬ ಕಟು ಸತ್ಯ ನನಗೆ ತಿಳಿದಿದೆ. ಆದರೂ ನಾನು ತಾಯ್ನಾಡಿಗೆ…

Read More
Securing the Grid Karnatakas KPTCL goes high tech with Indias first Zero Trust cyber shield

KPTCL: ಸೈಬರ್ ದಾಳಿಗೆ ಬ್ರೇಕ್: ಅತ್ಯಾಧುನಿಕ ‘ಝೀರೋ ಟ್ರಸ್ಟ್’ ತಂತ್ರಜ್ಞಾನ ಅಳವಡಿಸಿಕೊಂಡ ದೇಶದ ಮೊದಲ ವಿದ್ಯುತ್ ನಿಗಮ ಎಂಬ ಕೀರ್ತಿಗೆ ಕೆಪಿಟಿಸಿಎಲ್ ಭಾಜನ!

ಬೆಂಗಳೂರು: ರಾಜ್ಯದ ವಿದ್ಯುತ್ ಪ್ರಸರಣ ಜಾಲದ ಡಿಜಿಟಲ್ ಭದ್ರತೆಗೆ ಕೋಟೆ ಕಟ್ಟಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಮುಂದಾಗಿದೆ. ಜಾಗತಿಕ ಮಟ್ಟದಲ್ಲಿ ಅತ್ಯಂತ ಸುರಕ್ಷಿತ ಎನಿಸಿಕೊಂಡಿರುವ ‘ಝೀರೋ ಟ್ರಸ್ಟ್ ಸೈಬರ್ ಸೆಕ್ಯುರಿಟಿ ಆರ್ಕಿಟೆಕ್ಚರ್’ ತಂತ್ರಜ್ಞಾನವನ್ನು ನಿಗಮವು ಯಶಸ್ವಿಯಾಗಿ ಅಳವಡಿಸಿಕೊಂಡಿದೆ. ಈ ಮೂಲಕ ಇಂತಹ ಹೈಟೆಕ್ ಸೈಬರ್ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತಂದ ದೇಶದ ಮೊಟ್ಟಮೊದಲ ಇಂಧನ ಪ್ರಸರಣ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಕೆಪಿಟಿಸಿಎಲ್ ತನ್ನದಾಗಿಸಿಕೊಂಡಿದೆ. ಡಿಜಿಟಲ್ ಜಾಲಕ್ಕೆ ಹೈಟೆಕ್ ರಕ್ಷಣೆ: ನಿಗಮದ ಇಂಜಿನಿಯರಿಂಗ್, ಕಾರ್ಯಾಚರಣೆ,…

Read More
Row over proposal to hold Kambala at Mysuru Dasara Prathap Simha backs MP Yaduveer opposition

Pratap Simha: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ: ಸಂಸದ ಯದುವೀರ್ ನಿಲುವಿಗೆ ಪ್ರತಾಪ್ ಸಿಂಹ ಬೆಂಬಲ!

ಮೈಸೂರು: ಕರಾವಳಿ ಭಾಗದ ಹೆಮ್ಮೆಯ ಸಾಂಸ್ಕೃತಿಕ ಹಾಗೂ ಜಾನಪದ ಕ್ರೀಡೆಯಾದ ಕಂಬಳ ಇದೀಗ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಆದರೆ, ಮುಂಬರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಸರ್ಕಾರದ ಪ್ರಸ್ತಾವನೆಗೆ ಮೈಸೂರು ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪರ-ವಿರೋಧದ ಚರ್ಚೆಗಳು ರಾಜಕೀಯ ತಿರುವು ಪಡೆದುಕೊಂಡಿವೆ. ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ದಸರಾ ಮಹೋತ್ಸವಕ್ಕೆ ಕಂಬಳದ ಅಗತ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ‘ದಸರಾ ಪರಂಪರೆಗೆ ಕಂಬಳ ತುರುಕುವುದು ಬೇಡ’: ಮೈಸೂರಿನಲ್ಲಿ…

Read More