TOP NEWS
narendra modi road show in kerala

Narendra Modi: ಕೇರಳದ ಜನರಿಗೆ ಕೇಂದ್ರದ ಮೇಲೆ ನಂಬಿಕೆ ಇದೆ: ನರೇಂದ್ರ ಮೋದಿ

ಕೇರಳ: ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಪ್ರವಾಸದಲ್ಲಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ  ಬಿಜೆಪಿ  ಅಧಿಕಾರದ ಗದ್ದುಗೆ ಹಿಡಿದ ಹಿನ್ನೆಲೆಯಲ್ಲಿ  ಪ್ರಧಾನಿ ನರೇಂದ್ರ ಮೋದಿ (Narendra Modi) ಸಾರ್ವಜನಿಕ ಸಭೆಯಲ್ಲಿ  ಪಾಲ್ಗೊಂಡಿದ್ದಾರೆ.   ಕೇರಳದ ಜನರಿಗೆ ಕೇಂದ್ರದ ಮೇಲೆ ನಂಬಿಕೆ ಇದೆ ತಿರುವನಂತರಪುರಂ ಮಹಾನಗರಪಾಲಿಕೆಯಲ್ಲಿನ  ಬಿಜೆಪಿ ಸಾಧನೆ  ಸಾಧಾರಣವಲ್ಲ. ಇದೊಂದು  ದಿಗ್ವಿಜಯ.  ಕೇರಳದಲ್ಲಿ ಜನರಿಗೆ ಕೇಂದ್ರ ಸರ್ಕಾರದ ಬಗ್ಗೆ ನಂಬಿಕೆ ಬಂದಿದ್ದು, ಅವರ ಸೇವೆಗೆ ಅವಕಾಶ ನೀಡಿದ್ದಾರೆ.  ಈ ಮೂಲಕ ಎಲ್ ಡಿಎಫ್ (LDF) , ಯುಡಿಎಫ್…

Read More
PM Narendra Modi inaugurated many developmental work in kerala

PM Narendra Modi: ಕೇಂದ್ರದಿಂದ ಕೇರಳ ಅಭಿವೃದ್ಧಿ, ತಿರುವನಂತಪುರದಲ್ಲಿ ಮೋದಿ ಭಾಷಣ

ಕೇರಳ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಂದು ಕೇರಳದ ತಿರುವನಂತಪುರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಮೃತ್ ಭಾರತ್ ರೈಲುಗಳ ಆರಂಭ ಈ ಸಮಯದಲ್ಲಿ ಪ್ರಧಾನಿ ಮೋದಿ ಅವರು, ತಿರುವನಂತಪುರದಲ್ಲಿ  ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಅಂಚೆ ಇಲಾಖೆಯ ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕುವುದರ ಜೊತೆಗೆ ಹಲವು ಯೋಜನೆಗಳಿಗೆ  ಚಾಲನೆ ನೀಡಿದ್ದಾರೆ.  ಈ ವೇಳೆ ಪ್ರಧಾನಿ, ಮೂರು ಹೊಸ ಅಮೃತ್ ಭಾರತ್ ರೈಲುಗಳು, ನಾಗರ್‌ಕೋಯಿಲ್-ಮಂಗಳೂರು,…

Read More
NASA astronaut Sunita Williams retires

Sunita Williams: 27 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್

ನವದೆಹಲಿ: ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ತಮ್ಮ ಬಾಹ್ಯಾಕಾಶ ಹಾರಾಟದಿಂದ ನಿವೃತ್ತಿ ಘೋಷಣೆ ಮಾಡಿದ್ದು, ಈ ವಿಚಾರವಾಗಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. 27 ವರ್ಷಗಳ ಅದ್ಭುತ ಜೀವನ ಸುನೀತಾ ವಿಲಿಯಮ್ಸ್‌ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೂರು ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಿದ್ದಾರೆ. ಅದರ ಜೊತೆಗೆ ವಿವಿಧ ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಸಹ ದಾಖಲೆಗಳನ್ನು ಮಾಡಿದ್ದು, ಬರೋಬ್ಬರಿ 27 ವರ್ಷಗಳ ಅದ್ಭುತವಾದ ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿದ್ದ ಸುನೀತಾ ಇನ್ನು 60 ವರ್ಷದ ಸುನೀತಾ…

Read More
8 Naxals killed in Chaibasa Jharkhand

Naxals: ಜಾರ್ಖಂಡ್‌ನಲ್ಲಿ ಮಿಂಚಿನ ಕಾರ್ಯಾಚರಣೆ, 8 ನಕ್ಸಲರ ಹತ್ಯೆ

ಚೈಬಾಸಾ: ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದ್ದು, ನಕ್ಸಲರನ್ನ ಹತ್ಯೆ (Naxals) ಮಾಡಲಾಗಿದೆ. 8 ನಕ್ಸಲರ ಹತ್ಯೆ ಚೈಬಾಸಾ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಭದ್ರತಾ ಪಡೆಗಳು 8 ನಕ್ಸಲರನ್ನು ಹತ್ಯೆ ಮಾಡಿದ್ದು, ಅವರಲ್ಲಿ ಭಯಂಕರ ನಕ್ಸಲ್ ಅನಲ್ ದಾ ಕೂಡ ಸೇರಿದ್ದಾನೆ ಎನ್ನಲಾಗಿದೆ, ಮುಖ್ಯವಾಗಿ ಅವನ ತಲೆಗೆ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು. ಆ ಪ್ರದೇಶದಲ್ಲಿ ನಕ್ಸಲರ ಓಡಾಟ ಇರುವ…

Read More
Donald Trump again says he is the dictator

Donald Trump: ನಾನು ಸರ್ವಾಧಿಕಾರಿ ಎಂದ ಟ್ರಂಪ್

ದಾವೋಸ್: ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ 56 ನೇ ವಾರ್ಷಿಕ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದ  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ತಮ್ಮ ಸರ್ವಾಧಿಕಾರಿ ಕನಸಿನ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ನಾನು ಸರ್ವಾಧಿಕಾರಿ ಎಂದ ಟ್ರಂಪ್‌ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ತಮ್ಮನ್ನು ತಾವು ‘ನಾನು ಸರ್ವಾಧಿಕಾರಿ’ ಎಂದು ಕರೆದಿದ್ದಾರೆ. ಅಲ್ಲದೇ, ತಮ್ಮ ನಾಯಕತ್ವದ ಶಯಲಿಯ ಬಗ್ಗೆ ಹಾಗೂ ರಾಜಕೀಯ ನೀತಿಗಳ ಬಗ್ಗೆ ಮಾತನಾಡಿದ್ದು, ತಮ್ಮ ನಿರ್ಧಾರಗಳನ್ನ ಸಮರ್ಥಿಸಿಕೊಂಡಿದ್ದಾರೆ. ಈ ಸಮಯದಲ್ಲಿಯೇ ಅವರು ತಮ್ಮನ್ನ…

Read More
Republic Day celebration invitation to isro head

Republic Day: 77ನೇ ಗಣರಾಜ್ಯೋತ್ಸವ ಹಿನ್ನೆಲೆ, ಇಸ್ರೋ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನ ಕಾರ್ಯಕ್ರಮಕ್ಕೆ ಆಹ್ವಾನ

ನವದೆಹಲಿ: 77ನೇ ಗಣರಾಜ್ಯೋತ್ಸವ (Republic Day) ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ದೇಶದ ವಿವಿಧ ಭಾಗಗಳ ವಿಜ್ಞಾನಿಗಳು, ಚಿಂತಕರು, ಸಂಶೋಧಕರಿಗೆ ಆಹ್ವಾನ ನೀಡಲಾಗುತ್ತಿದೆ. ಇಸ್ರೋ ಅಧ್ಯಕ್ಷರಿಗೆ ಆಹ್ವಾನ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರಿಗೆ  ಅಂಚೆ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ  ರಾಷ್ಟ್ರಪತಿ ಭವನದಿಂದ ಬಂದಿರುವ ಆಹ್ವಾನ ಪತ್ರಿಕೆ ನೀಡಿದ್ದಾರೆ.  ಆಹ್ವಾನ ಸಂತಸ ತಂದಿದೆ ಎಂದ ನಾರಾಯಣನ್ ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ.  ವಿ. ನಾರಾಯಣನ್ ,…

Read More
vice president CP Radhakrishnan inaugurated harijana sevaka sangha library

CP Radhakrishnan: ಗ್ರಂಥಾಲಯ ಘಟಕ ಉದ್ಘಾಟನೆ ಮಾಡಿದ ಉಪರಾಷ್ಟ್ರಪತಿ

ನವದೆಹಲಿ: ದೆಹಲಿಯ ಗಾಂಧಿ ಆಶ್ರಮದ ಹರಿಜನ ಸೇವಕ ಸಂಘದಲ್ಲಿ ನೂತನವಾಗಿ ನಿರ್ಮಿಸಿರುವ ಮಹದೇವ ದೇಸಾಯಿ ಗ್ರಂಥಾಲಯ ಘಟಕವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (CP Radhakrishnan) ಇಂದು ಉದ್ಘಾಟಿಸಿದ್ದಾರೆ. 2 ಪುಸ್ತಕ ಬಿಡುಗಡೆ ಮಾಡಿದ ಉಪರಾಷ್ಟ್ರಪತಿ ಇದೇ ಸಮಯದಲ್ಲಿ ಪ್ರೊ. ಶಂಕರ್ ಕುಮಾರ್ ಸನ್ಯಾಲ್ ರಚಿಸಿರುವ ‘ ಜ್ಞಾನೋದಯದ ಯುಗ: ಮಹಾತ್ಮಾ ಗಾಂಧಿಯವರ ದೂರದೃಷ್ಟಿ ‘ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದರ ಬಳಿಕ ಮಾತನಾಡಿದ ಉಪರಾಷ್ಟ್ರಪತಿ, ಸಾಮಾಜಿಕ ಪರಿವರ್ತನೆಯಲ್ಲಿ ಗ್ರಂಥಾಲಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.  ಜ್ಞಾನ ಸಂಪಾದನೆಯಿಂದ…

Read More