TOP NEWS
Cm dk shivakumar statement about SIR

DK Shivakumar: ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು; ಡಿಕೆಶಿ

ಬೆಂಗಳೂರು: “ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ…

Read More
zameer ahmed will not get ministry in cm dk shivakumar cabinet

Zameer Ahmed: ಕೈ ಸಂಪುಟದಿಂದ ಜಮೀರ್‌ಗೆ ಕೊಕ್? ದಾವಣಗೆರೆ ಉಪಚುನಾವಣೆ ಬಂಡಾಯ ಮುಳುವಾಯಿತೇ?

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ 2.0 ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕ ಜಮೀರ್ ಅಹ್ಮದ್ ಖಾನ್ (Zameer Ahmed) ಅವರಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದು, ಮುಂದಿನ ದಿನಗಳಲ್ಲೂ ಅವರಿಗೆ ಸಚಿವ ಭಾಗ್ಯ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಸೃಷ್ಟಿಯಾದ ಆಂತರಿಕ ಭಿನ್ನಮತ ಹಾಗೂ ಪಕ್ಷ ವಿರೋಧಿ ಬಂಡಾಯವೇ ಜಮೀರ್ ಅವರ ರಾಜಕೀಯ ಹಿನ್ನಡೆಗೆ ಮೂಲ ಕಾರಣ ಎಂದು ಪಕ್ಷದ ಉನ್ನತ…

Read More
cm dk shivakumar warning to officers about work

DK Shivakumar: ಡಿಕೆಶಿ ಸರ್ಕಾರಕ್ಕೆ ಆರಂಭದಲ್ಲೇ ಖಾತೆ ಕಂಟಕ: ಆಡಳಿತ ಯಂತ್ರಕ್ಕೆ ಸಿಎಂ ಚುರುಕು ಮುಟ್ಟಿಸಿದ ಬೆನ್ನಲ್ಲೇ ಸಚಿವರ ಬಂಡಾಯ

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರ ಸರ್ಕಾರದಲ್ಲಿ ಮೊದಲ ದಿನವೇ ಆಡಳಿತಾತ್ಮಕ ಬಿಗಿ ಹಾಗೂ ರಾಜಕೀಯ ಚದುರಂಗದಾಟ ಏಕಕಾಲಕ್ಕೆ ಆರಂಭವಾಗಿದೆ. ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿಗಳು, “ನಮ್ಮ ಆಡಳಿತದಲ್ಲಿ ಜಾತಿ, ಧರ್ಮ ಅಥವಾ ಯಾವುದೇ ತರಹದ ಬಾಹ್ಯ ಪ್ರಭಾವಗಳಿಗೆ ಕಿಂಚಿತ್ತೂ ಅವಕಾಶವಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯೂ ಯಾವುದೇ ರಾಜಕೀಯ ಮುಲಾಜಿಗೆ ಒಳಗಾಗದೆ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸಂಪೂರ್ಣ ಪಾರದರ್ಶಕತೆಯಿಂದ ಸಾರ್ವಜನಿಕರ ಕೆಲಸ…

Read More
Dk shivakumar took oath as 25th cm of Karnataka 13 minister also joined

DK Shivakumar: ಡಿಸಿಎಂ ಅಲ್ಲ ಸಿಎಂ, ಪ್ರಮಾಣ ವಚನ ಸ್ವೀಕರಿಸಿದ ಡಿಕೆಶಿ

ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರದಲ್ಲಿ ಪ್ರಮುಖ ರಾಜಕೀಯ ಬೆಳವಣಿಗೆಯೊಂದು ನಡೆದಿದ್ದು, ಮೊದಲ ಹಂತವಾಗಿ 13 ಜನ ಹಿರಿಯ ಹಾಗೂ ಪ್ರಭಾವಿ ಶಾಸಕರು ಸಚಿವರಾಗಿ ಭರ್ಜರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಲಾಖಾ ನಿರ್ವಹಣೆಯ ಅನುಭವ, ಜಾತಿ ಸಮೀಕರಣ ಹಾಗೂ ಪ್ರಾದೇಶಿಕ ಸಮತೋಲನವನ್ನು ಸೂಕ್ಷ್ಮವಾಗಿ ಗಮನದಲ್ಲಿಟ್ಟುಕೊಂಡು ಈ ತಂಡವನ್ನು ರಚಿಸಲಾಗಿದೆ. ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆ 13 ಪ್ರಮುಖ ನಾಯಕರ ರಾಜಕೀಯ ಹಿನ್ನೆಲೆ ಹೀಗಿದೆ: 1. ಡಾ. ಜಿ. ಪರಮೇಶ್ವರ್…

Read More
dk shivakumar viral video about how to get success in life

DK Shivakumar: ಪದಗ್ರಹಣದ ಸಂಭ್ರಮದಲ್ಲಿ ಡಿಕೆಶಿ: ಮಹಾಭಾರತದ ಪಾತ್ರಗಳನ್ನು ಉಲ್ಲೇಖಿಸಿದ್ದ ಹಳೆಯ ವಿಡಿಯೋ ಭಾರಿ ವೈರಲ್!

ಬೆಂಗಳೂರು: ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಇಂದು ಗದ್ದುಗೆ ಏರುತ್ತಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಮಹತ್ವದ ಸುದಿನದಂದೇ ಅವರು ಈ ಹಿಂದೆ ಬದುಕಿನ ಗೆಲುವಿನ ಸೂತ್ರಗಳ ಕುರಿತು ಮಾತನಾಡಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಭಾರಿ ಸದ್ದು ಮಾಡುತ್ತಿದೆ. ಉದ್ಯಮ ಹಾಗೂ ರಾಜಕೀಯ ರಂಗಗಳೆರಡರಲ್ಲೂ ಚಾಣಕ್ಯನಂತೆ ಗುರುತಿಸಿಕೊಂಡಿರುವ ಡಿಕೆಶಿ, ಜೀವನದಲ್ಲಿ ಅತ್ಯುನ್ನತ ಸ್ಥಾನಕ್ಕೇರಲು ಪ್ರತಿಯೊಬ್ಬರಿಗೂ ಇರಬೇಕಾದ ಅರ್ಹತೆಗಳನ್ನು ಈ ವಿಡಿಯೋದಲ್ಲಿ ಸ್ವಾರಸ್ಯಕರವಾಗಿ ಬಿಚ್ಚಿಟ್ಟಿದ್ದಾರೆ. ಬದುಕಿನ ಯಶಸ್ಸಿಗೆ ಬೇಕು…

Read More
dk shivakumar Bhagavat Geeta video viral

DK Shivakumar: ಕಾಲ ಕೂಡಿ ಬಂತು, ಕನಸು ನನಸಾಯ್ತು: ಡಿಕೆಶಿ ಹಳೆಯ ಭಗವದ್ಗೀತೆ ಶ್ಲೋಕದ ವಿಡಿಯೋ ವೈರಲ್!

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (DK Shivakumar) ಅವರು ಜವಾಬ್ದಾರಿ ವಹಿಸಿಕೊಳ್ಳುವ ಐತಿಹಾಸಿಕ ಕ್ಷಣ ಹತ್ತಿರವಾಗುತ್ತಿದ್ದಂತೆ, ಅವರ ದೈವಚಿಂತನೆ ಮತ್ತು ಆಧ್ಯಾತ್ಮಿಕ ನಿಲುವಿನ ಕುರಿತ ಚರ್ಚೆಗಳು ಮುಂಚೂಣಿಗೆ ಬಂದಿವೆ. ವಿಶೇಷವಾಗಿ ಅವರು ಈ ಹಿಂದೆ ನಡೆಸಿದ್ದ ಸಂದರ್ಶನವೊಂದರ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾಜಕೀಯದ ಏಳುಬೀಳುಗಳು ಹಾಗೂ ಸಿಎಂ ಗದ್ದುಗೆಯ ಬಗ್ಗೆ ಅಂದು ಅವರು ಆಡಿದ್ದ ಭವಿಷ್ಯದ ಮಾತುಗಳು ಇಂದು ನಿಜವಾಗಿರುವುದನ್ನು ಕಂಡು ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. ಶುಭ ಮುಹೂರ್ತವನ್ನು ಯಾರೂ ತಡೆಯಲು ಸಾಧ್ಯವಿಲ್ಲ!…

Read More
DK Shivakumar takes blessings of mother and dh devegowda bsy

DK Shivakumar: ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಿಕೆಶಿ ರಾಜಕೀಯ ಸೌಹಾರ್ದತೆ: ತಾಯಿ, ದೊಡ್ಡಗೌಡರು ಹಾಗೂ ಬಿಎಸ್‌ವೈ ಆಶೀರ್ವಾದ ಪಡೆದ ನೂತನ ಮುಖ್ಯಮಂತ್ರಿ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ (DK Shivakumar) ಅವರು ಹಿರಿಯರ ಆಶೀರ್ವಾದ ಪಡೆಯುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ. ರಾಜ್ಯದ ಅತ್ಯುನ್ನತ ಆಡಳಿತ ಚುಕ್ಕಾಣಿ ಹಿಡಿಯುವ ಮುನ್ನ ಅವರು ತಮ್ಮ ತಾಯಿ ಗೌರಮ್ಮ ಅವರ ಪಾದ ಮುಟ್ಟಿ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು. ಮಗ ದೇಶದ ಪ್ರಭಾವಿ ಹುದ್ದೆಯೊಂದನ್ನು ಅಲಂಕರಿಸುತ್ತಿರುವ ಈ ಸಂಭ್ರಮದ ಕ್ಷಣದಲ್ಲಿ ತಾಯಿ ಗೌರಮ್ಮ ಅವರು ಆರತಿ ಬೆಳಗಿ, ಸಿಹಿ ತಿನಿಸಿ ಮಗನನ್ನು ಮನಸಾರೆ ಹರಸಿದರು. ದೇವೇಗೌಡರ ನಿವಾಸಕ್ಕೆ…

Read More