TOP NEWS
bihar nda samrat choudhari state government cabinet expansion

Bihar: ಬಿಹಾರ ಸಂಪುಟ ವಿಸ್ತರಣೆ: ನಿಶಾಂತ್ ಕುಮಾರ್ ಸೇರಿ 31 ನಾಯಕರಿಗೆ ಸ್ಥಾನ

ಪಾಟ್ನಾ: ಬಿಹಾರ (Bihar) ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ನೇತೃತ್ವದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬಂದಿದೆ. ಈ ಹೊಸ ತಂಡದಲ್ಲಿ ಒಟ್ಟು 31 ಮಂದಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಎಲ್ಲರ ಗಮನ ಸೆಳೆದಿರುವುದು ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶ. ಬಿಹಾರ ಸಂಪುಟ ವಿಸ್ತರಣೆ: ನಿಶಾಂತ್ ಕುಮಾರ್ ಸೇರಿ 31 ನಾಯಕರಿಗೆ ಸ್ಥಾನ ಲೋಕಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್…

Read More
west bengal suvendhu Adhikari PS lost life in firing

West Bengal: ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಹಿಂಸಾಚಾರ, ಸುವೇಂದು ಅಧಿಕಾರಿ ಆಪ್ತ ಸಾವು

ಪಶ್ಚಿಮ ಬಂಗಾಳದಲ್ಲಿ (West Bengal) ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ರಾಜ್ಯದ ಭಾವಿ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಾತ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬುಧವಾರ ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಈ ಕೊಲೆಯು ರಾಜ್ಯದಲ್ಲಿ ರಾಜಕೀಯ ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಚಂದ್ರನಾಥ್ ಅವರ ನಿಧನಕ್ಕೆ ಸುವೇಂದು ಅಧಿಕಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಇದು…

Read More
Not inviting Vijay to form government is not acceptable says kamal haasan

Kamal Haasan: ಜನಾದೇಶ ಗೌರವಿಸಿ, ವಿಜಯ್ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡಿ: ಕಮಲ್ ಹಾಸನ್ ಆಗ್ರಹ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಕಾರಣ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಕುರಿತು ಮಕ್ಕಳ್ ನೀಧಿ ಮೈಯಂ ಅಧ್ಯಕ್ಷ ಕಮಲ್ ಹಾಸನ್ (Kamal Haasan) ಪ್ರತಿಕ್ರಿಯಿಸಿದ್ದಾರೆ. 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಸರ್ಕಾರ ರಚಿಸಲು ಕರೆಯದಿರುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸ್ಟಾಲಿನ್ ನಿರ್ಧಾರಕ್ಕೆ ಮೆಚ್ಚುಗೆ: ಚುನಾವಣಾ ಫಲಿತಾಂಶದ ನಂತರ ಎಂ.ಕೆ. ಸ್ಟಾಲಿನ್ ಅವರು ತೋರಿದ ರಾಜಕೀಯ ಪ್ರೌಢಿಮೆಯನ್ನು…

Read More
rahul gandhi to participate in vijay oath ceremony

Vijay: ತಮಿಳುನಾಡಿನಲ್ಲಿ ‘ದಳಪತಿ’ ಯುಗ ಆರಂಭ: ನಾಳೆ ಮುಖ್ಯಮಂತ್ರಿಯಾಗಿ ನಟ ವಿಜಯ್ ಪ್ರಮಾಣವಚನ ಸ್ವೀಕಾರ!

ಚೆನ್ನೈ: ತಮಿಳುನಾಡಿನ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು, ದ್ರಾವಿಡ ಪಕ್ಷಗಳ ದಶಕಗಳ ಕಾಲದ ಪಾರುಪತ್ಯಕ್ಕೆ ಅಂತ್ಯ ಹಾಡಿ ನಟ ವಿಜಯ್ (Vijay) ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಅಧಿಕಾರಕ್ಕೇರುತ್ತಿದೆ. ಇಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾದ ವಿಜಯ್, ಅಧಿಕೃತವಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದು, ನಾಳೆ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಕಾಂಗ್ರೆಸ್ ಹಸ್ತದೊಂದಿಗೆ ಮ್ಯಾಜಿಕ್ ನಂಬರ್: ಇತ್ತೀಚಿನ ಚುನಾವಣೆಯಲ್ಲಿ ವಿಜಯ್ ಅವರ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತಿ ದೊಡ್ಡ…

Read More
Italian Prime Minister Giorgia Meloni pushed back about deepfake controversy

Giorgia Meloni: ನನ್ನನ್ನು ನನಗಿಂತಲೂ ಚೆಂದವಾಗಿ ತೋರಿಸಿದ್ದಾರೆ!: ಡೀಪ್‌ಫೇಕ್ ಕಿಡಿಗೇಡಿಗಳಿಗೆ ಇಟಲಿ ಪ್ರಧಾನಿ ಮೆಲೋನಿ ವ್ಯಂಗ್ಯಭರಿತ ತಿರುಗೇಟು

ರೋಮ್: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ತಮ್ಮ ಮುಖವನ್ನು ಅಶ್ಲೀಲ ಚಿತ್ರಗಳಿಗೆ ಅಳವಡಿಸಿದ್ದ ಕಿಡಿಗೇಡಿಗಳ ವಿರುದ್ಧ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರು ಅತ್ಯಂತ ಚಾಣಾಕ್ಷತನದಿಂದ ಪ್ರತಿಕ್ರಿಯಿಸಿದ್ದಾರೆ. ಈ ವಿವಾದದ ಬಗ್ಗೆ ಮೌನ ವಹಿಸುವ ಬದಲು, ಸೋಷಿಯಲ್ ಮೀಡಿಯಾದಲ್ಲಿ ಆ ಫೋಟೋಗಳ ಅಸಲಿಯತ್ತನ್ನು ಬಯಲಿಗೆಳೆಯುವ ಮೂಲಕ ಅವರು ಗಮನ ಸೆಳೆದಿದ್ದಾರೆ. ವ್ಯಂಗ್ಯದ ಮೂಲಕವೇ ಟಾಂಗ್: ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮೆಲೋನಿ, “ನನ್ನ ಈ ನಕಲಿ ಫೋಟೋ ಸೃಷ್ಟಿಸಿದವರು ಅಸಲಿಗಿಂತಲೂ…

Read More
Thieves Dial Police Helpline For Rescue After Being Caught By Mob while doing theft

Theft: ಕಳ್ಳತನಕ್ಕೆ ಹೋದವರು ಜನರಿಗೆ ಹೆದರಿ ಪೊಲೀಸರಿಗೇ ಫೋನ್‌ ಮಾಡಿದರು! ಒಡಿಶಾದಲ್ಲಿ ನಡೆದ ‘ಉಲ್ಟಾ’ ಘಟನೆ

ಭುವನೇಶ್ವರ: ಕಳ್ಳರು ಪೊಲೀಸರನ್ನು ಕಂಡರೆ ಓಡಿಹೋಗುವುದು ನಮಗೆ ಗೊತ್ತು. ಆದರೆ ಒಡಿಶಾದ ಬಸಂತಿ ಕಾಲೋನಿಯಲ್ಲಿ ನಡೆದ ಘಟನೆಯಲ್ಲಿ, ಇಬ್ಬರು ಕಳ್ಳರು ಸಾರ್ವಜನಿಕರ ಹೊಡೆತಕ್ಕೆ ಹೆದರಿ ತಾವೇ ಪೊಲೀಸರಿಗೆ ಫೋನ್ ಮಾಡಿ “ನಮ್ಮನ್ನು ಕಾಪಾಡಿ” ಎಂದು (Theft) ಕೇಳಿಕೊಂಡಿದ್ದಾರೆ! ಈ ವಿಲಕ್ಷಣ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮನೆಗೆ ನುಗ್ಗಿದ್ದ ಖದೀಮರು: ನಾನಕ್ ಸಿಂಗ್ ಮತ್ತು ಸತ್ಯೇಂದ್ರ ಕುಮಾರ್ ಸಿಂಗ್ ಎಂಬಿಬ್ಬರು ಕಳ್ಳರು ಗಣೇಶ್ ಬಿಸ್ವಾಲ್ ಎಂಬುವವರ ಎರಡು ಅಂತಸ್ತಿನ ಮನೆಗೆ ಕನ್ನ ಹಾಕಿದ್ದರು….

Read More
Assam cm Himanta Biswa Sarma resigned

Assam: ಅಸ್ಸಾಂ ಮುಖ್ಯಮಂತ್ರಿ ಸ್ಥಾನಕ್ಕೆ ಹಿಮಂತ ಬಿಸ್ವ ಶರ್ಮಾ ರಾಜೀನಾಮೆ: ಮೇ 12ಕ್ಕೆ ನೂತನ ಸರ್ಕಾರದ ಪದಗ್ರಹಣ?

ಗುವಾಹಟಿ: ಅಸ್ಸಾಂ (Assam) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಭರ್ಜರಿ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಂಡ ಬೆನ್ನಲ್ಲೇ, ಆಡಳಿತಾತ್ಮಕ ಬದಲಾವಣೆಗಳು ವೇಗ ಪಡೆದುಕೊಂಡಿವೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಬುಧವಾರ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಹಂಗಾಮಿ ಸಿಎಂ ಆಗಿ ಮುಂದುವರಿಕೆ: ಗುವಾಹಟಿಯ ಲೋಕ ಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಶರ್ಮಾ, ಇಡೀ ಸಚಿವ ಸಂಪುಟದ ಪರವಾಗಿ ರಾಜೀನಾಮೆ ಹಸ್ತಾಂತರಿಸಿದರು. ರಾಜೀನಾಮೆಯನ್ನು ಅಂಗೀಕರಿಸಿದ ರಾಜ್ಯಪಾಲರು, ಹೊಸ ಸರ್ಕಾರ ರಚನೆಯಾಗುವವರೆಗೆ…

Read More