TOP NEWS
Good news for Bengaluru Pourakarmikas as GBA Greenlights Bonus After Three Years

GBA: ಪೌರಕಾರ್ಮಿಕರಿಗೆ ಜಿಬಿಎ ಸಿಹಿಸುದ್ದಿ: ಮೂರು ವರ್ಷಗಳ ಬಳಿಕ ಸಿಗಲಿದೆ ಬೋನಸ್ ಭಾಗ್ಯ!

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಬೋನಸ್ ಸಿಗದೆ ಕಾಯುತ್ತಿದ್ದ ರಾಜಧಾನಿಯ ಪೌರಕಾರ್ಮಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಸಿಹಿಸುದ್ದಿ ನೀಡಿದೆ. ಜಿಬಿಎ ವ್ಯಾಪ್ತಿಯ ಒಟ್ಟು ಐದು ನಗರಪಾಲಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 14 ಸಾವಿರ ಕಾರ್ಮಿಕರಿಗೆ ಈ ಬಾರಿ ಬೋನಸ್ ವಿತರಿಸಲು ಪ್ರಾಧಿಕಾರ ಗ್ರೀನ್ ಸಿಗ್ನಲ್ ನೀಡಿದೆ. ಈ ಯೋಜನೆಯಡಿ ಸುಮಾರು 12,600 ಕಾಯಂ ನೌಕರರು ಹಾಗೂ 1,500 ಗುತ್ತಿಗೆ ಆಧಾರಿತ ಪೌರಕಾರ್ಮಿಕರು ಸೌಲಭ್ಯ ಪಡೆಯಲಿದ್ದಾರೆ. ಪ್ರತಿಯೊಬ್ಬ ಕಾರ್ಮಿಕನಿಗೂ ತಲಾ 22 ಸಾವಿರ ರೂಪಾಯಿ ಬೋನಸ್…

Read More
R ashok slams government over shivajnagar incident

R Ashok: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಆರ್‌ ಅಶೋಕ್

ಬೆಂಗಳೂರು: ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ (GBA) ಅಧಿಕಾರಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಅತ್ಯಂತ ಖಂಡನೀಯ. ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಯ ಮೇಲೆಯೇ ಈ ರೀತಿಯ ಹಲ್ಲೆ ನಡೆಯುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಬಿಜೆಪಿ ನಾಯಕ ಆರ್‌ ಅಶೋಕ್‌ (R Ashok) ಆಕ್ರೋಶ ವ್ಯಕ್ತಪಡಿಸಿದ್ದಾರೆ, ಕೃಷ್ಣ ಬೈರೇಗೌಡ  ಅವರೇ, ಈಗ ನಿಮ್ಮ ಮೌನ ಏಕೆ? ಬೆಂಗಳೂರಿನ ಬೇರೆ ಭಾಗಗಳಲ್ಲಿ ಒತ್ತುವರಿ ತೆರವು ವೇಳೆ…

Read More
Permanent Relief from Garbage Menace in Bengaluru Minister Gives Green Signal for Cleanliness Drive GBA

GBA: ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಶಾಶ್ವತ ಮುಕ್ತಿ: ಸ್ವಚ್ಛತಾ ಆಂದೋಲನಕ್ಕೆ ಸಚಿವರ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜಧಾನಿಯ ಅಂದವನ್ನು ಕೆಡಿಸುತ್ತಿರುವ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಜಂಟಿಯಾಗಿ ಮಹತ್ವದ ಮಾಸ್ಟರ್ ಪ್ಲಾನ್ ರೂಪಿಸಿವೆ. ಮುಂಬರುವ ಆಗಸ್ಟ್ ತಿಂಗಳಿನಿಂದ ನಗರದಾದ್ಯಂತ ಅತ್ಯಂತ ವಿಸ್ತಾರವಾದ “ಕಸಮುಕ್ತ ಬೆಂಗಳೂರು” ಮಹಾ ಅಭಿಯಾನಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ನೇರ ಉಸ್ತುವಾರಿಯಲ್ಲಿ ಈ ಸ್ವಚ್ಛತಾ ಆಂದೋಲನ ನಡೆಯಲಿದ್ದು, ಬಿಬಿಎಂಪಿ ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳು ರಾಜಧಾನಿಯನ್ನು ಹಸಿರು ನಗರಿಯನ್ನಾಗಿ ಮಾಡಲು…

Read More
Bengaluru Stray Dog Control GBA Steps Up Sterilization and Anti Rabies Drives Across the City

GBA: ಬೆಂಗಳೂರು ಪಶ್ಚಿಮ ವಲಯದಲ್ಲೇ ಇವೆ 69 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು: ಕಳೆದೊಂದು ತಿಂಗಳಲ್ಲೇ 465 ಶ್ವಾನಗಳಿಗೆ ಲಸಿಕೆ!

ಬೆಂಗಳೂರು ಮಹಾನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಹತೋಟಿಗೆ ತರಲು (Stray Dogs) ಹಾಗೂ ರೇಬಿಸ್ ಮುಕ್ತ ನಗರವನ್ನಾಗಿಸಲು ಪಾಲಿಕೆಯ (GBA) ಪಶುಪಾಲನಾ ವಿಭಾಗವು ವಿಶೇಷ ಕಾರ್ಯಚರಣೆ ಕೈಗೆತ್ತಿಕೊಂಡಿದೆ. ಶ್ವಾನಗಳಿಗೆ ಲಸಿಕೆ ಹಾಕುವುದು ಹಾಗೂ ಸಂತಾನಹರಣ ಚಿಕಿತ್ಸೆ (ಎಬಿಸಿ) ನೀಡುವ ಪ್ರಕ್ರಿಯೆಗೆ ಈಗ ಮತ್ತಷ್ಟು ವೇಗ ಸಿಕ್ಕಿದೆ. ಪಶ್ಚಿಮ ವಲಯದ ಅಂಕಿ-ಅಂಶ: ಇತ್ತೀಚಿನ ಸಮೀಕ್ಷೆಯೊಂದರ ಅನ್ವಯ, ಬೆಂಗಳೂರಿನ ಪಶ್ಚಿಮ ವಲಯದ ಭಾಗದಲ್ಲೇ ಅಂದಾಜು 69,341 ಬೀದಿ ಶ್ವಾನಗಳು ಇರುವುದು ಪತ್ತೆಯಾಗಿದೆ. ಇವುಗಳ ಪೈಕಿ ಕಳೆದ ಒಂದು ತಿಂಗಳ ಅವಧಿಯಲ್ಲಿ…

Read More
Encroachments on 435 km stretch of footpaths cleared reports DK Shivakumar

DK Shivakumar: ಬೀದಿ ಬದಿ ವ್ಯಾಪಾರಿಗಳು ನಮ್ಮವರೇ ಎಂದ ಸಿಎಂ

ಬೆಂಗಳೂರು: “ಜುಲೈ 1 ರಿಂದ ಇಲ್ಲಿಯವರೆಗು ಒಟ್ಟು 435 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿ ಒಟ್ಟು 9,878 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಐದೂ ಪಾಲಿಕೆಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆಯಲಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ (DK Shivakumar) ಅವರು ಹೇಳಿದರು. ನಗರದ ವಿವಿಧ ಕಡೆಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಹಾಗೂ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕುರಿತು ಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿ ಬೆಂಗಳೂರು ನಗರಾಭಿವೃದ್ದಿ ಸಚಿವರಾದ ಕೃಷ್ಣ…

Read More
Vatal Nagaraj leads unique Crowbar March against GBA over demolition drive

GBA: ಬಡ ವ್ಯಾಪಾರಿಗಳ ಅಂಗಡಿಗಳ ಮೇಲೆ ಜೆಸಿಬಿ ದಾಳಿ: ಜಿಬಿಎ ದರ್ಪದ ವಿರುದ್ಧ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ!

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಫುಟ್‌ಪಾತ್ ಬದಿಯ ಸಣ್ಣ ಮತ್ತು ಬಡ ವ್ಯಾಪಾರಿಗಳ ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕ್ರಮದ ವಿರುದ್ಧ ಕನ್ನಡ ಚಳವಳಿ ವಾಟಾಳ್ ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ದಬ್ಬಾಳಿಕೆಯನ್ನು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಹಳೇ ಬಿಬಿಎಂಪಿ ಕಚೇರಿ ಬಳಿ ಇರುವ ಜಿಬಿಎ ಕಚೇರಿ ಮುಂಭಾಗದಲ್ಲಿ ಬೃಹತ್ ‘ಗುದ್ದಲಿ ಮೆರವಣಿಗೆ’ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು. ಸರ್ಕಾರದ ವಿರುದ್ಧ ಕಿಡಿಕಾರಿದ ವಾಟಾಳ್‌…

Read More
Footpath Eviction Sparks Outrage Street Vendors Call for Bengaluru Bandh on July 8

GBA: ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳ ಆಕ್ರೋಶ: ಜುಲೈ 8 ರಂದು ಬೆಂಗಳೂರು ಬಂದ್‌ಗೆ ಕರೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜಿಬಿಎ ಕೈಗೊಂಡಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಬೀದಿ ಬದಿ (GBA) ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇರವಾಗಿ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರ ವಿರುದ್ಧ ತಿರುಗಿಬಿದ್ದಿದೆ. ನ್ಯಾಯಾಲಯವು ಪಾದಚಾರಿಗಳ ಹಕ್ಕಿನ ಬಗ್ಗೆ ಆದೇಶ ನೀಡಿರುವಂತೆಯೇ, ತಮ್ಮ ರಕ್ಷಣೆಗೂ ಕಾನೂನಿನಲ್ಲಿ ಅವಕಾಶವಿದೆ ಎಂದು ನೆನಪಿಸಿರುವ ವ್ಯಾಪಾರಿಗಳು, ನಮಗೆ ಯಾವುದೇ…

Read More