ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಯುವ ದಸರಾ ಸಾಂಸ್ಕೃತಿಕ ಕಲಾಪಗಳನ್ನು ಉದ್ಘಾಟಿಸಲು ಖ್ಯಾತ ನಟ ಹಾಗೂ ನೃತ್ಯ (Breaking News) ನಿರ್ದೇಶಕ ಪ್ರಭುದೇವ್ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಿದೆ.
ಗೌರವಪೂರ್ವಕವಾಗಿ ಆಹ್ವಾನ
ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ನಿಯೋಗವು ನಟ ಪ್ರಭುದೇವ್ ಅವರನ್ನು ಖುದ್ದಾಗಿ ಭೇಟಿಯಾಗಿ ಸಂಪ್ರದಾಯಬದ್ಧವಾಗಿ ಗೌರವಿಸಿತು. ಮೈಸೂರಿನ ಸಾಂಪ್ರದಾಯಿಕ ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ ಹಾಗೂ ಹೂವಿನ ಹಾರ ಹಾಕಿ ಗೌರವಪೂರ್ವಕವಾಗಿ ಯುವ ದಸರಾ ವೇದಿಕೆಗೆ ಅವರನ್ನು ಆಹ್ವಾನಿಸಲಾಯಿತು.
ಪ್ರತಿವರ್ಷ ಯುವ ಜನತೆಯನ್ನು ಅಪಾರವಾಗಿ ಸೆಳೆಯುವ ಯುವ ದಸರಾಗೆ ಈ ಬಾರಿ ಭಾರತೀಯ ಚಿತ್ರರಂಗದ ಭಾರತೀಯ ‘ಮೈಕಲ್ ಜಾಕ್ಸನ್’ ಎಂದೇ ಪ್ರಸಿದ್ಧರಾಗಿರುವ ಪ್ರಭುದೇವ್ ಅವರ ಆಗಮನವು ಕಾರ್ಯಕ್ರಮದ ಕಳೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಆಹ್ವಾನವನ್ನು ಪ್ರೀತಿಯಿಂದ ಸ್ವೀಕರಿಸಿರುವ ನಟ ಪ್ರಭುದೇವ್, ಸಾಂಸ್ಕೃತಿಕ ನಗರಿಯ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಉತ್ಸುಕತೆ ವ್ಯಕ್ತಪಡಿಸಿದ್ದಾರೆ.
ಮೈಸೂರು ದಸರಾ 2026: ರಾಜಮನೆತನದ ಪಟ್ಟದ ಆನೆಯಾಗಿ ಮತ್ತೆ ‘ಶ್ರೀಕಂಠ’ ಆಯ್ಕೆ, ನಿಶಾನೆಗೆ ‘ಏಕಲವ್ಯ’ ಸಾಥ್!
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2026ರ ವಿಶ್ವವಿಖ್ಯಾತ ದಸರಾ ಮಹೋತ್ಸವದ ಸಿದ್ಧತೆಗಳು ಕಳೆಗಟ್ಟಿದ್ದು, ಧಾರ್ಮಿಕ ಆಚರಣೆಗಳ ಪ್ರಮುಖ ಅಂಗವಾದ ಪಟ್ಟದ ಆನೆ ಹಾಗೂ ನಿಶಾನೆ ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಮೈಸೂರು ರಾಜಮನೆತನದ ಮಹಾರಾಣಿ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಅವರು ಈ ಬಾರಿಯ ರಾಜಮನೆತನದ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳಿಗಾಗಿ ‘ಶ್ರೀಕಂಠ’ ಆನೆಯನ್ನು ಪಟ್ಟದ ಆನೆಯನ್ನಾಗಿ ಹಾಗೂ ‘ಏಕಲವ್ಯ’ ಆನೆಯನ್ನು ನಿಶಾನೆ ಆನೆಯನ್ನಾಗಿ ಅಧಿಕೃತವಾಗಿ ನಿಗದಿಪಡಿಸಿದ್ದಾರೆ.
ಸತತ ಎರಡನೇ ಬಾರಿ ಶ್ರೀಕಂಠನಿಗೆ ಒಲಿದ ಗೌರವ
ದಸರಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿರುವ ‘ಶ್ರೀಕಂಠ’ ಆನೆಯು ಕಳೆದ ವರ್ಷವೂ ಪಟ್ಟದ ಆನೆಯಾಗಿ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿತ್ತು. ಇದೀಗ ಸತತ ಎರಡನೇ ವರ್ಷವೂ ಶ್ರೀಕಂಠನೇ ಪಟ್ಟದ ಆನೆಯಾಗಿ ಆಯ್ಕೆಯಾಗಿರುವುದು ವಿಶೇಷ. ತನ್ನ ಗಂಭೀರ ಭಂಗಿ, ತೇಜಸ್ಸು ಹಾಗೂ ಶಾಂತ ಸ್ವಭಾವದಿಂದಲೇ ಶ್ರೀಕಂಠ ಗಮನ ಸೆಳೆಯುತ್ತಿದ್ದಾನೆ.
ಧಾರ್ಮಿಕ ಪೂಜಾ ವಿಧಿವಿಧಾನಗಳಿಗೆ ಶೋಭೆ
ಅರಮನೆಯ ಒಳಾಂಗಣದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳು ಹಾಗೂ ಸಾಂಪ್ರದಾಯಿಕ ಮೆರವಣಿಗೆಗಳಲ್ಲಿ ಪಟ್ಟದ ಆನೆ ಶ್ರೀಕಂಠ ಮತ್ತು ನಿಶಾನೆ ಆನೆ ಏಕಲವ್ಯ ಮುಂಚೂಣಿಯಲ್ಲಿ ನಿಲ್ಲಲಿವೆ. ರಾಜಮನೆತನದ ಸಂಪ್ರದಾಯದಂತೆ ಈ ಗಜಪಡೆಯ ಉಪಸ್ಥಿತಿಯು 2026ರ ಮೈಸೂರು ದಸರಾದ ಸಾಂಪ್ರದಾಯಿಕ ಮೆರುಗನ್ನು ಮತ್ತಷ್ಟು ಇಮ್ಮಡಿಗೊಳಿಸಲಿದೆ.
ಇದನ್ನೂ ಓದಿ: ಶಾಲಾ ಚಾವಣಿ ಕುಸಿತ ಪ್ರಕರಣ: ಪ್ರಭಾರಿ ಹೆಚ್ಎಂ ಸೇರಿ ಇಬ್ಬರು ಇಂಜಿನಿಯರ್ಗಳು ಅಮಾನತು!
