TOP NEWS
Big news Shocker in Tumakuru Thousands of Govt Diabetes Pills Found Abandoned in Burial Ground Long Before Expiry Date

Big News: ಬಯಲಾದ ಆರೋಗ್ಯ ಇಲಾಖೆಯ ಮಹಾ ಬೇಜವಾಬ್ದಾರಿತನ; ಗೋಮಾಳದಲ್ಲಿ ಪತ್ತೆಯಾದ ಸರ್ಕಾರಿ ಔಷಧಿಗಳು!

ತುಮಕೂರು: ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಉಚಿತವಾಗಿ ಸಿಗಬೇಕಿದ್ದ ಸರ್ಕಾರಿ ಆಸ್ಪತ್ರೆಯ ಬೆಲೆಬಾಳುವ ಮಾತ್ರೆಗಳನ್ನು ಜನರಿಲ್ಲದ ಸ್ಮಶಾನ ಹಾಗೂ ಜಾನುವಾರುಗಳ ಹುಲ್ಲುಗಾವಲಿನಲ್ಲಿ (Big News) ಬೇಜವಾಬ್ದಾರಿತನದಿಂದ ಎಸೆದು ಹೋಗಿರುವ ಗಂಭೀರ ಪ್ರಕರಣ ಕೊರಟಗೆರೆ ತಾಲೂಕಿನ ಕಾಮೇನಹಳ್ಳಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ. ಸುಸ್ಥಿತಿಯಲ್ಲಿದ್ದ ಸಾವಿರಾರು ಔಷಧಿಗಳನ್ನು ಸದ್ದಿಲ್ಲದೆ ಅನಾಥ ಜಾಗದಲ್ಲಿ ಎಸೆದಿರುವ ಅಧಿಕಾರಿಗಳ ನಡೆಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆತಂಕಕಾರಿ ಘಟನೆ ನಡೆದ ಸ್ಥಳದ ಸಮೀಪದಲ್ಲೇ ಗ್ರಾಮದ ಮುಖ್ಯ ಕೆರೆಯಿದ್ದು, ಮುಂಬರುವ ಮಳೆಗಾಲದಲ್ಲಿ…

Read More
Massive ACB Raid in Hyderabad Over 1 Kg Gold 4 Luxury Cars Seized Chief Engineer Ravinder Arrested in DA Case

ACB: ಅಕ್ರಮ ಆಸ್ತಿ ಗಳಿಕೆ ಆರೋಪ: ಎಂಜಿನಿಯರ್ ಮನೆಯಲ್ಲಿ ಚಿನ್ನದ ಬೇಟೆ, 4 ಐಷಾರಾಮಿ ಕಾರುಗಳು ಜಪ್ತಿ

ಹೈದರಾಬಾದ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಗಂಭೀರ ಆರೋಪದ ಮೇಲೆ ಹೈದರಾಬಾದ್ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿಯ (HMDA) ಮುಖ್ಯ ಇಂಜಿನಿಯರ್ ಬಿ. ರವೀಂದರ್ ಅವರನ್ನು ತೆಲಂಗಾಣ ಭ್ರಷ್ಟಾಚಾರ ನಿರೋಧಕ ದಳದ (ACB) ಅಧಿಕಾರಿಗಳು ಬಂಧಿಸಿದ್ದಾರೆ. ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ರವೀಂದರ್ ಅವರ ಮನೆ, ಕಚೇರಿ ಸೇರಿದಂತೆ ಅವರ ಆಪ್ತರು, ಬಂಧುಗಳು ಹಾಗೂ ಬೇನಾಮಿ ಆಸ್ತಿ ಹೊಂದಿರುವ ಶಂಕಿತರ ಒಟ್ಟು 11 ನೆಲೆಗಳ ಮೇಲೆ ಏಕಕಾಲಕ್ಕೆ ಭರ್ಜರಿ ಜಂಟಿ ದಾಳಿ ಸಂಘಟಿಸಿ ಸಾರಾಸಗಟು ಶೋಧ ನಡೆಸಿದ್ದಾರೆ….

Read More
IRCTC Update New Rail Ticket Booking Website Goes Live with Smarter Features for Travelers

IRCTC: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಲೋಕಾರ್ಪಣೆಗೊಂಡ ಹೊಸ ವೆಬ್‌ಸೈಟ್

ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಲು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ತನ್ನ ಅಧಿಕೃತ ವೆಬ್‌ಸೈಟ್ ಅನ್ನು ಸಂಪೂರ್ಣವಾಗಿ ನವೀಕರಿಸಿದ್ದು, ಈ ಹೊಚ್ಚಹೊಸ ಪ್ಲಾಟ್‌ಫಾರ್ಮ್ ಇಂದಿನಿಂದಲೇ (ಜುಲೈ 15) ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ತತ್ಕಾಲ್ ಬುಕಿಂಗ್ ಅವಧಿಯಲ್ಲಿ ವೆಬ್‌ಸೈಟ್ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವುದು ಹಾಗೂ ಹಣ ಪಾವತಿ ವಿಫಲವಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ನಿರಂತರವಾಗಿ ದೂರುಗಳು ಕೇಳಿಬರುತ್ತಿದ್ದವು. ಈ ಎಲ್ಲಾ ತಾಂತ್ರಿಕ ದೋಷಗಳಿಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ…

Read More
108 Ambulance Delay to Cost 5000 Fine If It Fails to Arrive in 15 Mins UT Khader Warns Agencies

UT Khader: 15 ನಿಮಿಷಗಳಲ್ಲಿ 108 ಆ್ಯಂಬುಲೆನ್ಸ್ ಬರದಿದ್ದರೆ ₹5,000 ಭಾರಿ ದಂಡ: ರಾಜ್ಯ ಸರ್ಕಾರದ ಬಿಗ್ ನಿರ್ಧಾರ

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ 108 ಆ್ಯಂಬುಲೆನ್ಸ್ ಸೇವೆಯ ದಕ್ಷತೆಯನ್ನು ಹೆಚ್ಚಿಸಲು ಕರ್ನಾಟಕ ಆರೋಗ್ಯ ಇಲಾಖೆಯು ದೇಶದಲ್ಲೇ ಮಾದರಿಯಾಗಬಲ್ಲ ಅತ್ಯಂತ ಕಟ್ಟುನಿಟ್ಟಾದ ನಿಯಮವೊಂದನ್ನು ಜಾರಿಗೆ ತರುತ್ತಿದೆ. ಇನ್ಮುಂದೆ ಕರೆ ಬಂದ ಕೇವಲ 15 ನಿಮಿಷಗಳ ಅವಧಿಯೊಳಗೆ ಆ್ಯಂಬುಲೆನ್ಸ್ ರೋಗಿ ಇರುವ ಜಾಗಕ್ಕೆ ತಲುಪದೇ ಹೋದರೆ, ಅದಕ್ಕೆ ಕಾರಣರಾದ ಚಾಲಕರು ಅಥವಾ ಸಂಬಂಧಿತ ಸೇವಾ ಸಂಸ್ಥೆಗೆ 5,000 ರೂಪಾಯಿ ಭಾರಿ ದಂಡ ವಿಧಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಆರೋಗ್ಯ ಸಚಿವ ಯು.ಟಿ….

Read More
Permanent Relief from Garbage Menace in Bengaluru Minister Gives Green Signal for Cleanliness Drive GBA

GBA: ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಶಾಶ್ವತ ಮುಕ್ತಿ: ಸ್ವಚ್ಛತಾ ಆಂದೋಲನಕ್ಕೆ ಸಚಿವರ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜಧಾನಿಯ ಅಂದವನ್ನು ಕೆಡಿಸುತ್ತಿರುವ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಜಂಟಿಯಾಗಿ ಮಹತ್ವದ ಮಾಸ್ಟರ್ ಪ್ಲಾನ್ ರೂಪಿಸಿವೆ. ಮುಂಬರುವ ಆಗಸ್ಟ್ ತಿಂಗಳಿನಿಂದ ನಗರದಾದ್ಯಂತ ಅತ್ಯಂತ ವಿಸ್ತಾರವಾದ “ಕಸಮುಕ್ತ ಬೆಂಗಳೂರು” ಮಹಾ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನೇರ ಉಸ್ತುವಾರಿಯಲ್ಲಿ ಈ ಸ್ವಚ್ಛತಾ ಆಂದೋಲನ ನಡೆಯಲಿದ್ದು, ಬಿಬಿಎಂಪಿ ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳು ರಾಜಧಾನಿಯನ್ನು ಹಸಿರು ನಗರಿಯನ್ನಾಗಿ ಮಾಡಲು…

Read More
Breaking Caught on Camera CCTV Video of Alleged Cash Theft at Ambaji Temple Donation Room Sparks Outrage

Breaking: ದೇವಸ್ಥಾನದ ಕಾಣಿಕೆ ಬಾಕ್ಸ್‌ನಿಂದ ₹1 ಲಕ್ಷ ಎಗರಿಸಲು ಯತ್ನಿಸಿದ ಸಿಬ್ಬಂದಿ: ಮೂವರ ಬಂಧನ, ವಿಡಿಯೋ ವೈರಲ್

ಗಾಂಧಿನಗರ: ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಉತ್ತರಾಖಂಡದ ಬದರಿನಾಥ ದೇವಸ್ಥಾನಗಳಲ್ಲಿ ಭಕ್ತರ ಕಾಣಿಕೆ ದುರುಪಯೋಗದ ಆರೋಪಗಳ ಬೆನ್ನಲ್ಲೇ, ಈಗ ಗುಜರಾತ್‌ನ ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲೂ ಇಂತಹದ್ದೇ ಒಂದು ಕಳ್ಳತನದ ಪ್ರಕರಣ (Breaking) ಬೆಳಕಿಗೆ ಬಂದಿದೆ. ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಿಂದ ಹಣ ಕಳ್ಳತನ ಮಾಡುತ್ತಿರುವ ಹಳೆಯ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವುದು ಭಕ್ತರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಏನಿದೆ ವೈರಲ್‌ ವಿಡಿಯೋದಲ್ಲಿ? ವೈರಲ್ ಆಗಿರುವ ವಿಡಿಯೋ ಪ್ರಕಾರ, ದೇವಸ್ಥಾನದ ಕಾಣಿಕೆ ಹಣ ಎಣಿಕೆ ಮಾಡುವ ಕೊಠಡಿಯಿಂದ…

Read More
Tollywood jr NTR team gives clarification about political entry

Jr NTR: ಅಭಿಮಾನಿಗಳ ನಡೆಗೆ ಜೂನಿಯರ್ ಎನ್‌ಟಿಆರ್ ಕಚೇರಿ ಸ್ಪಷ್ಟನೆ; ರಾಜಕೀಯ ಎಂಟ್ರಿ ಊಹಾಪೋಹಗಳಿಗೆ ತೆರೆ

ಹೈದರಾಬಾದ್: ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಅವರ ಕುಟುಂಬಕ್ಕೆ ಆಂಧ್ರಪ್ರದೇಶದ ರಾಜಕೀಯದೊಂದಿಗೆ ದಶಕಗಳ ಅವಿನಾಭಾವ ಸಂಬಂಧವಿದೆ. ಹೀಗಾಗಿಯೇ ಅವರ ಅಭಿಮಾನಿಗಳು ಇತ್ತೀಚೆಗೆ ಘೋಷಿಸಿದ ಕಾರ್ಯಕ್ರಮವೊಂದು ನಟನ ರಾಜಕೀಯ ಪ್ರವೇಶದ ವದಂತಿಗಳಿಗೆ ಕಾರಣವಾಗಿತ್ತು. ಆದರೆ, ಈ ಕುರಿತು ಜೂನಿಯರ್ ಎನ್‌ಟಿಆರ್ (‌Jr NTR) ಅವರ ಕಚೇರಿ ಅಧಿಕೃತ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. ‘ರಾ ಎನ್‌ಟಿಆರ್’ (Raw NTR) ಎಂಬ ಸಂಘಟನೆಯು ಹಮ್ಮಿಕೊಂಡಿರುವ ‘ಊರು ವಾಡಾ’ (Ooru Vaada) ಎಂಬ ಮುಂಬರುವ ಕಾರ್ಯಕ್ರಮಕ್ಕೂ…

Read More