Ashwini Vaishnaw: ಅಮೃತ್‌ ಭಾರತ್‌ ಯೋಜನೆಯಡಿ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೌಕರ್ಯ, ಅಶ್ವಿನಿ ವೈಷ್ಣವ್

ನವದೆಹಲಿ: ಅಮೃತ್ ಭಾರತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಕಟ್ಟಡ, ಫ್ಲಾಟ್ ಫಾರಂ ಸೇರಿದಂತೆ ಉತ್ತಮ ಮೂಲಸೌಕರ್ಯ ಒದಗಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ತಿಳಿಸಿದ್ದಾರೆ. ರೈಲು ಸೇವೆ ಹೆಚ್ಚಿಸಲು ಕ್ರಮ ಈ ವಿಚಾರವಾಗಿ ಲೋಕಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಲವು ಭಾಗಗಳಲ್ಲಿ ವಂದೇ ಭಾರತ್ ಮತ್ತು ಅಮೃತ್ ಭಾರತ್  ರೈಲುಗಳನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.  ಪ್ರಶ್ನೋತ್ತರ ಅವಧಿಯಲ್ಲಿ ಅವರು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮುಂಬೈ ಸೇರಿದಂತೆ…

Read More
central minister Piyush Goyal meets omani counterpart

Piyush Goyal: ಒಮಾನ್-ಭಾರತ ನಡುವೆ ಹೆಚ್ಚಲಿದೆಯಾ ವ್ಯಾಪಾರ-ವಹಿವಾಟು?

ನವದೆಹಲಿ: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಒಮಾನ್ ನ ಮಸ್ಕತ್ ನಲ್ಲಿ ನಿನ್ನೆ ಒಮಾನ್ – ಭಾರತ (Oman India) ವ್ಯಾಪಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.  ಸಾವಿರಾರು ವರ್ಷಗಳಿಂದ ನಡೆಯುತ್ತಿದೆ ವಹಿವಾಟು ಈ ವೇಳೆ ಅವರು, ಭಾರತ ಮತ್ತು ಒಮಾನ್ ಐತಿಹಾಸಿಕ ಬಾಂಧವ್ಯ ಹೊಂದಿದ್ದು, ಸಾವಿರಾರು ವರ್ಷಗಳಿಂದಲೂ ವ್ಯಾಪಾರ ವಹಿವಾಟು ಸದೃಢವಾಗಿದೆ. ಗುಜರಾತಿನ ಲೋಥಾಲ್ ಬಂದರಿನಿಂದ ಮಸ್ಕತ್ ಗೆ ಸಾವಿರಾರು ವರ್ಷಗಳ ಹಿಂದೆಯೇ ಹಡಗುಗಳು ಸಂಚರಿಸುತ್ತಿದ್ದವು. ಭವಿಷ್ಯದಲ್ಲೂ ಉಭಯ ದೇಶಗಳು ಜಂಟಿಯಾಗಿ ಅಪಾರ ಅವಕಾಶಗಳನ್ನು…

Read More
Narenda Modi thanks Ethiopian people for the award

Narenda Modi: ನರೇಂದ್ರ ಮೋದಿಗೆ ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ ಪ್ರಶಸ್ತಿ

ಪ್ರಧಾನಿ ನರೇಂದ್ರ ಮೋದಿ (Narenda Modi) ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರಶಸ್ತಿಯನ್ನು ಇಥಿಯೋಪಿಯಾದ ಸಹವರ್ತಿ ಡಾ.ಅಬಿ ಅಹ್ಮದ್ ಅಲಿ ಅವರು ಪ್ರಧಾನ ಮಾಡಿದ್ದಾರೆ. ಈ ಪ್ರಶಸ್ತಿ ಭಾರತೀಯರಿಗೆ ಸಲ್ಲುತ್ತದೆ ಪ್ರಧಾನಿ ಅವರು  ಭಾರತದೊಂದಿಗೆ ಐತಿಹಾಸಿಕ ಬಾಂಧವ್ಯ ಹಂಚಿಕೊಂಡಿರುವ ಆಫ್ರಿಕನ್ ದೇಶಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಭಾರತ-ಇಥಿಯೋಪಿಯಾ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ಅಸಾಧಾರಣ ಕೊಡುಗೆ ನೀಡಿದ ಮತ್ತು ಜಾಗತಿಕ ರಾಜನೀತಿಜ್ಞರಾಗಿ ದೂರದೃಷ್ಟಿಯ ನಾಯಕತ್ವಕ್ಕಾಗಿ ಇಥಿಯೋಪಿಯಾದ ರಾಜಧಾನಿ ಆಡ್ಡೀಸ್ ಅಬಾಬಾದ…

Read More
Unemployment in india decreased

Unemployment: ಭಾರತದಲ್ಲಿ ಕಡಿಮೆ ಆಯ್ತು ನಿರುದ್ಯೋಗ

ಕಳೆದ ನವೆಂಬರ್ ತಿಂಗಳಿನಲ್ಲಿ ಭಾರತದ ನಿರುದ್ಯೋಗ (Unemployment) ದರ ಶೇಕಡ 4.7ರಷ್ಟು ಇಳಿಕೆಯಾಗಿದೆ. ಇದು ಏಪ್ರಿಲ್ ನಿಂದೀಚೆಗೆ ಅತಿ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದ್ದು, 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರಕುತ್ತಿವೆ.  ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾಸಿಕ ದುಡಿಯುವ ಪಡೆ ಮತ್ತು ನಿರುದ್ಯೋಗ ದರದ  ಅಂಕಿ-ಅಂಶಗಳಂತೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಶೇಕಡ 3.9ಕ್ಕೆಏರಿದ್ದರೆ, ನಗರ ಪ್ರದೇಶಗಳಲ್ಲಿ ಶೇಕಡ 6.5ಕ್ಕೆ ಇಳಿಕೆಯಾಗಿದೆ.  ಇದೇ ವೇಳೆ ದುಡಿಯುವ ಪಡೆ ಕೆಲಸದಲ್ಲಿ…

Read More
Aviation Regulators Notice To IndiGo CEO

IndiGO: ಇಂಡಿಗೋ ಸಿಇಒಗೆ ಡಿಜಿಸಿಎ ನೋಟೀಸ್‌, ಉತ್ತರಿಸಲು 24 ಗಂಟೆ ಗಡುವು

ನವದೆಹಲಿ: ಇಂಡಿಗೋ ಸಂಸ್ಥೆಯ ವಿಮಾನಗಳು ರದ್ದಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಿಲುಕಿಕೊಂಡು ಬಹಳ ತೊಂದರೆ ಅನುಭವಿಸಿದ್ದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಇಂಡಿಗೋ (IndiGo) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಭಾರತದ ವಾಯುಯಾನ ನಿಯಂತ್ರಕ ಸಂಸ್ಥೆಯು ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇಂಡಿಗೋ ಸಂಸ್ಥೆಯಿಂದ ಜನರಿಗೆ ತೊಂದರೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡ ಅತ್ಯಂತ ಕಠಿಣ ಕ್ರಮಗಳಲ್ಲಿ ಈ ನೋಟಿಸ್ ಒಂದು ಎನ್ನಲಾಗಿದ್ದು, ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ, ಸಂಕಷ್ಟ ಮತ್ತು ತೊಂದರೆ ಉಂಟುಮಾಡಿದ ಹಿನ್ನೆಲೆಯಲ್ಲಿ…

Read More
Right to Disconnect Bill introduced in lok sabha

Right to Disconnect Bill: ಉದ್ಯೋಗಿಗಳಿಗೆ ಗುಡ್‌ನ್ಯೂಸ್‌, ಲೋಕಸಭೆಯಲ್ಲಿ ಹೊಸ ಬಿಲ್ ಮಂಡನೆ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಮಸೂದೆಗಳನ್ನ ಜಾರಿ ಮಾಡಿದೆ. ಇದೀಗ ಉದ್ಯೋಗಿಗಳ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಹೊಸ ಮಸೂದೆಯನ್ನ(‌ Right to Disconnect Bill) ಮಂಡನೆ ಮಾಡಿದೆ. ಏನಿದು ಹೊಸ ಮಸೂದೆ? ಭಾರತದಲ್ಲಿ ಕೆಲಸ ಮತ್ತು ಖಾಸಗಿ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಲು ಬಹಳ ಕಷ್ಟವಾಗುತ್ತಿದೆ ಎನ್ನುವ ಚರ್ಚೆ ಕಳೆದ ಕೆಲ ಸಮಯದಿಂದ ಆರಂಭವಾಗಿದೆ. ಉದ್ಯೋಗಿಗಳಿಗೆ ಬಹಳ ಒತ್ತಡ ಆಗುತ್ತಿದೆ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎನ್ನುವ ಮಾತು ಸಹ…

Read More
India Russia will fight against terrorism together

India – Russia: ಭಯೋತ್ಪಾದನೆ ವಿರುದ್ಧ ಜಂಟಿಯಾಗಿ ಹೋರಾಡಲು ರಷ್ಯಾ-ಭಾರತ ಸಿದ್ಧ

ನವದೆಹಲಿ: ಭಾರತ ಮತ್ತು ರಷ್ಯಾ, (India – Russia) ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ಜಂಟಿಯಾಗಿ ಹೋರಾಡುವ ಸಂಕಲ್ಪ ಮಾಡಿವೆ  ಎಂದು  ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ದೆಹಲಿಯಲ್ಲಿಂದು ಹೇಳಿದ್ದಾರೆ.  ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತೆಯ ನಿಲುವನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ ಮತ್ತು ಈ ಪ್ರಯತ್ನದಲ್ಲಿ ಭಾರತಕ್ಕೆ ರಷ್ಯಾ ಬೆಂಬಲವನ್ನು ನೀಡುವುದಾಗಿ ಅಧ್ಯಕ್ಷ ಪುಟಿನ್ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.  ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ಇತ್ತೀಚಿನ…

Read More