TOP NEWS
Bhojshala Dispute SC Directs Madhya Pradesh Govt to Provide Alternative Open Space for Friday Prayers

Bhojshala: ಭೋಜ್‌ಶಾಲಾ ವಿವಾದ: ಶುಕ್ರವಾರದ ನಮಾಜ್‌ಗೆ ಪರ್ಯಾಯ ಜಾಗ ನೀಡಲು ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ!

ನವದೆಹಲಿ: ಭೋಜ್‌ಶಾಲಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Bhojshala) ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಧಾರ್ ಜಿಲ್ಲೆಯ ವಿವಾದಿತ ಭೋಜ್‌ಶಾಲಾ ಆವರಣದಲ್ಲಿ ಶುಕ್ರವಾರದ ನಮಾಜ್ ಸಲ್ಲಿಸಲು ಪರ್ಯಾಯವಾಗಿ ತೆರೆದ ಜಾಗವನ್ನು ಒದಗಿಸುವಂತೆ ಮಧ್ಯಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಎರಡೂ ಕಡೆಯ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು, ಮುಸ್ಲಿಂ ಸಮುದಾಯದ ಅರ್ಜಿದಾರರಿಗೆ ಮಧ್ಯಾಹ್ನ 1:00 ರಿಂದ 3:00 ರವರೆಗೆ ನಮಾಜ್ ಮಾಡಲು ಮುಕ್ತ ಸ್ಥಳಾವಕಾಶ ಕಲ್ಪಿಸಬೇಕು ಮತ್ತು ಇದಕ್ಕೆ ಅಗತ್ಯವಿರುವ ವ್ಯವಸ್ಥೆ ಹಾಗೂ ನಿರ್ವಹಣೆಯನ್ನು ಸರ್ಕಾರವೇ…

Read More
Shocking News for Shoppers No More Big Discounts and Cashback Offers Ahead

Shocking News: ಶಾಪಿಂಗ್ ಪ್ರಿಯರಿಗೆ ಶಾಕ್: ಇನ್ಮುಂದೆ ಸಿಗಲ್ಲ ಭರ್ಜರಿ ಡಿಸ್ಕೌಂಟ್, ಕ್ಯಾಶ್‌ಬ್ಯಾಕ್ ಆಫರ್‌ಗಳು!

ಬೆಂಗಳೂರು: ನೀವು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಡಿಸ್ಕೌಂಟ್‌ಗಳು ಮತ್ತು ಕ್ಯಾಶ್‌ಬ್ಯಾಕ್‌ ಆಫರ್‌ಗಳನ್ನು ನೋಡಿ ಶಾಪಿಂಗ್ ಮಾಡುವ ಅಭ್ಯಾಸ ಉಳ್ಳವರಾಗಿದ್ದರೆ ನಿಮಗೊಂದು (Shocking News) ನಿರಾಸೆಯ ಸುದ್ದಿಯಿದೆ. ಮುಂದಿನ ದಿನಗಳಲ್ಲಿ ವಿವಿಧ ಉತ್ಪನ್ನಗಳ ಮೇಲಿನ ರಿಯಾಯಿತಿಗಳು, ಬ್ಯಾಂಕ್ ಕಾರ್ಡ್ ಆಫರ್‌ಗಳು ಹಾಗೂ ಪ್ರಚಾರದ ಕೊಡುಗೆಗಳು ಗಣನೀಯವಾಗಿ ಕಡಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಜಾಗತಿಕ ಮಟ್ಟದ ಯುದ್ಧಗಳು ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಕಂಪನಿಗಳು ಹಂತಹಂತವಾಗಿ ರಿಯಾಯಿತಿಗಳನ್ನು ಕಡಿತಗೊಳಿಸಲು ಮುಂದಾಗಿವೆ. ಡಿಸ್ಕೌಂಟ್‌ಗಳ ಜಮಾನ ಮುಗಿಯುತ್ತಿದೆಯೇ? ಹಬ್ಬದ…

Read More
Sandalwood Ajaneesh Lokanath Drops Mega Update on Rakshit Shettys Richard Antony Fans Rejoice

Sandalwood: ‘ನ್ಯೂಕ್ಲಿಯರ್ ಬಾಂಬ್’‌ನಂತೆ ಬರಲಿದ್ದಾನೆ ರಿಚ್ಚಿ: ರಿಚರ್ಡ್ ಆ್ಯಂಟನಿ ಬಗ್ಗೆ ಅಜನೀಶ್ ಬಿಗ್ ಅಪ್‌ಡೇಟ್

ಬೆಂಗಳೂರು: ಸ್ಯಾಂಡಲ್‌ವುಡ್‌ನ'(Sandalwood) ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿರುವ ಬಹುನಿರೀಕ್ಷಿತ ‘ರಿಚರ್ಡ್ ಆ್ಯಂಟನಿ’ ಚಿತ್ರದ ಕುರಿತು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಒಂದು ಬೊಂಬಾಟ್ ಸುದ್ದಿ! ಚಿತ್ರ ಘೋಷಣೆಯಾಗಿ ವರ್ಷಗಳು ಕಳೆದರೂ ಯಾವುದೇ ಹೊಸ ಅಪ್‌ಡೇಟ್ ಇಲ್ಲದೆ ನಿರಾಸೆಯಲ್ಲಿದ್ದ ಸಿನಿ ರಸಿಕರಿಗೆ, ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಭರವಸೆಯ ಮಾತುಗಳನ್ನಾಡಿದ್ದಾರೆ. ಶೂಟಿಂಗ್‌ ಶುರುವಾಗುವುದಷ್ಟೇ ಬಾಕಿ! ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ವೇದಿಕೆ ಮೇಲೆ ಮಾತನಾಡಿದ ಅಜನೀಶ್ ಅವರಿಗೆ…

Read More
One Year of Sigandur Bridge Locals Celebrate First Anniversary With Crackers and Sweets

Sigandur Bridge: ಸಿಗಂದೂರು ಸೇತುವೆಗೆ ಒಂದು ವರ್ಷ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಜನ

ಶಿವಮೊಗ್ಗ: ಹಲವು ವರ್ಷಗಳ ಸುದೀರ್ಘ ಹೋರಾಟ ಹಾಗೂ ನಿರಂತರ ನಿರೀಕ್ಷೆಯ ನಂತರ ಬಹುನಿರೀಕ್ಷಿತ ಸಿಗಂದೂರು ಸೇತುವೆ ನಿರ್ಮಾಣವಾಗಿ ನಿನ್ನೆಗೆ ಒಂದು ವರ್ಷವಾಗಿದೆ.ಅನೇಕ ವರ್ಷಗಳ ಕಾಲ ಸಾಗರ ಪಟ್ಟಣದೊಂದಿಗೆ ಸಂಪರ್ಕ ಕಳೆದುಕೊಂಡು ದಶಕಗಳ ಕಾಲ ದ್ವೀಪದಲ್ಲೇ ಪ್ರತ್ಯೇಕವಾಗಿದ್ದ ಜನರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವ ಐತಿಹಾಸಿಕ ‘ಸಿಗಂದೂರು ಸೇತುವೆ’ (Sigandur Bridge) ವರ್ಷದ ಸಡಗರವನ್ನ ಗ್ರಾಮಸ್ಥರು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಪಟಾಕಿ ಸಿಡಿಸಿ-ಸಿಹಿ ಹಂಚಿ ಸಂಭ್ರಮಾಚರಣೆ ಈ ವಿಶೇಷ ದಿನದ ನೆನಪಿಗಾಗಿ ಕರೂರು ಹೋಬಳಿಯ ತುಮರಿ ಸಮೀಪದ ಗ್ರಾಮಸ್ಥರು…

Read More
Fact vs Friction Why YouTuber Sourav Joshis Blame on E20 Fuel for SUVs Mileage Drop is Flawed

E20: ಇ20 ಪೆಟ್ರೋಲ್‌ನಿಂದ ಮೈಲೇಜ್‌ ಉಲ್ಟಾ ಆಯ್ತಾ?: ಯೂಟ್ಯೂಬರ್ ಸೌರವ್ ಜೋಶಿ ಆರೋಪಕ್ಕೆ ಮರ್ಸಿಡಿಸ್ ಬೆಂಜ್ ಕಂಪನಿ ತಿರುಗೇಟು

ಮುಂಬೈ: ಭಾರತದ ಜನಪ್ರಿಯ ಲೈಫ್‌ಸ್ಟೈಲ್ ವ್ಲಾಗರ್ ಸೌರವ್ ಜೋಶಿ ಇತ್ತೀಚೆಗೆ ತಮ್ಮ ವೀಡಿಯೊ ಒಂದರಲ್ಲಿ ಮಾಡಿದ ಗಂಭೀರ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಐಷಾರಾಮಿ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ (Mercedes-Benz GLC) ಎಸ್‌ಯುವಿ ಕಾರಿನ ಮೈಲೇಜ್ ಹಠಾತ್ತನೆ 16-17 ಕಿಲೋಮೀಟರ್‌ನಿಂದ ಕೇವಲ 5 ಕಿಲೋಮೀಟರ್‌ಗೆ ಕುಸಿದಿದೆ ಎಂದು ಅವರು ಹೇಳಿಕೊಂಡಿದ್ದರು. ಇದಕ್ಕೆ ಸರ್ಕಾರ ಕಡ್ಡಾಯಗೊಳಿಸಿರುವ ಶೇ. 20ರಷ್ಟು ಎಥನಾಲ್ ಮಿಶ್ರಿತ ಇ20 (E20) ಪೆಟ್ರೋಲ್ ಕಾರಣ ಎಂದು ಅವರು ನೇರವಾಗಿ ಬೆರಳು ತೋರಿಸಿದ್ದರು….

Read More
1 year to sigandur bridge inauguration people celebrating today

Sigandur Bridge: ಸಿಗಂದೂರು ಸೇತುವೆ ಲೋಕಾರ್ಪಣೆಗೆ ಒಂದು ವರ್ಷ: ಇಂದು ಸಂಜೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಸಿಗಂದೂರು: ಹಲವು ವರ್ಷಗಳ ಸುದೀರ್ಘ ಹೋರಾಟ ಹಾಗೂ ನಿರಂತರ ನಿರೀಕ್ಷೆಯ ನಂತರ ಬಹುನಿರೀಕ್ಷಿತ ಸಿಗಂದೂರು ಸೇತುವೆ (Sigandur Bridge) ಲೋಕಾರ್ಪಣೆಯಾಗಿ ಸುಮಾರು ಒಂದು ವರ್ಷ ಆಗಿದೆ, ಈ ಐತಿಹಾಸಿಕ ಕ್ಷಣವನ್ನು ಹಬ್ಬದಂತೆ ಆಚರಿಸಲು ಸಾರ್ವಜನಿಕರು ಸನ್ನದ್ಧರಾಗಿದ್ದಾರೆ. ಸೇತುವೆ ನಿರ್ಮಾಣಕ್ಕಾಗಿ ನಡೆಸಿದ ಅವಿರತ ಹೋರಾಟದ ಸವಿನೆನಪಿಗಾಗಿ ಇಂದು ಸಂಜೆ ವಿಶೇಷ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಇಂದು, ಅಂದರೆ ಜುಲೈ 13ರ ಸೋಮವಾರ ಸಂಜೆ 7:30ಕ್ಕೆ ಸರಿಯಾಗಿ ಸೇತುವೆಯ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಭಾಗದ ಸಾರ್ವಜನಿಕರೆಲ್ಲರೂ…

Read More
BJP Wont Survive in Karnataka Without a November Revolution MLA Yatnals Direct Warning to Leadership

Yatnal: ರಾಜ್ಯ ಬಿಜೆಪಿಯಲ್ಲಿ ಮುಗಿಯದ ಅಸಮಾಧಾನ: “ನವೆಂಬರ್ ಕ್ರಾಂತಿ ಆಗದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯಲ್ಲ” ಎಂದು ಯತ್ನಾಳ್ ಗಂಭೀರ ಎಚ್ಚರಿಕೆ!

ವಿಜಯಪುರ: ರಾಜ್ಯ ಬಿಜೆಪಿಯ ಒಳಗಿನ ಭಿನ್ನಮತ ಮತ್ತೊಮ್ಮೆ ಸ್ಪೋಟಗೊಂಡಿದ್ದು, ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಹುಚರ್ಚಿತ ‘ನವೆಂಬರ್ ಕ್ರಾಂತಿ’ ವಿಚಾರವಾಗಿ ವಿಜಯಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಿಜೆಪಿ ಸಾಗಿದರೆ ಪಕ್ಷ ಮುಗಿದು ಹೋಗುತ್ತದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ರಾಜ್ಯಾಧ್ಯಕ್ಷರ ಬದಲಾವಣೆಯಾಗದಿದ್ದರೆ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ…

Read More