TOP NEWS
sandalwood actor shivarajkumar new role in mahan film

Shivarajkumar: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಧಮಾಕಾ: ವಿಜಯ್ ರಾಘವೇಂದ್ರ ನಟನೆಯ ‘ಮಹಾನ್‌’ಗೆ ಶಿವಣ್ಣ ಸಾಥ್!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಿಜಿಯೆಸ್ಟ್ ನಟರಲ್ಲಿ ಒಬ್ಬರಾದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಸದ್ಯ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಸೋಲೋ ಹೀರೋ ಆಗಿ ಅಷ್ಟೇ ಅಲ್ಲದೆ, ಪ್ರಮುಖ ಕಥೆಗಳಿಗೆ ಶಕ್ತಿ ತುಂಬುವಂತಹ ವಿಶೇಷ ಪಾತ್ರಗಳ ಮೂಲಕವೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈಗ ಅವರ ಲಿಸ್ಟ್‌ಗೆ ಹೊಸ ಸೇರ್ಪಡೆ ‘ಮಹಾನ್’ ಸಿನಿಮಾ. ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಶಿವಣ್ಣ ಲಾಯರ್ ಅವತಾರವೆತ್ತಿದ್ದಾರೆ. ಹಲವು ವರ್ಷಗಳ ಬಳಿಕ ಒಂದಾದ ‘ಚಿನ್ನಾರಿ ಮುತ್ತ’ – ‘ಹ್ಯಾಟ್ರಿಕ್ ಹೀರೋ’ ಇತ್ತೀಚೆಗಷ್ಟೇ…

Read More
sandalwood vijayalakshmi darshan shares cute photo and darshan plea for supreme court

Sandalwood: ಇನ್‌ಸ್ಟಾಗ್ರಾಮ್‌ನಲ್ಲಿ ಪತಿಯ ಹಳೆಯ ನೆನಪು ಹಂಚಿಕೊಂಡ ವಿಜಯಲಕ್ಷ್ಮಿ; ಇತ್ತ ಜಾಮೀನಿಗಾಗಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಸದ್ಯ ಕಾರಾಗೃಹದಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ಬೇಲ್ ಪ್ರಕ್ರಿಯೆ ಹಾಗೂ ಅವರ ಕುಟುಂಬದ ಇತ್ತೀಚಿನ ಬೆಳವಣಿಗೆಗಳು ಸಖತ್ ಸದ್ದು ಮಾಡುತ್ತಿವೆ. ಒಂದೆಡೆ ಪತಿಯ ನೆನಪಿನಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ಭಾವುಕ ಫೋಟೋ ಹಂಚಿಕೊಂಡಿದ್ದರೆ, ಮತ್ತೊಂದೆಡೆ ಜೈಲಿನಿಂದ (Sandalwood) ಹೊರಬರಲು ನಟ ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಹೊಸದಾಗಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಜೈಲಿನಲ್ಲಿರುವ ಪತಿಯ ನೆನಪಿನಲ್ಲಿ ವಿಜಯಲಕ್ಷ್ಮಿ ಪೋಸ್ಟ್ ಜಾಮೀನು ಸಿಗದೆ ದರ್ಶನ್ ಜೈಲಿನಲ್ಲೇ ಇರುವುದರಿಂದ ಕುಟುಂಬದವರು ಅವರನ್ನು ಭೇಟಿಯಾಗಲು…

Read More
Actor yash new film story leaked viral on social media

Actor Yash: ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರದ ಕಥೆ ಲೀಕ್? ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!

ಬೆಂಗಳೂರು: ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿರುವ ರಾಕಿ ಭಾಯ್ ಯಶ್, (Actor Yash) ಪ್ರಸ್ತುತ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ, ಅವರ ಮುಂದಿನ ಪ್ರಾಜೆಕ್ಟ್ ಕುರಿತು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ಶುರುವಾಗಿದೆ. ಪ್ರಸಿದ್ಧ ಚಲನಚಿತ್ರ ಮಾಹಿತಿ ಜಾಲತಾಣವಾದ ಐಎಂಡಿಬಿ (IMDb) ಪುಟದಲ್ಲಿ ಯಶ್ ಅವರ ಮುಂಬರುವ ಸಿನಿಮಾದ ಲೈನ್ ಹಾಗೂ ಕಲಾವಿದರ ವಿವರಗಳು ಪ್ರಕಟವಾಗಿದ್ದು, ಗಾಂಧಿನಗರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಏನಿದು ‘ಮ್ಯಾಡ್ ಪೊಲೀಸ್’ ಕಥೆ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ…

Read More
Sandalwood producer ba ma harish son lost life due to heart attack while trekking

Sandalwood: ಟ್ರೆಕ್ಕಿಂಗ್ ವೇಳೆಹೃದಯಾಘಾತ: ಖ್ಯಾತ ಚಿತ್ರ ನಿರ್ಮಾಪಕ ಭಾ.ಮಾ. ಹರೀಶ್ ಪುತ್ರ ಉಲ್ಲಾಸ್ ಗೌಡ ನಿಧನ!

ಶಿವಮೊಗ್ಗ: ಕನ್ನಡ ಚಿತ್ರರಂಗದ (Sandalwood) ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಭಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ (28) ಅವರು ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟದಲ್ಲಿ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ತೆರಳಿದ್ದ ಯುವಕ ಅತ್ಯಂತ ಸಣ್ಣ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡಿರುವುದು ಇಡೀ ಚಿತ್ರರಂಗ ಹಾಗೂ ಅವರ ಕುಟುಂಬ ವರ್ಗದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ. ಬೆಂಗಳೂರಿನಿಂದ ತಮ್ಮ ಸ್ನೇಹಿತರ ಗುಂಪಿನೊಂದಿಗೆ ಟ್ರಾವೆಲರ್ (T.T) ವಾಹನದಲ್ಲಿ ಕೊಡಚಾದ್ರಿಗೆ ಬಂದಿದ್ದ ಉಲ್ಲಾಸ್…

Read More
sandalwood case against actor kishan and niveditha gowda

Sandalwood: ಫ್ಯಾಷನ್ ರೀಲ್ಸ್ ಚಾಳಿ, ಸೆಲೆಬ್ರಿಟಿಗಳಿಗೆ ಸಂಕಷ್ಟ: ನವಿಲು ಗರಿ ಉಡುಪು ಧರಿಸಿದ ಕಿಶನ್, ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು!

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ (Sandalwood) ಸದಾ ಸಕ್ರಿಯರಾಗಿ ವಿಭಿನ್ನ ರೀಲ್ಸ್‌ಗಳ ಮೂಲಕ ಗಮನ ಸೆಳೆಯುವ ಸ್ಯಾಂಡಲ್‌ವುಡ್ ನಟ ಕಿಶನ್ ಹಾಗೂ ಕಿರುತೆರೆಯ ಖ್ಯಾತ ನಟಿ ನಿವೇದಿತಾ ಗೌಡ ಅವರು ಈಗ ಕಾನೂನಿನ ಬೇಲಿ ಮುರಿದ ಆರೋಪ ಎದುರಿಸುತ್ತಿದ್ದಾರೆ. ಭಾರತದ ಹೆಮ್ಮೆಯ ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಬಳಸಿ ತಯಾರಿಸಲಾದ ವಸ್ತ್ರಗಳನ್ನು ತೊಟ್ಟು ವಿಡಿಯೋ ಮಾಡಿ ಹಂಚಿಕೊಂಡಿರುವುದು ಈ ಇಬ್ಬರು ತಾರೆಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಕೃತ್ಯದ ವಿರುದ್ಧ ಪರಿಸರ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ವನ್ಯಜೀವಿ ಸಂರಕ್ಷಣಾ…

Read More
sandalwood actor chikkanna second film first song released by 8 actresses

Sandalwood: ಚಿಕ್ಕಣ್ಣ ಹೊಸ ಸಿನಿಮಾದ ‘ಇನ್ಮೇಲೆ’ ಮೆಲೋಡಿ ಸಾಂಗ್ ರಿಲೀಸ್ ಮಾಡಿದ ಸ್ಯಾಂಡಲ್‌ವುಡ್ ತಾರೆಯರು!

ಬೆಂಗಳೂರು: ಹಾಸ್ಯ ನಟನಾಗಿ ಪ್ರೇಕ್ಷಕರನ್ನು ನಗಿಸಿ, ಈಗ ಹೀರೋ ಆಗಿ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಬ್ಯುಸಿಯಾಗಿರುವ ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಅಭಿನಯದ ಎರಡನೇ ಸಿನಿಮಾ ‘ಲಕ್ಷ್ಮೀಪುತ್ರ’ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಗಳಿಗೆ ಚಿತ್ರತಂಡ ಚಾಲನೆ ನೀಡಿದ್ದು, ಸಿನಿಮಾದ ಮೊದಲ ಪ್ರೇಮಗೀತೆ ಇತ್ತೀಚೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನ ಎಎಂಬಿ ಕಪಾಲಿ ಥಿಯೇಟರ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭದಲ್ಲಿ ಚಿತ್ರರಂಗದ ಎಂಟು ಜನ ಖ್ಯಾತ ನಟಿಯರು ಒಟ್ಟಾಗಿ ಸೇರಿ ‘ಇನ್ಮೇಲೆ’ ಎಂಬ ರೋಮ್ಯಾಂಟಿಕ್…

Read More
sandalwood actor darshan kalasipalya re release

Actor Darshan: ಥಿಯೇಟರ್‌ಗಳಲ್ಲಿ ಮತ್ತೆ ‘ಡಿ ಬಾಸ್’ ಹವಾ: 20 ವರ್ಷಗಳ ಹಳೆಯ ‘ಕಲಾಸಿಪಾಳ್ಯ’ ರೀ-ರಿಲೀಸ್‌ಗೆ ಪ್ರಸನ್ನ ಚಿತ್ರಮಂದಿರ ಹೌಸ್‌ಫುಲ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (‌Actor Darshan) ಅಭಿನಯದ ಸ್ಯಾಂಡಲ್‌ವುಡ್‌ನ ಗರಂ ಆ್ಯಕ್ಷನ್ ಸಿನಿಮಾ ‘ಕಲಾಸಿಪಾಳ್ಯ’ ಜೂನ್ 19ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಮತ್ತೆ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸನ್ನ ಥಿಯೇಟರ್‌ನಲ್ಲಿ ದರ್ಶನ್ ಅಭಿಮಾನಿಗಳು ಈ ಚಿತ್ರದ ಮರು-ಬಿಡುಗಡೆಯನ್ನು ದೊಡ್ಡ ಹಬ್ಬದಂತೆ ಆಚರಿಸಿದ್ದಾರೆ. ನೆಚ್ಚಿನ ನಟನ ಬೃಹತ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ಗಜಮಾಲೆ ಹಾಕಿ, ಪಟಾಕಿಗಳ ಸರವನ್ನೇ ಸಿಡಿಸಿ ಚಿತ್ರಪ್ರೇಮಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಬೆಳ್ಳಿ ತೆರೆಯ ಮೇಲೆ ದರ್ಶನ್…

Read More