TOP NEWS
Ayodhya Needs Beware of Donation Thieves Board Now BK Hariprasad taunts bjp

BK Hariprasad: ಅಯೋಧ್ಯೆಯಲ್ಲಿ ಇನ್ಮುಂದೆ ‘ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ’ ಬೋರ್ಡ್ ಹಾಕಬೇಕು: ರಾಮಮಂದಿರ ಹಗರಣಕ್ಕೆ ಬಿ.ಕೆ. ಹರಿಪ್ರಸಾದ್ ಲೇವಡಿ

ಬೆಂಗಳೂರು: ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಬಿಜೆಪಿ ಹಾಗೂ ಮಂದಿರದ ಟ್ರಸ್ಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂಬ ಬೋರ್ಡ್‌ಗಳನ್ನು ನೋಡಿರುತ್ತೇವೆ. ಆದರೆ ಅಯೋಧ್ಯೆಯ ಲೂಟಿಯನ್ನು ಗಮನಿಸಿದರೆ, ಇನ್ಮುಂದೆ ಅಲ್ಲಿ ‘ಹುಂಡಿ ಕಳ್ಳರಿದ್ದಾರೆ ಎಚ್ಚರಿಕೆ’ ಎಂದು ಬೋರ್ಡ್ ಹಾಕಬೇಕಾದ ದುಸ್ಥಿತಿ ಬಂದಿದೆ” ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ. ಅಧಿಕಾರಕ್ಕೆ…

Read More
delhi government planning to avoid air pollution new trick

Air Pollution: ದೆಹಲಿಯಲ್ಲಿ ಚಳಿಗಾಲದ ಮಾಲಿನ್ಯಕ್ಕೆ ಮುಂಚಿತವಾಗಿಯೇ ಮಾಸ್ಟರ್ ಪ್ಲಾನ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ಸೃಷ್ಟಿಯಾಗುವ ಭೀಕರ ವಾಯುಮಾಲಿನ್ಯದ (Air Pollution) ಬಿಕ್ಕಟ್ಟನ್ನು ಮೊದಲೇ ನಿಯಂತ್ರಿಸಲು ದೆಹಲಿ ಸರ್ಕಾರವು ಭರ್ಜರಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಮುಂಬರುವ ದಿನಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಅಪಾಯಕಾರಿ ಮಟ್ಟಕ್ಕೆ ತಲುಪದಂತೆ ತಡೆಯಲು ಈ ಕಠಿಣ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಇವು ನವೆಂಬರ್ 1 ರಿಂದ ಫೆಬ್ರವರಿ 28 ರವರೆಗೆ ಕಡ್ಡಾಯವಾಗಿ ಜಾರಿಯಲ್ಲಿರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. PUC ಇಲ್ಲದೇ ಇಂಧನ ಇಲ್ಲ ಈ ನೂತನ ನಿಯಮಗಳಿಂದಾಗಿ ವಾಹನ ಸವಾರರು ಜಾಗರೂಕರಾಗಿರಬೇಕಾಗುತ್ತದೆ….

Read More
India open visa for Bangladesh people many people standing in q

Bangladesh: ರಾಜತಾಂತ್ರಿಕ ಬಿಕ್ಕಟ್ಟಿದ್ದರೂ ತಪ್ಪದ ಭಾರತದ ಮೇಲಿನ ಅವಲಂಬನೆ; ವೀಸಾ ಕೇಂದ್ರಗಳ ಮುಂದೆ ಬಾಂಗ್ಲಾ ಜನರ ಕಿಲೋಮೀಟರ್ ಉದ್ದದ ಕ್ಯೂ

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶಗಳ (Bangladesh) ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಎಷ್ಟೇ ಏರುಪೇರಾಗಿದ್ದರೂ, ಅಲ್ಲಿನ ಸಾಮಾನ್ಯ ಜನರಿಗೆ ಭಾರತದ ಮೇಲಿರುವ ಅವಲಂಬನೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದಕ್ಕೆ ಢಾಕಾದಲ್ಲಿರುವ ಭಾರತೀಯ ವೀಸಾ ಕೇಂದ್ರದ ಮುಂದೆ ನಿಂತಿರುವ ನೂರಾರು ಮೀಟರ್ ಉದ್ದದ ಕ್ಯೂ ಸಾಕ್ಷಿಯಾಗಿದೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಭಾರತ ಸರ್ಕಾರವು ಬಾಂಗ್ಲಾ ನಾಗರಿಕರಿಗೆ ಪ್ರವಾಸಿ ವೀಸಾ (ಟೂರಿಸ್ಟ್ ವೀಸಾ) ಸೇವೆಗಳನ್ನು ಪುನಾರಂಭಿಸಿದ್ದು, ವೀಸಾ ಪಡೆಯಲು ಜನ ಮುಗಿಬೀಳುತ್ತಿದ್ದಾರೆ. ವೀಸಾ ಸೇವೆ ಶುರುವಾದ ಕೇವಲ 24 ಗಂಟೆಗಳಲ್ಲಿ…

Read More
Ram mandir donation row accused revealed all story

Ram Mandir: ರಾಮಮಂದಿರದ ಕೋಟ್ಯಂತರ ರೂ. ಲೂಟಿ ಕೇಸ್: ಎಸ್‌ಐಟಿ ತನಿಖೆಯಲ್ಲಿ ಕಳ್ಳತನದ ಅಸಲಿ ಕರಾಮತ್ತು ಬಿಚ್ಚಿಟ್ಟ ಆರೋಪಿಗಳು

ಉತ್ತರ ಪ್ರದೇಶ: ಅಯೋಧ್ಯೆಯ ರಾಮಮಂದಿರದ (Ram Mandir) ದೇಣಿಗೆ ಹಣ ಲೂಟಿ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸಿಕ್ಕಿಬಿದ್ದಿರುವ ಕಿಲಾಡಿ ಕಳ್ಳರು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಭಕ್ತರು ಅರ್ಪಿಸಿದ ಕೋಟ್ಯಂತರ ರೂಪಾಯಿ ಕಾಣಿಕೆಯನ್ನು ದೇವಸ್ಥಾನದ ಆವರಣದಿಂದ ಯಾರಿಗೂ ಅನುಮಾನ ಬಾರದಂತೆ ಹೊರಗೆ ಸಾಗಿಸಲು ಆರೋಪಿಗಳು ಶೌಚಾಲಯಗಳನ್ನು (ವಾಶ್‌ರೂಮ್ಸ್) ತಾತ್ಕಾಲಿಕ ಅಡಗುದಾಣವನ್ನಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. ಉಪಾಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಆರೋಪಿ ಈ ಮಹಾ ಹಗರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ರಚಿಸಿರುವ ವಿಶೇಷ ತನಿಖಾ…

Read More
ram mandir mahant nritya gopal das admitted to hospital in Lucknow

Ram Mandir: ಅಯೋಧ್ಯೆ ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು

ಉತ್ತರ ಪ್ರದೇಶ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ (Ram Mandir) ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಲಕ್ನೋದ ಪ್ರಸಿದ್ಧ ಮೇದಾಂತ ಆಸ್ಪತ್ರೆಗೆ ಸೇರಿಸಲಾಗಿದೆ. ದೇಹದಲ್ಲಿ ತೀವ್ರವಾದ ಸೋಂಕು (ಇನ್‌ಫೆಕ್ಷನ್) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ತರಲಾಗಿದ್ದು, ಸದ್ಯ ತಜ್ಞ ವೈದ್ಯರ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದೆ. ಎರಡನೇ ಬಾರಿ ಆಸ್ಪತ್ರೆಗೆ ದಾಖಲು 86 ವರ್ಷದ ಹಿರಿಯ ಸಂತರಾದ ನೃತ್ಯ ಗೋಪಾಲ್ ದಾಸ್ ಅವರು ಈ ವರ್ಷದಲ್ಲಿ…

Read More
Viral video young girl reading how to kill men book in metro shocks internet

Viral Video: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ ಈ ಮೆಟ್ರೋ ವಿಡಿಯೋ; ಆಕೆ ಕೈಲಿದ್ದ ಪುಸ್ತಕದ ಹಿಂದಿನ ರಹಸ್ಯವೇನು?

ನವದೆಹಲಿ: ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ‘ಹೌ ಟು ಕಿಲ್ ಮೆನ್’ (ಪುರುಷರನ್ನು ಕೊಲ್ಲುವುದು ಹೇಗೆ) ಎಂಬ ವಿಲಕ್ಷಣ ಹೆಸರಿನ ಪುಸ್ತಕವನ್ನು ಓದುತ್ತಿರುವ ವಿಡಿಯೋವೊಂದು ಇತ್ತೀಚೆಗೆ (Viral Video) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಕೇವಲ ಪುಸ್ತಕದ ಶೀರ್ಷಿಕೆಯಿಂದಾಗಿಯೇ ಈ ಸಾಮಾನ್ಯ ದೃಶ್ಯವೀಗ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 1.9 ಕೋಟಿಗೂ ಹೆಚ್ಚು ವೀವ್ಸ್ ಸುಮಾರು 1.9 ಕೋಟಿಗೂ ಹೆಚ್ಚು ವೀಕ್ಷಣೆ ಹಾಗೂ 4 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿರುವ ಈ ಕ್ಲಿಪ್‌ಗೆ…

Read More
PM-Kisan sms of 1 paise shocked Maharashtra farmer

PM-Kisan: ತಾಂತ್ರಿಕ ದೋಷ ತಂದಿಟ್ಟ ತಲೆನೋವು: ಮಹಾರಾಷ್ಟ್ರದ ರೈತ ಮಹಿಳೆಗೆ ‘1 ಪೈಸೆ’ ಪಿಎಂ-ಕಿಸಾನ್ ಕಂತಿನ ಮೆಸೇಜ್

ಮುಂಬೈ: ಮಹಾರಾಷ್ಟ್ರದ ರೈತರೊಬ್ಬರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಕಂತಿನ ಹಣ ಜಮೆಯಾದ ಕುರಿತು ಬಂದ ಒಂದು ಎಸ್‌ಎಮ್‌ಎಸ್ (SMS) ಇಡೀ ಕುಟುಂಬವನ್ನು ತೀವ್ರ ಗೊಂದಲಕ್ಕೆ ತಳ್ಳಿದ ಅಪರೂಪದ ಘಟನೆಯೊಂದು ವರದಿಯಾಗಿದೆ. ಯೋಜನೆಯಡಿ ಬರಬೇಕಿದ್ದ 2,000 ರೂಪಾಯಿ ಬದಲಿಗೆ ಕೇವಲ ‘1 ಪೈಸೆ’ ಮಾತ್ರ ಖಾತೆಗೆ ಜಮೆಯಾಗಿದೆ ಎಂಬ ಸಂದೇಶ ಮೊಬೈಲ್‌ಗೆ ಬಂದಿದ್ದೇ ಈ ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಈ ರೀತಿ ತಪ್ಪು ಸಂದೇಶ ರವಾನೆಯಾಗಿದೆಯೇ ವಿನಃ ರೈತರ ಖಾತೆಗೆ ಪೂರ್ಣ…

Read More