TOP NEWS
Miracle in trimbakeshwar temple shiva linga found

Shiva: ತ್ರಯಂಬಕೇಶ್ವರದಲ್ಲಿ ಪವಾಡ: 65 ಅಡಿ ಆಳದಲ್ಲಿ ಪ್ರತ್ಯಕ್ಷವಾಯ್ತು ಪುರಾತನ ಶಿವಲಿಂಗ!

ಮಹಾರಾಷ್ಟ್ರ: ನಾಸಿಕ್‌ನಲ್ಲಿರುವ ಪ್ರಖ್ಯಾತ ತ್ರಯಂಬಕೇಶ್ವರ (Shiva)ಜ್ಯೋತಿರ್ಲಿಂಗ ದೇಗುಲದ ಆವರಣದಲ್ಲಿ ಭಕ್ತರ ಮೈಮನ ಪುಳಕಿತಗೊಳಿಸುವ ಅಪರೂಪದ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ‘ಅಮೃತಕುಂಡ’ದ ಆಳದಲ್ಲಿ ಅಡಗಿದ್ದ ಪುರಾತನ ಶಿವಲಿಂಗವು ಬಹು ವರ್ಷಗಳ ಬಳಿಕ ಕಣ್ಣಿಗೆ ಕಾಣಿಸಿದ್ದು, ಶಿವಭಕ್ತರಲ್ಲಿ ಸಡಗರ ಮೂಡಿಸಿದೆ. ದೇವಾಲಯದ ಸೌಂದರ್ಯೀಕರಣ ಮತ್ತು ದುರಸ್ತಿ ಕಾರ್ಯದ ಜವಾಬ್ದಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI), ಸುಮಾರು 65 ಅಡಿ ಆಳದ ಈ ಕಲ್ಯಾಣಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ…

Read More
How ketan Sister Suspicion Helped Unravel Murder Plot

Ketan Agarwal: ಪುಣೆ ಲೋಹಗಢ ಕೋಟೆ ಚಾರಣ ದುರಂತಕ್ಕೆ ಟ್ವಿಸ್ಟ್: ಉದ್ಯಮಿ ಕೇತನ್ ಸಾವು ಅಪಘಾತವಲ್ಲ

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕಣಿವೆಗೆ ಬಿದ್ದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಈಗ ಭೀಕರ ತಿರುವು ಸಿಕ್ಕಿದೆ. ಆರಂಭದಲ್ಲಿ ಕೇವಲ ಆಕಸ್ಮಿಕ ಅಪಘಾತ ಎಂದು ಭಾವಿಸಲಾಗಿದ್ದ ಈ ಘಟನೆ, ವಾಸ್ತವವಾಗಿ ಕೇತನ್ ಭಾವಿ ಪತ್ನಿ (ಫಿಯಾನ್ಸೆ) ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಸೇರಿ ನಡೆಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಮೃತನ ಸಹೋದರಿ ವ್ಯಕ್ತಪಡಿಸಿದ ಒಂದೇ ಒಂದು ಬಲವಾದ…

Read More
tragedy temple pillar collapses 5 lost life 18 injured

Tragedy: ಮಹಾರಾಷ್ಟ್ರದಲ್ಲಿ ಕರುಣಾಜನಕ ಘಟನೆ: ಪ್ರಾರ್ಥನೆಯಲ್ಲಿದ್ದ ಭಕ್ತರ ಮೇಲೆ ಬಿದ್ದ ದೇವಸ್ಥಾನದ ಗೋಪುರ, ಇಬ್ಬರ ಸಾವು

ಮುಂಬೈ: ದೇವಸ್ಥಾನದಲ್ಲಿ ಹನುಮಂತನ ದರ್ಶನ ಪಡೆದು ಭಜನೆಯಲ್ಲಿ ಮುಳುಗಿದ್ದ ಭಕ್ತರ ಮೇಲೆ ನಿರ್ಮಾಣ ಹಂತದ ಸಭಾಂಗಣದ ಪಿಲ್ಲರ್ ಹಾಗೂ ಕಾಂಕ್ರೀಟ್ ಮೇಲ್ಛಾವಣಿ ಕುಸಿದು (Tragedy) ಬಿದ್ದಿರುವ ದಾರುಣ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ಜರುಗಿದೆ. ಈ ಅಪಘಾತದಲ್ಲಿಐವರು ಯಾತ್ರಿಕರು ಪ್ರಾಣ ಕಳೆದುಕೊಂಡಿದ್ದು, ಮತ್ತೂ ಐವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವಶೇಷಗಳ ರಾಶಿಯ ಕೆಳಗೆ ಸುಮಾರು 50ಕ್ಕೂ ಹೆಚ್ಚು ಜನರು ಸಿಲುಕಿರುವ ಸಾಧ್ಯತೆ ಇದ್ದು, ಸದ್ಯ ದೊಡ್ಡ ಮಟ್ಟದ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಏನಿದು ಪ್ರಕರಣ? ಪರ್ಭಾನಿಯ ಮಾನ್ವತ್…

Read More
crime pune Godman Abused Woman for many years arrested

Crime: ದೇವರೆಂದು ನಂಬಿಸಿ ವಿಕೃತಿ: ಪುಣೆಯಲ್ಲಿ ಮಹಿಳೆಗೆ ಕರೆಂಟ್ ಶಾಕ್ ಕೊಟ್ಟು, ಮೂತ್ರ ಕುಡಿಸಿದ್ದ ನಕಲಿ ಸ್ವಾಮೀಜಿ ಅರೆಸ್ಟ್!

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಆಶೀರ್ವಾದ ಹಾಗೂ ಆಧ್ಯಾತ್ಮದ ಹೆಸರಿನಲ್ಲಿ ಮಹಿಳೆಯೊಬ್ಬರ ಮೇಲೆ ಸುದೀರ್ಘ ಕಾಲ ಭೀಕರ ದೌರ್ಜನ್ಯ ಎಸಗುತ್ತಿದ್ದ ನಕಲಿ ಬಾಬಾನ (Crime) ಅಸಲಿ ಮುಖವಾಡ ಕಳಚಿಬಿದ್ದಿದೆ. ತಾನು ಸಾಕ್ಷಾತ್ ದೇವರ ಅವತಾರ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ ರಾಧೇಶ್ಯಾಮ್ ಮಿಶ್ರಾ ಅಲಿಯಾಸ್ ರಾಧಾಮೋಹನ್ ಮಿಶ್ರಾ ಎಂಬಾತನನ್ನು ಪುಣೆ ಪೊಲೀಸರು ಕಡೆಗೂ ಬಂಧಿಸಿದ್ದಾರೆ. ಈತ ಹಾಗೂ ಇವನ ಸಹಚರರು ಸೇರಿ ನೊಂದ ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿ, ಎಲೆಕ್ಟ್ರಿಕ್ ಶಾಕ್ ನೀಡಿ ಜೀವರಕ್ಷಕ ಯಾತನೆ ಕೊಟ್ಟಿರುವ ದಿಗಿಲು…

Read More
Maharashtra cm Devendra Fadnavis rides bike for fuel conservation

Devendra Fadnavis: ಬೈಕ್ ಏರಿ ಬಂದು ಬಜೆಟ್ ಉಳಿಸಿದ ಸಿಎಂ; ಮಹಾರಾಷ್ಟ್ರದಲ್ಲಿ ಜಾರಿಗೆ ಬಂತು ಹೈಟೆಕ್ ಮಿತವ್ಯಯ ಮಾರ್ಗಸೂಚಿ!

ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಹಾಗೂ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅತ್ಯಂತ ಸಕ್ರಿಯವಾಗಿ ಸ್ಪಂದಿಸಿದ್ದಾರೆ. ಗುರುವಾರ ಮುಂಬೈನ ತಮ್ಮ ಅಧಿಕೃತ ನಿವಾಸ ‘ವರ್ಷಾ’ದಿಂದ ವಿಧಾನ ಭವನಕ್ಕೆ ಸ್ವತಃ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬರುವ ಮೂಲಕ ಅವರು ಮಿತವ್ಯಯದ ಸಂದೇಶ ಸಾರಿದ್ದಾರೆ.‌ ಬೆಂಗಾವಲು ಪಡೆ ಕಡಿತ ಮುಖ್ಯಮಂತ್ರಿಗಳ ಜೊತೆಗೆ ಸಚಿವ ಆಶಿಶ್ ಶೆಲಾರ್ ಅವರು…

Read More
Maharashtra by election ncp Sunetra pawar wins

Sunetra Pawar: ಬಾರಾಮತಿ ಉಪಸಮರದಲ್ಲಿ ಸುನೇತ್ರಾ ಪವಾರ್‌ಗೆ ಭರ್ಜರಿ ಜಯ: ಅಜಿತ್ ದಾದಾ ಭದ್ರಕೋಟೆ ಉಳಿಸಿಕೊಂಡ ಎನ್‌ಸಿಪಿ!

ಮುಂಬೈ: ಮಹಾರಾಷ್ಟ್ರ ರಾಜಕಾರಣದ ಪ್ರತಿಷ್ಠಿತ ಕಣ ಬಾರಾಮತಿ ವಿಧಾನಸಭಾ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ (Sunetra Pawar) ಅವರು ಐತಿಹಾಸಿಕ ವಿಜಯ ದಾಖಲಿಸಿದ್ದಾರೆ. ತಮ್ಮ ಪತಿ, ದಿವಂಗತ ಅಜಿತ್ ಪವಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ಸುನೇತ್ರಾ ಅವರು ಆರಂಭದಿಂದಲೇ ವಿರೋಧಿಗಳಿಲ್ಲದ ಅಬ್ಬರದ ಮುನ್ನಡೆ ಸಾಧಿಸುವ ಮೂಲಕ ಪವಾರ್ ಕುಟುಂಬದ ರಾಜಕೀಯ ಪ್ರಾಬಲ್ಯವನ್ನು ಸಾಬೀತುಪಡಿಸಿದ್ದಾರೆ. ಅಜಿತ್ ಪವಾರ್ ಸ್ಮರಣೆ; ಭಾವುಕರಾದ ಸುನೇತ್ರಾ ಮತ ಎಣಿಕೆಯ 15ನೇ ಸುತ್ತು ಮುಕ್ತಾಯವಾಗುವಷ್ಟರಲ್ಲೇ 1.32 ಲಕ್ಷ ಮತಗಳ ಬೃಹತ್ ಅಂತರ…

Read More
Zombie Drugs viral video creates tension in Maharashtra people

Zombie Drugs: ಮಹಾರಾಷ್ಟ್ರದಲ್ಲೂ ಜಾಂಬಿ ಡ್ರಗ್ಸ್ ಪ್ರಭಾವ, ವೈರಲ್‌ ವಿಡಿಯೋ ಮೂಡಿಸಿದ ಆತಂಕ

ಮುಂಬೈ: ಮಹಾರಾಷ್ಟ್ರದ ಮೀರಾ-ಭಯಂದರ್ ಪ್ರದೇಶದಲ್ಲಿ ಯುವಕನೊಬ್ಬ ರಸ್ತೆಯ ಮಧ್ಯೆ ಗಂಟೆಗಟ್ಟಲೆ ಪ್ರತಿಮೆಯಂತೆ ಅಲುಗಾಡದೆ ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ. ಈತನ ವಿಚಿತ್ರ ವರ್ತನೆ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದು, ವಿದೇಶಗಳಲ್ಲಿ ಭೀತಿ ಹುಟ್ಟಿಸಿರುವ ‘ಜಾಂಬಿ ಡ್ರಗ್ಸ್’ (Zombie Drugs) ಈಗ ಮುಂಬೈಗೂ ಕಾಲಿಟ್ಟಿದೆಯೇ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಏನಿದೆ ಈ ವಿಡಿಯೋದಲ್ಲಿ? ವೈರಲ್ ಆಗಿರುವ ದೃಶ್ಯಗಳಲ್ಲಿ ಈ ಯುವಕ ರಸ್ತೆಯ ಬದಿಯಲ್ಲಿ ಯಾವುದೇ ಚಲನೆಯಿಲ್ಲದೆ, ಅರೆಪ್ರಜ್ಞಾವಸ್ಥೆಯಲ್ಲಿ ನಿಂತಿರುವುದು ಕಂಡುಬಂದಿದೆ. ಹಗಲು ಮತ್ತು ರಾತ್ರಿ ವೇಳೆ…

Read More