TOP NEWS
Congress CPL meeting dk shivakumar meets siddaramaiah

Congress: ಪರಿಷತ್ ಚುನಾವಣೆ ತಲ್ಲಣ: ಸಿಎಲ್‌ಪಿ ಸಭೆಗೂ ಮುನ್ನ ಸಿದ್ದರಾಮಯ್ಯ ನಿವಾಸಕ್ಕೆ ಸಿಎಂ ಡಿಕೆಶಿ ದಿಢೀರ್ ಭೇಟಿ, ರಹಸ್ಯ ಸಮಾಲೋಚನೆ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ರೋಮಾಂಚನ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಯ ಮುಹೂರ್ತ ಹತ್ತಿರವಾಗುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್ (Congress) ಪಾಳಯದಲ್ಲಿ ತಂತ್ರ-ಪ್ರತಿತಂತ್ರಗಳ ಜಿದ್ದಾಜಿದ್ದಿ ತಾರಕಕ್ಕೇರಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಿರ್ಣಾಯಕ ಸಭೆ ಆರಂಭವಾಗುವ ಕೆಲವೇ ಗಂಟೆಗಳ ಮುಂಚೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ‘ಕಾವೇರಿ’ಗೆ ಸರ್ಪ್ರೈಸ್ ಭೇಟಿ ನೀಡಿರುವುದು ಭಾರಿ ರಾಜಕೀಯ ಸಂಚಲನ ಮೂಡಿಸಿದೆ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ನಡೆದಿರುವ ಈ ಆಂತರಿಕ ಮಾತುಕತೆ…

Read More
Businessman Mohan Das Pai suggestion to new cm dk shivakumar about Bengaluru development and metro problems

Mohan Das Pai: ಬೆಂಗಳೂರು ಅಭಿವೃದ್ಧಿಗೆ ಮೋಹನ್ ದಾಸ್ ಪೈ ಮಾಸ್ಟರ್ ಪ್ಲಾನ್: ಸಿಎಂ ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ವಿಶೇಷ ಸಲಹೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲಸೌಕರ್ಯಗಳ ದುಃಸ್ಥಿತಿ ಮತ್ತು ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ (Mohan Das Pai) ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಗೆ ರಾಜಕೀಯ ಮಾರ್ಗದರ್ಶಕರಾಗಿರುವ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮಾದರಿಯಲ್ಲೇ ಜನಪರ ಆಡಳಿತ ನೀಡಬೇಕು ಹಾಗೂ ಭ್ರಷ್ಟಾಚಾರಕ್ಕೆ ಸಂಪೂರ್ಣ ಬ್ರೇಕ್ ಹಾಕಿ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಘನತೆಯನ್ನು ಮರುಸ್ಥಾಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಲೂಟಿ ಹೊಡೆಯುವ ರಾಜಕಾರಣದಿಂದಾಗಿ ನಗರದ…

Read More
After gruhalakshmi now gruha Jyoti scheme will get cut off

Gruha Jyoti: ಇನ್ಮುಂದೆ ವೋಟರ್ ಐಡಿ ಇದ್ದವರಿಗಷ್ಟೇ ಉಚಿತ ವಿದ್ಯುತ್, ಹೊರ ರಾಜ್ಯದವರಿಗೆ ಗೃಹಜ್ಯೋತಿ ಕಟ್?

ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭವನ್ನು ಅನರ್ಹರು ಪಡೆಯುವುದನ್ನು ತಡೆಯಲು ಈಗ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿನ ಲೋಪದೋಷಗಳ ತಪಾಸಣೆ ಬೆನ್ನಲ್ಲೇ, ಸಾರ್ವಜನಿಕರಿಗೆ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ (Gruha Jyoti) ಯೋಜನೆಗೂ ಪರಿಷ್ಕರಣೆಯ ಕತ್ತರಿ ಬೀಳಲಿದೆ. ಈ ಮಹತ್ವದ ಬದಲಾವಣೆಗೆ ಸಂಬಂಧಿಸಿದಂತೆ ಮುಂದಿನ 48 ಗಂಟೆಗಳಲ್ಲಿ ಇಂಧನ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಾಧ್ಯತೆಯಿದ್ದು, ಅರ್ಹ ಫಲಾನುಭವಿಗಳನ್ನು ಮಾತ್ರ ಉಳಿಸಿಕೊಳ್ಳಲು ಕಠಿಣ ಪ್ರಕ್ರಿಯೆ ಜಾರಿಗೆ ಬರಲಿದೆ….

Read More
kn rajanna taunted senior mlas about ministry controversy

KN Rajanna: ಸಚಿವರಿಗೆ ಶುರುವಾಗಿದೆ ಹೊಸ ಕಾಯಿಲೆ, ಖಾತೆ ಕ್ಯಾತೆಗೆ ಕೆ.ಎನ್. ರಾಜಣ್ಣ ವ್ಯಂಗ್ಯ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕ್ಯಾಬಿನೆಟ್‌ನಲ್ಲಿ ಮೊದಲ ಹಂತದ ಇಲಾಖೆಗಳ ಹಂಚಿಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಪಾಳಯದೊಳಗಿನ ಅಸಮಾಧಾನದ ಜ್ವಾಲೆಗಳು ಬಹಿರಂಗವಾಗಿ ಸ್ಫೋಟಗೊಳ್ಳಲಾರಂಭಿಸಿವೆ. ತಮಗೆ ಸಿಕ್ಕಿರುವ ಖಾತೆಗಳ ಬಗ್ಗೆ ಹಿರಿಯ ಸಚಿವರುಗಳು ಅಸಮಾಧಾನ ಹೊರಹಾಕುತ್ತಿರುವುದನ್ನು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ (KN Rajanna) ಅವರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ತೀವ್ರವಾಗಿ ಲೇವಡಿ ಮಾಡಿದ್ದಾರೆ. ಕೃಷ್ಣಬೈರೇಗೌಡರ ಹಠ; ಹೈಕಮಾಂಡ್ ಬಳಿ ದೂರು ಕೊಂಡೊಯ್ದ ಸಚಿವರು ಬೆಂಗಳೂರು ನಗರಾಭಿವೃದ್ಧಿ ಸಿಗಲಿಲ್ಲ…

Read More
dk shivakumar made vastu changes in cm official house

DK Shivakumar: ವಾಸ್ತು ಬದಲಾವಣೆಗೆ ಸಿಎಂ ಡಿಕೆಶಿ ಕಸರತ್ತು: ಕುಮಾರಕೃಪಾ ದ್ವಾರ ಉಲ್ಟಾ, ಕೊಠಡಿ ಧ್ವಂಸ

ಬೆಂಗಳೂರು: ಚುನಾವಣೆ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಪ್ರತಿಯೊಂದು ಶುಭ ಕಾರ್ಯವನ್ನು ಜ್ಯೋತಿಷ್ಯದ ಪ್ರಕಾರವೇ ಮಾಡಿಕೊಂಡು ಬಂದಿರುವ ಸಿಎಂ ಡಿ.ಕೆ. ಶಿವಕುಮಾರ್, (DK Shivakumar) ಈಗ ವಾಸ್ತುಶಾಸ್ತ್ರಕ್ಕೆ ತಕ್ಕಂತೆ ತಮ್ಮ ಅಧಿಕೃತ ಕಚೇರಿ ಹಾಗೂ ನಿವಾಸವನ್ನು ಬದಲಾಯಿಸಲು ಮುಂದಾಗಿದ್ದಾರೆ. ಐತಿಹಾಸಿಕ ಪಾರಂಪರಿಕ ಕಟ್ಟಡವಾದ ಕುಮಾರಕೃಪಾ ಅತಿಥಿ ಗೃಹವನ್ನು (Kumara Krupa Guest House) ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನಾಗಿ ಮಾರ್ಪಡಿಸಲಾಗುತ್ತಿದ್ದು, ವಾಸ್ತು ದೋಷ ನಿವಾರಣೆಗಾಗಿ ದೊಡ್ಡ ಮಟ್ಟದ ನವೀಕರಣ ಕಾಮಗಾರಿಗಳು ಆರಂಭವಾಗಿವೆ. ವಾಸ್ತು ನಿಯಮಕ್ಕೆ…

Read More
cm dk shivakumar warning to congress workers

DK Shivakumar: ಹಳೇ ದ್ವೇಷ ಮರೆತು ಮುನ್ನಡೆಯಿರಿ, 2028 ಕ್ಕೆ ಮತ್ತೆ ಕಾಂಗ್ರೆಸ್ ಗೆಲ್ಲಿಸುವುದೇ ನಿಮ್ಮ ಟಾರ್ಗೆಟ್: ಕಾರ್ಯಕರ್ತರಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ!

ಬೆಂಗಳೂರು: “ಹಳೆಯ ಮುನಿಸು, ದ್ವೇಷ ಹಾಗೂ ಪ್ರತೀಕಾರದ ರಾಜಕಾರಣವನ್ನು ಸಂಪೂರ್ಣವಾಗಿ ಬದಿಗಿಟ್ಟು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿ. ಮುಂಬರುವ 2028 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಧ್ವಜ ಹಾರಿಸುವುದೇ ನಿಮ್ಮ ಮುಂದಿನ ಅಂತಿಮ ಗುರಿಯಾಗಿರಬೇಕು” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಮುಖಂಡರ ಭೇಟಿ ವೇಳೆ ಸಿಎಂ ಕಿವಿಮಾತು ಮೈಸೂರು ಜಿಲ್ಲೆಯ ಹಿರಿಯ ನಾಯಕ, ಮಾಜಿ ಶಾಸಕ ಮಂಜುನಾಥ್ ಹಾಗೂ ಕೆಪಿಸಿಸಿ…

Read More
DK Shivakumar allotted rooms to his cabinet ministry

DK Shivakumar: ಸಚಿವರಿಗೆ ರೂಮ್ ಅಲಾಟ್‌ಮೆಂಟ್: ಸಿಎಂ ಗೃಹ ಕಚೇರಿ ಬಾಗಿಲು ಉಲ್ಟಾ!

ಬೆಂಗಳೂರು: ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು 13 ಸಚಿವರಿಗೆ ಖಾತೆ ಹಂಚಿಕೆಯಾದ ಬೆನ್ನಲ್ಲೇ, ಸಚಿವರುಗಳ ಆಡಳಿತ ಕಚೇರಿಗಳಿಗೆ ಜಾಗ ನಿಗದಿಪಡಿಸಲಾಗಿದೆ. ಸಚಿವರು ತಮ್ಮ ಕಚೇರಿ ಕೆಲಸಗಳನ್ನು ಆರಂಭಿಸಲು ಅನುಕೂಲವಾಗುವಂತೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಅಧಿಕೃತ ಆದೇಶ ಹೊರಡಿಸಿದೆ. ಈ ಪ್ರಕ್ರಿಯೆಯಲ್ಲಿ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೊಡ್ಡ ಕೊಡುಗೆಯೇ ಸಿಕ್ಕಿದೆ. ರೆಡ್ಡಿ ಮುನಿಸು ಶಮನ: ವಿಧಾನಸೌಧದ…

Read More