TOP NEWS
crime Kumkum Bhagya actor Sanchita Ugale takes her life

Crime: ಕಿರುತೆರೆ ನಟಿ ಸಂಚಿತಾ ಉಗಾಳೆ ಸಾವು; ಕೊನೆಯ ರೀಲ್ಸ್‌ನಲ್ಲಿ ನಟಿಸಿದ್ದ ನಟಿ ಇನ್ನು ನೆನಪು ಮಾತ್ರ

ಮುಂಬೈ: ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಕುಂಕುಮ್ ಭಾಗ್ಯ’ ಮತ್ತು ‘ವಾಗ್ಲೆ ಕಿ ದುನಿಯಾ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ (22) ಅವರು ಭಾನುವಾರ (ಜೂನ್ 14) ಸಂಜೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ (Crime) ಮಾಡಿಕೊಂಡಿದ್ದಾರೆ. ಈ ಘಟನೆ ಇಡೀ ಟಿವಿ ಉದ್ಯಮ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ.́ ನೇಣು ಬಿಗಿದುಕೊಂಡು ಆತ್ಮಹತ್ಯೆ ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ನಲಸೋಪಾರಾ ಈಸ್ಟ್‌ನ ಆಚೋಲೆ ಗ್ರಾಮದ ಸಾಯಿ ಸಂತೋಷಿ ಬಿಲ್ಡಿಂಗ್‌ನಲ್ಲಿರುವ ತಮ್ಮ ಮನೆಯಲ್ಲಿ ಈ ಘಟನೆ…

Read More
Crime big twist in ex army man death case wife killed for insurance amount

Crime: ಬೆಳಗಾವಿ ಕ್ರೈಂ ಟ್ವಿಸ್ಟ್: ಆಸ್ಪತ್ರೆಯಲ್ಲೇ ನಿವೃತ್ತ ಯೋಧನಿಗೆ ಸ್ಲೋ ಪಾಯ್ಸನ್?

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದಲ್ಲಿ ನಡೆದಿದ್ದ ಮಾಜಿ ಸೈನಿಕ ಸಂದೀಪ ಮಾಂಜರಿ ಅವರ ನಿಗೂಢ ಸಾವಿನ ಪ್ರಕರಣವು ಇಡೀ ರಾಜ್ಯವೇ ಬೆಚ್ಚಿಬೀಳುವಂತಹ (Crime) ತಿರುವು ಪಡೆದುಕೊಂಡಿದೆ. ಕೇವಲ ಎರಡು ಕೋಟಿ ರೂಪಾಯಿ ಭಾರಿ ಮೊತ್ತದ ಇನ್ಶೂರೆನ್ಸ್ ಹಣವನ್ನು ಲೂಟಿ ಮಾಡಲು ಮತ್ತು ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ತಾವೇ ಸ್ಕೆಚ್ ಹಾಕಿ ಕೊಂದಿದ್ದಾರೆ ಎಂಬ ಗಂಭೀರ ಆರೋಪ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕೇಳಿಬಂದಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಮಣ್ಣು ಮಾಡಲಾಗಿದ್ದ…

Read More
raichur woman hit man who tried to assault her public

Raichur: ರಾಯಚೂರು ಬಸ್ ನಿಲ್ದಾಣದಲ್ಲಿ ಚುಡಾಯಿಸಿದವನಿಗೆ ಸಾರ್ವಜನಿಕರ ಮುಂದೆಯೇ ಚಳಿ ಬಿಡಿಸಿದ ವೀರನಾರಿ!

ರಾಯಚೂರು: ಒಂಟಿ ಮಹಿಳೆಯರನ್ನು ಕಂಡು ವಿಕೃತ ಆನಂದ ಪಡುವ ರೋಮಿಯೋಗಳಿಗೆ ರಾಯಚೂರು (Raichur) ನಗರದ ನಡುಬೀದಿಯಲ್ಲೇ ಮಹಿಳೆಯೊಬ್ಬರು ಚಾಮುಂಡೇಶ್ವರಿಯಂತೆ ಧಾವಿಸಿ ತಕ್ಕ ಪಾಠ ಕಲಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ತನ್ನ ಮುಜುಗರಕ್ಕೆ ಕಾರಣವಾದ ಪೋಕರಿಯ ಕಣ್ಣುಗಳಿಗೆ ಕ್ಷಣಮಾತ್ರದಲ್ಲಿ ಮೆಣಸಿನಕಾಯಿ ಪುಡಿ ಚೆಲ್ಲಿ, ಆತ ಚೀರಾಡುವಾಗಲೇ ಮರದ ದಂಡೆಯಿಂದ ಮನಬಂದಂತೆ ಥಳಿಸಿ ಇಡೀ ಸಾರ್ವಜನಿಕ ವಲಯವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಖಾರದ ಪುಡಿ ಎರಚಿದ ಮಹಿಳೆ ನಗರದ ಪ್ರಮುಖ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ರಾಜು ಬೊಮ್ಮನಾಳ ಎಂಬ ವ್ಯಕ್ತಿ ಅಲ್ಲಿ ನಿಂತಿದ್ದ…

Read More
crime belagavi police arrested 3 accused

Crime: ಅಡ್ವಾನ್ಸ್ ಹಣದ ಕಿರಿಕ್: ವ್ಯಕ್ತಿಯ ಭೀಕರ ಕೊ*ಲೆ, ಮೂವರು ಆರೋಪಿಗಳು ಲಾಕ್!

ಬೆಳಗಾವಿ: ಕುರಿ ಕಾಯುವ ಕೆಲಸಕ್ಕೆಂದು ಮುಂಗಡವಾಗಿ ಪಡೆದಿದ್ದ ಹಣದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ (Crime) ದೊಡವಾಡ ಗ್ರಾಮದಲ್ಲಿ ನಡೆದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಘಟನೆ ನಡೆದು ಕೆಲವೇ ದಿನಗಳಲ್ಲಿ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಹಾಲಪ್ಪ, ಮಂಜುನಾಥ ಹಾಗೂ ಅರ್ಜುನ ಬಂಧಿತ ಕಿಡಿಗೇಡಿಗಳು. ಜಮೀನಿನಲ್ಲಿ ಪತ್ತೆಯಾಗಿತ್ತು ನಿಗೂಢ ಶವ ದೊಡವಾಡ ಗ್ರಾಮದ ನಿವಾಸಿ ಫಕ್ಕೀರಪ್ಪ ಕಿರಕಸಾಲಿ (38) ಕೊಲೆಯಾದ ವ್ಯಕ್ತಿ. ಕಳೆದ ಕೆಲವು ದಿನಗಳ ಹಿಂದೆ…

Read More
crime vijayapura pan shop blast 3 injured

Crime: ಪಾನ್ ಶಾಪ್‌ನಲ್ಲಿ ಭೀಕರ ಸ್ಫೋಟ: ಮೂವರಿಗೆ ಗಂಭೀರ ಗಾಯ

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಮಮದಾಪೂರ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಸಂಭವಿಸಿದ ನಿಗೂಢ ಸ್ಫೋಟ ಇಡೀ ಹಳ್ಳಿಯನ್ನೇ (Crime) ನಡುಗಿಸಿದೆ. ಇಲ್ಲಿನ ಪಾನ್ ಶಾಪ್ ಒಂದರಲ್ಲಿ ನಡೆದ ಈ ಧಗಧಗನೆ ಹೊತ್ತಿ ಉರಿದ ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಜನರಲ್ಲಿ ಭೀತಿ ಆವರಿಸಿದೆ. ನುಜ್ಜುಗುಜ್ಜಾದ ಅಂಗಡಿ; ಆಸ್ಪತ್ರೆಗೆ ಸೇರಿದ ಗಾಯಾಳುಗಳು ರವಿಕಿರಣ ಎಂಬುವವರಿಗೆ ಸೇರಿದ ಶೆಡ್ ಮಾದರಿಯ ಪಾನ್ ಶಾಪ್ ಈ ಭೀಕರ ಸ್ಫೋಟದ ತೀವ್ರತೆಗೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಅಂಗಡಿಯ ಮಾಲೀಕ ರವಿಕಿರಣ ಸೇರಿದಂತೆ ಅಲ್ಲೇ…

Read More
Dayananada reddy kidnap case police arrested 4 people crime

Crime: ಮಾಜಿ ಎಂಎಲ್‌ಸಿ ದಯಾನಂದ ರೆಡ್ಡಿ ಕಿಡ್ನಾಪ್ ಕೇಸ್: ಗನ್ ತೋರಿಸಿ ಅಡ್ಡಗಟ್ಟಿದ್ದ ನಾಲ್ವರು ಕೇರಳದ ಕದೀಮರು ಪೊಲೀಸರ ಬಲೆಗೆ!

ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿ ತಡರಾತ್ರಿ ಭಾರಿ ಸಂಚಲನ ಮೂಡಿಸಿದ್ದ ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ (Crime) ಅವರ ಸಿನೆಮಾ ಶೈಲಿಯ ಅಪಹರಣ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಸೂರ್ಯನಗರ ಠಾಣೆ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿ, ಈ ಕೃತ್ಯ ಎಸಗಿದ್ದ ಕೇರಳ ಮೂಲದ ಪ್ರವೀಣ್, ಅಶಿಕ್, ಆದರ್ಶ ಹಾಗೂ ರೋಮಿಯೋ ಎಂಬ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಕಿಡ್ನಾಪ್ ಮಾಡಲು…

Read More
crime 1 and half year old kid body tortured by stepfather in kerala

Crime: ಕೇರಳದಲ್ಲಿ ಒಂದೂವರೆ ವರ್ಷದ ಕಂದಮ್ಮನ ಭೀಕರ ಕೊಲೆ: ಆಹಾರ ಸಿಲುಕಿ ಸಾವು ಎಂದಿದ್ದ ಪ್ರಕರಣದ ಹಿಂದೆ ಬಯಲಾಯ್ತು ಹೆತ್ತ ತಾಯಿ, ಪ್ರಿಯಕರನ ಕ್ರೌರ್ಯ!

ಕೇರಳ: ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ ಮಗು ಸಾವನ್ನಪ್ಪಿದೆ ಎಂದು ನಂಬಿಸಲು ಯತ್ನಿಸಿದ್ದ ಪ್ರಕರಣವೊಂದರಲ್ಲಿ, ಮಗುವಿನ ಮೇಲೆ ನಡೆದಿರುವ (Crime) ಸಾಲು ಸಾಲು ದೌರ್ಜನ್ಯ ಮತ್ತು ಕೊಲೆ ಸಂಚಿನ ರೋಮಾಂಚನಕಾರಿ ಸತ್ಯ ಬಯಲಾಗಿದೆ. ಕೇರಳದ ರಾಜಧಾನಿ ತಿರುವನಂತಪುರಂನಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ನೆಡುಮಂಗಾಡ್‌ನ ಪಾನವೂರಿನಲ್ಲಿ ಈ ಘೋರ ಕೃತ್ಯ ನಡೆದಿದ್ದು, ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಕೇವಲ ಒಂದೂವರೆ ವರ್ಷದ ಮಗು ಆರ್ಶಿದ್‌ನನ್ನು ಆತನ ತಾಯಿಯ ಲಿವ್-ಇನ್ ಪಾರ್ಟ್‌ನರ್ (ಸಾಕುತಂದೆ) ಹೊಡೆದು ಕೊಂದಿದ್ದು, ಹೆತ್ತ…

Read More