TOP NEWS
Cm vijay flags off 300 new buses takes small ride

CM Vijay: ಸಾರಿಗೆ ವ್ಯವಸ್ಥೆಗೆ ಹೈಟೆಕ್ ಸ್ಪರ್ಶ: ತಮಿಳುನಾಡಿನಲ್ಲಿ 300 ಹೊಸ ಬಸ್‌ಗಳ ಲೋಕಾರ್ಪಣೆ ಮಾಡಿದ ಸಿಎಂ ಜೋಸೆಫ್ ವಿಜಯ್!

ಚೆನ್ನೈ: ತಮಿಳುನಾಡು ರಾಜ್ಯ ಸರ್ಕಾರವು ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆಗೆ ಭಾರಿ ಪ್ರೋತ್ಸಾಹ ನೀಡಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಅವರು ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಬಲಪಡಿಸಲು ಸುಮಾರು 127.21 ಕೋಟಿ ರೂಪಾಯಿ ವೆಚ್ಚದ 300 ನೂತನ ಸರ್ಕಾರಿ ಬಸ್‌ಗಳ ಸೇವೆಗೆ ಗುರುವಾರ ಚಾಲನೆ ನೀಡಿದ್ದಾರೆ. ನಗರ ಹಾಗೂ ಉಪನಗರಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಉದ್ಘಾಟನೆಗೊಂಡ ತಕ್ಷಣವೇ ಕೋಯಿಂಬೇಡು ಮತ್ತು ಕಿಲಂಬಾಕ್ಕಂನಂತಹ ಪ್ರಮುಖ ನಿಲ್ದಾಣಗಳಿಂದ…

Read More
tamil nadu udayanidhi stalin taunts vijay over his wife divorce case in assembly

Tamil Nadu: ತಮಿಳುನಾಡು ಅಸೆಂಬ್ಲಿಯಲ್ಲಿ ‘ವಿಜಯ್ ವರ್ಸಸ್ ಉದಯನಿಧಿ’ ಕದನ: ರಾಜಕೀಯ ಜಿದ್ದಾಜಿದ್ದಿಗೆ ಕೌಟುಂಬಿಕ ಕೋರ್ಟ್ ಟ್ವಿಸ್ಟ್

ಚೆನ್ನೈ: ತಮಿಳುನಾಡು (Tamil Nadu) ವಿಧಾನಸಭೆಯು ಇದೀಗ ಇಬ್ಬರು ಯುವ ರಾಜಕೀಯ ನಾಯಕರ ತೀರಾ ವೈಯಕ್ತಿಕ ಮಟ್ಟದ ವಾಗ್ದಾಳಿಗೆ ವೇದಿಕೆಯಾಗಿದೆ. ಮುಖ್ಯಮಂತ್ರಿ ವಿಜಯ್ ಹಾಗೂ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನಡುವಿನ ರಾಜಕೀಯ ಸಮರ ಹದ್ದುಮೀರಿದ್ದು, ಪರಸ್ಪರರ ಖಾಸಗಿ ಬದುಕನ್ನು ಅಸೆಂಬ್ಲಿಯಲ್ಲೇ ಕೆದಕುವ ಹಂತಕ್ಕೆ ತಲುಪಿದೆ. ಸದನದಲ್ಲಿ ಸಿಎಂ ವಿಜಯ್ ಮಾಡಿದ ಭಾಷಣಕ್ಕೆ ಕೌಂಟರ್ ಕೊಡುವ ನೆಪದಲ್ಲಿ ಉದಯನಿಧಿ ಅವರು, ವಿಜಯ್ ಅವರ ವೈವಾಹಿಕ ಜೀವನದ ವಿಚ್ಛೇದನ ಪ್ರಕರಣವನ್ನು ಎಳೆದು ತಂದು ಭಾರಿ ಸಂಚಲನ ಮೂಡಿಸಿದ್ದಾರೆ. ವಿಜಯ್…

Read More
tamil nadu cm vijay announces farmers crop loan waiver up to 75000

Tamil Nadu: ಅನ್ನದಾತನ ಮನವಿಗೆ ಸ್ಪಂದಿಸಿದ ವಿಜಯ್ ಸರ್ಕಾರ: 75 ಸಾವಿರಕ್ಕೂ ಮೀರಿದ ಸಾಲಕ್ಕೆ ₹35,000 ವಿನಾಯಿತಿ!

ಚೆನ್ನೈ: ತಮಿಳುನಾಡಿನ (Tamil Nadu) ಮುಖ್ಯಮಂತ್ರಿ ದಳಪತಿ ವಿಜಯ್ ಅವರು ರೈತರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದು, ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಬೆಳೆ ಸಾಲ ಮನ್ನಾ ಯೋಜನೆಯನ್ನು ಗಣನೀಯವಾಗಿ ವಿಸ್ತರಿಸಿದ್ದಾರೆ. ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸಿರುವ ವಿಜಯ್ ಸರ್ಕಾರ, ಭೂಮಿಯ ವಿಸ್ತೀರ್ಣದ ಮಿತಿ ಇಲ್ಲದೆ ಎಲ್ಲಾ ವರ್ಗದ ರೈತರು 2025ರ ಮೇ 1 ರಿಂದ 2026ರ ಫೆಬ್ರವರಿ 28ರ ಅವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳಿಂದ ಪಡೆದಿರುವ 75,000 ರೂಪಾಯಿ ವರೆಗಿನ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದೆ….

Read More
Actor tamil nadu CM vijay and sangeetha divorce case adjourned

CM Vijay: ವಿಜಯ್-ಸಂಗೀತಾ ಡಿವೋರ್ಸ್‌ ಪ್ರಕರಣ, ವಿಚಾರಣೆ ಮುಂದೂಡಿದ ಕೋರ್ಟ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ (CM Vijay) ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ಅವರ ಹೈಪ್ರೊಫೈಲ್ ವಿಚ್ಛೇದನ ಅರ್ಜಿ ವಿಚಾರಣೆಯು ಸೋಮವಾರ (ಜೂನ್ 15) ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳಿಲ್ಲದೆ ಮುಕ್ತಾಯಗೊಂಡಿದೆ. ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದ ಮೇರೆಗೆ ಸಿಎಂ ವಿಜಯ್ ಹಾಗೂ ಸಂಗೀತಾ ಇಬ್ಬರೂ ಬೆಳಿಗ್ಗೆ 10:30ಕ್ಕೆ ಆರಂಭವಾದ ವಿಚಾರಣೆಗೆ ಖುದ್ದಾಗಿ ಹಾಜರಾಗಿದ್ದರು. ಇಬ್ಬರ ಉಪಸ್ಥಿತಿಯ ನಡುವೆಯೂ ಉಭಯ ಪಕ್ಷಗಳ ನಡುವೆ ಯಾವುದೇ ಒಪ್ಪಂದ ಅಥವಾ ಪ್ರಮುಖ ಬೆಳವಣಿಗೆಗಳು…

Read More
Cm vijay first Karnataka visit took darshana of kolluru mookambike devi

CM Vijay: ಮೂಕಾಂಬಿಕೆ ದರ್ಶನ ಪಡೆದ ದಳಪತಿ‌ ಸಿಎಂ ವಿಜಯ್

ಉಡುಪಿ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಕಾಲಿವುಡ್‌ನ ‘ದಳಪತಿ’ ಜೋಸೆಫ್ ವಿಜಯ್ (CM Vijay) ಅವರು ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಿಎಂ ಆದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಅವರು ಯಾವುದೇ ರಾಜಕೀಯ ಕಾರ್ಯಕ್ರಮಗಳಿಲ್ಲದೆ ಕೇವಲ ಶಕ್ತಿ ಆರಾಧನೆಗಾಗಿ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ದೇವಿಯ ದರ್ಶನ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕುತೂಹಲ ಮೂಡಿಸಿದ…

Read More
cm vijay super hit film mersal to re release on his birthday

CM Vijay: ದಳಪತಿ ವಿಜಯ್ ಜನ್ಮದಿನದ ಸಂಭ್ರಮ: ಜೂನ್ 19ಕ್ಕೆ ಆಯ್ದ ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ‘ಮೆರ್ಸಲ್’ ಸಿನಿಮಾ ರೀ-ರಿಲೀಸ್!

ಚೆನ್ನೈ: ಇತ್ತೀಚೆಗಷ್ಟೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ಜೋಸೆಫ್ ವಿಜಯ್ (CM Vijay) ಅವರ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದ ಮುನ್ನವೇ ಚಿತ್ರಮಂದಿರಗಳಲ್ಲಿ ಸಂಭ್ರಮಿಸಲು ದೊಡ್ಡ ಅವಕಾಶವೊಂದು ಸಿಕ್ಕಿದೆ. ಸಿಎಂ ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ ‘ಜನ ನಾಯಗನ್’ ಸಿನಿಮಾದ ಸೆನ್ಸಾರ್ ಮಂಡಳಿ (CBFC) ಪ್ರಮಾಣಪತ್ರದ ಗೊಂದಲದಿಂದಾಗಿ ಬಿಡುಗಡೆ ತಡವಾಗುತ್ತಿರುವ ಬೆನ್ನಲ್ಲೇ, ಅವರ ವೃತ್ತಿಜೀವನದ 2017ರ ಬ್ಲಾಕ್‌ಬಸ್ಟರ್ ಸಿನಿಮಾ ‘ಮೆರ್ಸಲ್’ (Mersal) ಜೂನ್ 19 ರಂದು ಮತ್ತೆ ಚಿತ್ರಮಂದಿರಗಳಿಗೆ ಲಗ್ಗೆ ಇಡಲು ಸಜ್ಜಾಗಿದೆ. ಜೂನ್ 22…

Read More
raghava Lawrence to contest in trichy east from TVK

TVK: ಉಪಚುನಾವಣೆ ಕಣಕ್ಕೆ ರಾಘವ ಲಾರೆನ್ಸ್? ಟಿವಿಕೆ ಮುಖ್ಯಸ್ಥ ವಿಜಯ್ ಹೊಸ ರಾಜಕೀಯ ನಡೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ವೇಳೆ ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಕ್ಷೇತ್ರಗಳೆರಡರಲ್ಲೂ ಗೆದ್ದು ಬೀಗಿದ್ದ ಮುಖ್ಯಮಂತ್ರಿ ವಿಜಯ್ ಅವರು, ಬಳಿಕ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನವನ್ನು ತೆರವುಗೊಳಿಸಿದರು. ಹೀಗೆ ತೆರವಾಗಿರುವ ಈ ಕ್ಷೇತ್ರಕ್ಕೆ ಶೀಘ್ರದಲ್ಲೇ ಉಪಚುನಾವಣೆ ಎದುರಾಗಲಿದ್ದು, ಇಲ್ಲಿ ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಅಭ್ಯರ್ಥಿಯಾಗಿ ಖ್ಯಾತ ನಟ ರಾಘವ ಲಾರೆನ್ಸ್ ಅವರನ್ನು ಕಣಕ್ಕಿಳಿಸಲು ವಿಜಯ್ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಗುರು ರಜನಿಕಾಂತ್ ಮಾರ್ಗದರ್ಶನದಲ್ಲಿ ಲಾರೆನ್ಸ್…

Read More