High Court: ವೀರಪ್ಪನ್ ಹತ್ಯೆ ಮಾಡಿದ ಸಿಬ್ಬಂದಿಗೆ 22 ವರ್ಷಗಳ ಬಳಿಕ ನ್ಯಾಯ: ಸರ್ಕಾರಕ್ಕೆ ಹೈಕೋರ್ಟ್ ತಪರಾಕಿ, 3 ತಿಂಗಳಲ್ಲಿ ಹಣ ನೀಡಲು ಆದೇಶ!
ಬೆಂಗಳೂರು: ದಶಕಗಳ ಕಾಲ ಕಾಡುಗಳ್ಳ ವೀರಪ್ಪನ್ ಪತ್ತೆಗಾಗಿ ಪ್ರಾಣದ ಹಂಗು ತೊರೆದು ಕಾಡಿನಲ್ಲಿ ಹೋರಾಡಿದ ಎಸ್ಟಿಎಫ್ (STF) ಸಿಬ್ಬಂದಿಗೆ (High Court) ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ವೀರಪ್ಪನ್ ಹತ್ಯೆಯಾಗಿ ಎರಡು ದಶಕಗಳೇ ಕಳೆದಿದ್ದರೂ, ಘೋಷಿತ ಬಹುಮಾನದಿಂದ ವಂಚಿತರಾಗಿದ್ದ 72 ಮಂದಿ ಸಿಬ್ಬಂದಿಗೆ ಮೂರು ತಿಂಗಳೊಳಗೆ ಬಾಕಿ ಮೊತ್ತ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ನಿರ್ದೇಶನ ನೀಡಿದೆ. ಸರ್ಕಾರದ ನಡೆಗೆ ನ್ಯಾಯಾಲಯದ (High Court) ಅಸಮಾಧಾನ 2004ರಲ್ಲಿ ನಡೆದ ‘ಆಪರೇಷನ್ ಕೊಕೂನ್’ ಕಾರ್ಯಾಚರಣೆಯಲ್ಲಿ ವೀರಪ್ಪನ್…
