Independence Day: ಶರಾವತಿ ಸಂತ್ರಸ್ತರ ಶಾಪ ವಿಮೋಚನಾ ಸೇತುವೆ ಮೇಲೆ 80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 14ರ ಮಧ್ಯರಾತ್ರಿ ಧ್ವಜಾರೋಹಣ
ತುಮರಿ: ಸ್ವತಂತ್ರ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಶುಭ ಸಂದರ್ಭದಲ್ಲಿ, ಶರಾವತಿ ಹಿನ್ನೀರು ಸಂತ್ರಸ್ತರ ದಶಕಗಳ ಕಾಯುವಿಕೆಗೆ ಸಾಕ್ಷಿಯಾಗಿರುವ ಹೊಳೆಬಾಗಿಲು ಸೇತುವೆಯ ಮೇಲೆ ವಿನೂತನ ಮಾದರಿಯ ಸಂಭ್ರಮಾಚರಣೆ ಆಯೋಜಿಸಲಾಗಿದೆ. ಆಗಸ್ಟ್ 14ರ ಮಧ್ಯರಾತ್ರಿ 12:00 ಗಂಟೆಗೆ ಕಾರ್ಯಕ್ರಮ ಆಗಸ್ಟ್ 14ರ ಮಧ್ಯರಾತ್ರಿ 12:00 ಗಂಟೆಗೆ ಶ್ರೀ ಗಣೇಶೋತ್ಸವ ಸಮಿತಿ, ತುಮರಿ ಇವರ ನೇತೃತ್ವದಲ್ಲಿ ಹೊಳೆಬಾಗಿಲು ಸೇತುವೆಯ ಮೇಲೆ ಸಾರ್ವಜನಿಕರು ಹಾಗೂ ಶರಾವತಿ ಸಂತ್ರಸ್ತರು ಒಂದಾಗಿ ಸೇರಿ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ…
