TOP NEWS
Fierce in Khaki Thalapathy Vijays Much Awaited Jana Nayagan Sets July Release

Jana Nayagan: ಖಾಕಿ ಉಡುಪಿನಲ್ಲಿ ದಳಪತಿ ವಿಜಯ್ ಖಡಕ್ ಲುಕ್: ಕೊನೆಗೂ ರಿಲೀಸ್ ಡೇಟ್ ಘೋಷಿಸಿದ ‘ಜನನಾಯಗನ್’!

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಹಾಗೂ ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಹಾಗೂ ಅವರ ನಟನೆಯ ಕೊನೆಯ ಚಿತ್ರ ‘ಜನನಾಯಗನ್’ (Jana Nayagan) ಜಾಗತಿಕವಾಗಿ ಬಿಡುಗಡೆಯಾಗುವ ದಿನಾಂಕ ಕೊನೆಗೂ ಅಧಿಕೃತಗೊಂಡಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಾವಾಗ ತೆರೆಕಾಣಬಹುದು ಎಂಬ ಹಲವು ವಾರಗಳ ಊಹಾಪೋಹಗಳಿಗೆ ಚಿತ್ರತಂಡ ಈಗ ತೆರೆ ಎಳೆದಿದೆ. ಜುಲೈ‌ 23ಕ್ಕೆ ಸಿನಿಮಾ ರಿಲೀಸ್ ಸ್ವತಃ ನಟ ಹಾಗೂ ರಾಜಕಾರಣಿಯಾಗಿರುವ ವಿಜಯ್ ಅವರು ಬುಧವಾರದಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ, ಚಿತ್ರವು ಜುಲೈ 23,…

Read More
You Are Being Sacrificed for Politics Protect Your Own Livelihood CM DK Shivakumar Appeal to Farmers

DK Shivakumar: ರೈತರಿಗೆ ಸಿಎಂ ವಿಶೇಷ ಮನವಿ, ರಾಜಕೀಯಕ್ಕೆ ಬಲಿ ಆಗಬೇಡಿ ಎಂದ ಡಿಕೆಶಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪ್ರತಿಭಟನಾ ನಿರತ ರೈತರಲ್ಲಿ ಮಹತ್ವದ ಮನವಿಯೊಂದನ್ನು ಮಾಡಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರು ತಮ್ಮ ಧರಣಿ ಹಾಗೂ ಹೋರಾಟಗಳನ್ನು ಕೈಬಿಟ್ಟು ಸ್ವಂತ ಬದುಕನ್ನು ರೂಪಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಕೋರಿದರು. ಕೆಲವು ರಾಜಕೀಯ ಹಿತಾಸಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ರೈತರನ್ನು ದಾಳವಾಗಿ ಬಳಸಿ ಬಲಿ ಕೊಡುತ್ತಿವೆ, ಹೀಗಾಗಿ ಅನ್ನದಾತರು ಯಾರದ್ದೋ ರಾಜಕೀಯಕ್ಕೆ ಬಲಿಯಾಗಬಾರದು ಎಂದು ಎಚ್ಚರಿಸಿದರು. ಬಿಡದಿ ಯೋಜನೆ ಕುರಿತು ಪರಿಶೀಲಿಸಲು…

Read More
Will Not Acquire Land from Farmers Forcibly CM DK Shivakumar

DK Shivakumar: ರೈತರಿಂದ ಬಲವಂತವಾಗಿ ಜಮೀನು ಪಡೆಯಲ್ಲ: ಸಿಎಂ

ಬೆಂಗಳೂರು: “ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸರ್ಕಾರವು ಯಾವುದೇ ರೈತರಿಂದ ಬಲವಂತವಾಗಿ ಜಮೀನು ಪಡೆಯುವುದಿಲ್ಲ. ಸ್ವಇಚ್ಛೆಯಿಂದ ಮುಂದೆ ಬಂದು ಭೂಮಿ ಕೊಟ್ಟವರಿಗೆ ಪರಿಹಾರ ನೀಡುತ್ತೇವೆ. ಈ ವಿಚಾರದಲ್ಲಿ ರೈತರ ಅಹವಾಲು, ಅಭಿಪ್ರಾಯ ಪಡೆಯಲು ಸಮಿತಿ ರಚಿಸಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಯಾವ ಪ್ರತಿಭಟನೆ ಅಗತ್ಯವಿಲ್ಲ, ನಿಮ್ಮ ಜಮೀನಿನಲ್ಲಿ ನೆಮ್ಮದಿಯಾಗಿರಿ “ಯಾರ ಆಸ್ತಿಯನ್ನು ನಾವು ಬಲವಂತವಾಗಿ ಪಡೆಯುವುದಿಲ್ಲ. ಜಮೀನು ನೀಡಲು ಇಷ್ಟವಿಲ್ಲದವರು ನೆಮ್ಮದಿಯಾಗಿ ತಮ್ಮ ಜಮೀನಿನಲ್ಲಿ ಇರಬಹುದು. ಯಾವ ಧರಣಿ, ಪ್ರತಿಭಟನೆ…

Read More
Cauvery river Row Karnataka Outrightly Rejects Tamil Nadu Demand at CWRC

Cauvery River: ಕಾವೇರಿ ನಿಯಂತ್ರಣ ಸಮಿತಿ ಸಭೆಯಲ್ಲೂ ನೀರು ಬಿಡಲು ನಿರಾಕರಿಸಿದ ಕರ್ನಾಟಕ!

ದೆಹಲಿ: ನೈರುತ್ಯ ಮುಂಗಾರಿನ ತೀವ್ರ ಕೊರತೆಯಿಂದಾಗಿ ಕರ್ನಾಟಕದಲ್ಲಿ ಕಾವೇರಿ (Cauvery River) ಜಲಾನಯನ ಪ್ರದೇಶಗಳು ಭೀಕರ ನೀರಿನ ಕ್ಷಾಮವನ್ನು ಎದುರಿಸುತ್ತಿವೆ. ರಾಜ್ಯದ ಈ ಭೀಕರ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ತಕ್ಷಣವೇ ಕೇಂದ್ರದ ಅಧ್ಯಯನ ತಂಡವನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಈ ತೀವ್ರ ಬಿಕ್ಕಟ್ಟಿನ ನಡುವೆಯೇ, ದೆಹಲಿಯಲ್ಲಿಂದು ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯುಆರ್‌ಸಿ) ಅತ್ಯಂತ ನಿರ್ಣಾಯಕ ಸಭೆ ನಡೆದಿದ್ದು, ಕರ್ನಾಟಕದ ಅಧಿಕಾರಿಗಳು…

Read More
Why Attack Officials If There a Mistake Beat Me CM DK Shivakumar

DK Shivakumar: ಬಿಡದಿ ಯೋಜನೆ ಕುರಿತು ಸಿಎಂ ಡಿಕೆಶಿ ಸ್ಪಷ್ಟನೆ: ರೈತರಿಗೆ ಬಲವಂತವಿಲ್ಲ, ಯೋಜನೆಯ ಪರಿಶೀಲನೆಗೆ ಸಮಿತಿ ರಚನೆ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಮತ್ತು ಪ್ರತಿಭಟನೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀವ್ರ ಬೇಸರ ಮತ್ತು ಭಾವುಕತೆ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಹಮ್ಮಿಕೊಂಡಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿ ಅಧಿಕಾರಿಗಳಿಗೆ ತೊಂದರೆ ಕೊಟ್ಟಿರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದರು. ತಪ್ಪು ನಡೆದಿದ್ದರೆ ತಮಗೆ ಪೊರಕೆಯಿಂದ ಹೊಡೆಯಲಿ, ತಾವು ಅದಕ್ಕೆ ಸಿದ್ಧರಿದ್ದಾರೆ, ಆದರೆ ಕರ್ತವ್ಯ ನಿರತ ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು…

Read More
Jail Officials Suspended After Kalaburagi Escape Priyank kharge says

Priyank Kharge: ನಿಮ್ಮ ಕಾಲದಲ್ಲಿ ಜೈಲುಗಳೇ ಅತಿಥಿಗೃಹಗಳಾಗಿದ್ದವು: ಕಟು ಟೀಕೆಗಳಿಗೆ ಅಂಕಿ-ಅಂಶಗಳ ಸಮೇತ ತಿರುಗೇಟು ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಇಲ್ಲಿನ ಕೇಂದ್ರ ಜೈಲಿನ ಎತ್ತರದ ಆವರಣ ಗೋಡೆಯನ್ನು ಮಧ್ಯರಾತ್ರಿಯ ವೇಳೆಗೆ ಸಿನಿಮೀಯ ರೀತಿಯಲ್ಲಿ ಜಿಗಿದು ಕೈದಿಯೊಬ್ಬ ಪರಾರಿಯಾದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ (Priyank Kharge) ಅವರು ತಮ್ಮ ಮೊದಲ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ. ಕಾರಾಗೃಹದ ಬಿಗಿ ಭದ್ರತೆಯ ನಡುವೆಯೂ ನಡೆದಿರುವ ಈ ಭದ್ರತಾ ಲೋಪದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದ್ದಾರೆ. ಅಧಿಕಾರಿಗಳ ಅಮಾನತು…

Read More
Crime High Drama at Bengaluru Pub Excise Inspector Creates Ruckus

‌Crime: ಪಬ್ ಮಹಿಳಾ ಸಿಬ್ಬಂದಿ ಜೊತೆ ಅಬಕಾರಿ ಅಧಿಕಾರಿ ಕಿರಿಕ್!: ಮೊಬೈಲ್ ಕ್ಯಾಮೆರಾ ಆನ್ ಆಗ್ತಿದ್ದಂತೆ ಉಲ್ಟಾ ಹೊಡೆದ ಇನ್‌ಸ್ಪೆಕ್ಟರ್ ವಿಡಿಯೋ ವೈರಲ್

ಬೆಂಗಳೂರು: ಸಿಲಿಕಾನ್ ಸಿಟಿಯ ಪಬ್ ಒಂದರಲ್ಲಿ ಅಬಕಾರಿ ಇಲಾಖೆಯ ಇನ್‌ಸ್ಪೆಕ್ಟರ್ ಒಬ್ಬರು ಕುಡಿದ ಅಮಲಿನಲ್ಲಿ ರಾದ್ಧಾಂತ ಮಾಡಿರುವ ಆಘಾತಕಾರಿ ಘಟನೆ (Crime) ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರದ ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಸಾರ್ವಜನಿಕವಾಗಿ ಶಿಸ್ತು ಕಾಪಾಡಬೇಕಾದ ಅಧಿಕಾರಿಯೇ ಅಧಿಕೃತ ಐಡಿ ಕಾರ್ಡ್ ಧರಿಸಿಕೊಂಡು ಪಬ್‌ನಲ್ಲಿ ರಂಪಾಟ ನಡೆಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನ ಸಬ್ ಡಿವಿಷನ್ 11 ರಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಇನ್‌ಸ್ಪೆಕ್ಟರ್ ಮಲ್ಲಪ್ಪ ಎಸ್. ಕುಂದಗೋಳ ಎಂಬುವವರೇ ಈ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಏನಿದು…

Read More