ಕಲಬುರಗಿ: ಪಾಕಿಸ್ತಾನದ ಏಜೆಂಟರು ಹಾಗೂ ಜಾಗತಿಕ ಭಯೋತ್ಪಾದನಾ ಸಂಘಟನೆ ಐಸಿಸ್ (ISIS) ಜೊತೆ ನಿರಂತರ ಸಂಪರ್ಕದಲ್ಲಿದ್ದ ಇಬ್ಬರು ಶಂಕಿತ ದೇಶದ್ರೋಹಿಗಳನ್ನು (Shocking) ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಯಶಸ್ವಿಯಾಗಿ ಬಂಧಿಸಿದೆ. ಕೇಂದ್ರ ಗುಪ್ತಚರ ಇಲಾಖೆಯು ನೀಡಿದ ಅತ್ಯಂತ ರಹಸ್ಯ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಎಟಿಎಸ್ ಅಧಿಕಾರಿಗಳು, ಕಲಬುರಗಿ ತಾಲೂಕಿನ ಮಾಲಗತ್ತಿ ಮತ್ತು ಉಪಳಾಂವ್ ಗ್ರಾಮದ ಹೊರವಲಯದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಹೆಡೆಮುರexploded ಕಟ್ಟಿದ್ದಾರೆ.
ಮಾಂಸದ ಫ್ಯಾಕ್ಟರಿಯಲ್ಲಿ ಕೆಲಸ; ರೂಮಿನಲ್ಲಿ ಸಿಕ್ಕಿತು ಮ್ಯಾಪ್: ಬಂಧಿತ ಶಂಕಿತರನ್ನು ಮೂಲತಃ ಉತ್ತರ ಪ್ರದೇಶದವರಾದ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಲಬುರಗಿ ಹೊರವಲಯದಲ್ಲಿರುವ ‘ಫೇರ್ ಎಕ್ಸ್ಪೋರ್ಟ್ಸ್’ ಎಂಬ ಬೀಫ್ (ಮಾಂಸ) ರಫ್ತು ಮಾಡುವ ಪ್ರಸಿದ್ಧ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೇಲ್ನೋಟಕ್ಕೆ ಸಾಮಾನ್ಯ ಕೆಲಸಗಾರರಂತೆ ನಟಿಸುತ್ತಿದ್ದ ಇವರು, ವಾಟ್ಸಾಪ್ ಹಾಗೂ ಫೇಸ್ಬುಕ್ ಮುಖಾಂತರ ಪಾಕಿಸ್ತಾನದ ಹ್ಯಾಂಡ್ಲರ್ಗಳು ಮತ್ತು ಐಸಿಸ್ ನೆಟ್ವರ್ಕ್ನೊಂದಿಗೆ ಸದಾ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ದಾಳಿಯ ವೇಳೆ ಶಂಕಿತ ಸಮೀರ್ ವಾಸವಿದ್ದ ಕೊಠಡಿಯಲ್ಲಿ ಕೆಲವು ಪ್ರಮುಖ ರಹಸ್ಯ ನಕ್ಷೆಗಳು (ಮ್ಯಾಪ್ಸ್) ಪತ್ತೆಯಾಗಿರುವುದು ಭದ್ರತಾ ಸಂಸ್ಥೆಗಳ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ ಬಂಧಿತರನ್ನು ಗುಪ್ತ ಸ್ಥಳವೊಂದರಲ್ಲಿ ಇರಿಸಿ ಯುಪಿ ಎಟಿಎಸ್ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ.
ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಾಗ ಸಿಕ್ಕಿಬಿದ್ದ ಜಾಲ: ಪೊಲೀಸ್ ಇಲಾಖೆಯ ಹಿರಿಯ ಮೂಲಗಳ ಪ್ರಕಾರ, ಅಂತಾರಾಜ್ಯ ಮಟ್ಟದ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ನಡೆಸುತ್ತಿದ್ದಾಗ ಈ ಭಯಾನಕ ಕೃತ್ಯ ಬೆಳಕಿಗೆ ಬಂದಿದೆ. ದೇಶವಿರೋಧಿ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುವ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ತನಿಖಾ ಸಂಸ್ಥೆಗಳು ನಿರಂತರ ನಿಗಾ ವಹಿಸಿದ್ದವು. ಈ ವೇಳೆ ಪಾಕಿಸ್ತಾನದ ಗುಪ್ತಚರ ಜಾಲಗಳು ನಿರ್ವಹಿಸುತ್ತಿದ್ದ ಫೇಸ್ಬುಕ್ ಪುಟಗಳ ಜೊತೆಗೆ ಸಮೀರ್ ಸಕ್ರಿಯವಾಗಿ ಒಡನಾಟ ಹೊಂದಿರುವುದು ಡಿಜಿಟಲ್ ಪುರಾವೆಗಳ ಮೂಲಕ ಸಾಬೀತಾಗಿದೆ. ಈ ನಿಖರ ಸಾಕ್ಷ್ಯಗಳ ಆಧಾರದ ಮೇಲೆ ಯುಪಿ ಎಟಿಎಸ್ ಹಾಗೂ ಸ್ಥಳೀಯ ಕಲಬುರಗಿ ಪೊಲೀಸರು ಜಂಟಿ ದಾಳಿ ಸಂಘಟಿಸಿದ್ದಾರೆ. ಈ ಜಾಲದಲ್ಲಿ ಭಾಗಿಯಾಗಿರುವ ಇತರ ದೇಶದ್ರೋಹಿಗಳು ಯಾರು ಮತ್ತು ಇವರ ಮುಂದಿನ ಸ್ಕೆಚ್ ಏನಿತ್ತು ಎಂಬ ಬಗ್ಗೆ ಆಳವಾದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ದಾವಣಗೆರೆ ಟೋಲ್ ಪ್ಲಾಜಾದಲ್ಲಿ ಭೀಕರ ಅಪಘಾತ: ಕಾರಿಗೆ ಡಿಕ್ಕಿ ಹೊಡೆದ ಕಂಟೇನರ್ ಟ್ರಕ್
