TOP NEWS
Coastal Malnad Tourism Revamp Minister K.J George Announces New Policy

KJ George: ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಹೊಸ ನೀತಿ

ಬೆಂಗಳೂರು : ಕರ್ನಾಟಕವನ್ನು ದೇಶದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡುವ ‘ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026’ ಯನ್ನು ರೂಪಿಸಲಾಗುತ್ತಿದ್ದು, ಈ ನೀತಿಯಲ್ಲಿ ಕ್ರೂಸ್‌ ಪ್ರವಾಸೋದ್ಯಮ, ಬೀಚ್‌ ಪ್ರವಾಸೋದ್ಯಮ ಹಾಗೂ ವಿಶ್ವದರ್ಜೆಯ ಪ್ರವಾಸಿ ಸೌಲಭ್ಯಗಳಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ (KJ George) ಅಧಿಕಾರಿಗಳಿಗೆ ಸೂಚನೆ ನೀಡಿದರು . ಇಂದು ನಡೆದ ಮಹತ್ವದ ಸಭೆ ಇಂದು ಇಂಧನ…

Read More
Gruhajyoti scheme changes in July month bill

Gruhajyoti: ಗೃಹಜ್ಯೋತಿ ಲೆಕ್ಕಾಚಾರದಲ್ಲಿ ಬದಲಾವಣೆ: ಜುಲೈ ಕರೆಂಟ್ ಬಿಲ್‌ ಕಥೆ ಇದು

ಬೆಂಗಳೂರು: ರಾಜ್ಯ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ (Gruhajyoti) ಯೋಜನೆಯಲ್ಲಿ ಪ್ರಮುಖ ಮರುಪರಿಶೀಲನಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಇದು ಜುಲೈ ತಿಂಗಳ ವಿದ್ಯುತ್ ಬಿಲ್ ವಿತರಣೆಯ ಮೇಲೆ ನೇರ ಪರಿಣಾಮ ಬೀರಲಿದೆ. ಹೊಸ ನಿಯಮದ ಪ್ರಕಾರ, ಫಲಾನುಭವಿಗಳ ಕಳೆದ ಮೂರು ತಿಂಗಳ ವಿದ್ಯುತ್ ಬಳಕೆಯ ಸರಾಸರಿಯನ್ನು ಲೆಕ್ಕ ಹಾಕಿ ಜುಲೈ ತಿಂಗಳ ಉಚಿತ ಬಿಲ್ ಅನ್ನು ನಿರ್ಧರಿಸಲಾಗುತ್ತದೆ. ಅಂದರೆ, ಈ ಬಾರಿ ಕೇವಲ ಜುಲೈ ತಿಂಗಳ ಮೀಟರ್ ರೀಡಿಂಗ್ ಅಷ್ಟೇ ಅಲ್ಲದೆ, ಗ್ರಾಹಕರ ಹಿಂದಿನ ಮೂರು ತಿಂಗಳ ಬಳಕೆಯ…

Read More
Vijay Jana Nayagan leak case 1 2 crore allegedly viewed pirated copy

Jana Nayagan: ‘ಜನ ನಾಯಗನ್’ ಲೀಕ್ ಪ್ರಕರಣ: 1.2 ಕೋಟಿ ಜನರಿಂದ ಪೈರೇಟೆಡ್ ಸಿನಿಮಾ ವೀಕ್ಷಣೆ

ಚೆನ್ನೈ: ತಮಿಳುನಾಡಿನ ಪ್ರಖ್ಯಾತ ನಟ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೂ ಮುನ್ನವೇ ಇಂಟರ್ನೆಟ್‌ನಲ್ಲಿ ಲೀಕ್ ಆಗಿದ್ದು, ಬರೋಬ್ಬರಿ 1.2 ಕೋಟಿಗೂ ಅಧಿಕ ಜನ ಇದನ್ನು ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ (CBFC) ಇನ್ನೂ ಪ್ರಮಾಣಪತ್ರ ಸಿಗುವ ಮುನ್ನವೇ ಏಪ್ರಿಲ್ 9 ರಂದು ಈ ಚಿತ್ರದ ದೃಶ್ಯಗಳು ಸೋರಿಕೆಯಾಗಿದ್ದವು. ಈ ಚಿತ್ರದ ದೃಶ್ಯ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ…

Read More
No Mandatory Caste Checks BESCOM Clears Confusion Over GruhaJyoti Door-to-Door Survey

Gruhajyoti: ಗೃಹ ಜ್ಯೋತಿ ಸಮೀಕ್ಷೆ: ಜಾತಿ ವಿವರ ನೀಡುವುದು ಕಡ್ಡಾಯವಲ್ಲ; ಗ್ರಾಹಕರ ಆತಂಕಕ್ಕೆ ಬೆಸ್ಕಾಂ ಮಹತ್ವದ ಸ್ಪಷ್ಟನೆ!

ಬೆಂಗಳೂರು: ರಾಜ್ಯ ಸರ್ಕಾರದ ಜನಪ್ರಿಯ ‘ಗೃಹ ಜ್ಯೋತಿ’ (Gruhajyoti) ಯೋಜನೆಯ ಫಲಾನುಭವಿಗಳ ವಿವರ ಕಲೆಹಾಕುವ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಜಾತಿ ಅಥವಾ ಪ್ರವರ್ಗದ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕೃತವಾಗಿ ಸ್ಪಷ್ಟಪಡಿಸಿದೆ. ಜುಲೈ 1 ರಿಂದ ರಾಜ್ಯಾದ್ಯಂತ ಮನೆ ಮನೆ ಸಮೀಕ್ಷೆ ಆರಂಭವಾಗಿದ್ದು, ಸಾರ್ವಜನಿಕರಲ್ಲಿ ಮೂಡಿದ್ದ ದೊಡ್ಡ ಆತಂಕ ಮತ್ತು ಗೊಂದಲಕ್ಕೆ ಇಲಾಖೆ ಈಗ ತೆರೆ ಎಳೆದಿದೆ. ಸಾರ್ವಜನಿಕರ ಆಕ್ಷೇಪಕ್ಕೆ ಬೆಸ್ಕಾಂ ಪ್ರತಿಕ್ರಿಯೆ ಪ್ರಸ್ತುತ ಎಸ್ಕಾಂಗಳ ಸಿಬ್ಬಂದಿ ಹಾಗೂ ಮೀಟರ್…

Read More
Deadlock Over Indira Kit Government to Pause Free Ration Kit Scheme After 8 Months of Delay

Indira Kit: ಆರಂಭಕ್ಕೂ ಮುನ್ನವೇ ‘ಇಂದಿರಾ ಕಿಟ್’ ಯೋಜನೆಗೆ ಗ್ರಹಣ: ಟೆಂಡರ್ ಲಾಬಿ, ಕೋರ್ಟ್ ಭೀತಿಯಿಂದ ಬಡವರ ನಿರೀಕ್ಷೆ ಹುಸಿ!

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿಯ ಬದಲಾಗಿ ಬಡವರಿಗೆ ವಿತರಿಸಲು ರಾಜ್ಯ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷೆಯ ‘ಇಂದಿರಾ ಕಿಟ್’ (Indira Kit) ಯೋಜನೆ ಶುರುವಾಗುವ ಮುನ್ನವೇ ಮೂಲೆಗುಂಪಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆಡಳಿತಾತ್ಮಕ ಹಾಗೂ ಕಾನೂನು ತೊಡಕುಗಳಿಂದಾಗಿ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಏನಿದು ಇಂದಿರಾ ಕಿಟ್ ಯೋಜನೆ? ರಾಜ್ಯದ ಲಕ್ಷಾಂತರ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಪೌಷ್ಟಿಕ ಆಹಾರ ಒದಗಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿತ್ತು….

Read More
Technical Issues and Public Backlash Slow Down GruhaJyothi Door to Door Survey

Gruhajyoti: ಗೃಹಜ್ಯೋತಿ ಗ್ರಾಹಕರ ಡೇಟಾ ಸಂಗ್ರಹಕ್ಕೆ ತಾಂತ್ರಿಕ ಗ್ರಹಣ: ಸೌಲಭ್ಯ ರದ್ದಾಗುವ ಆತಂಕದಲ್ಲಿ ಜನಸಾಮಾನ್ಯರು

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಜ್ಯೋತಿ’ (Gruhajyoti) ಯೋಜನೆಯ ಫಲಾನುಭವಿಗಳ ಮಾಹಿತಿ ಸಂಗ್ರಹದ ಜವಾಬ್ದಾರಿ ಹೊತ್ತಿರುವ ಎಸ್ಕಾಂಗಳ ಸಿಬ್ಬಂದಿಗೆ ಹಲವು ತಾಂತ್ರಿಕ ಅಡಚಣೆಗಳು ತಲೆನೋವಾಗಿ ಪರಿಣಮಿಸಿವೆ. ಸ್ಥಳೀಯವಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಆ್ಯಪ್‌ಗಳ ಕೈಕೊಡುತ್ತಿರುವುದು ಹಾಗೂ ಸಾರ್ವಜನಿಕರ ಅಸಹಕಾರ ಸಿಬ್ಬಂದಿಯನ್ನು ಹೈರಾಣಾಗಿಸಿದೆ. ಸಿಬ್ಬಂದಿಯನ್ನು ಕಾಡುತ್ತಿರುವ ತಾಂತ್ರಿಕ ದೋಷಗಳು ಮೊಬೈಲ್ ಆ್ಯಪ್‌ನಲ್ಲಿ ಗ್ರಾಹಕರ ವಿದ್ಯುತ್ ಸಂಪರ್ಕದ ಆರ್‌ಆರ್ (RR) ಸಂಖ್ಯೆಯನ್ನು ನಮೂದಿಸಿದ ತಕ್ಷಣ, ಮಾಲೀಕರ ಹೆಸರು ಮತ್ತು ಯೋಜನೆಗೆ ನೋಂದಾಯಿತರಾದವರ ವಿವರಗಳು ಸ್ವಯಂಚಾಲಿತವಾಗಿ ಮೂಡಬೇಕಿದೆ. ಆದರೆ, ಹಲವು ಫಲಾನುಭವಿಗಳ…

Read More
Good news monsoon rain effect hemavathi dam water increased

Good News: ಹರ್ಷ ತಂದ ಹೇಮಾವತಿ ಒಳಹರಿವು, ರೈತರಲ್ಲಿ ಮೂಡಿದ ಆಶಾಕಿರಣ

ಹಾಸನ: ಮಲೆನಾಡು ಭಾಗ ಹಾಗೂ ನದಿಯ ಉಗಮ ಸ್ಥಾನಗಳಲ್ಲಿ ಬಿಟ್ಟೂಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗೊರೂರಿನ ಪ್ರಸಿದ್ಧ ಹೇಮಾವತಿ ಜಲಾಶಯಕ್ಕೆ ಒಳಹರಿವು (Good News) ಗಣನೀಯವಾಗಿ ಏರಿಕೆಯಾಗಿದೆ. ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಜೋರಾಗಿರುವುದರಿಂದ ನದಿ-ತೊರೆಗಳು ತುಂಬಿ ಹರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ತೇಜಿಯಾಗಿ ಹೆಚ್ಚುತ್ತಿದೆ. ಇದು ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಕಳೆದ ಗುರುವಾರ ಬೆಳಗ್ಗೆ ಕೇವಲ 1,000 ಕ್ಯೂಸೆಕ್ಸ್‌ನಷ್ಟಿದ್ದ ಒಳಹರಿವು ಸಂಜೆಯ ವೇಳೆಗೆ ದಿಢೀರ್ ಹೆಚ್ಚಳವಾಗಿತ್ತು. ಶುಕ್ರವಾರ…

Read More