CRIME: ಸೀರೆ ತರಲಿಲ್ಲವೆಂದು ಪತಿಗೇ ಬಿತ್ತು ಧರ್ಮದೇಟು: ಕುಕ್ಕರ್ ಮುಚ್ಚಳದಿಂದ ಜಜ್ಜಿ, ಕತ್ತು ಹಿಸುಕಿ ಕೊಂದ ಪಾಪಿ ಪತ್ನಿ!
ಮುಂಬೈ: ಸೀರೆ ತಂದುಕೊಡಲಿಲ್ಲ ಎಂಬ (Crime) ಸಣ್ಣ ಕಾರಣಕ್ಕೆ ಶುರುವಾದ ಕೌಟುಂಬಿಕ ಕಲಹವೊಂದು ಪತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಬದ್ಲಾಪುರದಲ್ಲಿ ನಡೆದಿದೆ. ಸೀರೆ ತರದ್ದಕ್ಕೆ ಗರಂ ಆದ ಪತ್ನಿಯು ಪ್ರೆಶರ್ ಕುಕ್ಕರ್ ಮುಚ್ಚಳದಿಂದ ಪತಿಗೆ ಮನಬಂದಂತೆ ಥಳಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಸಂಬಂಧ 30 ವರ್ಷದ ಸುನೀತಾದೇವಿ ಹರೇರಾಮ್ ಸಿಂಗ್ ಎಂಬಾಕೆಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಮಹಿಳೆ ಮೂಲತಃ ಬಿಹಾರದ ರೋಹ್ಟಾಸ್ ಜಿಲ್ಲೆಯವಳಾಗಿದ್ದು, ಬದ್ಲಾಪುರ ಪೂರ್ವದಲ್ಲಿ ಪತಿಯೊಂದಿಗೆ ವಾಸವಾಗಿದ್ದಳು….
