Sandeep

cm dk shivakumar warning to congress workers

DK Shivakumar: ಹಳೇ ದ್ವೇಷ ಮರೆತು ಮುನ್ನಡೆಯಿರಿ, 2028 ಕ್ಕೆ ಮತ್ತೆ ಕಾಂಗ್ರೆಸ್ ಗೆಲ್ಲಿಸುವುದೇ ನಿಮ್ಮ ಟಾರ್ಗೆಟ್: ಕಾರ್ಯಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

ಬೆಂಗಳೂರು: “ಹಳೆಯ ಮುನಿಸು, ದ್ವೇಷ ಹಾಗೂ ಪ್ರತೀಕಾರದ ರಾಜಕಾರಣವನ್ನು ಸಂಪೂರ್ಣವಾಗಿ ಬದಿಗಿಟ್ಟು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿ. ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಧ್ವಜ ಹಾರಿಸುವುದೇ ನಿಮ್ಮ ಮುಂದಿನ ಅಂತಿಮ ಗುರಿಯಾಗಿರಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಮುಖಂಡರ ಭೇಟಿ ವೇಳೆ ಸಿಎಂ ಕಿವಿಮಾತು ಮೈಸೂರು ಜಿಲ್ಲೆಯ ಹಿರಿಯ ನಾಯಕ, ಮಾಜಿ ಶಾಸಕ ಮಂಜುನಾಥ್ ಹಾಗೂ ಕೆಪಿಸಿಸಿ…

Read More
DK Shivakumar allotted rooms to his cabinet ministry

DK Shivakumar: ಸಚಿವರಿಗೆ ರೂಮ್ ಅಲಾಟ್‌ಮೆಂಟ್: ಸಿಎಂ ಗೃಹ ಕಚೇರಿ ಬಾಗಿಲು ಉಲ್ಟಾ!

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 13 ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ, ಸಚಿವರುಗಳ ಆಡಳಿತ ಕಚೇರಿಗಳಿಗೆ ಜಾಗ ನಿಗದಿಪಡಿಸಲಾಗಿದೆ. ಸಚಿವರು ತಮ್ಮ ಕಚೇರಿ ಕೆಲಸಗಳನ್ನು ಆರಂಭಿಸಲು ಅನುಕೂಲವಾಗುವಂತೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆಯಲ್ಲಿ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೊಡ್ಡ ಕೊಡುಗೆಯೇ ಸಿಕ್ಕಿದೆ. ರೆಡ್ಡಿ ಮುನಿಸು ಶಮನ: ವಿಧಾನಸೌಧದ…

Read More
Actress Rashmika Mandanna to be act in ms subbalakshmi role

Rashmika Mandanna: ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್: ರಶ್ಮಿಕಾ ಮಂದಣ್ಣಗೆ ಒಲಿದೇ ಬಂತಾ ಭಾರತ ರತ್ನ ಗಾಯಕಿ ಪಾತ್ರ?

ಹೈದರಾಬಾದ್: ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ಧ್ರುವತಾರೆ, ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್ (Biopic) ಸಿನಿಮಾ ಸ್ಯಾಂಡಲ್‌ವುಡ್ ಹಾಗೂ (Rashmika Mandanna) ಟಾಲಿವುಡ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಸಂಬಂಧಿಸಿದಂತೆ ಈಗ ಒಂದು ರೋಮಾಂಚನಕಾರಿ ಅಪ್‌ಡೇಟ್ ಹೊರಬಿದ್ದಿದ್ದು, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಗೆ ಬಂದಿದೆ. ಈ ಐತಿಹಾಸಿಕ ಪಾತ್ರದಲ್ಲಿ ನಟಿಸಲು ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಸಿನಿ ವಲಯದಲ್ಲಿ…

Read More
108 Ambulance Delay to Cost 5000 Fine If It Fails to Arrive in 15 Mins UT Khader Warns Agencies

UT Khader: ಖಾಸಗಿ ಆಸ್ಪತ್ರೆಗಳ ದಗಾಬಾಜಿತನಕ್ಕೆ ಬೀಳಲಿದೆ ಬ್ರೇಕ್: ನಿಯಮ ಮೀರಿದರೆ ಲೈಸೆನ್ಸ್ ರದ್ದು ಎಂದು ಎಚ್ಚರಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್!

ಮಂಗಳೂರು: ರಾಜ್ಯದ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಭರ್ಜರಿ ಚುರುಕು ಮುಟ್ಟಿಸಿರುವ ಯು.ಟಿ. ಖಾದರ್, (UT Khader) ಇಲಾಖೆಯ ಸುಧಾರಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ವೈದ್ಯರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಉಚಿತ ಆರೋಗ್ಯ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರನ್ನು ಪೀಡಿಸುವ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಉಚಿತ ಚಿಕಿತ್ಸೆ ನಿರಾಕರಿಸಿದರೆ ಪರವಾನಗಿ ರದ್ದು! ಸಭೆಯ ಬಳಿಕ…

Read More
raghavendra hitnal fans demanding cabinet ministry for him

Koppal: ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ಸಚಿವ ಸ್ಥಾನಕ್ಕಾಗಿ ಪಟ್ಟು: ಕೊಪ್ಪಳದಲ್ಲಿ ಪ್ರತಿಭಟನೆ!

ಕೊಪ್ಪಳ: ಕೊಪ್ಪಳ (Koppal) ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿರುವ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಅಭಿಮಾನಿಗಳು ಸೋಮವಾರ ಭೀಕರ ಪ್ರತಿಭಟನೆ ನಡೆಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಈ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ರಸ್ತೆಯಲ್ಲೇ ಹಳೆಯ ಬೈಕ್ ಮತ್ತು ಟೈಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ…

Read More
crime belagavi police arrested 3 accused

Crime: ಅಡ್ವಾನ್ಸ್ ಹಣದ ಕಿರಿಕ್: ವ್ಯಕ್ತಿಯ ಭೀಕರ ಕೊ*ಲೆ, ಮೂವರು ಆರೋಪಿಗಳು ಲಾಕ್!

ಬೆಳಗಾವಿ: ಕುರಿ ಕಾಯುವ ಕೆಲಸಕ್ಕೆಂದು ಮುಂಗಡವಾಗಿ ಪಡೆದಿದ್ದ ಹಣದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ (Crime) ದೊಡವಾಡ ಗ್ರಾಮದಲ್ಲಿ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಘಟನೆ ನಡೆದು ಕೆಲವೇ ದಿನಗಳಲ್ಲಿ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಹಾಲಪ್ಪ, ಮಂಜುನಾಥ ಹಾಗೂ ಅರ್ಜುನ ಬಂಧಿತ ಕಿಡಿಗೇಡಿಗಳು. ಜಮೀನಿನಲ್ಲಿ ಪತ್ತೆಯಾಗಿತ್ತು ನಿಗೂಢ ಶವ ದೊಡವಾಡ ಗ್ರಾಮದ ನಿವಾಸಿ ಫಕ್ಕೀರಪ್ಪ ಕಿರಕಸಾಲಿ (38) ಕೊಲೆಯಾದ ವ್ಯಕ್ತಿ. ಕಳೆದ ಕೆಲವು ದಿನಗಳ ಹಿಂದೆ…

Read More
Kottiyoor temple controversy kannur dig promises to hep Karnataka people

Kottiyoor: ಕೊಟ್ಟಿಯೂರು ಶಿವನ ಸನ್ನಿಧಿಯಲ್ಲಿ ಭಕ್ತರ ಆಕ್ರೋಶ: ಕನ್ನಡಿಗರಿಗೆ ರಕ್ಷಣೆ ಹಾಗೂ ಗೂಂಡಾಗಿರಿ ವಿರುದ್ಧ ಕ್ರಮದ ಭರವಸೆ ನೀಡಿದ ಡಿಐಜಿ ಯತೀಶ್ಚಂದ್ರ

ಕಣ್ಣೂರು: ಕೇರಳದ ಸುಪ್ರಸಿದ್ಧ ಕೊಟ್ಟಿಯೂರು (Kottiyoor) ಶಿವನ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಗಲಾಟೆ ಮತ್ತು ಕರ್ನಾಟಕದ ಭಕ್ತರ ಮೇಲಿನ ಸ್ಥಳೀಯರ ದೌರ್ಜನ್ಯದ ಹಿನ್ನೆಲೆಯಲ್ಲಿ ಕಣ್ಣೂರು ವಲಯದ ಡಿಐಜಿ ಯತೀಶ್ಚಂದ್ರ ಅವರು ಪರಿಸ್ಥಿತಿಯ ವಿವರಣೆ ನೀಡಿದ್ದಾರೆ. ದೇವಸ್ಥಾನದ ನಿಗದಿತ ಸಾಮರ್ಥ್ಯಕ್ಕಿಂತಲೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಒಮ್ಮೆಲೇ ಆಗಮಿಸಿದ್ದರಿಂದ ಈ ಕಹಿ ಘಟನೆಗಳು ಸಂಭವಿಸಿವೆ ಎಂದು ಅವರು ಹೇಳಿದ್ದಾರೆ. ಪದ್ಧತಿಗಳ ಅರಿವಿಲ್ಲದೆ ಹತಾಶರಾದ ಭಕ್ತರು ಸಾಮಾನ್ಯವಾಗಿ ಈ ದೇವಸ್ಥಾನದಲ್ಲಿ ಒಂದು ದಿನಕ್ಕೆ ಗರಿಷ್ಠ 1.25 ಲಕ್ಷ ಜನರಿಗೆ ಮಾತ್ರ…

Read More