TOP NEWS
Big news Targeted Killings in Kashmir 15 Lakh Bounty Declared on Lashkar Commander Latif Bhat

Big News: ಲಷ್ಕರ್ ಕಮಾಂಡರ್ ಲತೀಫ್ ಭಟ್ ಪತ್ತೆಗೆ 15 ಲಕ್ಷ ರೂ. ನಗದು ಬಹುಮಾನ ಘೋಷಿಸಿದ ಜಮ್ಮು-ಕಾಶ್ಮೀರ ಪೊಲೀಸ್

ಜಮ್ಮು: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಸರಣಿ ಹತ್ಯೆಗಳ ಹಿಂದೆ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಕಮಾಂಡರ್ ಲತೀಫ್ ಭಟ್ (Big News) ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈತನ ಬಂಧನಕ್ಕೆ ಕಾರಣವಾಗುವ ಸುಳಿವು ನೀಡಿದವರಿಗೆ 15 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಘೋಷಿಸಿದ್ದಾರೆ. ಈಗಾಗಲೇ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಹಲವು ಜಿಲ್ಲೆಗಳು ಹಾಗೂ ಜಮ್ಮು ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಲತೀಫ್ ಭಟ್‌ನ…

Read More
Big Shock for BMRDA Karnataka High Court Halts Ambitious Bidadi township Project

Bidadi Township: ಭೂಸ್ವಾಧೀನ ವಿರುದ್ಧ ಹೋರಾಡುತ್ತಿದ್ದ ರೈತರಿಗೆ ನ್ಯಾಯಿಕ ಜಯ: ಬಿಡದಿ ಟೌನ್‌ಶಿಪ್ ಕಾಮಗಾರಿಗೆ ಬ್ರೇಕ್ ಹಾಕಿದ ಕೋರ್ಟ್!

ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ಜಂಟಿಯಾಗಿ ಸಾಕಾರಗೊಳಿಸಲು ಉದ್ದೇಶಿಸಿದ್ದ ಹೈಟೆಕ್ ‘ಬಿಡದಿ ಸ್ಮಾರ್ಟ್ ಸಿಟಿ’ (Bidadi Township) ಯೋಜನೆಗೆ ಕರ್ನಾಟಕ ಉಚ್ಚ ನ್ಯಾಯಾಲಯ (ಹೈಕೋರ್ಟ್) ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಸರ್ಕಾರದ ಅತ್ಯಂತ ಪ್ರತಿಷ್ಠಿತ ಯೋಜನೆಯೊಂದಕ್ಕೆ ಆರಂಭದಲ್ಲೇ ದೊಡ್ಡ ಹಿನ್ನಡೆಯಾಗಿದೆ. ಕೋರ್ಟ್‌ನಿಂದ ಕಾಮಗಾರಿಗೆ ಬ್ರೇಕ್ ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಸರ ನಿಯಮಗಳ ಉಲ್ಲಂಘನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಸುದೀರ್ಘ…

Read More
Trisha Remark Case Madras High Court Orders Station Bail for Udhayanidhi Stalin

Udayanidhi Stalin: ಉದಯನಿಧಿ ಸ್ಟಾಲಿನ್ ಬಂಧನ ವಿವಾದ: ವಿಪಕ್ಷ ನಾಯಕನಿಗೆ ‘ಸ್ಟೇಷನ್ ಬೈಲ್’ ನೀಡಲು ಹೈಕೋರ್ಟ್ ಆದೇಶ

ಚೆನ್ನೈ: ನಟಿ ತ್ರಿಷಾ ಕುರಿತು ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಅವರಿಗೆ ಮದ್ರಾಸ್ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಉದಯನಿಧಿ ಅವರನ್ನು ತಕ್ಷಣವೇ ಪೊಲೀಸ್ ಠಾಣೆ ಜಾಮೀನಿನ (ಸ್ಟೇಷನ್ ಬೈಲ್) ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ಮಂಗಳವಾರ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಏನಿದು ಪ್ರಕರಣ? ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್…

Read More
Yielding to US Pressure Arvind Kejriwal Blasts PM Modi Over Ethanol Imports and E20 Fuel Policy

Arvind Kejriwal: ಮೋದಿ ಸರ್ಕಾರದ ಎಥನಾಲ್ ನೀತಿ ವಿರುದ್ಧ ಆಪ್ ಸಮರ: ಸಂತ್ರಸ್ತ ವಾಹನ ಮಾಲೀಕರೊಂದಿಗೆ ಪ್ರಧಾನಿ ಕಚೇರಿಗೆ ಮುತ್ತಿಗೆ

ನವದೆಹಲಿ: ಕೇಂದ್ರ ಸರ್ಕಾರದ E20 ಪೆಟ್ರೋಲ್ ನೀತಿಯನ್ನು ತೀವ್ರವಾಗಿ ವಿರೋಧಿಸಿ ಆಮ್ ಆದ್ಮಿ ಪಾರ್ಟಿ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸ ‘೭, ಲೋಕ ಕಲ್ಯಾಣ ಮಾರ್ಗ’ಕ್ಕೆ ಪಾದಯಾತ್ರೆ ನಡೆಸಲುತ್ನಿಸಿದ ಕೇಜ್ರಿವಾಲ್ ಸೇರಿದಂತೆ ಹಲವು ಆಪ್ ನಾಯಕರನ್ನು ದೆಹಲಿ ಪೊಲೀಸರು ಮಾರ್ಗ ಮಧ್ಯದಲ್ಲೇ ಬ್ಯಾರಿಕೇಡ್ ಹಾಕಿ ತಡೆದರು. ಫಿರೋಜ್ ಶಾ ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ಪೊಲೀಸರ ತಡೆಯಿಂದಾಗಿ ಪಾದಯಾತ್ರೆ…

Read More
Arrest Threat for Udayanidhi Stalin DMK Leader Files Urgent Bail Plea in Madras High Court

Udayanidhi Stalin: ತಂಜಾವೂರು ಭಾಷಣ ವಿವಾದ: ಉದಯನಿಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಂತೆ ಮದ್ರಾಸ್ ಹೈಕೋರ್ಟ್ ಮೌಖಿಕ ಸೂಚನೆ

ಚೆನ್ನೈ: ತಂಜಾವೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾದ ಹಿನ್ನೆಲೆಯಲ್ಲಿ, ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಅವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಂಗಳವಾರ (ಆಗಸ್ಟ್ 4) ಉದಯನಿಧಿ ಸಲ್ಲಿಸಿದ ತುರ್ತು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಉನ್ನತ ನ್ಯಾಯಾಲಯ ಸಮ್ಮತಿಸಿದೆ. ಯಾವುದೇ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್‌ ಆದೇಶ ತಂಜಾವೂರು ಪೊಲೀಸರು ವಿಪಕ್ಷ ನಾಯಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದರಿಂದ ಈ ಅರ್ಜಿಯನ್ನು ತಕ್ಷಣವೇ ವಿಚಾರಣೆ…

Read More
Floral Welcome from the Skies Uttar Pradesh Govt Plans Aerial Flower Showers for Kanwar Yatra Across 7 Districts

Uttar Pradesh: ಯುಪಿಯಲ್ಲಿ ಕಂವಾರ ಯಾತ್ರಿಕರಿಗೆ ಹೆಲಿಕಾಪ್ಟರ್ ಪುಷ್ಪವೃಷ್ಟಿ; 7 ಜಿಲ್ಲೆಗಳಲ್ಲಿ 10 ಗಂಟೆಗಳ ಕಾಲ ಅಬ್ಬರಿಸಲಿದೆ ಹೂವಿನ ಮಳೆ!

ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ (Uttar Pradesh) ಪ್ರಮುಖ ರಸ್ತೆಗಳಲ್ಲಿ ಸಾಗುವ ಕಂವಾರ ಯಾತ್ರಿಕರಿಗೆ ಈ ಬಾರಿ ವಿಶೇಷ ರೀತಿಯ ಗೌರವ ಸಿಗಲಿದೆ. ಆ ಆಗಸ್ಟ್ 9 ಮತ್ತು 10 ರಂದು ಏಳು ಜಿಲ್ಲೆಗಳಾದ್ಯಂತ ಹೆಲಿಕಾಪ್ಟರ್ ಮೂಲಕ ಕಂವಾರಿಯರ ಮೇಲೆ ಹೂವಿನ ಮಳೆ ಸುರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಶಿವಭಕ್ತರ ಯಾತ್ರೆ ಅತ್ಯಂತ ವೈಭವದಿಂದ, ಸುರಕ್ಷಿತವಾಗಿ ಮತ್ತು ಶ್ರದ್ಧಾಭಕ್ತಿಗಳಿಂದ ನಡೆಯುವಂತೆ ಮಾಡಲು ಸರ್ಕಾರ ಈ ವಿಶೇಷ ವ್ಯವಸ್ಥೆ ಮಾಡಿದೆ. ಹೀಗಿದೆ ಸರ್ಕಾರದ ವೇಳಾಪಟ್ಟಿ ಸರ್ಕಾರ ಬಿಡುಗಡೆ…

Read More
Cauvery Flare up Tamil Nadu Knocks Supreme Court Doors Claims Karnataka Refusing Water Despite Full Dams

Cauvery: ನಮಗೆ ನೀರು ಬೇಕು! ತಮಿಳುನಾಡು ಸಿಎಂ ವಿಜಯ್ ಹೊಸ ತಗಾದೆ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ದೇಶದ ಅತ್ಯುನ್ನತ ನ್ಯಾಯಾಲಯದ ಮೆಟ್ಟಿಲೇರಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶಗಳ ಪ್ರಕಾರ ಕರ್ನಾಟಕ ತಮಗೆ ನೀಡಬೇಕಾದ ನೀರಿನ ಪಾಲನ್ನು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು (Cauvery) ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ನದಿ ಪ್ರಾಧಿಕಾರಗಳು ಪದೇ ಪದೇ ಸೂಚನೆ ನೀಡಿದ್ದರೂ ಕರ್ನಾಟಕ ಅಗತ್ಯ ಪ್ರಮಾಣದ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿರುವ ತಮಿಳುನಾಡು…

Read More