TOP NEWS
No LPG problem in country says central government ministry

LPG: ದೇಶದಲ್ಲಿ LPG ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ: ಕೇಂದ್ರ

ನವದೆಹಲಿ: ಸದ್ಯ ದೇಶದಲ್ಲಿ LPG ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಮನೆಗಳಿಗೆ ನಿರಂತರ ಗ್ಯಾಸ್‌ ಪೂರೈಕೆಯನ್ನು ಖಚಿತಪಡಿಸಲಾಗಿದೆ. ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ , LPG ಸರಬರಾಜುಗಳನ್ನು ಒದಗಿಸಲಾಗುತ್ತಿದೆ. ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ  ಸುಜಾತಾ ಶರ್ಮಾ ದೆಹಲಿಯಲ್ಲಿಂದು  ಹೇಳಿದರು.  ವದಂತಿಗಳನ್ನು ನಂಬಬೇಡಿ ಸುದ್ದಿಗೋಷ್ಠಿಯಲ್ಲಿ ಅವರು, LPG ಗೆ ಸಂಬಂಧಿಸಿದಂತೆ ವದಂತಿಗಳನ್ನು ನಂಬಬೇಡಿ ಎಂದು , ಜನರಲ್ಲಿ ಮನವಿ ಮಾಡಿಕೊಂಡರು….

Read More
Narendra Modi inaugurated crores project in assam

Narendra Modi: 19 ಸಾವಿರ ಕೋಟಿ ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿದ ಮೋದಿ

ಅಸ್ಸಾಂ: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಗುವಾಹಟಿಯಲ್ಲಿ , ಪಿಎಂ ಕಿಸಾನ್ ಸಮ್ಮಾನ್ ನಿಧಿಯ 22ನೇ ಕಂತಿನ 18 ಸಾವಿರದ 640 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. 19 ಸಾವಿರದ 500 ಕೋಟಿ ಯೋಜನೆ  ಇದೇ ವೇಳೆ ಗುವಾಹಟಿಯಲ್ಲಿ, 19 ಸಾವಿರದ 500 ಕೋಟಿ ರೂಪಾಯಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.  150 ಮೆಗಾ ವ್ಯಾಟ್ ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿದರು.  ಬಳಿಕ, ಚಹಾ ತೋಟದ ಕಾರ್ಮಿಕರಿಗೆ…

Read More
Agriculture development by nda government rules

Agriculture: ಕಳೆದ 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ ಉತ್ಪಾದನೆ ಹೆಚ್ಚಾಗಿದೆ: ಶಿವರಾಜ್ ಸಿಂಗ್ ಚೌಹಾಣ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರದ ಕೃಷಿ ನೀತಿಯಿಂದಾಗಿ ದೇಶದಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲೆ ಆಹಾರಧಾನ್ಯ (Agriculture) ಉತ್ಪಾದನೆಯಾಗಿದೆ ಎಂದು , ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಗೆ ತಿಳಿಸಿದ್ದಾರೆ.  357 ದಶಲಕ್ಷ ಟನ್ ಆಹಾರಧಾನ್ಯ (Agriculture) ಉತ್ಪಾದನೆ ಪ್ರಶ್ನೋತ್ತರ ವೇಳೆಯಲ್ಲಿಂದು ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಅವರು, ದೇಶದಲ್ಲಿ 357 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯಾಗಿದ್ದು, ಹೊಸ ದಾಖಲೆಯಾಗಿದೆ. 15 ಕೋಟಿ ಟನ್ ಭತ್ತ ಉತ್ಪಾದನೆಯೊಂದಿಗೆ…

Read More
Central Cabinet to extend jal jivan mission

Cabinet: ಆರು ಪ್ರಮುಖ ನಿರ್ಧಾರ ಮಾಡಿದ ಮೋದಿ ಕ್ಯಾಬಿನೆಟ್‌

ನವದೆಹಲಿ:  ಜಲ ಜೀವನ್ ಮಿಷನ್ 2.0 ವಿಸ್ತರಣೆ ಸೇರಿದಂತೆ ಆರು ಪ್ರಮುಖ ನಿರ್ಣಯಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಸಚಿವ ಸಂಪುಟ (Cabinet) ಅನುಮೋದನೆ ನೀಡಿದೆ.  ಜಲಜೀವನ್ ಮಿಷನ್  ವಿಸ್ತರಣೆ ಸಂಪುಟ ಸಭೆಯ  ನಿರ್ಣಯಗಳ ಕುರಿತು  ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 8.7 ಲಕ್ಷ ಕೋಟಿ ರೂಪಾಯಿ  ಮೌಲ್ಯದ ಜಲಜೀವನ್ ಮಿಷನ್  ಯೋಜನೆಯಲ್ಲಿ  ಡಿಜಿಟಲೀಕರಣ ಹಾಗೂ  ಸಮುದಾಯ ಪಾಲ್ಗೊಳ್ಳುವಿಕೆಗೆ  ಆದ್ಯತೆ ನೀಡಲಾಗುವುದು ಎಂದರು.   2019ರಿಂದ…

Read More
Bjp mp Basavaraj Bommai about petrol diesel price and supply

Basavaraj Bommai: ಪೆಟ್ರೋಲ್ – ಡೀಸೆಲ್ ಪೂರೈಕೆ ಸ್ಥಿರವಾಗಿದೆ: ಬಸವರಾಜ್‌ ಬೊಮ್ಮಾಯಿ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಸ್ಥಿರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ. ತಾತ್ಕಾಲಿಕ ಅಡಚಣೆ ಆಗಿದೆ ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲ್ಘ್ ದೇಶಗಳಿಂದ ಎಲ್‌ಪಿಜಿ ಪೂರೈಕೆಯಲ್ಲಿ ತಾತ್ಕಾಲಿಕ ಅಡಚಣೆ ಉಂಟಾಗಿದೆ. ಆದರೆ ಮುಂದಿನ ವಾರದ ವೇಳೆಗೆ ಅದು ಪುನರಾಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 67 ಸಾವಿರ ಭಾರತೀಯ ಪ್ರಜೆಗಳು ವಾಪಾಸ್‌: ಜೈ…

Read More
Jai Shankar gave information about saving Indians in war situation

Jai Shankar: 67 ಸಾವಿರ ಭಾರತೀಯ ಪ್ರಜೆಗಳು ವಾಪಾಸ್‌: ಜೈ ಶಂಕರ್

ನವದೆಹಲಿ: ಇರಾನ್‌-ಇಸ್ರೇಲ್‌ ಸಂಘರ್ಷದ ನಡುವೆ ಸಿಲುಕಿರುವ ಭಾರತೀಯರ ಸುರಕ್ಷತೆಗೆ ಸಕಲ ಕ್ರಮ ಕೈಗೊಳ್ಳಲಾಗಿದೆ  ಎಂದು ಸಂಸತ್ತಿನ ಉಭಯ ಸದನಗಳಲ್ಲಿಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್‌. ಜೈಶಂಕರ್‌ (Jai Shankar) ಮಾಹಿತಿ ನೀಡಿದರು. 67 ಸಾವಿರ ಭಾರತೀಯರು (Jai Shankar) ಮರಳಿ ಬಂದಿದ್ದಾರೆ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿನ  ಸಂಘರ್ಷ ಭಾರತಕ್ಕೆ ಕಳವಳಕಾರಿಯಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಒಂದು ಕೋಟಿ ಭಾರತೀಯರಿದ್ದಾರೆ. ಇರಾನ್‌ನಲ್ಲಿಯೂ ಸಹ, ಅಧ್ಯಯನ ಅಥವಾ ಉದ್ಯೋಗಕ್ಕಾಗಿ ಹೋಗಿರುವ …

Read More
West Asia War central government taking all measures to save Indians

West Asia War: ಮಧ್ಯಪ್ರಾಚ್ಯ ರಾಷ್ಟ್ರ ಬಿಕ್ಕಟ್ಟು, ಭಾರತದಿಂದ ಅಗತ್ಯ ಕ್ರಮ: ರಾಮಮೋಹನ್ ನಾಯ್ಡು

ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳ (West Asia War) ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ನಾಗರಿಕ ವಿಮಾನಯಾನ ಕಾರ್ಯಾಚರಣೆಗಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ರಾಜ್ಯಸಭೆಗಿಂದು ತಿಳಿಸಿದ್ದಾರೆ. ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಅವರು,  ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು, ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಲಾಗಿದೆ. ಶೇಕಡ  100 ರಷ್ಟು …

Read More