Arvind Kejriwal: ಮೋದಿ ಸರ್ಕಾರದ ಎಥನಾಲ್ ನೀತಿ ವಿರುದ್ಧ ಆಪ್ ಸಮರ: ಸಂತ್ರಸ್ತ ವಾಹನ ಮಾಲೀಕರೊಂದಿಗೆ ಪ್ರಧಾನಿ ಕಚೇರಿಗೆ ಮುತ್ತಿಗೆ
ನವದೆಹಲಿ: ಕೇಂದ್ರ ಸರ್ಕಾರದ E20 ಪೆಟ್ರೋಲ್ ನೀತಿಯನ್ನು ತೀವ್ರವಾಗಿ ವಿರೋಧಿಸಿ ಆಮ್ ಆದ್ಮಿ ಪಾರ್ಟಿ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸ ‘೭, ಲೋಕ ಕಲ್ಯಾಣ ಮಾರ್ಗ’ಕ್ಕೆ ಪಾದಯಾತ್ರೆ ನಡೆಸಲುತ್ನಿಸಿದ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರನ್ನು ದೆಹಲಿ ಪೊಲೀಸರು ಮಾರ್ಗ ಮಧ್ಯದಲ್ಲೇ ಬ್ಯಾರಿಕೇಡ್ ಹಾಕಿ ತಡೆದರು. ಫಿರೋಜ್ ಶಾ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಪೊಲೀಸರ ತಡೆಯಿಂದಾಗಿ ಪಾದಯಾತ್ರೆ…
