TOP NEWS

Sandeep

kcet exam scam kea gives clarification

KEA: ಕೃಷಿ ವಿಜ್ಞಾನ ಪರೀಕ್ಷಾ ಅಕ್ರಮದ ಸುದ್ದಿ ನಕಲಿ: ಕೆಇಎ ಅಧಿಕೃತ ಸ್ಪಷ್ಟನೆ

ಬೆಂಗಳೂರು: ದೇಶಾದ್ಯಂತ ಸದ್ಯ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಕೃಷಿ ವಿಜ್ಞಾನ ಕೋರ್ಸ್‌ಗಳ ಪ್ರಾಯೋಗಿಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ಸುದ್ದಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ. ವೈರಲ್ ಆಗಿರುವ ಸುದ್ದಿಯಲ್ಲೇನಿದೆ?: ಕೃಷಿ ವಿಜ್ಞಾನ ಕೋರ್ಸ್‌ಗಳ ಸೀಟು ಹಂಚಿಕೆಗಾಗಿ ಮೇ 10 ರಂದು ರಾಜ್ಯದ…

Read More
Dhurandhar 2 OTT release tops in pakistan

Dhurandhar: ನೆಟ್‌ಫ್ಲಿಕ್ಸ್ ಸರ್ವರ್ ಕ್ರಾಶ್ ಮಾಡಿದ ‘ಧುರಂಧರ್ 2’: ಪಾಕಿಸ್ತಾನದಲ್ಲೂ ನಂಬರ್ ಒನ್ ಟ್ರೆಂಡಿಂಗ್!

ನವದೆಹಲಿ: ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿರುವ ಮತ್ತು ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ಚಿತ್ರ ‘ಧುರಂಧರ್: ದಿ ರಿವೆಂಜ್’ (Dhurandhar) ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಂಟು ವಾರಗಳ ನಂತರ ಮೇ 14 ರಂದು ಜಾಗತಿಕವಾಗಿ ಒಟಿಟಿಯಲ್ಲಿ ತೆರೆಕಂಡಿದೆ. ವಿಶೇಷವೆಂದರೆ, ನೆರೆರಾಷ್ಟ್ರ ಪಾಕಿಸ್ತಾನದ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಸಿನಿಮಾ ಅಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಚಿತ್ರವನ್ನು ನೋಡಲು ಅಲ್ಲಿನ ಪ್ರೇಕ್ಷಕರು ಒಮ್ಮೆಗೆ ಮುಗಿಬಿದ್ದಿದ್ದರಿಂದ ಭಾರಿ ಟ್ರಾಫಿಕ್ ಉಂಟಾಗಿ ನೆಟ್‌ಫ್ಲಿಕ್ಸ್ ಸರ್ವರ್ ಕೆಲಕಾಲ ಸ್ಥಗಿತಗೊಂಡಿತ್ತು (ಕ್ರಾಶ್) ಎಂದು…

Read More
SP leader azam khan sentenced with 2 years jail and 5 thousand fine

Azam Khan: ಅಧಿಕಾರಿಗಳ ವಿರುದ್ಧ ನಿಂದನೆ: ಆಜಂ ಖಾನ್‌ಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದ ಕೋರ್ಟ್

ನವದೆಹಲಿ: ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಸಮಾಜವಾದಿ ಪಕ್ಷದ (SP) ಪ್ರಭಾವಿ ನಾಯಕ ಆಜಂ ಖಾನ್ (Azam Khan) ಅವರಿಗೆ ಕಾನೂನು ಸಂಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಕಳೆದ 2019ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪ ಸಾಬೀತಾಗಿದ್ದು, ವಿಶೇಷ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಏನಿದು ವಿವಾದಾತ್ಮಕ ಭಾಷಣ?: 2019ರಲ್ಲಿ ನಡೆದ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡಿದ್ದ ಆಜಂ ಖಾನ್,…

Read More
Kollywood Trisha krishnan blushes after fan asked question about cm vijay

Trisha: ದಳಪತಿ ಬಗ್ಗೆ ತ್ರಿಶಾಗೆ ಅಭಿಮಾನಿಗಳ ಪ್ರಶ್ನೆ, ನಾಚಿ ನೀರಾದ ನಟಿ

ಚೆನ್ನೈ: ಬಹುದಿನಗಳ ಕಾಯುವಿಕೆ ಮತ್ತು ಹಲವು ಹಣಕಾಸಿನ ಸಂಕಷ್ಟಗಳ ಬಳಿಕ ನಟ ಸೂರ್ಯ ಮತ್ತು ತ್ರಿಶಾ (Trisha) ಅಭಿನಯದ, ಆರ್.ಜೆ. ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ಕೊನೆಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನವನ್ನು (FDFS) ವೀಕ್ಷಿಸಲು ನಟಿ ತ್ರಿಶಾ ಕೃಷ್ಣನ್ ಅವರು ಚಿತ್ರಮಂದಿರಕ್ಕೆ ಆಗಮಿಸಿದ್ದರು. ಸಿನಿಮಾ ಮುಗಿಸಿ ಅವರು ಹೊರಡುವಾಗ ಚಿತ್ರಮಂದಿರದ ಹೊರಗೆ ನೆರೆದಿದ್ದ ಅಭಿಮಾನಿಗಳು ತಮಿಳುನಾಡು ಸಿಎಂ ವಿಜಯ್ ಅವರ ಹೆಸರನ್ನು ಎತ್ತಿ ತ್ರಿಶಾ ಅವರ ಕಾಲೆಳೆದಿರುವ ವಿಡಿಯೋಗಳು ಈಗ…

Read More
Dcm dk shivakumar and cm siddaramaiah to visit delhi cm change row

CM Change: ರಾಜಕೀಯ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಅಂಗಳಕ್ಕೆ ಸಿದ್ದರಾಮಯ್ಯ-ಡಿಕೆಶಿ ಜೋಡಿ: ಮೇ ಅಂತ್ಯಕ್ಕೆ ದೆಹಲಿ ಪ್ರವಾಸ

ಬೆಂಗಳೂರು: ಮೇ 20ಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಮೂರು ವರ್ಷಗಳ ಆಡಳಿತವನ್ನು ಪೂರೈಸುತ್ತಿದ್ದು, ಇದೇ ಹೊತ್ತಿನಲ್ಲಿ ಸಂಪುಟ ಪುನರಚನೆ ಹಾಗೂ ಮುಖಂಡತ್ವದ (CM Change) ಬದಲಾವಣೆಯ ಕಸರತ್ತುಗಳು ವೇಗ ಪಡೆದುಕೊಂಡಿವೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಹೈಕಮಾಂಡ್ ಮಟ್ಟದಲ್ಲಿ ತಾರ್ಕಿಕ ಅಂತ್ಯ ಹಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇ ತಿಂಗಳ ಕೊನೆಯ ವಾರದಲ್ಲಿ ದೆಹಲಿಗೆ ತೆರಳಲಿದ್ದಾರೆ. ಡಿಕೆಶಿ ಬಣದ ಒತ್ತಡ ಮತ್ತು ದೆಹಲಿ ನಾಯಕರ ಭೇಟಿ: ಇತ್ತೀಚೆಗಷ್ಟೇ ಉಪಮುಖ್ಯಮಂತ್ರಿ ಡಿ.ಕೆ….

Read More
There is no change in cm Siddaramaiah post basaraja rayareddy confirms

Congress: “2028ರ ತನಕ ಸಿದ್ದರಾಮಯ್ಯ ಅವರೇ ಸಿಎಂ”: ನಾಯಕತ್ವ ಬದಲಾವಣೆ ಚರ್ಚೆಗೆ ಬಸವರಾಜ ರಾಯರೆಡ್ಡಿ ಬ್ರೇಕ್!

ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗೊಂದಲಗಳಿಗೆ ಶಾಸಕ ಬಸವರಾಜ ರಾಯರೆಡ್ಡಿ ತೆರೆ ಎಳೆದಿದ್ದಾರೆ. ಪ್ರಸ್ತುತ ಅವಧಿ ಮುಗಿಯುವವರೆಗೂ, ಅಂದರೆ 2028ರ ತನಕ ಸಿದ್ದರಾಮಯ್ಯ (Congress) ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಎಲ್‌ಪಿ ಸಭೆ ನಡೆದಿಲ್ಲ: ಕೊಪ್ಪಳದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಯರೆಡ್ಡಿ, ಮುಂಬರುವ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಆಡಳಿತ ನಡೆಯಲಿದೆ. ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆಯ ನಿರ್ಧಾರ ಕೈಗೊಳ್ಳಬೇಕಿದ್ದರೆ, ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ…

Read More
Congress angry about modi silence on ram mandir issue

Narendra Modi: ತೈಲ ಬಿಕ್ಕಟ್ಟಿಗೆ ದೇಶಾದ್ಯಂತ ಮಿತವ್ಯಯದ ಬ್ರೇಕ್: ಕೇಂದ್ರ ಮತ್ತು ವಿವಿಧ ರಾಜ್ಯಗಳ ಮಹತ್ವದ ಕ್ರಮಗಳು

ನವದೆಹಲಿ: ಮಧ್ಯಪ್ರಾಚ್ಯದ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ತೈಲ ಬಿಕ್ಕಟ್ಟನ್ನು ಎದುರಿಸಲು ಮತ್ತು ವಿದೇಶಿ ವಿನಿಮಯ ಮೀಸಲನ್ನು ಕಾಯ್ದುಕೊಳ್ಳಲು ಕೇಂದ್ರ ಹಾಗೂ ದೇಶದ ವಿವಿಧ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಮಿತವ್ಯಯ ಕ್ರಮಗಳಿಗೆ ಮುಂದಾಗಿವೆ. ಪ್ರಧಾನಿ ಮೋದಿಯವರ (Narendra Modi) ಸಲಹೆಯ ಮೇರೆಗೆ ಆಡಳಿತ ವ್ಯವಸ್ಥೆಯಲ್ಲಿ ಇಂಧನ ವ್ಯಯವಾಗುವುದನ್ನು ತಡೆಯಲು ಭಾರಿ ಬದಲಾವಣೆಗಳನ್ನು ತರಲಾಗುತ್ತಿದೆ. ಮಾದರಿಯಾದ ಕೇಂದ್ರ ಸರ್ಕಾರ: ಮಿತವ್ಯಯದ ಹಾದಿಯಲ್ಲಿ ಕೇಂದ್ರ ಸರ್ಕಾರವೇ ಮೊದಲ ಹೆಜ್ಜೆ ಇಟ್ಟಿದ್ದು, ಪ್ರಧಾನಮಂತ್ರಿಯವರ ಅಧಿಕೃತ ಎಸ್‌ಪಿಜಿ (SPG) ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇಕಡಾ…

Read More