TOP NEWS
Actress Krishi thapanda friend vaishak files complaint crime

Crime: ನಟಿ ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ವೈಶಾಕ್ ಆತ್ಮಹತ್ಯೆ ಪ್ರಕರಣ: ಸಾವಿನ ನಿಖರ ಕಾರಣ ಕೋರಿ ಪತ್ನಿಯಿಂದ ಪೊಲೀಸ್ ದೂರು!

ಬೆಂಗಳೂರು: ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿರುವ (RR Nagar) ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ವೈಶಾಕ್ ನೇಣಿಗೆ ಶರಣಾಗಿರುವ (Crime) ಘಟನೆ ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಹಾಗೂ ಮಗನಿದ್ದರೂ ವೈಶಾಕ್ ನಟಿಯ ಫ್ಲಾಟ್‌ನಲ್ಲಿ ಏಕೆ ಉಳಿದುಕೊಂಡಿದ್ದರು ಎಂಬ ಅನುಮಾನಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮೃತರ ಪತ್ನಿ ಮೇಘಾ ಅವರು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ನಟಿಗೆ ತಾವು ಸಾಯುತ್ತಿರುವುದಾಗಿ ಕೊನೆಯ ಸಂದೇಶ ರವಾನಿಸಿದ ಬಳಿಕ ಉದ್ಯಮಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ….

Read More
Actor jayam ravi accused of locking maid in house

Jayam Ravi: ವಜ್ರದ ಹಾರ ಕಳ್ಳತನ ಆರೋಪ; ತಮಿಳು ನಟ ಜಯಂ ರವಿ ಮನೆಯಲ್ಲಿ ಕೆಲಸದವರ ಅಕ್ರಮ ಬಂಧನ?

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ರವಿ ಮೋಹನ್ (Jayam Ravi) ಅವರ ಚೆನ್ನೈನ ಇಂಜಂಬಾಕ್ಕಂನಲ್ಲಿರುವ ಐಷಾರಾಮಿ ನಿವಾಸ ಈಗ ಹೊಸದೊಂದು ಗಂಭೀರ ಕಾನೂನು ವಿವಾದಕ್ಕೆ ಸಿಲುಕಿದೆ. ನಟನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರದ ಹಾರ ಕಳ್ಳತನವಾಗಿರುವ ಬೆನ್ನಲ್ಲೇ, ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ಕಾನೂನುಬಾಹಿರವಾಗಿ ಕೂಡಿಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಮಧ್ಯಪ್ರವೇಶಿಸುವಂತಾಗಿದೆ. ಇತ್ತೀಚೆಗಷ್ಟೇ ಕೌಟುಂಬಿಕ ಕಲಹದಿಂದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಜಯಂ ರವಿ, ಈಗ ಮತ್ತೊಂದು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಏನಿದು ಘಟನೆ?…

Read More
How ketan Sister Suspicion Helped Unravel Murder Plot

Ketan Agarwal: ಪುಣೆ ಲೋಹಗಢ ಕೋಟೆ ಚಾರಣ ದುರಂತಕ್ಕೆ ಟ್ವಿಸ್ಟ್: ಉದ್ಯಮಿ ಕೇತನ್ ಸಾವು ಅಪಘಾತವಲ್ಲ

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಕಣಿವೆಗೆ ಬಿದ್ದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಈಗ ಭೀಕರ ತಿರುವು ಸಿಕ್ಕಿದೆ. ಆರಂಭದಲ್ಲಿ ಕೇವಲ ಆಕಸ್ಮಿಕ ಅಪಘಾತ ಎಂದು ಭಾವಿಸಲಾಗಿದ್ದ ಈ ಘಟನೆ, ವಾಸ್ತವವಾಗಿ ಕೇತನ್ ಭಾವಿ ಪತ್ನಿ (ಫಿಯಾನ್ಸೆ) ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಪ್ರಿಯಕರ ಸೇರಿ ನಡೆಸಿದ ಭೀಕರ ಕೊಲೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಮೃತನ ಸಹೋದರಿ ವ್ಯಕ್ತಪಡಿಸಿದ ಒಂದೇ ಒಂದು ಬಲವಾದ…

Read More
crime Armed Men found at KJ Georges Chikkamagaluru Estate

Crime: ಸಚಿವ ಕೆ.ಜೆ. ಜಾರ್ಜ್ ಒಡೆತನದ ಕಾಫಿ ತೋಟಕ್ಕೆ ನುಗ್ಗಿದ ಸಶಸ್ತ್ರಧಾರಿಗಳು

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಸಚಿವರೊಬ್ಬರ ತೋಟಕ್ಕೆ ಸಶಸ್ತ್ರಧಾರಿಗಳು ನುಗ್ಗಿರುವ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸೇರಿದ ಕಾಫಿ ಎಸ್ಟೇಟ್‌ನೊಳಗೆ ತಡರಾತ್ರಿ ನಾಲ್ವರು ಅನಾಮಧೇಯ ವ್ಯಕ್ತಿಗಳು ಮಾರಕಾಸ್ತ್ರಗಳೊಂದಿಗೆ (Crime) ಓಡಾಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ಹೆಸರಾಂತ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ ಬೆಟ್ಟದ ತಪ್ಪಲಿನ ಆಸುಪಾಸಿನಲ್ಲಿರುವ, ಸಚಿವ ಕೆ.ಜೆ. ಜಾರ್ಜ್ ಅವರ ಮಾಲೀಕತ್ವದ ‘ಏಳುನೂರುಖಾನ್’ ಕಾಫಿ ಎಸ್ಟೇಟ್‌ನಲ್ಲಿ ಈ ಗಂಭೀರ ಕೃತ್ಯ ನಡೆದಿದೆ. ಕೈಯಲ್ಲಿ ಗನ್, ಲಾಂಗ್…

Read More
big twist in KR puram triple crime case

Crime: ಕೆ.ಆರ್. ಪುರಂ ಟ್ರಿಪಲ್ ಮರ್ಡರ್ ಕೇಸ್: ಆಸ್ತಿ ಮತ್ತು 30 ಲಕ್ಷ ಸಾಲದ ವಿವಾದಕ್ಕೆ ಹೆತ್ತವರನ್ನೇ ಬಲಿ ಪಡೆದ ಲಿವ್-ಇನ್ ಜೋಡಿ

ಬೆಂಗಳೂರು: ರಾಜಧಾನಿಯ ಕೆ.ಆರ್. ಪುರಂ ವ್ಯಾಪ್ತಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ಮೂವರ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಕೃತ್ಯದ ಸಣ್ಣ ಎಳೆಯನ್ನು (Crime) ಪೊಲೀಸರು ಬಿಚ್ಚಿಟ್ಟಿದ್ದಾರೆ. ಆರೋಪಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಹೊಂದಿದ್ದ ಲಕ್ಷಾಂತರ ರೂಪಾಯಿ ಸಾಲ ಮತ್ತು ಆಸ್ತಿಯ ಜಗಳವೇ ಈ ರಕ್ತಪಾತಕ್ಕೆ ಪ್ರಮುಖ ಪ್ರೇರಣೆ ಎಂಬ ಅಂಶ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಪೋಷಕರು ಹಣಕಾಸಿನ ನೆರವು ನೀಡದ ಕೋಪಕ್ಕೆ ಇಡೀ ಕುಟುಂಬವನ್ನೇ ಮುಗಿಸಲಾಗಿದೆ ಎಂದು ಶಂಕಿಸಲಾಗಿದೆ. ಹೆತ್ತವರ ನಿರಾಕರಣೆಯೇ…

Read More
crime tv actress arrested for escaping with money

Crime: ಸೋಶಿಯಲ್ ಮೀಡಿಯಾ ಮೂಲಕ ಗಾಳ; ವಂಚಕಿ ಸೀರಿಯಲ್ ನಟಿ ವನಿತಾ ಪೊಲೀಸರ ವಶಕ್ಕೆ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾಗಿ, ಅಡವಿಟ್ಟಿರುವ ಒಡವೆಗಳನ್ನು ಬಿಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಂಗನಾಮ ಹಾಕುತ್ತಿದ್ದ ಕಿರುತೆರೆ ನಟಿ (Crime) ವನಿತಾಳನ್ನು ಕೊನೆಗೂ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಈಕೆಯ ನಯವಂಚಕ ಮಾತುಗಳಿಗೆ ಮರುಳಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಂತ್ರಸ್ತ ಯುವಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಅಡವಿಟ್ಟ ಒಡವೆಯ ಕಟ್ಟುಕಥೆ ಹೇಳಿ ಸ್ನೇಹದ ಬಲೆ! ಬಂಧಿತ ನಟಿಯ ವಂಚನೆಯ ತಂತ್ರ ಬಹಳ ವ್ಯವಸ್ಥಿತವಾಗಿರುತ್ತಿತ್ತು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ತಾನೊಬ್ಬ ಸೀರಿಯಲ್…

Read More
crime bride to be and her family takes life due to harassment

Crime: ಮದುವೆ ಮಂಟಪ ಏರಬೇಕಿದ್ದ ಯುವತಿ ತಂದೆ-ತಾಯಿಯೊಂದಿಗೆ ಆತ್ಮಹತ್ಯೆ

ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಮದುವೆಯ ಸಂಭ್ರಮ ಸಡಗರದಲ್ಲಿದ್ದ ಮನೆಯೊಂದು ಒಂದೇ ಕ್ಷಣದಲ್ಲಿ (Crime) ಸ್ಮಶಾನ (Self Harmimg) ಸದೃಶವಾಗಿದೆ. ಸ್ಥಳೀಯ ಯುವಕನೊಬ್ಬ ನೀಡಿದ ಅತಿಯಾದ ಮಾನಸಿಕ ಕಿರುಕುಳ ತಾಳಲಾರದೆ ಯುವತಿ ಹಾಗೂ ಆಕೆಯ ಹೆತ್ತವರು ಒಟ್ಟಿಗೆ ವಿಷ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಜರುಗಿದೆ. ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಮಗಳು ರಕ್ಷಿತಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಜೂನ್ 24 ರಂದು ರಕ್ಷಿತಾ ಅವರ ವಿವಾಹ ನಿಶ್ಚಯವಾಗಿತ್ತು. ಇನ್ನೇನು ಎರಡು…

Read More