bjp worker shaved head after west Bengal win

BJP: ಬಂಗಾಳದಲ್ಲಿ ಬಿಜೆಪಿ ದಿಗ್ವಿಜಯ: ಒಂದು ವರ್ಷದ ಬಳಿಕ ಶಪಥ ಪೂರೈಸಿ ಮುಂಡನ ಮಾಡಿಸಿಕೊಂಡ ಕಾರ್ಯಕರ್ತ!

ಧನ್‌ಬಾದ್: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಬಹುಮತ ಗಳಿಸುತ್ತಿದ್ದಂತೆಯೇ, ನೆರೆಯ ಜಾರ್ಖಂಡ್ ರಾಜ್ಯದ ಧನ್‌ಬಾದ್‌ನಲ್ಲಿ ಅಪರೂಪದ ಸಂಭ್ರಮಾಚರಣೆ ನಡೆದಿದೆ. ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೂ ಕೂದಲು ಕತ್ತರಿಸುವುದಿಲ್ಲ ಎಂದು ಪಣ ತೊಟ್ಟಿದ್ದ ಕಾರ್ಯಕರ್ತರೊಬ್ಬರು, ಫಲಿತಾಂಶ (BJP) ಹೊರಬೀಳುತ್ತಿದ್ದಂತೆಯೇ ಸಾರ್ವಜನಿಕವಾಗಿ ಮುಂಡನ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಂಕಲ್ಪ ಪೂರೈಸಿದ್ದಾರೆ. ಏನಿದು ವಿಶೇಷ ಶಪಥ? ಧನ್‌ಬಾದ್‌ನ ಮನೈಟಾಂಡ್ ಮಂಡಲದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಸುನಿಲ್ ಕುಮಾರ್ ಪಾಂಡೆ ಈ ವಿಶಿಷ್ಟ ಶಪಥ ಮಾಡಿದವರು. ಕಳೆದ ಒಂದು ವರ್ಷದ ಹಿಂದೆ,…

Read More
Amit shah anga vanga kalinga prediction

Amit Shah: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ: ನಿಜವಾಯ್ತು ಅಮಿತ್ ಶಾ ಅವರ ‘ಅಂಗ-ಬಂಗ-ಕಳಿಂಗ’ ಭವಿಷ್ಯವಾಣಿ!

ನವದೆಹಲಿ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಶಕೆ ಆರಂಭವಾಗಿದ್ದು, ಮಮತಾ ಬ್ಯಾನರ್ಜಿ ಅವರ ಸುದೀರ್ಘ ಆಳ್ವಿಕೆಗೆ ಬ್ರೇಕ್ ಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ‘ಚುನಾವಣಾ ಚಾಣಕ್ಯ’ ಎಂದೇ ಖ್ಯಾತರಾದ ಅಮಿತ್ ಶಾ (Amit Shah) ಅವರು ಈ ಹಿಂದೆ ನೀಡಿದ್ದ ಹೇಳಿಕೆ ಅಕ್ಷರಶಃ ನಿಜವಾಗಿದ್ದು, ಅವರ ರಾಜಕೀಯ ಲೆಕ್ಕಾಚಾರ ಎಷ್ಟು ಕರಾರುವಕ್ಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಫಲಿಸಿದ ಶಾ ರಣತಂತ್ರ: ಏಪ್ರಿಲ್ 24ರಂದು ಕೋಲ್ಕತ್ತಾದಲ್ಲಿ ಮಾತನಾಡಿದ್ದ ಅಮಿತ್ ಶಾ, “ಅಂಗ, ಬಂಗ ಮತ್ತು…

Read More
Bjp workers celebrated win with fish meal

BJP: ಬಂಗಾಳದಲ್ಲಿ ದೀದಿ ಯುಗಾಂತ್ಯ; ಕೇಸರಿ ಸುನಾಮಿಗೆ ನಲುಗಿದ ಟಿಎಂಸಿ ಕೋಟೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಖಂಡ ಬಹುಮತದತ್ತ ಮುನ್ನುಗ್ಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮಮತಾ ಬ್ಯಾನರ್ಜಿ ಅವರ ಸುದೀರ್ಘ 15 ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿ ಅಧಿಕಾರದ ಗದ್ದುಗೆಯತ್ತ ಹೆಜ್ಜೆ ಹಾಕಿರುವ ಬಿಜೆಪಿ (BJP) ಕಾರ್ಯಕರ್ತರು, ಬಂಗಾಳದ ಸಂಪ್ರದಾಯದಂತೆ ಮೀನೂಟ ಸವಿಯುವ ಮೂಲಕ ವಿಶಿಷ್ಟವಾಗಿ ವಿಜಯೋತ್ಸವ ಆಚರಿಸಿದ್ದಾರೆ. ಮೀನೂಟದ ಮೂಲಕವೇ ತಿರುಗೇಟು: ಚುನಾವಣಾ ಪ್ರಚಾರದ ವೇಳೆ “ಬಿಜೆಪಿ ಬಂದರೆ ರಾಜ್ಯದಲ್ಲಿ ಮೀನು, ಮಾಂಸ ನಿಷೇಧಿಸುತ್ತದೆ” ಎಂದು ಟಿಎಂಸಿ ಹರಡಿದ್ದ ವದಂತಿಗೆ ಬಿಜೆಪಿ ಕಾರ್ಯಕರ್ತರು…

Read More
winning west Bengal election win bjp releases new india map

West Bengal: ಬಂಗಾಳ ಗೆದ್ದ ಸಂಭ್ರಮ: ದೇಶದ ಹೊಸ ರಾಜಕೀಯ ಭೂಪಟ ಬಿಡುಗಡೆ ಮಾಡಿದ ಬಿಜೆಪಿ!

ನವದೆಹಲಿ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ದಾಖಲಿಸಿರುವ ಬಿಜೆಪಿ, ಇಡೀ ದೇಶದ ಗಮನ ಸೆಳೆದಿದೆ. ದಶಕಗಳ ಕಾಲದ ಮಮತಾ ಬ್ಯಾನರ್ಜಿ ಅವರ ಆಡಳಿತಕ್ಕೆ ಅಂತ್ಯ ಹಾಡಿರುವ ಸಂಭ್ರಮದಲ್ಲಿರುವ ಕೇಸರಿ ಪಡೆ, ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಹೊಸ ರಾಜಕೀಯ ನಕ್ಷೆಯನ್ನು ಹಂಚಿಕೊಳ್ಳುವ ಮೂಲಕ ವಿರೋಧ ಪಕ್ಷಗಳಿಗೆ ಬಲವಾದ ಸಂದೇಶ ರವಾನಿಸಿದೆ. ನಕ್ಷೆಯಲ್ಲಿ ಕೇಸರಿಮಯ ಬಂಗಾಳ: ಬಿಜೆಪಿ ಬಿಡುಗಡೆ ಮಾಡಿರುವ ಈ ವಿಶೇಷ ಭೂಪಟದಲ್ಲಿ ಪಶ್ಚಿಮ ಬಂಗಾಳವನ್ನು ಸಂಪೂರ್ಣವಾಗಿ ಕೇಸರಿ ಬಣ್ಣದಲ್ಲಿ…

Read More
keralam bjp got opportunity to make place in state at this election

Keralam: ಕೇರಳದ ಮಣ್ಣಿನಲ್ಲಿ ಗಟ್ಟಿಯಾದ ಕಮಲ: ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಹೊಸ ಇತಿಹಾಸ!

ತಿರುವನಂತಪುರಂ: ದಶಕಗಳ ಕಾಲ ಕೇರಳ ರಾಜಕಾರಣದಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುತ್ತಿದ್ದ ಕೇಸರಿ ಪಡೆಗೆ (Keralam) ಈ ಬಾರಿಯ ವಿಧಾನಸಭಾ ಚುನಾವಣೆ ಭರ್ಜರಿ ಯಶಸ್ಸು ತಂದುಕೊಟ್ಟಿದೆ. ಸಾಂಪ್ರದಾಯಿಕ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಮೈತ್ರಿಕೂಟಗಳ ಪಾರುಪತ್ಯವಿದ್ದ ರಾಜ್ಯದಲ್ಲಿ, ಇದೇ ಮೊದಲ ಬಾರಿಗೆ ಮೂರು ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅಚ್ಚರಿ ಮೂಡಿಸಿದೆ. ಗೆಲುವಿನ ನಗೆ ಬೀರಿದ ಪ್ರಮುಖ ನಾಯಕರು: ಈ ಚುನಾವಣೆಯಲ್ಲಿ ಬಿಜೆಪಿಯ ಮೂವರು ಪ್ರಭಾವಿ ನಾಯಕರು ವಿಧಾನಸಭೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ: ಬಿಜೆಪಿಯ ಈ ಯಶಸ್ಸಿನ ಹಾದಿ:…

Read More
bjp president annamalai praises vijay win in election

Annamalai: ವಿಜಯ್ ಗೆಲುವನ್ನು ಕೊಂಡಾಡಿದ ಅಣ್ಣಾಮಲೈ: ಕುಟುಂಬ ರಾಜಕಾರಣಕ್ಕೆ ಅಂತ್ಯ ಎಂದ ಬಿಜೆಪಿ ನಾಯಕ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಸಾರಥ್ಯದ ಟಿವಿಕೆ ಪಕ್ಷವು ದಾಖಲಿಸಿರುವ ಅಭೂತಪೂರ್ವ ಮುನ್ನಡೆಯನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ (Annamalai) ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೊಂದು ಹೊಸ ಯುಗದ ಆರಂಭ” ಎಂದು ಬಣ್ಣಿಸಿರುವ ಅವರು, ದಳಪತಿ ವಿಜಯ್ ಅವರ ಯಶಸ್ವಿ ರಾಜಕೀಯ ಪ್ರವೇಶಕ್ಕೆ ಶುಭ ಹಾರೈಸಿದ್ದಾರೆ. ವಂಶಪಾರಂಪರ್ಯ ಆಡಳಿತಕ್ಕೆ ಜನರೇ ನೀಡಿದ ಉತ್ತರ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, ಆಡಳಿತಾರೂಢ ಡಿಎಂಕೆ ವಿರುದ್ಧ…

Read More
these are the main reason to loss of mamata Banerjee in west Bengal

West Bengal: ಬಂಗಾಳದಲ್ಲಿ ಮುಗಿಯಿತೇ ಮಮತಾ ಯುಗ? ಟಿಎಂಸಿ ಕೋಟೆ ಕುಸಿಯಲು ಕಾರಣವಾದ 5 ಪ್ರಮುಖ ವಿದ್ಯಮಾನಗಳು

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಕೀಯ ಅಖಾಡದಲ್ಲಿ ಕಳೆದ 15 ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರಿದ್ದ ಏಕಚಕ್ರಾಧಿಪತ್ಯಕ್ಕೆ ಈ ಬಾರಿ ಭಾರಿ ಪೆಟ್ಟು ಬಿದ್ದಿದೆ. ದಶಕಗಳ ಕಾಲ ಅಜೇಯವಾಗಿ ಉಳಿದಿದ್ದ ಟಿಎಂಸಿ ಭದ್ರಕೋಟೆ ಈಗ ನಡುಗುತ್ತಿದ್ದು, ಕೇಸರಿ ಪಡೆ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ. ದೀದಿ ಸರ್ಕಾರದ ಪತನಕ್ಕೆ ಪ್ರಮುಖವಾಗಿ ಕೆಲಸ ಮಾಡಿದ ಅಂಶಗಳ ವಿಶ್ಲೇಷಣೆ ಇಲ್ಲಿದೆ: 1. ಮಹಿಳಾ ಸುರಕ್ಷತೆ ಮತ್ತು ಆರ್‌ಜಿ ಕರ್ ಪ್ರಕರಣದ ಬಿಸಿ ಮಮತಾ ಬ್ಯಾನರ್ಜಿ ಅವರ ಅತಿದೊಡ್ಡ ವೋಟ್…

Read More