DK Shivakumar: ಡಿಕೆಶಿ ಸರ್ಕಾರಕ್ಕೆ ಆರಂಭದಲ್ಲೇ ಖಾತೆ ಕಂಟಕ: ಆಡಳಿತ ಯಂತ್ರಕ್ಕೆ ಸಿಎಂ ಚುರುಕು ಮುಟ್ಟಿಸಿದ ಬೆನ್ನಲ್ಲೇ ಸಚಿವರ ಬಂಡಾಯ
ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರ ಸರ್ಕಾರದಲ್ಲಿ ಮೊದಲ ದಿನವೇ ಆಡಳಿತಾತ್ಮಕ ಬಿಗಿ ಹಾಗೂ ರಾಜಕೀಯ ಚದುರಂಗದಾಟ ಏಕಕಾಲಕ್ಕೆ ಆರಂಭವಾಗಿದೆ. ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿಗಳು, “ನಮ್ಮ ಆಡಳಿತದಲ್ಲಿ ಜಾತಿ, ಧರ್ಮ ಅಥವಾ ಯಾವುದೇ ತರಹದ ಬಾಹ್ಯ ಪ್ರಭಾವಗಳಿಗೆ ಕಿಂಚಿತ್ತೂ ಅವಕಾಶವಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ. ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಯೂ ಯಾವುದೇ ರಾಜಕೀಯ ಮುಲಾಜಿಗೆ ಒಳಗಾಗದೆ, ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸಂಪೂರ್ಣ ಪಾರದರ್ಶಕತೆಯಿಂದ ಸಾರ್ವಜನಿಕರ ಕೆಲಸ…
