Fuel Price Cut Likely in India If Global Crude oil Prices Remain Low

Petrol: ಇಂಧನ ಮಾರಾಟಕ್ಕೆ ಸರ್ಕಾರದ ಹೊಸ ಬ್ರೇಕ್: ಬಂಕ್‌ಗಳಲ್ಲಿ ಇನ್ನುಮುಂದೆ ಪೆಟ್ರೋಲ್ ಕ್ಯಾನ್, ಬಾಟಲಿಗಳಿಗೆ ನೋ ಎಂಟ್ರಿ!

ಬೆಂಗಳೂರು: ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ (Petrol) ಇಂಧನ ವಿತರಣೆಗೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಬದಲಾವಣೆ ತಂದಿದೆ. ಇಂಧನ ದಾಸ್ತಾನು ನಿರ್ವಹಣೆ ಮತ್ತು ಸಾರ್ವಜನಿಕರ ರಕ್ಷಣೆಯ ಹಿತದೃಷ್ಟಿಯಿಂದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ನಿಯಮ ಮೀರುವ ಮಾಲೀಕರಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದತಿಯ ಎಚ್ಚರಿಕೆ ನೀಡಲಾಗಿದೆ. ವಾಹನಗಳ ಟ್ಯಾಂಕ್‌ಗಷ್ಟೇ ಇಂಧನ ಸೀಮಿತ ಸಾಮಾನ್ಯವಾಗಿ ತುರ್ತು ಅಗತ್ಯಕ್ಕೆ ಅಥವಾ ಗಾಡಿ ರಿಪೇರಿ ಎಂಬ ಕಾರಣ ನೀಡಿ ಬಾಟಲಿ ಹಾಗೂ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಪೆಟ್ರೋಲ್…

Read More
Karnataka Extends Deadline for Submitting Residential OC and CC Until August 15

Crime: ಮಹಿಳಾ ಸುರಕ್ಷತೆಯಲ್ಲಿ ಕುಸಿದ ಬೆಂಗಳೂರು: ದೇಶದ ಮೆಟ್ರೋ ನಗರಗಳ ಪೈಕಿ ಸಿಲಿಕಾನ್ ಸಿಟಿಗೆ 3ನೇ ಸ್ಥಾನ

ಬೆಂಗಳೂರು: ತಾಂತ್ರಿಕ ಹಬ್ ಆಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ನಗರವು ಮಹಿಳೆಯರ ವಿರುದ್ಧದ ಅಪರಾಧ (Crime) ಪ್ರಕರಣಗಳಲ್ಲಿ ಆತಂಕಕಾರಿ ಬೆಳವಣಿಗೆಯನ್ನು ದಾಖಲಿಸಿದೆ. 2024ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (NCRB) ವರದಿಯ ಅನ್ವಯ, ದೇಶದ 19 ಪ್ರಮುಖ ಮಹಾನಗರಗಳ ಪೈಕಿ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ದಾಖಲೆಯಾದ ದೌರ್ಜನ್ಯದ ವಿವರ: ಈ ಪಟ್ಟಿಯಲ್ಲಿ ದೆಹಲಿ ಮತ್ತು ಮುಂಬೈ ನಗರಗಳು ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದರೆ, ಬೆಂಗಳೂರು ನಂತರದ ಸ್ಥಾನದಲ್ಲಿದೆ. 2024ರ ಅವಧಿಯಲ್ಲಿ ನಗರದಲ್ಲಿ…

Read More
good news indian railway releases bullet train route maps

Bullet Train: ಕರ್ನಾಟಕಕ್ಕೆ ಮೂರು ಬುಲೆಟ್ ರೈಲು ಮಾರ್ಗಗಳ ನಕ್ಷೆ ರಿಲೀಸ್: ಮೈಸೂರು-ಬೆಂಗಳೂರು ನಡುವೆ ಅತೀ ವೇಗದ ಪ್ರಯಾಣ!

ಬೆಂಗಳೂರು: ರಾಜ್ಯದ ಜನತೆ ಬಹುಕಾಲದಿಂದ ಕಾಯುತ್ತಿದ್ದ ಹೈಸ್ಪೀಡ್ ರೈಲು ಯೋಜನೆಗಳ ಅಧಿಕೃತ ಮಾರ್ಗಸೂಚಿ ಹೊರಬಿದ್ದಿದೆ. ಬೆಂಗಳೂರಿನಿಂದ ನೆರೆಯ ರಾಜಧಾನಿಗಳಾದ ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕ ಕಲ್ಪಿಸುವ ಯೋಜನೆಗಳ ಜೊತೆಗೆ, ಈಗ ಮೈಸೂರು-ಬೆಂಗಳೂರು ಹೈಸ್ಪೀಡ್ (Bullet Train) ಮಾರ್ಗದ ನಕ್ಷೆಯೂ ಸಿದ್ಧವಾಗಿರುವುದು ವಿಶೇಷ. ಮೈಸೂರು ಮಾರ್ಗದ ಹೈಲೈಟ್ಸ್: ಸಂಸದ ಯದುವೀರ್ ಒಡೆಯರ್ ಅವರ ಪ್ರಸ್ತಾವನೆಗೆ ಓಗೊಟ್ಟಿರುವ ಕೇಂದ್ರ ಸರ್ಕಾರ, ಚೆನ್ನೈ ಬುಲೆಟ್ ರೈಲು ಯೋಜನೆಯನ್ನು ಮೈಸೂರಿನವರೆಗೆ ವಿಸ್ತರಿಸಲು ಮುಂದಾಗಿದೆ. ಸುಮಾರು 157 ಕಿ.ಮೀ ಉದ್ದದ ಈ ಮಾರ್ಗವು ಮೈಸೂರಿನಿಂದ…

Read More
crime police arrested a gang for thefting in bus

Crime: ಮಕ್ಕಳಿಂದ ವಾಂತಿ ನಾಟಕವಾಡಿಸಿ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಪೊಲೀಸರ ವಶಕ್ಕೆ!

ಹೊಸಕೋಟೆ: ಬಸ್ಸುಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಅವರ ಮೈಮೇಲಿನ ಒಡವೆಗಳನ್ನು (Crime) ಲೂಟಿ ಮಾಡುತ್ತಿದ್ದ ಕುಪ್ಪಂ ಮೂಲದ ಗ್ಯಾಂಗ್‌ನ ಪ್ರಮುಖ ಆರೋಪಿಯನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನದ ವಿಶಿಷ್ಟ ಶೈಲಿ: ಈ ಗ್ಯಾಂಗ್ ಕಳ್ಳತನಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಿತ್ತು. ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ತಂಡದ ಸದಸ್ಯರು ತಮ್ಮೊಂದಿಗಿದ್ದ ಮಗುವಿಗೆ ವಾಂತಿ ಬರುತ್ತಿದೆ ಎಂದು ನಾಟಕವಾಡುತ್ತಿದ್ದರು. ಮಗುವಿನ ಅಸ್ವಸ್ಥತೆ ನೋಡಿ ಪ್ರಯಾಣಿಕರು ಸಹಾಯಕ್ಕೆ ಬಂದಾಗ ಅಥವಾ ಅವರ…

Read More
cyber crime bengaluru more than 2 crore duped

Cyber Crime: ಎನ್‌ಐಎ ಅಧಿಕಾರಿಗಳ ಸೋಗಿನಲ್ಲಿ ತಾಯಿ-ಮಗಳಿಗೆ 2.1 ಕೋಟಿ ರೂ. ವಂಚನೆ!

ಬೆಂಗಳೂರು: ರಾಜಧಾನಿಯಲ್ಲಿ ಸೈಬರ್ ವಂಚಕರ ಜಾಲ ಮತ್ತಷ್ಟು ವಿಸ್ತರಿಸುತ್ತಿದ್ದು, ಜಯನಗರದ ಗೃಹಿಣಿಯೊಬ್ಬರು ಮತ್ತು ಅವರ ಮಗಳನ್ನು ಗುರಿಯಾಗಿಸಿಕೊಂಡು (Cyber Crime) ಬರೋಬ್ಬರಿ 2.1 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ತನಿಖಾ ಸಂಸ್ಥೆಯ ಅಧಿಕಾರಿಗಳಂತೆ ನಟಿಸಿ ಈ ಭಾರೀ ಮೊತ್ತದ ವಂಚನೆ ಎಸಗಲಾಗಿದೆ. ನಕಲಿ ವಿಚಾರಣೆಯ ನಾಟಕ: ಏಪ್ರಿಲ್ 13ರಂದು ಸಂತ್ರಸ್ತ ಮಹಿಳೆಗೆ ವಾಟ್ಸಾಪ್ ಮೂಲಕ ಕರೆ ಮಾಡಿದ್ದ ಅಪರಿಚಿತನೊಬ್ಬ, ತನ್ನನ್ನು ‘ಪ್ರದೀಪ್ ಜಸ್ವಾಲ್’ ಎಂದು ಪರಿಚಯಿಸಿಕೊಂಡಿದ್ದ. ಮಹಿಳೆಯ ಡೆಬಿಟ್ ಕಾರ್ಡ್ ಅನ್ನು ದೇಶವಿರೋಧಿ ಸಂಘಟನೆಯಾದ ಪಿಎಫ್‌ಐ (PFI)…

Read More
DK Shivakumar meeting with central minister Rajnath singh

DK Shivakumar: ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡ ನಿರ್ಮಾಣ ನಿರ್ಬಂಧ ಸಡಿಲಿಕೆಗೆ ಕೇಂದ್ರಕ್ಕೆ ಮನವಿ

ನವದೆಹಲಿ: ಬೆಂಗಳೂರು ನಗರದಲ್ಲಿನ ರಕ್ಷಣಾ ಇಲಾಖೆಯ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶದಲ್ಲಿ ವಿಧಿಸಲಾಗಿರುವ ಎತ್ತರದ ನಿರ್ಬಂಧಗಳು ನಗರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ನವದೆಹಲಿಯಲ್ಲಿ ಸಕಾರಾತ್ಮಕ ಸಭೆ ನಡೆಸಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಮಾಹಿತಿ ನೀಡಿದ ಡಿಸಿಎಂ ಈ ಕುರಿತು ಮಾಹಿತಿ ನೀಡಿರುವ ಅವರು, ಎಚ್‌ಎಎಲ್ (HAL) ಮತ್ತು ಯಲಹಂಕ ವಾಯುನೆಲೆಗಳ ಸುತ್ತಮುತ್ತ ನಿರಾಕ್ಷೇಪಣಾ ಪತ್ರ (NOC) ನೀಡುವಾಗ ವಿಧಿಸಲಾಗುತ್ತಿರುವ…

Read More
removing sacred thread during cet exam in Bengaluru staff suspended

CET: ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ; ಕಾಲೇಜಿನ ಮೂವರು ಸಿಬ್ಬಂದಿ ಅಮಾನತು

ಬೆಂಗಳೂರು: ಕೋರಮಂಗಲದ ಕೃಪಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಿಇಟಿ (CET) ಪರೀಕ್ಷೆಯ ವೇಳೆ, ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಯೊಂದು ನಡೆದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳಿಗೆ ಧಾರ್ಮಿಕ ಸಂಕೇತವಾದ ಜನಿವಾರವನ್ನು ಬಿಚ್ಚುವಂತೆ ಒತ್ತಾಯಿಸಿದ್ದ ಘಟನೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಕಾಲೇಜು ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ. ಏನಿದು ಪ್ರಕರಣ? ಏಪ್ರಿಲ್ 23ರಂದು ನಡೆದ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ, ಆನಂದ್ ಸುಧೀರ್ ರಾವ್ ಸೇರಿದಂತೆ ಸುಮಾರು ಐವರು ವಿದ್ಯಾರ್ಥಿಗಳನ್ನು…

Read More