TOP NEWS
Cyber crime Gujarat Man Loses Rs 6 00 000 from APK download

Cyber Crime: ಆ್ಯಪ್ ಲಿಂಕ್ ಕಳಿಸಿ ಹ್ಯಾಕಿಂಗ್: ಜಾಮತಾರಾ ಸೈಬರ್ ಗ್ಯಾಂಗ್‌ನ ನಯವಂಚಕ ಆಟ ಬಯಲಿಗೆಳೆದ ಪೊಲೀಸರು!

ಅಹಮದಾಬಾದ್: ಸಾರ್ವಜನಿಕರ ಮೊಬೈಲ್‌ಗಳಿಗೆ ನಕಲಿ ಆ್ಯಪ್ ಲಿಂಕ್ (APK File) ಕಳುಹಿಸಿ, ಇಡೀ ಫೋನ್ ಅನ್ನು ಹ್ಯಾಕ್ ಮಾಡುವ ಮೂಲಕ ದೇಶಾದ್ಯಂತ (Cyber Crime) ಭೀತಿ ಸೃಷ್ಟಿಸಿದ್ದ ಕುಖ್ಯಾತ ಜಾಮತಾರಾ ಸೈಬರ್ ವಂಚಕರ ಹೆಡೆಮುರಿಯನ್ನು ಸೈಬರ್ ಕ್ರೈಂ ಪೊಲೀಸರು ಕಟ್ಟಿದ್ದಾರೆ. ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಕ್ಕೆ ಬಂದ ಸಾಲು ಸಾಲು ದೂರುಗಳ ತಾಂತ್ರಿಕ ವಿಶ್ಲೇಷಣೆ ನಡೆಸಿದ ಸೈಬರ್ ತಜ್ಞರ ವಿಶೇಷ ತಂಡವು, ಈ ವಂಚಕ ಜಾಲದ ಕಾರ್ಯಾಚರಣೆಯ ಶೈಲಿಯನ್ನು ಪತ್ತೆಹಚ್ಚಿ ಇಡೀ ನೆಟ್‌ವರ್ಕ್ ಅನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದೆ….

Read More
Gujarat bhajan singer viral video of buried under cash

Viral Video: ಭಜನಾ ಗಾಯಕನ ಮೇಲೆ ನೋಟುಗಳ ಮಳೆ! ಬ್ಯಾಗ್ ಮತ್ತು ಚೀಲಗಳಲ್ಲಿ ಹಣ ತಂದು ಸುರಿದ ಭಕ್ತರು

ಜುನಾಗಢ: ಭಕ್ತಿ ಮತ್ತು ಸಂಭ್ರಮದ ಹೆಸರಿನಲ್ಲಿ ಭಕ್ತರು ನೋಟುಗಳ ಮಳೆಯನ್ನೇ (Viral Video) ಸುರಿಸಿರುವ ಅಪರೂಪದ ಘಟನೆಯೊಂದು ಗುಜರಾತ್‌ನ ಜುನಾಗಢ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಖಂಭಾಲಿಯಾದಲ್ಲಿ ಆಯೋಜಿಸಲಾಗಿದ್ದ ‘ಭಾಗವತ್ ಜ್ಞಾನ ಯಜ್ಞ’ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ನಡೆದ ಪ್ರಸಿದ್ಧ ಭಜನಾ ಗಾಯಕ ಕವಿರಾಜ್ ಜಿಗ್ನೇಶ್ ಅವರ ‘ದಾಯರೋ’ (ಗುಜರಾತಿ ಜಾನಪದ ಗಾಯನ) ಪ್ರದರ್ಶನದ ವೇಳೆ ಈ ದೃಶ್ಯ ಕಂಡುಬಂದಿದೆ. ಗಾಯಕ ಕೃಷ್ಣನ ಭಜನೆಗಳನ್ನು ಹಾಡುತ್ತಿದ್ದಂತೆ ಮೈಮರೆತ ಭಕ್ತರು, ಅಕ್ಷರಶಃ ವೇದಿಕೆಯ ಮೇಲೆ ಹಣದ ರಾಶಿಯನ್ನೇ ಸೃಷ್ಟಿಸಿದ್ದಾರೆ. ಏನಿದೆ…

Read More
India is very strong nobody can destroy Narendra modi

Narendra Modi: ಸೋಮನಾಥದಲ್ಲಿ ಪ್ರಧಾನಿ ಮೋದಿ ಅಬ್ಬರ: ‘ಯಾವ ಶಕ್ತಿಯೂ ಭಾರತವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದ ಪ್ರಧಾನಿ!

ಗಾಂಧಿನಗರ: ಗುಜರಾತ್‌ನ ಐತಿಹಾಸಿಕ ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಅಮೃತ ಮಹೋತ್ಸವದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಂಡಿದ್ದರು. ಈ ಶುಭ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಹಿತಾಸಕ್ತಿಯೇ ನಮಗೆ ಪರಮೋಚ್ಚ. ಭಾರತದ ಸಂಕಲ್ಪವನ್ನು ಅಲುಗಾಡಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂದು ಸಿಂಹಗರ್ಜನೆ ಮಾಡಿದರು. ಶಕ್ತಿ ಪ್ರದರ್ಶನದ (Narendra Modi) ರೋಡ್‌ ಶೋ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ಹೆಲಿಪ್ಯಾಡ್‌ನಿಂದ ವೀರ್ ಹಮೀರ್ಜಿ ವೃತ್ತದವರೆಗೆ ಸುಮಾರು 1.5 ಕಿಲೋಮೀಟರ್‌ಗಳಷ್ಟು ಬೃಹತ್ ರೋಡ್‌ಶೋ ನಡೆಸಿದರು. ರಸ್ತೆಯ…

Read More
BJP leads in Gujarat local body polls

BJP: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ: ಭರ್ಜರಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಅಹಮದಾಬಾದ್: ಗುಜರಾತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಬಿಜೆಪಿ )BJP) ಅಭೂತಪೂರ್ವ ಮುನ್ನಡೆ ಸಾಧಿಸಿದೆ. ರಾಜ್ಯದಾದ್ಯಂತ ಒಟ್ಟು 9,200ಕ್ಕೂ ಹೆಚ್ಚು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಈವರೆಗೆ ಬಿಜೆಪಿ 3,750ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿದೆ. 410 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಬಿಜೆಪಿ 410 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಕೇವಲ 20 ಸ್ಥಾನಗಳಿಗೆ ಸೀಮಿತವಾಗಿದೆ. ಇನ್ನುಳಿದಂತೆ ಪುರಸಭೆಗಳಲ್ಲಿ ಬಿಜೆಪಿ 1,105 ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್…

Read More
Crime dosa batter death case cops suspects parents

Crime: ಅಹಮದಾಬಾದ್ ಪುಟ್ಟ ಮಕ್ಕಳ ಸಾವು ಪ್ರಕರಣ: ದೋಸೆ ಹಿಟ್ಟಿನ ನಿಗೂಢತೆ ಬೆನ್ನತ್ತಿದ ಪೊಲೀಸರು

ಗುಜರಾತ್:‌ ಅಹಮದಾಬಾದ್‌ನ ಚಾಂದ್‌ಖೇಡಾದಲ್ಲಿ ದೋಸೆ ಸೇವಿಸಿದ ನಂತರ ಇಬ್ಬರು ಪುಟ್ಟ ಸಹೋದರಿಯರು ಮೃತಪಟ್ಟ ಘಟನೆ ಈಗ ತೀವ್ರ (Crime) ತನಿಖೆಗೆ ಒಳಪಟ್ಟಿದೆ. ಈ ದುರಂತಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪೊಲೀಸರು ಮತ್ತು ವಿಧಿವಿಜ್ಞಾನ ತಜ್ಞರ (FSL) ತಂಡ ಹರಸಾಹಸ ಪಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ತಂಡವು ಮೃತ ಮಕ್ಕಳ ಮನೆಗೆ ಭೇಟಿ ನೀಡಿ, ಅಂದು ಬಳಸಿದ್ದ ಪಾತ್ರೆಗಳು, ಬಟ್ಟೆಗಳು, ಚಾಪೆ ಹಾಗೂ ಮಕ್ಕಳಿಗೆ ನೀಡಲಾಗಿದ್ದ ಔಷಧಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದೆ. ಏನಿದು ಘಟನೆ?…

Read More
pm Narendra Modi gujrat tour for 3 days

Narendra Modi: ಗುಜರಾತ್‌ನಲ್ಲಿ ಮೋದಿ ಪ್ರವಾಸ, ಸೋಮನಾಥದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ

ಗುಜರಾತ್:‌ ಪ್ರಧಾನಿ ನರೇಂದ್ರ ಮೋದಿ (Narendra Modi) ನಿನ್ನೆಯಿಂದ ಗುಜರಾತ್‌ಗೆ ಮೂರು ದಿನಗಳ ಪ್ರವಾಸ ಆರಂಭಿಸಿದ್ದಾರೆ.  ನಿನ್ನೆ ಸಂಜೆ ಸೋಮನಾಥ ತಲುಪಿದ ಪ್ರಧಾನಿಯವರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಓಂಕಾರ ಮಂತ್ರ ಪಠಣದಲ್ಲಿ ಮೋದಿ  ಸೋಮನಾಥ ದೇವಾಲಯದಲ್ಲಿ ನಡೆಯುವ ಓಂಕಾರ ಮಂತ್ರ ಪಠಣದಲ್ಲಿ ಅವರು ಭಾಗವಹಿಸಿದ್ದು, ಅಲ್ಲಿ ನಡೆಯುವ ಡ್ರೋನ್ ಪ್ರದರ್ಶನ ವೀಕ್ಷಿಸಿದ್ದಾರೆ.  ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ಯೋಧರನ್ನು ಗೌರವಿಸಲು ಆಯೋಜಿಸಲಾದ  ಶೌರ್ಯ ಯಾತ್ರೆಯಲ್ಲಿ ಪ್ರಧಾನಿ ಭಾನುವಾರ ಭಾಗವಹಿಸಿದ್ದಾರೆ. ಯಾವೆಲ್ಲಾ ಕಾರ್ಯಕ್ರಮದಲ್ಲಿ ಮೋದಿ…

Read More