Crime: ಪ್ರೇಮಿಗಳ ಮದುವೆಗೆ ವಿರೋಧ: ರಕ್ಷಣೆ ಅರಸಿ ಬಂದ ನವವರನಿಗೆ ಪೊಲೀಸ್ ಠಾಣೆ ಮುಂದೆಯೇ ಇರಿದ ಮಾವ!
ದಾವಣಗೆರೆ: ಪ್ರೀತಿಸಿದ ಹುಡುಗಿಯನ್ನು ಕೈಹಿಡಿದ ಯುವಕನಿಗೆ, ಭದ್ರತೆಗಾಗಿ ಹೋದ ಪೊಲೀಸ್ ಠಾಣೆಯ ಅಂಗಳದಲ್ಲೇ ಹುಡುಗಿಯ ಮಾವ ಚಾಕುವಿನಿಂದ (Crime) ಇರಿದಿರುವ ಆಘಾತಕಾರಿ ಘಟನೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ. ಈ ಮಾರಣಾಂತಿಕ ದಾಳಿಯಲ್ಲಿ ಕಂಚಗಾರನಹಳ್ಳಿ ನಿವಾಸಿ ಸಿದ್ದೇಶ್ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಏನಿದು ಘಟನೆ? ದಾಗಿನಕಟ್ಟೆ ಗ್ರಾಮದ ಯುವತಿ ಮತ್ತು ಸಿದ್ದೇಶ್ ನಡುವೆ ಕಳೆದ ಕೆಲವು ವರ್ಷಗಳಿಂದ ಪ್ರೇಮಾಂಕುರವಾಗಿತ್ತು. ಇತ್ತೀಚೆಗಷ್ಟೇ ಇಬ್ಬರೂ ಮನೆಯವರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದರು. ಆದರೆ, ಈ ಅಂತರ್ಜಾತಿ ಅಥವಾ ಪ್ರೇಮ ವಿವಾಹವು…
