TOP NEWS

DK Shivakumar: ಕರ್ನಾಟಕದಲ್ಲಿ ಜಲಕ್ಷಾಮದ ಭೀತಿ: ಜಲಾಶಯದ ನೀರು ನಂಬಿ ಬೆಳೆ ಇಡಬೇಡಿ ಎಂದು ಸಿಎಂ ಡಿಕೆಶಿ ಮನವಿ!

Be aware that people are observing us DK Shivakumar tells party workers and leaders

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ತೀವ್ರ ಜಲಕ್ಷಾಮ ಹಾಗೂ ಆತಂಕಕಾರಿ ಬರಗಾಲದ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಉನ್ನತ ಮಟ್ಟದ ಸಂಪುಟ ಸಭೆ ನಡೆಸಿದ ಬಳಿಕ ಹೈ ಅಲರ್ಟ್ ಘೋಷಿಸಿದ್ದಾರೆ. ಇಡೀ ದೇಶದಲ್ಲೇ ಈ ಬಾರಿ ಭೀಕರ ಬರಗಾಲ ಆವರಿಸುವ ಲಕ್ಷಣಗಳಿದ್ದು, ಕರ್ನಾಟಕದ ಬಹುತೇಕ ಪ್ರಮುಖ ಜಲಾಶಯಗಳಿಗೆ ಬರುತ್ತಿದ್ದ ನೀರಿನ ಒಳಹರಿವು ಸಂಪೂರ್ಣವಾಗಿ ನಿಂತುಹೋಗಿದೆ ಎಂದು ಸಿಎಂ ಆತಂಕ ವ್ಯಕ್ತಪಡಿಸಿದ್ದಾರೆ.

ಜಲಾಶಯಗಳಲ್ಲಿ ಒಣಗಿದ ಒಳಹರಿವು ರಾಜ್ಯದ ಬರ ಪರಿಸ್ಥಿತಿಯ ಕುರಿತು ಕಂದಾಯ ವಿಭಾಗಗಳ ಆಧಾರದ ಮೇಲೆ ಸುದೀರ್ಘ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಮುಖ್ಯಮಂತ್ರಿಗಳು, “ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಬರಗಾಲದ ಕರಾಳ ಛಾಯೆ ಹರಡಿದೆ. ಕರ್ನಾಟಕದ ಜೀವನಾಡಿಗಳಂತಿರುವ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು (Inflow) ಇಲ್ಲದಂತಾಗಿದ್ದು, ಸಂಪೂರ್ಣ ಶೂನ್ಯ ಹಂತಕ್ಕೆ ತಲುಪಿದೆ. ರಾಜ್ಯಕ್ಕೆ ಅತ್ಯಂತ ಪ್ರಮುಖವಾಗಿರುವ ಕಾವೇರಿ ಜಲಾನಯನ ಪ್ರದೇಶದಲ್ಲೂ (ಕಾವೇರಿ ಬೇಸಿನ್) ನೀರಿನ ಒಳಹರಿವು ತೀರಾ ನಗಣ್ಯವಾಗಿದೆ. ಇದು ಕೇವಲ ಕರ್ನಾಟಕಕ್ಕೆ ಸೀಮಿತವಾದ ಸಮಸ್ಯೆಯಲ್ಲ, ಇಡೀ ಭಾರತದಲ್ಲೇ ಈ ಬಾರಿ ಭೀಕರ ಬರಗಾಲ ತಲೆದೋರಲಿದ್ದು, ಈ ಕುರಿತು ಕೇಂದ್ರ ಸರ್ಕಾರಕ್ಕೂ ಈಗಾಗಲೇ ಮುನ್ಸೂಚನೆ ನೀಡಲಾಗಿದೆ,” ಎಂದು ಪರಿಸ್ಥಿತಿಯ ಗಂಭೀರತೆಯನ್ನು ಬಿಚ್ಚಿಟ್ಟರು.

ಅನ್ನದಾತರಿಗೆ ಸಿಎಂ ಕಟ್ಟುನಿಟ್ಟಿನ ಸಂದೇಶ: ಡ್ಯಾಂ ನೀರು ನಂಬಬೇಡಿ! ಇದೇ ವೇಳೆ ರಾಜ್ಯದ ರೈತ ಬಾಂಧವರಿಗೆ ಮಹತ್ವದ ಮನವಿ ಮಾಡಿರುವ ಮುಖ್ಯಮಂತ್ರಿಗಳು, “ಯಾರೂ ಕೂಡ ಜಲಾಶಯಗಳಲ್ಲಿ ಸದ್ಯಕ್ಕೆ ಬಾಕಿ ಇರುವ ನೀರನ್ನು ನಂಬಿಕೊಂಡು ಹೊಸದಾಗಿ ಯಾವುದೇ ಬೆಳೆಗಳನ್ನು ಬಿತ್ತಲು ಮುಂದಾಗಬೇಡಿ. ಸದ್ಯಕ್ಕೆ ಕೇವಲ ಮಳೆಯನ್ನು ಮಾತ್ರ ಆಧಾರವಾಗಿಟ್ಟುಕೊಂಡು ಕೃಷಿ ಚಟುವಟಿಕೆ ಮಾಡಬೇಕು. ಡ್ಯಾಂನಲ್ಲಿ ನೀರಿದೆ ಎಂದು ಬೆಳೆ ಹಾಕಿದರೆ ಮುಂದೆ ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ವರುಣದೇವ ಕೃಪೆ ತೋರಿ ಉತ್ತಮ ಮಳೆಯಾದರೆ ಮಾತ್ರ ನಾವು ರೈತರ ಬೆಳೆಗಳಿಗೆ ನೀರು ಹರಿಸಲು ಸಾಧ್ಯ,” ಎಂದು ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.

ವಿದ್ಯುತ್ ಕ್ಷಾಮ ಎದುರಿಸಲು ಮುನ್ನೆಚ್ಚರಿಕೆ ಬರಗಾಲದ ಹೊಡೆತವು ಕೇವಲ ಕುಡಿಯುವ ನೀರಿಗೆ ಮಾತ್ರವಲ್ಲದೆ ಭವಿಷ್ಯದಲ್ಲಿ ತೀವ್ರ ವಿದ್ಯುತ್ ಕ್ಷಾಮಕ್ಕೂ ಕಾರಣವಾಗಬಹುದು ಎಂಬುದನ್ನು ಸಿಎಂ ಪರೋಕ್ಷವಾಗಿ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಈ ಕಠಿಣ ಸವಾಲುಗಳನ್ನು ನಿಭಾಯಿಸಲು ಸರ್ಕಾರ ಈಗಿನಿಂದಲೇ ಕೌಂಟರ್ ಪ್ಲಾನ್ ರೆಡಿ ಮಾಡುತ್ತಿದೆ. ಭವಿಷ್ಯದ ಆಪತ್ತನ್ನು ಎದುರಿಸಲು ರಾಜ್ಯದಲ್ಲಿ ಇಂದಿನಿಂದಲೇ ವಿದ್ಯುತ್ ಸಂಗ್ರಹಣೆಗೆ (Power Storage) ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ ಇಂಧನ ಇಲಾಖೆ ಸಂಪೂರ್ಣ ಸಜ್ಜಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಲೋಪ ಒಪ್ಪಿಕೊಂಡ ಶಾಸಕ ರಾಯರೆಡ್ಡಿ

Leave a Reply

Your email address will not be published. Required fields are marked *